ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಆಗಷ್ಟ್ ತಿಂಗಳೆ ಹಾಗೆ ಎಲ್ಲಿ ನೋಡಿದರು ಮಳೆ ಮೋಡಗಳದೆ ಕಾರುಬಾರು, ಬಿಸಿಲೆ ಇಲ್ಲದ ದಿನಗಳು , ನಗರದಲ್ಲಿ ಹೊರಗೆ ಹೋಗುವದೆಂದರೆ ಒಂದು ಪ್ರಯಾಸ. ದೇಹವೆಲ್ಲ ಎಂತದೊ ಜಡ ಮನಸ್ಸು ಅಷ್ಟೆ ಆಷಾಡದ ಮೋಡಗಳು ತುಂಬಿದ ದಿನದ ಹಾಗೆ ಎಂತದೊ ಬೇಸರ, ಎಲ್ಲದರಲ್ಲು ಕಡೆಗೆ ಸುಪ್ರೀತರ ಬರಹದ ಶೀರ್ಷಕೆಯ ಹಾಗೆ 'ಬರೆಯಲು ಏನೊ ಬೇಜಾರು'. ಸಂಪದದಲ್ಲು ಹಾಗೆ ಮೊದಲ ಅರ್ದತಿಂಗಳು ಮಂದವೆ.ಅಂತಹ ಜಡತ್ವಕ್ಕೆ ಕಚುಗುಳಿ ಇಟ್ಟಿದ್ದು ಅಣ್ಣ ಹಜಾರೆಯವರ ಸಾಮಾಜಿಕ ಕಳಕಳಿಯ ಹೋರಾಟ.
ಇಂತಹ ಹೋರಾಟಗಳಿಗೆ ತಮ್ಮ ನೈತಿಕ, ಹಾಗು ಲೇಖನಿಯ (ಅಥವ ಕೀಬೋರ್ಡ್ನ?) ಬೆಂಬಲ ಸೂಚಿಸುವದರಲ್ಲಿ ಎಂದು ಸಂಪದ ಸದಸ್ಯರು ಹಿಂದಿಲ್ಲ. ಸಾಕಷ್ಟು ವಿಚಾರ ಪೂರಿತ ಲೇಖನಗಳು,ಕವನಗಳು ಹೊರಹೊಮ್ಮಿದವು, 'ಅಣ್ಣ'ನಿಗೆ ಬೆಂಬಲ ಸೂಚಿಸಲು. "ಅಣ್ಣಾ ಸಂದೇಶ ಸುಸ್ವಶ್ಟ ಸಂದೇಶ ನೀಡುತ್ತಿರುವಂತಿಲ್ಲ -ಆರ್.ಕೆ.ದಿವಾಕರ" ,"ಭ್ರಷ್ಟಾಚಾರವ ಮಟ್ಟ ಹಾಕಲು ? - ಸದಾನಂದ" , "ಬದಲಾವಣೆಯ ಗಾಳಿ ಬೀಸುತ್ತಿದೆಯೇ?- ಶೀಲಾನಾಯಕ್" ,"ಅಣ್ಣಾ ಹಜಾರೆಗೆ ನನ್ನ ನಮಸ್ಕಾರಗಳು-ಸದಾಶಿವ" ,"ಅಣ್ಣಾ ಹಜಾರೆ-ಶ್ರೀಸಾಮಾನ್ಯನ ಮನೆ ಮನಗಳ ದೀಪ- ಮಂಜುನಾಥ", "ವಿಕೀಲೀಕ್ಸ್- ಬಹಿರಂಗಪಡಿಸಿರುವ...-ಗುರು", "ಭಾರತ ಚುನಾವಣ...ಸಂಧೀಪ ಶರ್ಮ" ," ಗೆಲುವು ಅರ್ಧವೆ-ಸೋಮಶೇಖರಯ್ಯನವರು" "ಭ್ರಷ್ಟಾಚಾರ ಹೋರಾಟದ ದಾರಿ ತಪ್ಪಿಸದಿರಿ- ನಿರಂಜನ " ಮುಂತಾದ ಲೇಖನಗಳು ಅಣ್ಣಾ ಹೋರಾಟದ ಹಿನ್ನಲೆಯಲ್ಲಿ ಮೂಡಿಬಂದವು. ಈ ಎಲ್ಲ ಲೇಖನಗಳಿಗೆ ಹಿಮ್ಮೇಳದಂತೆ ತಿಂಗಳ ಕಡೆಯಲ್ಲಿ ಆಸುರವರು ನೇರವಾಗಿ ದೇವರಿಗೆ ಹೇಳಿಬಿಟ್ಟರು "ದೇವರೆ ನೈವೇದ್ಯ ಸಿಗದಿದ್ದರೆ ಬೇಡ ಕೋಪ" ಆಸುರವರೆ ಹಾಗೆಂದ ಮೇಲೆ ನಾನವ ಸಹಾಯ ಮಾಡಲಾರೆ! ದೇವರೆ 'I PITY YOU'.
ಬ್ಲಾಗ್ ಬರಹಗಳ ವಿಸ್ತಾರ ಜಾಸ್ತಿ ಈ ತಿಂಗಳು, ಡ್ರೀಮ್ಸ್ ಹೆಸರೆ ಹೇಳುವಂತೆ ಮೌಂಟ್ ಫ್ಯೂಜಿ ಸಿಡಿದರೆ ! ಎಂಬ ಕನಸಿನ ರೀತಿ u-tube ಚಿತ್ರದ ತುಣುಕು ಪ್ರಸನ್ನ ಎಸ್ ಪಿ ರವರ ಲೇಖನ ತಿಂಗಳ ಮೊದಲ ಬರಹ. ನಂತರ ರಾಮಮೋಹನರು ಯೆಡ್ಡಿ ಪಾಠ ಎಂದು ಯೆಡ್ಡಿಯ ಗಾಳಿಪಟ ಹೇಗೆ ಕೆಳಗಿಳಿಯೆತೆಂದು ನಮಗೆ ನೀತಿ ಹೇಳಿದರು, ನೆನಪಿಡಿ ಯೆಡ್ಡಿಯೇನು ಈ ಪಾಠ ಕಲಿತ ಸುಳಿವಿಲ್ಲ!!, ಜಯಂತರ ಮಾಯಾದ್ವೀಪದ ಕಥೆ ಚಂದಮಾಮವನ್ನು ನೆನಪಿಸಿದವು. ಸಂತೋಷರು 'ಕಷಿಕೇಷ್ಳ' ಎಂಬ ಸುಂದರ ಹೂವಿನ ಚಿತ್ರ ಸಂಪದದ ಗೋಡೆಗೆ ಮೆತ್ತಿದರೆ, ಪಕ್ಕದಲ್ಲೆ ಕುಂಭ್ಲೆ ಪಕ್ಕದಲ್ಲೆ ಅಕ್ಕನ 'ಚೂಡಿಪೂಜೆ'ಯ ಚಿತ್ರಗಳನ್ನು ಅಂಟಿಸಿದರು.
