ನಮ್ಮ ಮಕ್ಕಳ ದೃಷ್ಟಿ ಇತ್ತ ವಾಲದೇ?
20 hours 45 minutes ago - ಬರಹಗಾರರ ಬಳಗಬದುಕಿನ ಉನ್ನತ ಗುರಿ ವ್ಯಕ್ತಿಯನ್ನು ಸಾಧಕನಾಗಿ ರೂಪಿಸಬಲ್ಲುದು. ಗುರಿ ಮುಟ್ಟಲು ಸಾಕಷ್ಟು ಸಿದ್ಧತೆ ಹಾಗೂ ಅದಕ್ಕಾಗಿ ಬದ್ಧತೆ ವ್ಯಕ್ತಿಯಲ್ಲಿರಬೇಕು. ಗುರಿಯೆಡೆಗೆ ಸಾಗುವ ಹಾದಿಯಲ್ಲಿ ನಿರಂತರ ಪ್ರಯತ್ನ, ಕ್ಷಣಿಕ ಸುಖಗಳ ತ್ಯಾಗ, ಮುಂದೊಂದು ದಿನ ಮಂದಹಾಸ ಮೂಡಿಸಬಹುದು. ಆ ಮಂದಹಾಸ ಮುಂದಿನ ಪೀಳಿಗೆಗೆ ಇತಿಹಾಸವಾದಾಗ ಬದುಕು ಸಾರ್ಥಕವಾಗುವುದು ನಿಸ್ಸಂಶಯ.
ಭಾರತ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಸಾಧಕರ ಕನಸನ್ನು ನನಸಾಗಿಸಿದೆ. 2023 ರಲ್ಲಿ ನಡೆದ ಪರೀಕ್ಷೆಯಲ್ಲಿ 1016 ಮಂದಿ ಉನ್ನತ ಹುದ್ದೆಗೆ ಅರ್ಹತೆಯನ್ನು ಪಡೆದು, ಹೆತ್ತ ತಾಯಿಗೆ, ಹೊತ್ತ ಭೂಮಿಗೆ ಗೌರವ ತಂದುಕೊಟ್ಟಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಆದಿತ್ಯ ಶ್ರೀವಾಸ್ತವ ದೇಶದಲ್ಲೇ ಪ್ರಥಮನಾಗಿ ಮೂಡಿಬಂದಿದ್ದಾನೆ. ಒಡಿಶಾದ ಅನಿಮೇಶ್ ಪ್ರಧಾನ್ ದ್ವಿತೀಯ ಸ್ಥಾನಿಯಾಗಿದ್ದರೆ, ತೆಲಂಗಾಣದ ಅನನ್ಯ ರೆಡ್ಡಿ ಮೂರನೇ ಸ್ಥಾನಿಯಾಗಿ ನಾಡಿನ ಕೀರ್ತಿಯನ್ನು ಬೆಳಗಿದ್ದಾರೆ.
ಕರ್ನಾಟಕದ 36 ಮಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದದ್ದು, ರಾಜ್ಯವೇ ಹೆಮ್ಮೆಪಡುವ ಸಾಧನೆಗೈದಿದ್ದಾರೆ. ಪ್ರತಿಯೊಬ್ಬರ ಸಾಧನೆಯ ಹಾದಿ ಭವಿಷ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬಲ್ಲುದು ಎಂಬುವುದು ಸಂಶಯಾತೀತವಾದದ್ದು. ವಿಜಯಪುರದ 'ವಿಜೇತ' 100ನೇ ರಾಂಕ್ ಪಡೆದು ವಿಜಯದ ನಗೆ ಬೀರಿದ್ದಾರೆ. ಕೋಚಿಂಗ್ ದಂಧೆಯ ಮಧ್ಯೆ, ಯಾವುದೇ ಕೋಚಿಂಗ್ ಪಡೆಯದ ಆಕೆಯ ಸಾಧನೆ ಅದ್ಭುತವಾದದ್ದು. ಮೂರು ಬಾರಿಯ ವೈಫಲ್ಯತೆ ಆಕೆಯನ್ನು ಧೃತಿಗೆಡಿಸಲಿಲ್ಲ. ಶಿಕ್ಷಕಿಯೊಬ್ಬರ ಉಚಿತ ಮಾರ್ಗದರ್ಶನದಿಂದ ಸತತ ಎರಡು ಬಾರಿ ವಿಫಲತೆ ಪಡೆದರೂ ಮೂರನೇ ಪ್ರಯತ್ನದಲ್ಲಿ101ನೇ ರಾಂಕ್ ಪಡೆದ ಸೌಭಾಗ್ಯ ನಿಜಕ್ಕೂ ಪ್ರೇರಕಿಯಾಗಿ ಮೂಡಿಬಂದಿದ್ದಾಳೆ.
ರಾಜ್ಯದ ಗಮನ ಸೆಳೆದ ಮತ್ತೊಬ್ಬ ಸ… ಮುಂದೆ ಓದಿ...