ಐತಿಹಾಸಿಕ ತೀರ್ಪು

ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ -ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೂ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಫಲ ದೊರೆತಿದೆ.

Image

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ

ಕನ್ನಡ ಚಲನಚಿತ್ರ ನಟರೊಬ್ಬರ ಸಾಂಪ್ರದಾಯಿಕ ಮದುವೆಯನ್ನು ಅತ್ಯಂತ ಮಹತ್ವದ ಘಟನೆ ಎಂಬಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ್ದು ಅತಿರೇಕವೇ ಅಥವಾ ತಮ್ಮ ವಿವೇಚನಾಶೀಲತೆಯ ಕೊರತೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ ಅಥವಾ ಸ್ವಾಭಿಮಾನದ ಮತ್ತು ಸುದ್ದಿಯ ಪ್ರಾಮುಖ್ಯತೆ ಅರಿಯುವ ಮಾನಸಿಕ ದಿವಾಳಿತನವೇ?

Image

ಸ್ಟೇಟಸ್ ಕತೆಗಳು (ಭಾಗ ೧೨೩೮) - ವಿಪರ್ಯಾಸ

ದಾರಿಯಲ್ಲಿ ಹೋಗುತ್ತಾ ಇದ್ದ ಮಧ್ಯ ವಯಸ್ಸಿನ ಹುಡುಗ ತನ್ನ ತಂದೆಯನ್ನು ಗದರಿಸುತ್ತಿದ್ದ. ಅಪ್ಪಾ ನಿನಗೆ ಅರ್ಥವಾಗುವುದಿಲ್ಲ. ನನ್ನ ಜೊತೆ ಬರಬೇಡ ಅಂತ ಎಷ್ಟು ಸಾರಿ ಹೇಳಿದರು ನನ್ನ ಕೈ ಹಿಡಿದುಕೊಂಡೆ ಬರುತ್ತಿಯಾ. ನನಗೆ ಇನ್ನು ನೀನು ಜೀವನದ ಪಾಠ ಮಾಡಬೇಕಾಗಿಲ್ಲ. ನಾನು ಎಲ್ಲವನ್ನು ಅರ್ಥೈಸಿಕೊಂಡಿದ್ದೇನೆ. ನಿನಗೆ ಯಾವ ಕ್ಷಣದಲ್ಲಿ ಹೇಗೆ ವರ್ತಿಸಬೇಕು ಅನ್ನೋದು ತಿಳಿಯೋದಿಲ್ಲ.

Image

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 1)

ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರ ಪ್ರೀತಿ-ಮನ್ನಣೆಗೆ ಪಾತ್ರರಾಗಿರುವ ಕೋಟ ಶಿವರಾಮ ಕಾರಂತರು ಪ್ರಕಟಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 400 ದಾಟುತ್ತದೆ. 45 ಕಾದಂಬರಿ ಪ್ರಕಟಿಸಿದ್ದ ಕಾರಂತರು 90ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದರು. ‘ಬಾಲಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ದಂತಹ ವಿಶ್ವಕೋಶಗಳನ್ನು ಸಿದ್ಧಪಡಿಸಿದ ಕಾರಂತರು ಸ್ವತಃ ‘ನಡೆದಾಡುವ ವಿಶ್ವವಿದ್ಯಾಲಯ’ದಂತಿದ್ದರು.