ಬದುಕಿನ ನಾಳೆಯ ಕನಸಿಗೆ ಯಾವ ಬಣ್ಣಗಳನ್ನು ತುಂಬಲಿ? ಎಂದು ಪ್ರಸನ್ನ ಕೇಳಿದ್ದು "ಕಲಾವಿದನ ಕನಸು" ವಿನಲ್ಲಿ, ಅದು ಪ್ರಸನ್ನರಂತ ಕಲಾವಿದರಿಗೆ ಸಹಜ ಪ್ರಶ್ನೆ. ಮದುವೆಯಲ್ಲಿ ಎಂದೊ ಶಾಸ್ತ್ರಕ್ಕೆ ತೋರಿದ ಅರುಂದತಿ ನಕ್ಷತ್ರವನ್ನು ಹಂಸಾನಂದಿಯವರು ಬರಹ ಚಿತ್ರಗಳ ಮೂಲಕ ಸಂಪದಿಗರಿಗೆಲ್ಲ ಪರಿಚಯಸಿ ನಂತರ ತಿಂಗಳು ಪೂರ್ತಿ ಅವರ ಎಂದಿನ ಸಂಸ್ಕೃತದಿಂದ ಕನ್ನಡಕ್ಕೆ ಪದ್ಯವನ್ನು ಭಾವಾನುವಾದ ಮಾಡುವ ಕೆಲಸ ಮುಂದುವರೆಸಿದರು.
"ಮಳೆ ಬಂದರೇನು ಬಾ" ಪ್ರಿಯತಮೆಗೆ ಆಸುವರವರ ಕರೆ ಜೊತೆಗೆ ಮೋಡದ ಮೇಲೆ ಪುಕ್ಕಟ್ಟೆ ಸವಾರಿಯ ಆಕರ್ಷಣೆ, ಪುಣ್ಯವತಿ ಆಕೆ ಬಂದಳೊ ಇಲ್ಲವೊ ತಿಳಿಯಲಿಲ್ಲ. ಆದರೆ ಮಲೆನಾಡಿನ ಮಳೆಗಾಲದ ಸೊಭಗನ್ನು ಸವಿಯಲು ನಮ್ಮನ್ನು "ಬಾಳೆಬರೆ" ಕರೆಯುತ್ತಿದ್ದಾರೆ ಶಶಿಧರ ತಮ್ಮ ಪ್ರಭಂದದಲ್ಲಿ, ದೃಷ್ಯಗಳು ಕಣ್ಣೆದುರು ಕಟ್ಟುತ್ತವೆ.ಮತ್ತೆ ಅವರದೆ ಇನ್ನೊಂದು ಪ್ರಭಂದ 'ಮಳೆಗಾಲದಲ್ಲಿ ಒಂದು ಸಂಜೆ'
ಚೇತನ್ ಕೋಡುವಳ್ಳಿಯವರ ಬರಹಗಳು ಒಮ್ಮೆಮ್ಮೆ ನಮ್ಮಲ್ಲಿ ಎಂತದೊ ಹೆಸರಿಸಲಾಗದ ಭಾವನೆ ಕೆಣಕಿಬಿಡುತ್ತವೆ ಉದಾಹರಣೆ "ಏನಮ್ಮ ಆವನು ಕೊಟ್ಟಿದ್ದನು ಲೆಕ್ಕ ಹಾಕುತ್ತಿಯಲ್ಲ" ,
ಕಳೆದಬಾರಿ ಕಥೆಯ ಗುಟ್ಟನ್ನೆ ಮುಚ್ಚಿಟ್ಟು ಕಥೆಯನ್ನು ಮುಗಿಸಿದ್ದ 'ಸೌಭಾಗ್ಯ.." ಕಥೆಗೆ ಪುನಃ ಉತ್ತಮ್ಮ ಅಂತ್ಯ ಕೊಟ್ಟು ತಾವು ಒಳ್ಳೆ ಕಥೆಗಾರರೆಂದು 'ಕಾಲರ್' ಸರಿಮಾಡಿಕೊಂಡ ರಾಮಮೋಹನರಿಗೆ ಅದೇನು ಗ್ರಹಚಾರ ಈ ಕಥೆಯ ಪ್ರಚಾರದಿಂದಾಗಿ ಅವರನ್ನು ಅಪಹರಣ ಮಾಡಿಬಿಟ್ಟಿದ್ದರು "ಸಿನಿಮಾ ಕಥೆಗಾರ" ದಲ್ಲಿ.
