ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು...
ಅರಣ್ಯದ ಪುಷ್ಪಗಳ ಮೂಸುವವರಾರು?
ಆರಿಹರು ಪತಗದುಡುಪನ್ನು ಹುಡುಕಿ ಮೆಚ್ಚಲ್?
ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ|
ಸ್ವಾರಸ್ಯವೆಸಗುವಳೊ_ಮಂಕುತಿಮ್ಮ|| ಎಂದಿದ್ದಾರೆ.
ನಿತ್ಯವೂ ಈ ದಿವ್ಯ ಚಿತ್ರದಲ್ಲಿ ಮನವಿರಿಸಿ ಕಣ್ಮುಚ್ಚುವುದೆ ಧ್ಯಾನವೂ, ಧರ್ಮವೂ, ಸಚ್ಚಿದಾನಂದವೂ ಆಗಿದೆಯಲ್ಲವೇ! ಈ ನಿಷ್ಪಾಪಿ ಸಸ್ಯಗಳ ಪರಿಚಯ ಲಹರಿಯು ಪುಟ್ಟ ಪುಟ್ಟ ಹೆಜ್ಜೆಗಳ ಗುರುತು ಮೂಡಿಸುತ್ತಾ ನಡೆದು ಇಂದು ಶತಕ ಸಂಭ್ರಮದಲ್ಲಿದೆ ಎನ್ನುವುದೇ ಒಂದು ಸಂತಸವಲ್ಲವೇ!
ಈ ಜಗತ್ತು ಡೊಂಕು, ನೇರ ಹಾಗೂ ಅವುಗಳ ಮಿಶ್ರಣದಿಂದಾಗಿದೆ. ಹಲವಾರು ಮೀಟರ್ ಗಳಷ್ಟು ಎತ್ತರ ಬೃಹದಾಕಾರವಾಗಿ ಬೆಳೆದು ನಿಂತ ಮರವನ್ನು ನೋಡುವುದೇ ಕಣ್ಣಿಗೆ ಹಬ್ಬ!. ಕೇವಲ ಮರವೊಂದು ಭೂಮಿಯಿಂದ ಹಾಗೆ ಏಕಾಂಗಿಯಾಗಿ ಎದ್ದು ನಿಂತರೆ ಭವ್ಯತೆ ಕಾಣಬಹುದೇ ಹೊರತು ಆಕರ್ಷಕವೆಂದೆನಿಸದು. ಆ ಮರವನ್ನು ಆಧರಿಸಿ ನಿಧಾನವಾಗಿ ಲಾಸ್ಯದಿಂದ ಮೇಲೇರುವ ಬಳ್ಳಿಗಳೂ, ಸುತ್ತಲೂ ಸಣ್ಣ ಪುಟ್ಟ ಮರಗಿಡಗಳೂ ಜೊತೆಗಿದ್ದಾಗ ಕಾಣುವ ಸೊಬಗೇ ಅನನ್ಯ!. ಹೀಗೆ ಮರ, ಗಿಡ, ಕಲ್ಲುಬಂಡೆ, ಇಳಿಜಾರು, ಗೋಡೆ ಹೀಗೆ ಎಲ್ಲೆಂದರಲ್ಲಿ ಅಂಬೆಗಾಲಿಡುತ್ತಾ ಮುಗ್ಧ ವಾಗಿ ಮೇಲೇರುವ ಬಳ್ಳಿಗಳಲ್ಲಿ ಅಡಿಕೆ ಬೀಳು ಕೂಡ ಒಂದು.
ನೀವದರ ನಡಿಗೆಯನ್ನು ಗಮನಿಸಬೇಕು. ತಮ್ಮ ಕುಡಿಗಳನ್ನು ಮೇಲೆತ್ತಿ ರೆಕ್ಕೆಗಳಂತಿರುವ ತೊಟ್ಟಿನಲ್ಲಿ ಈಟಿಯಂತೆ ತುದಿ ಚೂಪಾದ ಅಂಡಾಕಾರದ ಹೊಳಪಿನ ಹಸಿರು ಎಲೆಗಳನ್ನು ಅತ್ತಿತ್ತ ಹರಡಿ ಅಲ್ಲೇ ಬೇರುಗಳಿಂದ ಆಧಾರವನ್ನು ಅವಚಿಹಿಡಿದು, ಅಲ್ಲೇ ಕಂಕುಳಲ್ಲಿ ಅಕ್ಟೋಬರ್ ನವೆಂಬರ್ ಗಳಲ್ಲಿ ಪುಷ್ಪಗುಚ್ಛವರಳಿಸಿ ಕೆಂಪಾ…
ಮುಂದೆ ಓದಿ...