ಆದರ್ಶ ಅಧಿಕಾರಿ
22 hours 16 minutes ago - ಬರಹಗಾರರ ಬಳಗ
ಇಂದು ಆದರ್ಶ ಅಧಿಕಾರಿ ಡಾ. ಆನಂದ್ (ಭಾ.ಆ.ಸೇ.) ಇವರ ಬಗ್ಗೆ ತಿಳಿದುಕೊಳ್ಳೋಣ. ನನ್ನ ಹುದ್ದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರ ಅಧೀನದಲ್ಲಿ ಬರುತ್ತದೆ. ಈಗ ಬರೆಯುತ್ತಿರುವ ಲೇಖನ ಆದರ್ಶ ಅಧಿಕಾರಿ ಡಾ. ಆನಂದ್ ಕುರಿತು (ಭಾರತೀಯ ಆಡಳಿತ ಸೇವೆ.) ಇವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎಂ.ಬಿ.ಬಿ.ಎಸ್, ಎಂ.ಡಿ, ಮಾಡಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಆಡಳಿತ ಸೇವೆ ಹುದ್ದೆಗೆ ಆಯ್ಕೆಯಾಗಿ, ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ 33 ವರ್ಷ ಸೇವಾವಧಿಯಲ್ಲಿ ಅನೇಕ ಅಧಿಕಾರಿಗಳ ಅಧೀನದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ನನ್ನ ವಿವೇಚನೆಗೆ ಅನುಸಾರ ಅಧಿಕಾರಿಗಳನ್ನು ಮೂರು ಬಗೆಯಾಗಿ ಗುರುತಿಸಿಕೊಂಡಿದ್ದೇನೆ.
1. ಮೊದಲನೇ ವರ್ಗ ಸಿಟ್ಟಿನ ಅಧಿಕಾರಿ : ತಮ್ಮ ಅಧೀನದ ಇಲಾಖೆಯಲ್ಲಿ ಬರುವ ಇಲಾಖೆಗಳ, ಸಾರ್ವಜನಿಕರ ಕೆಲಸದಲ್ಲಿ , ದೋಷ , ಕೊರತೆ ನೋಡಿ ಸರಿಪಡಿಸುವ ವರ್ಗ. ಈ ವರ್ಗದ ಅಧಿಕಾರಿಗಳು ಸದಾ ಕೋಪ, ನಿಷ್ಠುರ ಸ್ವಭಾವದವರು. ಇವರ ಮುಖದಲ್ಲಿ ಶಾಂತಿ ಸಮಾಧಾನವಿಲ್ಲ. ತಮ್ಮ ಅಧೀನದ ಸಿಬ್ಬಂದಿಗಳು ಶಾಂತಿ, ಸಮಾಧಾನದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ಇವರ ನಿಷ್ಟುರದ ಮಾತುಗಳಿಂದ ಅಧೀನದ ಸಿಬ್ಬಂದಿಗಳೂ ಅಶಾಂತಿಯಿಂದ ಕೆಲಸ ಮಾಡುವುದರಿಂದ ಬಹಳಷ್ಟು ತಪ್ಪುಗಳಾಗುವ ಸಂದರ್ಭ ಅಧಿಕ. ಇದರಿಂದ ಮತ್ತಷ್ಟು ಅಸಮಾಧಾನವಾಗುತ್ತದೆ. ಯಾರು ದೋಷಗಳನ್ನು, ಕೊರತೆಗಳನ್ನು ನೋಡುತ್ತಾರೋ ಅವರಿಗೆ ಸಹಜವಾಗಿ ಶಾಂತಿ ಸಮಾಧಾನ ಇರುವುದಿಲ್ಲ. ದ್ವೇಷ, ಕೋಪ ಮನೆ ಮಾಡಿರುತ್ತದೆ. ಅದೇ ರೀತಿ ದ್ವೇಷದಿಂದ ನೋಡಿದಾಗ ಒಳ್ಳೆಯದು ಕಾಣದೆ ಕೇವಲ… ಮುಂದೆ ಓದಿ...