'ಅವರಿಬ್ಬರ ನಡುವೆ ಏನು ನಡೆಯಿತೊ ತಿಳಿಯಲಿಲ್ಲ" ಹಣಕಿದರೆ ಪಾರಿವಾಳ ಜೋಡಿಯ ಕಥೆ ಜಯಂತರಿಂದ ಕವನ. "ಕನಸು ನನಸಿನ ಹಾದಿ ದಾಟಿ ಬರಬಾರದೆ ಮನಸು ಮನಸಿನ ನಡುವಿನ ಕಿಟಕಿಯ ತೆರೆಯಬಾರದೆ" ಎಂತಹ ಸುಂದರ ಸಾಲುಗಳಲ್ಲವೆ? ಎಲ್ಲಿ ಅನ್ನುವಿರ ? ಕುಂಭ್ಳೆಯವರ ಕವನ "ಕನಸು ನನಸಿನ.." ದಲ್ಲಿ, ಆದರೆ ಇಲ್ಲಿ ಎಚ್ಚರದಲ್ಲಿದ್ದು ಏನೊ ಗಡಿಬಿಡಿ ಗೋಪಾಲರಿಗೆ ಅವರ 'ಬೀಮನ ಅಮಾವಾಸ್ಯೆಯಲ್ಲಿ"
ಸಾಲು ಸಾಲು ದೇವತೆಗಳ ಸಾಲು ಆದರೆ ನಮಗೆ ಅವರನ್ನೆಲ್ಲ ತೋರುವರು ಯಾರು? ಚಿಂತೆಬೇಡ "ರವಿವಾರ ಸಂಜೆ" ಹೊರಟುಬಿಡಿ ಗಣೇಶರ ಜೊತೆ. ಅಷ್ಟೆ ಏನೊ ಎನ್ನಬೇಡಿ ಅವರು ಇದ್ದಕ್ಕಿದ್ದಂತೆ ಮತ್ತೊಂದು ಮ್ಯಾಜಿಕ್ ಶುರು ಮಾಡಿದ್ದಾರೆ "ಚಲೋ ಮಲ್ಲೇಶ್ವರಮ್" ಅದಕ್ಕೆ ಹಿಂದೆ ದಂಡು ಹಾಸ್ಯ ಕೇಕೆಗಳಿಗೆ ಬರವೆ ಮಂಜು, ಪ್ರಭು, ರಾಮಮೋಹನ ಚಿಕ್ಕು ಎಲ್ಲ ಕೈಸೇರಿಸಿದ್ದಾರೆ ಗಾಳಿಪಟ ಹಾರಿಸಲು ನೋಡೋಣ ಸೇರುವ ಎತ್ತರವ.
. "ಆಸೆಯೆಂದಿಗು ತುಂಬದಿಹ ಪಾತ್ರೆ" ಸತೀಶರ ಶ್ರೀನರಸಿಂಹನನ್ನು ನೆನೆಯುತ್ತ ಸಾಗುತ್ತಿರುವ ವೇದಾಂತದ ಪದ್ಯ ಚಿಂತನೆಗಳು. ಹಾಗೆಯೆ ಗುರಿಯ ತಲುಪಲು ಕುಟಿಲೋಪಾಯ ಮಾಡಿ ಬಿತ್ತಿದಂತೆ ಬೆಳೆಪಡೆವರು ಎನ್ನುವ ನಾಗರಾಜರ "ಮೂಡ ಉವಾಚ" ಪದ್ಯಗಳು ಸೆಂಚುರು ಹೊಡೆದರು ಸುಸ್ತಾಗದ ಸಚಿನ್ ರಂತೆ ಅವರು.
ಆಚಾರ್ಯರು ಈ ಮಾಸ ಪೂರ್ಣ ಸಕ್ರೀಯರು , ವಿಶಿಷ್ಟ ಕವನ 'ಏಕೊ.. ಇಂದು ಪುನಃ ಅನಿಸುತ್ತಿದೆ" ಏನನ್ನೊ ಕಾಯುತ್ತಿರುವ ಮನಸ್ಸು ಯಾವುದೊ ಕನಸ್ಸು ಇವುಗಳಿಗೆ ಕಿವುಡಾದ ಕಿವಿ ಇದು ಅವರ ಮನಸಿನ ಸ್ಥಿಥಿ ಕವನದಲ್ಲಿ.ಮತ್ತೆ ಆಚಾರ್ಯರು ಹೇಳೂತ್ತಾರೆ 'ಸೋಲನೊಪ್ಪ ಬೇಡ ಇಷ್ಟು ಬೇಗ" ಏಕೆಂದರೆ ಸೋಲನೊಪ್ಪುವುದೆ ನಿಜವಾದ ಸೋಲು . ಚೇತನರೇನೊ ತಮ್ಮ ಚರ್ಮುರಿಯಲ್ಲಿ ಬಾಳು ಅಂದರೆ ಇಷ್ಟೆ ಅಂತ ತಿಳಿಸಿದ ಮೇಲು ಅದೇ ಬದುಕಿನ ಕೌತುಕದ ಬಗ್ಗೆ ಉಮಾರವರ ಪ್ರಶ್ನೇ 'ಬದುಕು ಅಂದರೆ ಇದೇನಾ?", ಹೌದು ಉಮಾರವರೆ ಬದುಕು ಎಂದರೆ ಇಷ್ಟೆ.ಇದೆ.
ಜಯಂತರೇನೊ ಹೊಸ ವಾಸ್ತು ದೋಷಹುಡುಕಿದ್ದಾರೆ ಯಾರಿಗೊ 'ಅಪ್ಪನ ಹೆಸರೆ ಆಗಿಬರಲ್ಲವಂತೆ" ಮತ್ತೇನು ಅಪ್ಪನ ಹೆಸರೆ ಬದಲಾಯಿಸಿ ಬಿಟ್ಟರಾಯಿತೆ ಸಮಸ್ಯೆ ಪರಿಹಾರ. ಮತ್ತೆ ಅವರೆ ಪ್ರಶ್ನಿಸುತ್ತರೆ "ಆತ್ಮಸ್ಥೈರ್ಯ ಎಂದರೆ ಇದೇನ" ಸಮಾಜದಲ್ಲಿನ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯ ಪರಿಚಯ.
ಸುರಿವ ಮಳೆಗಾಲದ ಈ ದಿನಗಳಲ್ಲಿ ಮಂಜುರವರಿಗೆ ಹೃದಯದ ಆಳದಲ್ಲಿ ಅಡಗಿರುವ ಗೆಳತಿಯ ನೆನಪು 'ಸುರಿವ ಮಳೆಯಲ್ಲಿ' ಕವನದಲ್ಲಿ.