Image

ನಿಷ್ಪಾಪಿ ಸಸ್ಯಗಳು (ಭಾಗ ೮೮) - ಕಾಡು ಉತ್ತರಾಣಿ

ಇಂದು ನಾನು ನಿಮ್ಮ ಬಳಿಗೆ ಬರುವಾಗ ದಾರಿಯಲ್ಲಿ ಸಿಕ್ಕಿದ ಗಿಡಗಳ ಹಿಂಡಿನಿಂದ ಒಂದು ಗಿಡವನ್ನು ಕಿತ್ತು ತಂದಿರುವೆ. ನೋಡಿದಿರಾ? ಈ ಗಿಡ ನಿಮ್ಮ ಮನೆಯ ಸಮೀಪದ ತೋಟಗಳಲ್ಲಿ,ಮಾರ್ಗದ ಬದಿಗಳಲ್ಲಿ, ಪಾಳುಬಿದ್ದ ಭೂಮಿಯಲ್ಲಿ ಕಾಣಸಿಗುತ್ತದೆ. ಇದೊಂದು ಪೊದೆ ಸಸ್ಯ. ಈ ಮೊದಲು ನೀವು ಉತ್ತರಾಣಿ ಎಂಬ ಗಿಡವೊಂದನ್ನು ಗುರುತಿಸಿದ ನೆನಪಿದೆಯೆ? ಅದೂ ನಮ್ಮ ಬೈಲು ಗದ್ದೆಗಳಲ್ಲಿ, ತೋಟಗಳಲ್ಲಿ ಸಾಮಾನ್ಯವಾಗಿ ಕಾಣಿಸಿಗುವ ಸಸ್ಯ.

Image

‘ಬಿಡುಗಡೆಯ ಹಾಡುಗಳು’ (ಭಾಗ ೨೨) - ಸೀತಾತನಯ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ‘ಸೀತಾತನಯ’ ಎಂಬ ನಾಮಾಂಕಿತ ಶ್ರೀಧರ ಖಾನೋಲ್ಕರ್. ಇವರ ಒಂದೆರಡು ಕವನಗಳನ್ನು ನಾವು ಈಗಾಗಲೇ ‘ಸಂಪದ’ ದಲ್ಲಿ ಮುದ್ರಿಸಿದ್ದೇವೆ. ಇವರ ‘ಸೀತಾತನಯ’ ಕಾವ್ಯ ನಾಮದ ಕುರಿತಾಗಿಯೂ ದ್ವಂದ್ವಗಳಿವೆ. ಕೆಲವೆಡೆ ‘ಸೀತಾತನಯ’ ಎಂಬ ಕಾವ್ಯನಾಮದಲ್ಲಿ ಕವನಗಳನ್ನು ಬರೆಯುತ್ತಿದ್ದವರು ಖ್ಯಾತ ಬರಹಗಾರ, ಸ್ವಾತಂತ್ರ್ಯ ಹೋರಾಟಗಾರರಾದ ಡಾ.

Image

ಬೂಸ್ಟರ್ ಡೋಸ್ ಮುನಿಯಮ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೆಕಸಲಗೆರೆ ಪ್ರಕಾಶ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

ಸಾಮಾಜಿಕ ಮನಸ್ಥಿತಿ

"ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ - ಶಿಕ್ಷಿಸುವ  ಅಧಿಕಾರ ಇರುತ್ತದೆ" ರವೀಂದ್ರನಾಥ ಠಾಗೋರ್. ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ. ನಾವು ಕೆಲವರ ನಡವಳಿಕೆಯನ್ನು ದ್ವೇಷಿಸುತ್ತೇವೆ ಹಾಗೆಯೇ ಅವರ ಪರಿವರ್ತನೆಯನ್ನು ಅಪೇಕ್ಷಿಸುತ್ತೇವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೩೭) - ಕಾಲ

ಕಾಲವು ನೀನಂದು ಕೊಂಡಂತಿಲ್ಲ. ಸದ್ಯದ ಸಮಾಜಕ್ಕೆ ಏನು ಬೇಕೋ ಅದರ ಬಗ್ಗೆ ನಿಮಗೆಲ್ಲೂ ಮಾಹಿತಿಯೇ ಸಿಗೋದಿಲ್ಲ. ಮಿನುಗುವ ಕಣ್ಣಿನ ಹುಡುಗಿಯ ಬಗ್ಗೆ ಅದ್ಭುತ ವಿಚಾರಗಳು ನಿನ್ನ ಮುಂದೆ ಬಿದ್ದರೆ, ದೇಶವನ್ನು ಪ್ರತಿನಿಧಿಸಿದ ಹುಡುಗಿಯೊಬ್ಬಳು ಕ್ರೀಡೆಯಲ್ಲಿ ಹೆಸರುವಾಸಿಯಾದದ್ದು ನಾಲ್ಕು ಜನರ ಬಾಯಿಯಲ್ಲಿ ಮುಗಿದು ಹೋಗುತ್ತದೆ.

Image