ರೈತ ಭಾರತ
1 day ago - Shreerama Diwana
ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ. ಭಾರತದ ಜನಸಂಖ್ಯೆಯ ಶೇಕಡ 80% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು. ರೈತ ನಮ್ಮ ಬೆನ್ನೆಲುಬು - ಅನ್ನದಾತ - ಉಳುವ ಯೋಗಿ ಎಂದು ಹಾಡಿ ಹೊಗಳಲಾಗುತ್ತಿತ್ತು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೆಲ್ಲೂ ಹಸಿರೋ ಹಸಿರು. ಗೋದಿ ಭತ್ತ ರಾಗಿ ಜೋಳ ನವಣೆ ಸಜ್ಜೆ ಮಾವು ತೆಂಗು ಅಡಿಕೆ ಕಾಫಿ ಚಹ ಹಣ್ಣುಗಳು ತರಕಾರಿಗಳು ಬೇಳೆಕಾಳುಗಳ ಸಮೃದ್ದತೆ ಇತ್ತು. ಹಸಿರು ಕ್ರಾಂತಿಯಿಂದಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಕ್ಷೀರಕ್ರಾಂತಿಯಿಂದಾಗಿ ಎಲ್ಲಾ ಕಡೆಯೂ ಹಾಲು ತುಪ್ಪಗಳು ಹರಿಯಲಾರಂಬಿಸಿತು. ಇದರಿಂದಾಗಿ ರೈತ ಆರ್ಥಿಕವಾಗಿ ಬಲಾಢ್ಯನಾಗದಿದ್ದರು ನೆಮ್ಮದಿಗಂತೂ ಕೊರತೆ ಇರಲಿಲ್ಲ. ಈಗಿನಂತೆ ಆಗಲೂ ವೈಜ್ಞಾನಿಕ ಕೃಷಿ ಪದ್ದತಿ - ಬೆಲೆ ಇಲ್ಲದಿದ್ದರೂ ಫಸಲಿನ ಸಮೃದ್ದಿ, ಜನರ ಸರಳ ಜೀವನ ಶೈಲಿ, ಕಡಿಮೆ ನಿರೀಕ್ಷೆಗಳಿಂದ ರೈತರ ಬದುಕು ದುರ್ಬರವೇನೂ ಆಗಿರಲಿಲ್ಲ. ಬಡತನದಲ್ಲೂ ಸ್ವಾಭಿಮಾನದ ಬದುಕು ಸಾಧ್ಯವಾಗಿತ್ತು.
ಆದರೆ ವಿಶ್ವ ವ್ಯಾಪಾರ ಒಪ್ಪಂದದ ಫಲವಾಗಿ ಜಾಗತೀಕರಣಕ್ಕೆ ಸಹಿಹಾಕಿದ ನಂತರ ಭಾರತೀಯ ರೈತನ ಬದುಕಲ್ಲಿ ಮಹತ್ವದ ಬದಲಾವಣೆಗಳಾಗತೊಡಗಿದವು. ವಾಸ್ತವವಾಗಿ ಜಾಗತೀಕರಣದ ಪ್ರಕ್ರಿಯೆಯಿಂದ ನಮ್ಮ ಆರ್ಥಿಕ ಅಭಿವೃದ್ಧಿ ಸರಾಗವಾಯಿತು ಆದರೆ ರೈತರ ಪಾಲಿಗೆ ಮರಣ ಶಾಸನವಾಯಿತು. ನಿಜಕ್ಕೂ ಜಾಗತೀಕರಣ ಒಂದು ಅತ್ಯುತ್ತಮ ವಿಶ್ವ ವೇದಿಕೆ. ಮನುಜ ಮತ ವಿಶ್ವ ಪಥಕ್ಕೆ ನಾಂದಿ ಹಾಡಿದ ಕ್ರಿಯೆ. ಆರ್ಥಿಕವಾಗಿ… ಮುಂದೆ ಓದಿ...