ಕವನಗಳು

ಲೇಖಕರು: huchcheerappaiti@gmail.com
ವಿಧ: ಕವನ
March 30, 2025
ಮಾಮರದಲ್ಲಿ ಹಾಡುತಿದೆ  ಕೋಗಿಲೆಯೊಂದು ಕೂಗುತಿದೆ  ಪ್ರಕೃತಿ ಸೌಂದರ್ಯ ಹೊಳೆಯುತಿದೆ  ಮನುಕುಲಕ್ಕೆ ಖುಷಿ ತಂದೈತಿ   ಅರಳಿಸು ಎನ್ನ ಮನವು ತಣಿಸು ನನ್ನ ತನುವು  ಪ್ರಕೃತಿ ಸೌಂದರ್ಯವು  ಹನುಮಂತ ದೇವರ ಜಾತ್ರೆಯು   ಕೋಗಿಲೆ ಧ್ವನಿಯಲ್ಲಿ ಸಂಗೀತವು  ಜನಮನದಲ್ಲಿ ಸಂತೋಷವು  ಮಕ್ಕಳ ಮುಖದಲ್ಲಿ ಮಂದಹಾಸವು  ಇದು ದೇವರ ಕೊಟ್ಟ ಫಲವು   ಉತ್ಸವದ ಜಾತ್ರೆ ನಡದೈತೊ  ಹನುಮಪ್ಪನ ತೇರು ಎಳೆದೈತೊ  ಭಕ್ತರ ಹೃದಯಕ್ಕೆ ಹರ್ಷ ತಂದೈತೊ  ಯುಗಾದಿ ಹಬ್ಬದ ಜಾತ್ರೆ ನಡದೈತೊ   ದೇವಾನು ದೇವತೆಗಳ ವರವು  ಪ್ರಕೃತಿ…
ವಿಧ: ಕವನ
March 30, 2025
ದೇವರೇ ಹೇಳುತ್ತಾನಂತೆ.. ತಾನು ಅತ್ಯಂತ ಸಂತೋಷದಿಂದಿರುವಾಗ* ಹುಟ್ಟುತ್ತಾರೆ ಹೆಣ್ಣುಮಕ್ಕಳು .   ಏನನ್ನೂ ಕೊಂಡುಹೋಗಲು ಬರುವುದಿಲ್ಲ ಹೆಣ್ಣುಮಕ್ಕಳು. ಅವರ ಬೇರುಗಳಿಗೆ ನೀರೆರೆಯಲು ಬರುತ್ತಾರೆ   ಅಣ್ಣತಮ್ಮಂದಿರ ಸುಖ ಸಂತೋಷವನ್ನು ನೋಡಿ ಆನಂದಿಸಲು .. ತಮ್ಮ ಮಧುರ ಬಾಲ್ಯವನ್ನು ಹುಡುಕಲು ಬರುತ್ತಾರೆ   ತವರು ಮನೆಯ ಅಂಗಳದಲ್ಲಿ ಸ್ನೇಹದ ದೀಪ ಬೆಳಗಿಸಿಡಲು ಬರುತ್ತಾರೆ. ಯಾರ ಕೆಟ್ಟ ದೃಷ್ಟಿಯೂ ಬೀಳದಂತೆ ಬಾಗಿಲಿಗೆ ರಕ್ಷೆ ಕಟ್ಟಲು ಬರುತ್ತಾರೆ. ಮಮತೆಯ ಝರಿಯಲ್ಲಿ ಮಿಂದು ಹೋಗಲು ಬರುತ್ತಾರೆ.…
ವಿಧ: ಕವನ
March 30, 2025
ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ   ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ   ಬಂಧುರತೆಯ ಭಾವನೆಯೊಲು ಸೃಷ್ಟಿ ಲಯದ ತಾಣದೊಳಗೆ ನಮ್ಮನೆಲ್ಲ ಕುಣಿಸಲಿಂದು ಯುಗಾದಿಯು ಬಂದಿದೆ ನವ ಪಥವ ತುಳಿಯುತಿದೆ   ಜೊಮ್ಮನೆಯ ಗಾನ ಪ್ರಭೆಗೆ ಥಕ ಥೈಯ ಜಿನುರೆನುತ ನಡು ಬಗ್ಗಿಸಿ ಕುಣಿದಾಡುತ ಯುಗಾದಿಯು ಬಂದಿದೆ ನವ ಜಾಗೃತಿ ತುಂಬುತಿದೆ   ಭಾರತೀಯ ಮನದೊಳಗೆ ಕುಸುಮ…
ವಿಧ: ಕವನ
March 29, 2025
ಗಝಲ್ ೧ ಹೊಗಳಿಕೆಗಿಂದು ಮನವು ಉಬ್ಬದಿರೆ ನೆಮ್ಮದಿ ತೆಗಳಿಕೆಗಿಂದು ತನುವು ಕೊರಗದಿರೆ ನೆಮ್ಮದಿ   ಬಯಲಲ್ಲಿ ಕುಳಿತು ಅತ್ತರೆ  ಪ್ರಯೋಜನ ಏನು  ಮನೆಯಲ್ಲಿಯೆ ಇರುತ ಕುದಿಯದಿರೆ ನೆಮ್ಮದಿ   ಸಂಬಂಧ ಕೆಡಿಸಿಕೊಳ್ಳುವವರು ನಾವೇ ಅಲ್ಲವೆ ಹಳಸಿರುವ ಅನ್ನವನಿಂದು ಬಳಸದಿರೆ ನೆಮ್ಮದಿ   ಪ್ರಶಸ್ತಿಯ ಹಿಂದೆ ಓಡಬೇಕೆಂಬ ನಿಯಮವಿದೆಯೆ ಸಾಧನೆ ಗುರುತಿಸಲಿಲ್ಲವೆಂದು ಕುಸಿಯದಿರೆ ನೆಮ್ಮದಿ   ಮಾತು ಕೃತಿಲಿ ಯಾವತ್ತಿಗೂ ಸೌಮ್ಯತೆ ಇರಲಿ ಈಶಾ ನಾನೇ ಎನ್ನುವ ಅಹಂಕಾರದಿ ಉರಿಯದಿರೆ ನೆಮ್ಮದಿ *** ಗಝಲ್ ೨ ಕಷ್ಟ…
ವಿಧ: ಕವನ
March 28, 2025
ಹಿತಮಿತವದು ಶ್ರೇಷ್ಠ ಹಿತಮಿತವರಿತ ವಿಜ್ಞಾನವೇ- ಈ ಜಗದ ಮಾನವ ಕುಲಕದು ಶ್ರೇಷ್ಠ...   ಅತಿಯಾದ ವಿಜ್ಞಾನ- ತರುವುದು ಗೋರಿಯ ವಿನಾಶದ ಅನಿಷ್ಟ! *** ವ್ಯತ್ಯಾಸ... ಈ ಸಂಸಾರ ಸಾಗರದ ಅಲೆಗಳ ಹೊಡೆತದಿಂದ ಗಡ್ಡ ಬಿಟ್ಟು ಕೊರಗುವರೇ ಗಂಡಸರು...?   ಅದೇ ಅಲೆಗಳ ಹೊಡೆತಗಳ ನೀರಿಂದ ಮುಖ ತೊಳೆದು ಮಿಂಚಿ ನಗುವರೇ ಈ ಹೆಂಗಸರು! *** ಗದ್ದಲದೊಳಗೊಂದು ಸದ್ದಿಲ್ಲದ ಸ್ವಾರ್ಥ... ಸಭಾಪತಿ,ಸಭಾಧ್ಯಕ್ಷ ಸಿಎಂ, ಸಚಿವರು ಶಾಸಕರ ವೇತನ ಮತ್ತು ಭತ್ಯೆ- ಚರ್ಚೆ ಇಲ್ಲದೆ ಮಗುಮ್ಮಾಗಿ ಅಂಗೀಕಾರ...   ಇದು ಆರಸಿದವರ…