"ಆಕಾರ ಹಾಗು ಕಲೆ" ಎಂತಹದೊ ಲೇಖನವಿರಬೇಕೆಂದು ಇಣಕಿದರೆ ಇದೇನು ಸುಪ್ರೀತ್ ನೀವು ತಿನ್ನಲು ಮಾಡಿಕೊಂಡ "ಚಪಾತಿಯ" ಚಿತ್ರಗಳು, ನಾನು ಮೋಸಹೋದನೆ ನಾನು ಕಲಾಕಾರನಾಗಬಹುದಿತ್ತಲ್ಲ ಅನ್ನಿಸಿತು. ಮತ್ತೆ ನಿಮ್ಮ ಮದುವೆಯಾಗುವ ಹುಡುಗಿಗೆ ಸ್ವಲ್ಪ ಕಷ್ಟವೆ ಬಿಡಿ. "ನಮ್ಮ ಭಾವನೆ ವ್ಯಕ್ತಪಡಿಸಲು ಕಣ್ಣೀರನ್ನು ಕೋಪ ವ್ಯಕ್ತಪಡಿಸಲು ಪದಗಳನ್ನು ಬಳೆಸಬಾರದು" ಇದು ನಾವಡರ ಯೋಚಿಸಲೊಂದಿಷ್ಟು ಕಂತುಗಳ ಸಾಲು.ಉತ್ತಮ ಸಂಗ್ರಹ ವಾಕ್ಯಗಳು.
ರೇಖ ಹೆರಾಂಜಲ್ ರವರ ಲೇಖನ ಶ್ರಾವಣದಲ್ಲಿ ಸಾರಸತ್ವರ ಚೂಡಿಪೂಜೆ ಉತ್ತಮ ಚಿತ್ರ ಹಾಗು ವಿಶಿಷ್ಟ ಆಚರಣೆಗಳ ಸಮಗ್ರ ವಿವರ ಒಳಗೊಂಡಿದೆ."ಆದರ್ಶ ತಾಯಿ" ತಾಯಿಯೆಂದರೆ ಹೇಗಿರಬಹುದು ನುಡಿ ನಡೆ ನಡುವೆ ಅಂತರವಿಲ್ಲದ ನಡತೆ ಹೇಗಿರಬೇಕೆಂದು ಮಕ್ಕಳ ನಡತೆ ರೂಪಿಸುವ ತಾಯಿಯ ಚಿತ್ರ ಅರೆಬೈಲಿನ ಶೋಬರಿಂದ. " ನಿಮ್ಮ ಚರ್ಮ ಹೊಳೆಯಲು ಏನು ಮಾಡಬೇಕು?" ಚಿಂತೆ ಏಕೆ ? ಶ್ರೀಲಕ್ಷ್ಮೀಸುದೀಂದ್ರರವರ ಪುಟ್ಟ ಲೇಖನ ಓದಿ ಸಾಕು.
ತಮ್ಮ ಜೀವನದ ನಿಜಘಟನೆಗಳ ನಿರೂಪಣೆ "ನೆನಪಿನಾಳದಿಂದ...." ಮಂಜುರವರ ಲೇಖನದಲ್ಲಿ ಹೃದಯ ಕಲಕುವ ಸಂದರ್ಭಗಳು. ಈ ಬಾರಿ ವಾಕ್ಪಥದ ವಿಶೇಷ ಏನೆಂದು ಪುನಃ ಅವರನ್ನೆ ಕೇಳಿ , ಹೇಳುತ್ತಾರೆ "ಸಪ್ತ ಸಮುದ್ರ ದಾಟಿ ಬಂದ ಮೆಚ್ಚಿನ "ಬಲ್ಲೆ" ಯವರನ್ನು ಬೇಟಿಮಾಡಿದ ಬಗ್ಗೆ ಅವರ ಲೇಖನದಲ್ಲಿ.
ಪ್ರಸನ್ನರೇಕೊ ಸ್ವಲ್ಪ ಬಸವಳಿದಿದ್ದಾರೆ, 'ನಾನು ಮತ್ತು ಕೆಟ್ಟ ಸಮಯ" ಜೀವನ ಹೋರಾಟದ ಒಂದು ಸ್ವಗತ, "ನಿನ್ನ ಅಟ್ಟಹಾಸಕ್ಕೆ ನನ್ನ ತಾಳ್ಮೆಯೆ ಉತ್ತರ" ನಿಜವಾದ ಕೆಚ್ಚು ಪ್ರಸನ್ನ, ಶುಭವಾಗಲಿ ನಿಮ್ಮ ಜೊತೆಗಿದೆ ನಮ್ಮೆಲ್ಲರ ಹಾರೈಕೆ.
ಸಮಾಜದ ದುಷ್ಟತನದ ಮುಖಕ್ಕೆ ಭ್ರಷ್ಟವ್ಯವಸ್ಥೆಗೆ ಮೂಗುದಾರ ಹಾಕಲು ಸಾದ್ಯವೆ? "ಸಾದ್ಯ" ಎನ್ನುತ್ತಾರೆ ಹರೀಶರು ತಮ್ಮ ಕವನದಲ್ಲಿ. "ಕಾಮನ ಬಿಲ್ಲು ಕಮಾನು ಕಟ್ಟಿದೆ" ಮಂಜುರವರೆ ಸುಂದರ ಚಿತ್ರಗಳ ಅನಾವರಣ.ಆದರೆ ಅಲ್ಲಿ ನೋಡಿ ಕಾಯರವರ ಕವನಕ್ಕೆ ಕಾಲು ಬಂದು ಹೊರಟಿತು, ಹುಡುಕಿದರೆ ಮೂರನೆ ತರಗತಿಯ ಪಠ್ಯದಲ್ಲಿ, ಮತ್ತೆ ಸಿನಿಮಾದಲ್ಲಿ ಅಯ್ಯಯ್ಯೋ ಅದಕ್ಕೆ ಏನೊ ಹಿಂದೆ ಬುದ್ದಿ ಬೆಳೆಯದ ಚಿಕ್ಕ ಮಕ್ಕಳಿಗೆ ದೊಡ್ಡವರು ಗದರಿಸುತ್ತಿದ್ದರು "ಹೊರಗೆ ಹೋದರೆ ನೋಡು ಕಾಲು ಮುರಿದುಬಿಡ್ತೇನೆ" ಎಂದು.
ಅಶಾಮಹೇಶಬಟ್ಟರಿಮ್ದ ಗೆಳತಿಯ ಅಗಲಿಕೆಯ ನೆನಪು "ನಿನ್ನ ಪ್ರೀತಿಗೆ..." ಆದರು ಇಂತಹ ಬರಹಗಳಿಗೆ ಚಿತ್ರವನ್ನು ಅಂಟಿಸದಿದ್ದಲ್ಲಿ ಚೆನ್ನವೇನೊ ಬರಹ ನೇರವಾಗಿ ಮನಸಿಗೆ ತಟ್ಟುತ್ತದೆ.
