ನಿಷ್ಪಾಪಿ ಸಸ್ಯಗಳು (ಭಾಗ ೯೨) - ನೋನಿ ಗಿಡ

ವಿಶ್ರಾಂತಿಯೆಂದರೆ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಎಂಬ ಮಾತಿದೆ. ನೀವು ಓದಿ ಓದಿ ದಣಿದಿರುವಿರಾದರೆ ವಿಶ್ರಾಂತಿಗಾಗಿ ನಾವು ನಿಷ್ಪಾಪಿ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಈ ಸಸ್ಯ ವರ್ತಮಾನ ಕಾಲದಲ್ಲಿ ಬಹಳ ಪ್ರಚಲಿತದಲ್ಲಿದೆ. ಮಾಧ್ಯಮಗಳಲ್ಲೂ ಇದರ ಬಗ್ಗೆ ವಿಶೇಷ ಪರಿಚಯ, ವರದಿಗಳು ಹಾದು ಹೋಗುತ್ತವೆ.

Image

ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಗಣಿತ ಹೊರೆಯಾಗದಿರಲಿ

ಮತೊಮ್ಮೆ ಪರೀಕ್ಷೆ ಬರುತ್ತಿದೆ. ಅದೂ ಪಬ್ಲಿಕ್ ಪರೀಕ್ಷೆ. ಹೌದು ನಿಮಗಿದು ಹೊಸತು. ಆದರೆ ನಮಗೆ ಪ್ರತಿ ಬಾರಿಯಂತೆ ಇದು ಮಾಮೂಲಿ. ನೀವು ನಿಮ್ಮ ಶಾಲೆಯಲ್ಲಿ ಬರೆದ ಪರೀಕ್ಷೆಗಳಿಗೆ ಲೆಕ್ಕವಿಲ್ಲ. ಇದು ಅದಕ್ಕಿಂತ ಭಿನ್ನವೇನೂ ಅಲ್ಲವೇ ಅಲ್ಲ. ಪರೀಕ್ಷೆಯ ಸ್ಥಳ ಮತ್ತು ಪರೀಕ್ಷೆ ಮಾಡುವ ವ್ಯಕ್ತಿಗಳ ಬದಲಾವಣೆ ಹೊರತು ಪಡಿಸಿದರೆ ಹಿಂದಿನ ಪರೀಕ್ಷೆಗೂ ಈ ಪರೀಕ್ಷೆಗೂ ಏನೇನೂ ಬದಲಾವಣೆ ಇರದು.

Image

ಪುಸ್ತಕ ನಿಧಿ - 'ಇತಿಹಾಸದಲ್ಲಿ ಮರೆತು ಹೋದ ಕರ್ನಾಟಕದ ಪುಟಗಳು'

ಇದು ಸುಮಾರು 100 ಒಂದು ಪುಟ್ಟ ಪುಸ್ತಕವಾಗಿದ್ದು archive.org ನಲ್ಲಿ https://archive.org/details/dli.language.0466 ಈ ಕೊಂಡಿಯಲ್ಲಿ  ಲಭ್ಯ ಇದೆ.

ಪುಸ್ತಕದ  ಪ್ರಾರಂಭಿಕ ಪುಟಗಳು ಸ್ವಲ್ಪ ಹಿಂದು ಮುಂದಾಗಿವೆ. ಉದಾಹರಣೆಗೆ ಪ್ರಾರಂಭಿಕ ಪುಟಗಳು ಹೀಗಿವೆ-

1 4 3 6 5 8 7 10 9 12 11 14 13 16 15 18 17 22 21 24 23 ಇತ್ಯಾದಿ

ಇಷ್ಟು ಹೊತ್ತಿಗೆ ನಿಮಗೆ ಈ ಅವ್ಯವಸ್ಥೆಯಲ್ಲಿನ  ವ್ಯವಸ್ಥೆ ಗಮನಕ್ಕೆ ಬಂದಿರಲು ಸಾಕು.