ವಿಧ: ಕವನ
March 27, 2025
ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು   ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು   ತನ್ನ ತಪ್ಪನು ಮುಚ್ಚಿ ಮರೆಸುತ ಇತರ ತಪ್ಪನು ಎತ್ತಿ ಹಿಡಿಯುತ ಸಾಗುತಿರಲದು ಇಹುದೆ ಒಲುಮೆ ಹೃದಯ ಭಾವನೆ ಸೋಲದೆ   ಕಲಿತು ಬೆಳೆವರು ಆಸ್ತಿ ಎನಿಪರು ಕನಸು ಇರುತಲಿ ಬೆಳಗುತಿಹರು ಬರಿದೆ ಬರೆಯುತ ಸಾಗುತಿಹರೆ ತಿರುಳು ಇಲ್ಲದೆ ಬದುಕುತಿಹರೆ   ಮರೆಯಲಾರದ ಮಾತುಗಳಿಗೆ ಮರೆಯ…
ವಿಧ: ಕವನ
March 26, 2025
ನೀಯೆಲ್ಲಿ ಎಲ್ಲಿ ಎಲ್ಲಿರುವೆ ಅಲ್ಲೆಲ್ಲ ಸೊಗಸು ಕಾಣುವೆ ಮನದಲ್ಲಿ ಅಲ್ಲಿ ಸೇರಲು ತನುವಲ್ಲಿ ಸುಖವು ತುಂಬಲು   ಬಾನಲ್ಲಿ ಹಕ್ಕಿ ಹಾರಿದೆ ಹೃದಯದಲಿ ಒಲುಮೆ ಹರಡಿದೆ ಭಾವನೆಯು ಪುಟಿದು ಹಾರಲು ತುಟಿಯೊಂದು ನಗುವ ಬೀರಲು   ನೀರಂತೆ ಒಲುಮೆ ಹರಿದಿದೆ ಹೂವಂತೆ ಅರಳಿ ನಲಿದಿದೆ ಪನ್ನೀರ ನಡುವೆ ಮೀಯಲು ತಣ್ಣೀರ ಸ್ನಾನ ಮಾಡಲು   ಸವಿಯಾಳವೆಲ್ಲ ಕಂಡಿದೆ ಸಿಹಿತಿನಿಸಿನಂತೆ ಬಂದಿದೆ ಜೀವನದಿ ಗುರಿಯು ಕಾಣಲು ಜೀವಾತ್ಮ ದೂರ ಹೋಗಲು -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
March 25, 2025
ಗಝಲ್ ೧ ಮನವ ಕೆಣಕದಿರಿ ಛಲವು ಇದೆ ಮೌನ ಕಲಕದಿರಿ ಗೆಲುವು ಇದೆ   ನಿತ್ಯವೂ ಮರಣ, ದುಃಖ ಯಾರಿಗೆ ಪ್ರಾಯ ಸಂದರೂ ಒಲವು ಇದೆ   ಬೆಟ್ಟದಾ ತುದಿಯ ಕಲ್ಲಿನಂತಿರುವೆ ಪ್ರೀತಿಯೇ ಕಾಣೆ ಬಲವು ಇದೆ   ರಾತ್ರಿ ಕತ್ತಲಿದ್ದರೂ ಸಂಚಾರವಿದೆ ಬಿಸಿಲಿದ್ದರೂ ಬಾವಿಲಿ ಜಲವು ಇದೆ   ಕಸುಬು ಯಾವುದಾದರೇನು