ಮತ್ತೊಮ್ಮೆ ಕಾಲದ ಕನ್ನಡಿಯ ನೆನಪು ನಾವಡರ "ಹೌದು ಹಾಗಿದ್ದರು ಹೆಗಡೇಜಿ" ನೆನಪುಗಳಲ್ಲಿ, ಆದರು ಕಡೆಯಲ್ಲಿ ಹೆಗಡೆಯವರ ಸುತ್ತಲು ಸಾಕಷ್ಟು ರಾಜಕೀಯ ಗೊಂದಲುಗಳೆ ತುಂಬಿದ್ದವು ಮತ್ತು ಅವು ಈಗಲು ಹಾಗೆ ಇವೆ ಅವರ ನಂತರವು. ಮತ್ತೆ ಜಯಂತರ ವಿಶಿಷ್ಟ ಲೇಖನ "ಕದಳಿ ವಿವಾಹ" ಹಿಂದಿನ ಸಂಪ್ರದಾಯವೊಂದರ ಮೆಲ್ನೋಟ. ಮತ್ತೆ ಸಾಲು ಸಾಲು ಅನುವಾದದಳನ್ನು ಮಾಡಿ ನಮ್ಮನ್ನೆಲ ಹಳೆಯ ಹಿಂದಿ ಹಾಡುಗಳ ನೆನಪಿನ ಲೋಕಕ್ಕೆ ಕರೆದೊಯ್ಯುವ ಆಸುರವರಿಂದ "ನನ್ನೊಲವೆ..." ಮತ್ತೊಂದು ಭಾವಾನುವಾದ ಪತ್ಥರ್ ಕೇ ಸನಮ್ ಚಿತ್ರದ ಹಾಡು "ಮಹೂಬೂಬ್ ಮೇರೆ.." , ಮತ್ತೆ ಆಗಷ್ಟ್ ಮಾಸದ ಮುಕ್ತಾಯ
ಲೇಖನ ವಿಭಾಗದಲ್ಲಿ ಆಕಸ್ಮಿಕ ವೆಂಬತೆ "ಪಕ್ಷಿನೋಟ..." ವೆಪ್ರಥಮ ಲೇಖನ. ನಂತರ ಸಂಪದಿಗರು ಸ್ಪಂದಿಸಿದರೆ ಮಾತ್ರ ಮುಂದುವರೆಸುವದಾಗಿ ತಿಳಿಸಿ ಪ್ರಾರಂಬಿಸಿದ "ಮೇರಿ ಲಯನ್..." ವೈಜ್ಞಾನಿಕ ಲೇಖನವನ್ನು ಸುಭ್ರಮಣ್ಯರು ಏಕೊ ನಿಲ್ಲಿಸಿಬಿಟ್ಟರು ಉತ್ತಮ ಪ್ರತಿಕ್ರಿಯೆಯ ನಂತರವು. ವಾಣಿಯವರ "ಶ್ರಾವಣ ಮಾಸ ಬಂದಾಗ" ಮಾಸದ ಆಚರಣೆಗಳ ಬಗ್ಗೆ ನಿಜಕ್ಕು ಉತ್ತಮ ವಿಷಯ ನಿರೂಪಣೆ. "ಇಂತವರು ಇರುತ್ತಾರೆ" ನಾಗರಾಜರಿಂದ ಅಪರೂಪದ ರೈತ ದಂಪತಿಗಳ ಪರಿಚಯ.
"ಛೇ ಇದೇನಿದು" ಶ್ರಾವಣಮಾಸದಲ್ಲಿ ವಡೆಯ ಚಿಂತೆ, ಎಲ್ಲಿ ಶ್ರೀನಾಥರಿಂದ "ಒಡೆಯನ ವಡೆ" ಯಲ್ಲಿ ಅದು ಅವರು ತಿಳಿ ಹಾಸ್ಯ ತೆಗೆದು ಹಾಕಿದ್ದಾರಂತೆ. "ಶ್ರೀನಾಥರೆ ನರಸಿಂಹರಾಜು ನಾನು ಯಾರನ್ನು ನಗಿಸಲ್ಲ "ಎಂದಂತೆ ಆಯಿತು ನಿಮ್ಮ ನುಡಿ.
"ನೀವು ಯಾರು?" ಪ್ರಶ್ನೆ ನನ್ನದಲ್ಲ ನಾಗರಾಜರದು "ಉತ್ತರ ಸಿಕ್ಕೀತೆ" ಲೇಖನದಲ್ಲಿ. ಕೆಳದಿ ಮನೆತನದವರ ಬಗ್ಗೆ ಶೋದದ ಬಗ್ಗೆ ಸವಿವರ ನೀಡಿದ್ದಾರೆ ನಾಗರಾಜರು ಅವರ ಆಸಕ್ತಿದಾಯಕ "ಕೆಳದಿ ಮನೆತನದವರ " ಲೇಖನದಲ್ಲಿ.
ಮತ್ತೆ ಭಾರತದ ಕೋರ್ಟಗಳ ನೈಜ ಸ್ಥಿಥಿ ಚೇತನರ ಬರಹ "ಈಗಲೆ ಮರಣ ಪತ್ರಕೊಂದು .."
ನೀರಿನಲ್ಲಿ ನಡೆಯುವ ರೋಬಟ ಹಾಗು ವೈಜ್ಞಾನಿಕ ಅವಿಷ್ಕಾರಗಳ ಪರಿಚಯ ಅಶೋಕಕುಮಾರರಿಂದ
ಮತ್ತೆ ಶ್ರಾವಣದ ಪ್ರಯುಕ್ತ ಸಾಕಷ್ಟು ಲೇಖನಗಳು ಕಥೆಗಳು ಮಂತ್ರಾಲಯದ ಶ್ರೀ ರಾಘವೇಂದ್ರರನ್ನು ಅವರ ಜೀವನವನ್ನು ಕುರಿತು ಪ್ರಕಟಗೊಂಡವು. ಜಯಂತರು ಮಂತ್ರಾಲಯದ ನೋಟದ ನೇರ ನಿರೂಪಣೆಯನ್ನೆ ಒದಗಿಸಿದರು. ಹಾಗೆಯೆ "ಅನನ್ಯ ಅಲ್ಲಮ"ದ ಕಂತುಗಳಲ್ಲಿ ಅಲ್ಲಮಪ್ರಬುವಿನ ಜೀವನ ಸಾದನೆಯ ನಿರೂಪಣೆ ಸಾಗುತ್ತಿವೆಸಿ.ಸೋಮಶೇಖರಯ್ಯನವರ ಲೇಖನದಲ್ಲಿ .