ಸದ್ಯ  , ನಂತರದ ಪುಟಗಳು ಕ್ರಮದಲ್ಲಿವೆ.

ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಲೇಖನಗಳು ಇವೆ . ಲೇಖನಗಳ ಪರಿವಿಡಿಯನ್ನು ನಿಮ್ಮಗಳ ಮಾಹಿತಿಗಾಗಿ ಹಾಕಿದ್ದೇನೆ, ನೋಡಿ.

‘ಬಿಡುಗಡೆಯ ಹಾಡುಗಳು’ (ಭಾಗ ೨೬) - ಬಿ. ನೀಲಕಂಠಯ್ಯ

ಬಿ. ನೀಲಕಂಠಯ್ಯ ಎನ್ನುವ ಕವಿಯ ಒಂದು ಮುದ್ರಿತ ಪುಸ್ತಕದಿಂದ ಆಯ್ದ ಲಾವಣಿ. ನೀಲಕಂಠಯ್ಯ ಇವರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈ ಲಾವಣಿಯ ಧಾಟಿ ಖಡೀಚಾಲ್ ಆಗಿದೆ.

Image

ಕಡಲ ಹನಿ ಒಡಲ ಧ್ವನಿ

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಭಟ್ ತಲಂಜೇರಿ, ಹಾ ಮ ಸತೀಶ್, ಡಾ. ಸುರೇಶ ನೆಗಳಗುಳಿ
ಪ್ರಕಾಶಕರು
ಶುಭ ಪ್ರಕಾಶನ, ಮಂಗಳೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ.

ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು

ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು, ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ, ಆ ದೇಶದಲ್ಲಿ ಚಲಿಸುವ  ಬುಲೆಟ್ ರೈಲುಗಳ

Image

ಸ್ಟೇಟಸ್ ಕತೆಗಳು (ಭಾಗ ೧೨೬೫) - ರೊಟ್ಟಿ

ಬದುಕಿನ ದಾರಿಯ ಕಂಡುಕೊಂಡಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಅವಿರತವಾಗಿ ಬೆವರು ಹರಿಸಿ ದುಡಿದರೂ ಕೂಡ ಮನೆಯಲ್ಲಿ ಬದಲಾವಣೆ ಆಗುವುದಿಲ್ಲ. ಬದುಕಿನ ಹೊಸ ದಾರಿಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಇರೋದು ಗಂಡ ಹೆಂಡತಿ ಇಬ್ಬರೇ ಆದರೂ ಕನಸುಗಳು ದೊಡ್ಡದಿದೆ.

Image

ಸಿಪ್ಪೆ

ಪ್ರಕೃತಿಯಲ್ಲಿ ಅಸಂಖ್ಯ ಬೀಜಗಳಿವೆ. ಆ ಬೀಜಗಳಿಗೆ ಸಿಪ್ಪೆಯು ಸಹಜವಾಗಿಯೇ ಇರುತ್ತದೆ. ಸರಿಯಾಗಿ ಗಮನಿಸಿದರೆ ಹೆಚ್ಚಿನ ಬೀಜಗಳಿಗೆ ಎರಡೆರಡು ಸಿಪ್ಪೆಗಳು. ಒಂದು ಹೊರ ಸಿಪ್ಪೆ ಇನ್ನೊಂದು ಒಳ ಸಿಪ್ಪೆ. ಗೇರು ಬೀಜ, ನೆಲಕಡಲೆ, ತೆಂಗಿನಕಾಯಿ ಹೀಗೆ ಬೀಜಗಳಿಗೆ ಎರಡೆರಡು ಸಿಪ್ಪೆ. ಸಿಪ್ಪೆಗಳೊಳಗೆ ತಿರುಳು ಸುರಕ್ಷಿತವಾಗಿರುತ್ತದೆ. ಸಿಪ್ಪೆಯನ್ನು ಕಳಚಿದ ನಂತರ ತಿರುಳು ತನ್ನ ಸುರಕ್ಷತೆಯನ್ನು ಕಳೆದು ಕೊಳ್ಳುತ್ತದೆ.

Image