ಈಶ ಸಾಕಿ ಸಲಹಲು ನೆಲವು ಇದೆ *** ಗಝಲ್ ೨ ಜೀವ ನವ್ಯ ಹೆತ್ತ ಕಾವ್ಯ ಭಾವ ಸುಪ್ತ ಸುತ್ತ ಕಾವ್ಯ   ಕಾಯ ಕಾಯ್ವ ಕಿಚ್ಚು ಬೇಕೆ ಮಾಯ ಮೋಹ ಇತ್ತ ಕಾವ್ಯ   ದಾಹ ತುಂಬಿ ಹರ್ಷ ಬಿತ್ತು ದೇಹ ನೇಹ ಹೊತ್ತ ಕಾವ್ಯ  …
ವಿಧ: ಕವನ
March 24, 2025
ಒಬ್ಬಂಟಿಯಾಗಿ ಹೋಗುತ್ತಿದ್ದಾನೆ… ಮನುಷ್ಯ ! ಹೆಣಗಾಟಕ್ಕೊಳಪಡುತ್ತಾನೆ  ಯಾವುದೋ ಒಂದು ದಿನ...!   ಮುಂಜಾನೆಯಲ್ಲೇ ಎಬ್ಬಿಸಲು ಅಮ್ಮ ಬೇಕಾಗಿಲ್ಲ  Alarm app ಇದೆ.   ನಡೆಯುವ ವ್ಯಾಯಾಮ ಮಾಡಲಿಕ್ಕೆ  ಗೆಳೆಯನ ಸಾಂಗತ್ಯ ಬೇಕಾಗಿಲ್ಲ  Step Counter ಇದೆ.   ಅಡಿಗೆ ಮಾಡಿ ಬಡಿಸಲು  ಅಮ್ಮನು ಬೇಕಾಗಿಲ್ಲ  Zomato, Swiggy app ಗಳಿವೆ.   ಪ್ರಯಾಣ ಮಾಡಲು ಬಸ್ಸು ಬೇಕಾಗಿಲ್ಲ  Uber, Ola app ಗಳಿವೆ   ವಿಳಾಸ ತಿಳಿದುಕೊಳ್ಳಲು  ಟೀ ಅಂಗಡಿಯವನೋ  ಆಟೋ ಡ್ರೈವರೋ ಬೇಕಾಗಿಲ್ಲ  Google map ಇದೆ…
ವಿಧ: ಕವನ
March 23, 2025
ಬಂದೆನಿಂದೂ ನಿನ್ನ ಬಳಿಗೆ ಚೆಂದದಿಂದಲಿ ಅಭಯ ನೀಡಿದೆ ಮುಂದೆ ಸಲಹೋ ಶರಣು ಮಾತೆಯೆ ನಿನ್ನ ಮಡಿಲಲಿ ಮಲಗಿಹೆ   ಕಟೀಲು ಕ್ಷೇತ್ರದೆ ನೆಲೆಯ ನಿಂತಿಹೆ ದುರ್ಗಾದೇವಿಯೇ ಪಾವನೆ ಭಕ್ತ ಜನರನು ಕೈಯ ಹಿಡಿದಿಹೆ ಪೂಜ್ಯಳಾಗಿಹೆ ದೇವಿಯೆ   ನನ್ನ ಹರಣವಾಗ್ವ ಸಮಯದೆ ಬಂದು ನಿಂತೆಯೋ ಮುಂದೆಯೆ ನಾನು ಇರುವೆನೋ ಬೆನ್ನ ಹಿಂದೆಯೆ ಎನುತ ಧೈರ್ಯವ ಕೊಟ್ಟಿಹೆ   ಯಾವ ಕಾಲಕು ನೀನೆ ತಾಯಿಯೆ ಎನುತ ಬಂದಿಹೆ ಬದುಕಲೆ ಕುಲದ ದೇವತೆಯಾಗಿ ನೆಲೆಸಿಹೆ ಶಾಶ್ವತವೋ ಎನ್ನ ಮನದಲೆ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ:…