ನನಗೆ facebook request ಕಳಿಸುತ್ತೀರ ಸಂಪದಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದ ಶ್ರೀನಾಥರ ಒಂದು ಲೇಖನ.ನಾಗರಪಂಚಮಿ ಪರಿಸರ ಪಂಚಮಿಯಾಗಲಿ ನಾಗರಾಜರ ಕಳಕಳಿ, ಸೋಂದಾಕ್ಷೇತ್ರಕ್ಕೆ ಹೊಗೋಣ ಬನ್ನಿ ಜಯಂತರಿಂದ ಅಹ್ವಾನ. ಸಪ್ತಗಿರಿಯವರ "೬೫ ನೇ ಸ್ವಾತಂತ್ರೋತ್ಸವ ೧೯೪೭-೨೦೧೧" ಸ್ವಾತಂತ್ರ್ಯನಂತರ ಬಾರತೀಯರು ನಡೆದು ಬಂದ ಹಾದಿಯ ಒಂದು ಸಮಗ್ರ ನೋಟ,ಕೆಲವೆ ಪದಗಳಲ್ಲಿ ಅತ್ಯುತ್ತಮವಾಗಿ ಹಿಡಿದಿಟ್ಟಿದ್ದಾರೆ.ಅಂತೆಯೆ ನಾರಯಣರ "ಬೂಟ್ ಪಾಲಿಶ್ ಹುಡುಗ..." ಅದೆ ಬಾರತದ ಒಂದು ಚಿತ್ರ.
"ದೋಡಿಯ ವಾಘನ ಖಡ್ಗ" ನಾಗರಾಜರಿಂದ ಶಿಕಾರಿಪುರದ ಹುಚ್ಚುರಾಯಸ್ವಾಮಿಯ ಬಳಿಯಿರುವ ಖಡ್ದದ ಪರಿಚಯ ನೀಡಿದರು. ಸದಾಶಿವರಿಂದ ವಿಶಿಷ್ಟ ಲೇಖನ "ದೋರೆಸಾನಿ ..." ದೇವರಾಜು ಅರಸರ ಕಾಳಜಿ ಸ್ವಭಾವದ ಬಗ್ಗೆ.
"ತುಟಿಗೊಂದು ಆಭರಣ" ಲೇಖನ, ಮೌಸ್ ಅದುಮಿದರೆ ಇದೆಂತದು ಮೈ ಜುಂ ಎನಿಸುವಂತ ಪೋಟೊ, ಎಂತೆಂತಹ ಸಂಸ್ಕೃತಿಗಳೊ ಎಂಬ ವಿಸ್ಮಯ, ಉತ್ತಮ ಲೇಖನ ಬಸವರಾಜರೆ. ಗೋಪಿನಾಥರಿಂದ ಸೆಟೆದೋಸೆ ರೀತಿಯ ಜೊತೆ ಜೊತೆ ಲೇಖನಗಳು ಸಾಕುನಾಯಿಯ ಬಗೆಗಿನ "ಶ್ವಾನಪುರಾಣಮ್" ಒಂದಾದರೆ , ಗೋಪಿನಾಥರ ಮತ್ತೊಂದು ಮುಖ "ಕನ್ನಡಿಯ ಸೂರ್ಯ..." ಗುರುಗಳಾದ ಶ್ರೀ ಹೆಚ್ ಎಸ್ ವಿ ರವರ ಕವನ ಸಂಕಲನದ ಪರಿಚಯಾತ್ಮಕ ಲೇಖನ.
ನಾವು ತಿಂದ ಕ್ಯಾಪ್ಸೂಲ್ .." ಹೀಗೆಲ್ಲ ಆಗುತ್ತಾ ! , ಪ್ರಶಸ್ತಿಯವರ ನಿರೂಪಣೆ. ಅಪರೂಪದ ಲೇಖಕರು ಐನಂಡ ಪ್ರಭುಕುಮಾರರು , ಹಾಗೆ ಅವರ ಲೇಖನವು ನಿಜಕ್ಕು ಅಪರೂಪದ್ದೆ, "ಮುಕೇಶ್...ಹಿಂದಿ ಚಲನಚಿತ್ರದ." ಅಪಾರ ಶ್ರಮ ಹಾಗು ಅತ್ಯುತ್ತಮ ನಿರೂಪಣೆ ಒಟ್ಟಿಗೆ ಕಾಣುವ ಲೇಖನ. ಆದರು ಕಡೆಯಲ್ಲಿ ಒಂದೆ spelling doubt ಅದು "ಮುಖೇಶ್" ಎಂದಾಗಬೇಕ ಅಂತ. "ಯಾರು ಹುಚ್ಚೆಂದರು.." ಸತ್ಯನಾರಾಯಣರ ಲೇಖನ ನಾನು ಮದ್ಯದಲ್ಲಿ ತಲೆ ಹಾಕಿದೆ ಅನ್ನಿಸುತ್ತೆ, ಕುವೆಂಪು ಪದ್ಯ ಹಾಗು ಜೀವನ ಘಟನೆಗಳ ನಿರೂಪಣ ಸಂಗ್ರಹ, ಈಗ ಮೊದಲ ಬಾಗ ಎಲ್ಲಿ ಹುಡುಕಿ ಓದಬೇಕು.
ಸಪ್ತಗಿರಿಯವರೆ ನಿಮ್ಮ ಕಥೆ "ಅವನು ಅವಳು ಮತ್ತು ನಾವು" ಸಹಜವಾಗಿಯೆ ಚೆನ್ನಾಗಿದೆ, ಇಂತ ಹೊಸದೃಷ್ಟಿಯ ನಿರೂಪಣೆ ದಾಟಿ ಹೊಸಬರಿಂದಲೆ ಸಾದ್ಯ ಏಕೆಂದರೆ ಹಳಬರೆಲ್ಲ ಸಾಮಾನ್ಯವಾಗಿ ಬಂದಿಗಳು "ಅವರದೆ ಆದ ಶೈಲಿಗೆ ಅವರದೆ ಆದ ನಿರೂಪಣೆಗೆ" , ನಿಮ್ಮ ಕಥೆ ಪಕ್ಶಿನೋಟದಲ್ಲಿ ಸೇರಿದರೆ ನಿಮಗಷ್ಟೆ ಅಲ್ಲ ನನಗು ಹೆಮ್ಮೆಯೆ ಎಲ್ಲ ಲೇಖನವನ್ನು ಸೇರಿಸುವಾಸೆ, ಆದರೆ ಓದುಗರಿಗೆ ಕಷ್ಟ. ಮತ್ತೆ ಕಡೆಗೊಂದು ಪ್ರಶ್ನೆ "ನೀವು ಅದಾರಕ್ಕಾಗಿ ಅಧಾರ್ ಕಾರ್ಡ್ ಮಾಡಿಸಿದ್ದೀರ??" ಪ್ರಶ್ನೆ ನನ್ನದಲ್ಲ, ಗೋಪಿನಾಥರದು ಮತ್ತು ಅದೆ ತಿಂಗಳ ಕಡೆಯ ಲೇಖನ.
ಕವನ ಹಾಗು ಚಿತ್ರಗಳು : ಸಂಪದದಲ್ಲಿ ಪ್ರಕಟವಾಗುವ ಕವನಗಳು ಸದಾ ಮನ ತೋಯ್ಯುಸುತ್ತವೆ. ಪ್ರಕೃತಿ ಕಲೆ ಪ್ರೀತಿ ಕಾವ್ಯ ಅಲ್ಲದೆ ಎದುರಿನ ಪ್ರತಿಯೊಂದು ವಸ್ತುವೆ!
"ನಲ್ಲಳಿಲ್ಲದೆ ಬಳಿಯಲ್ಲಿ" ಕವನದೊಂದಿಗೆ ಪ್ರಾರಂಬ , ಹತ್ತಿರ ನಲ್ಲೆ ಇರದಿದ್ದರೆ ನೇಸರ ಹಕ್ಕಿಗಳು ತಾರೆ ಯಾವುದರಲ್ಲು ಸೊಗಸಿಲ್ಲ ನಗುವಿಲ್ಲ ನಿಜ ಜಯಪ್ರಕಾಶರೆ. ನಂದೀಶರು ಸದಾ ಸಕ್ರಿಯರು, ಜೊತೆಗೆ ಉತ್ತಮ ಚಿತ್ರಗಳನ್ನು ಕವನದ ಹಿನ್ನಲೆಗೆ ಬಳಸುತ್ತಾರೆ. ಅವರ 'ಸಂಪದದಂಗಳದಲ್ಲಿ ನನ್ನ ಕವಿತೆ" ಎಲ್ಲರು ಕೆನ್ನೆಹಿಂಡಿ ಖುಷಿ ಬಿದ್ದ ಕವನ. "ದೇವರು ಮತ್ತು ಮಗು"ವಿನಲ್ಲಿಯ ಚಿತ್ರವಂತು ವಾಹ್!. ಅಂತೆಯೆ ಪ್ರೀತಮರ ಮೈತ್ರಿ ಚೆನ್ನಾಗಿದೆ. ಕವನ ಬರೆಯುವದರಲ್ಲಿ ಮೊದಲಲ್ಲಿ ಆಶಾ ಮಹೇಶ್ ಮತ್ತು ಪ್ರಶಸ್ತಿ ಯವರಿಗೆ ಪಂದ್ಯದಂತಿದೆ, "ನೀನ್ಯಾಕೆ ಬರೆಯಲ್ಲ ಗಂಭೀರ ಕವಿತೆ ಕಾಮೆಂಟು ಲೈಕು ಕುಕ್ಕೊದ್ರಲ್ಲೆನೈತೆ" , ಯುವಜನತೆಗೆ ಪ್ರಶ್ನೆ ಉತ್ತರವನ್ನು ಪ್ರಶಸ್ತಿಯೆ ಕೊಡಬಲ್ಲರು ಕೊಟ್ಟಿದ್ದಾರೆ. ಅಶಾ ಸದ ಪ್ರಕೃತಿ ಮಳೆಯಲ್ಲಿ ಮಗ್ನರು.ಅರ್ಪಿತಾರಾವ್ ರವರಿಗೆ ಲಂಡನ್ ನಲ್ಲಿದ್ದರು ಕನ್ನಡ ಅಕ್ಷರದ ಮೇಲೆ ಅಕ್ಕರೆ "ಕಡಲ" ತಡಿಯಲ್ಲಿದ್ದರು ಅವರದು ಎಕೊ "ಏಕಾಂಗಿ" ಎಂಬ ಭಾವ.
ಅಲ್ಲ ಮಕ್ಕಳಾಟವನ್ನು ತಾಯಿ ಆಡಿದರೆ ಮಕ್ಕಳು ನೋಡಿ ನಗದಿರರೆ? ಖುಶಿ ಕೊಟ್ಟ ಕವನ "ಮಳೆ ಮತ್ತು ನಾನು" ಅರುಣ ಬದಿಕೋಡಿಯವರೆ. ಸದಾನಂದರು ಮಕ್ಕಳಿಗಾಗಿ ಕವನ ಹೊಸೆಯುವದರಲ್ಲಿ ಸದಾ ಸಿದ್ದಹಸ್ತರು, ಅದು ದೇಶ ಭಕ್ತಿಯಾಗಿರಬಹುದು , ಪುಟ್ಟ ಕೃಷ್ಣನ ಮೇಲಾಗಿರಬಹುದು, " ಚೋರ ಕಿಶೋರ", ನಮ್ಮ ಗಣಪತಿಯಂತು ಮನಸೆಳೆಯಿತು ಸರಳ ಪದಗಳ ಸುಂದರ ಕವನಗಳು. ಜಯಂತ್ ನೀವು ಕವನಗಳಲ್ಲು ಸಿದ್ದಹಸ್ತರೆ "ಮೇಘ ವರ್ಷಿಣಿ"ಯ ವರ್ಣನೆ ಚೆನ್ನಾಗಿದೆ.ಸದಾಶಿವರೆ ನಿಮ್ಮ ಕವನ_ಕುರಿತು ಚೆನ್ನಾಗಿದೆ ಆದರೆ ಅದೆ ಆನೆ ಇನ್ನೆಲ್ಲೊ ನಿಂತಿತ್ತಲ್ಲ.
ಪ್ರಸ್ಸನರೆ " ಅವಘಡ"ಗಳಿರುವುದೆ ನಮಗಾಗಿ . ನಾವು ಅದಕ್ಕೆ ಹೊಂದಿಕೊಳಲ್ಲೇ ಬೇಕಲ್ಲವೆ. ಅಪೂರ್ವ "ಪದ-ಬಂದನ" ಮಾಡಿ ಅಕ್ಕನಿಗೆ ರಾಗಹಾಕಲು ಕೊಟ್ಟ ನಿಮ್ಮ ಜಾಣ್ಮೆ ಚೆನ್ನಾಗಿದೆ. ಶೀಲಾನಾಯಕರೆ ಕೊಳಲು ಹಿಡಿದ ರಾದ-ಕೃಷ್ಣರ ಕೈಗಳ ಹಿಂದಿನ ನವಿಲುಗರಿಯ ವರ್ಣಚಿತ್ರ ನಿಮ್ಮ ಕವನದಷ್ಟೆ ಚೆನ್ನಾಗಿದೆ.
ಬಸವರಾಜ್ ನೀವು ಹೇಳಿದಂತೆ ಬೋದಿಲೈರ್ ಪ್ರೇರಣೆಯ "ಕೊನೆಯ ಪ್ರೇಮ ನಿವೇದನೆ" ಓದುಗರನ್ನು ಬೆಚ್ಚಿಬೀಳಿಸಬಹುದು ಆದರು ಅದಕ್ಕೆ ರಾದಕೃಷ್ಣರ ಪ್ರೇಮ ಕಾವ್ಯದ ವಿಶಾಲ ಹರವು ಸಿಗುವುದು ಕಷ್ಟವೆ ಆದರು ಒಂದು ವಿಬಿನ್ನ ಪ್ರಯೋಗ ಎಂದು ಒಪ್ಪಬಹುದು. ವಿರೂಪಾಕ್ಷಪ್ಪನವರೆ ಅಣ್ಣಗೆ ಜೈಅನ್ನಲು ನಿಮ್ಮ "ಮತ್ತೆ ಹೋರಾಟ"ಕ್ಕೆ ಕೈಜೋಡಿಸಲು ದೇಶವೆ ಸಿದ್ದವಿದೆ ಬಿಡಿ. "ಮಳೆ ಬಂದರು ಭುವಿ ನೆನೆದರು" ನೀನಿಲ್ಲದೆ ಸ್ಪೂರ್ತಿಯಿಲ್ಲ "ಹೀಗೇಕೆ ಗೆಳತಿ" ಕವನದಲ್ಲಿ ಅನ್ನುತ್ತಾರೆ ನರಸಿಂಹಮೂರ್ತಿಗಳು.
ಚಿತ್ರ ವಿಭಾಗದಲ್ಲಿ ಸೋಮಶೇಖರಯ್ಯನವರ ಚಿತ್ರಗಳಲ್ಲಿ "ಮುರಿದುಬಿದ್ದ ಹಳೆ ಆಡಳಿತ" ಮನ ತಟ್ಟುತ್ತದೆ., "ಅರುಂದತಿ ದರ್ಶನ" ಪಡೆವ ದಂಪತಿಗಳ ಚಿತ್ರ ಅತ್ಯುತ್ತಮ ಸಂಯೋಜನೆಯದು, ಹಂಸಾನಂದಿಯವರು ಇದನ್ನು ನೋಡಿದರೊ ಇಲ್ಲವೊ ತಿಳಿಯದು. ಅಂತೆಯೆ "ಭ್ರಹ್ಮಕಮಲ" ಗಳ ಸರಣಿ ಚಿತ್ರ ಅಮೋಘ , ಅಭಿನಂದನೆಗಳು ಸೋಮಶೇಖರಯ್ಯನವರೆ.
ಚಿಕ್ಕು ನಿಮ್ಮ ಹಕ್ಕಿಯ ಚಿತ್ರ ಸುಂದರ, ಗಣೇಶರಿಗೆ ಸುಮ್ಮನಿರಲು ಹೇಳಿ ಅವರ ಗಲಾಟೆಗೆ ಹಕ್ಕಿ ಹಾರೀತು. ಸುಮಾರವರ "ಬೆಕ್ಕಿನ ಮರಿಯ" ಚಿತ್ರ ಅತಿ ಸುಂದರ ಆದರೆ ಅದರ ಬಾಷೆ ಯಾವುದೆಂದು ನಿರ್ದಾರವಾಗಲಿಲ್ಲ. ಶಶಿದರರವರ ಬೆಕ್ಕಿನ ಕಣ್ಣು ನೋಡಲು ಭಯ ಎನಿಸಿದರು, ಚೆನ್ನಾಗಿದೆ.
ಶೋಭಾಅರಸ್ ರವರೆ ನಿಮ್ಮ ಹೂವು ಮುಡಿದ ಹೆಣ್ಣಿನ ಚಿತ್ರ ಹಾಗು ಕಲ್ಪನೆ ಎರಡು ಮನಮೋಹಕ
Comments
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ಗಣೇಶ
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by sm.sathyacharana
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by partha1059
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by sm.sathyacharana
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by sm.sathyacharana
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by naveen.kitty
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ksraghavendranavada
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by prasannakulkarni
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ksraghavendranavada
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ksraghavendranavada
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by gopaljsr
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ksraghavendranavada
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by sathishnasa
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by Chikku123
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by manju787
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by santhosh_87
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by kamath_kumble
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ksnayak
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by kamath_kumble
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by RAMAMOHANA
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by kavinagaraj
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by kavinagaraj
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by ಗಣೇಶ
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by venkatb83
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by Iynanda Prabhukumar
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by Iynanda Prabhukumar
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by partha1059
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by partha1059
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by Jayanth Ramachar
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by bhalle
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
In reply to ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧) by partha1059
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)
ಉ: ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)