ವಿಧ: Basic page
January 09, 2007
ಬಿ. ಎಂ. ಶ್ರೀ ಸಾಹಿತಿ ಮತ್ತು ಸಾಮಾಜಿಕ ಮುತ್ಸದ್ದಿ ... ! !
ಮೈಸೂರು ಅಸೋಸಿಯೇಷನ್ ಬಂಗಾರದ ದತ್ತೀ ಹಬ್ಬದ ಪ್ರಯುಕ್ತ ಯೋಗಿಸಲಾಗಿದ್ದ ದತ್ತಿ ಉಪನ್ಯಾಸ ಶನಿವಾರ ೬ ನೇ ಜನವರಿ ೨೦೦೭ರಂದು ಸಯಕಾಲ ೬-೩೦ ಕ್ಕೆ ಶುರುವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಶ್ಯಾಮಲ ಮತ್ತು ವೃಂದದವರಿಂದ ಬಿ. ಎಂ. ಶ್ರೀ ರವರು ಬರೆದ ಕವನಗಳ ವಾಚನವಾಯಿತು. ಮೊದಲು 'ಕರುಣಾಳು ಬಾ ಬೆಳಕೆ' ಪ್ರಾರಂಭವಾಗಿ 'ವಸಂತ ಬಂದ ಋತುಗಳ ರಾಜ' ದಿಂದ ಮುಕ್ತಾಯವಾಯಿತು. ಮೈಸೂರ್ ಅಸೊಸಿಯೇಷನ್ ಅಧ್ಯಕ್ಷರಾದ ಶ್ರೀ.…
ವಿಧ: Basic page
January 09, 2007
ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು…
ವಿಧ: ಬ್ಲಾಗ್ ಬರಹ
January 09, 2007
ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯…
ವಿಧ: ಚರ್ಚೆಯ ವಿಷಯ
January 08, 2007
ಈ ವಚನದ ಭಾವಾರ್ಥ ಹೇಳಿ ನೋಡೋಣ
ಕರೆಯದೆ ಬರುವವನಬರಿಗಾಲಲ್ಲಿ ನಡೆಯುವವನಬರೆಯದೆ ಓದುವವನಕರೆತಂದು ಕೆರದಲ್ಲಿ ಹೊಡೆಯೆಂದ ಸರ್ವಜ್ಞ
(ಇದನ್ನು ನಾನು ನೆನಪಿನಿಂದ ಬರೆಯುತ್ತಿರುವುದರಿಂದ ಕೆಲವು ಪದಗಳು ಬೇರೆಯಾಗಿರಬಹುದು)
ವಿಧ: Basic page
January 08, 2007
ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು
ಹಿತ್ತಿಲಲಿ ಕೇಳಿಸಿತು ಅವನ ಕೂಗು.
"ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"
ಸುಮ್ಮಗೆ ಕರೆಯುವರೇ?, ನೋಡಬೇಕಾಯ್ತಲ್ಲ!
ಬೆಳಗಿಂದ ಅವನ ಜೊತೆ, ಮಾತಾಡಿಯೇ ಇಲ್ಲ,
ಸಣ್ಣ ಜಳಗ ಬಳಿಕ, ಪೂರ್ತಿ ಮೌನ.
ರಾಜಿಯಾಗುವ ಮನಸು ಬಂದಿಹುದೋ ಅವನಿಗೆ?
ನಾನು ಬಗ್ಗುವುದಿಲ್ಲ, ಏನಾದರಾಗಲಿ!
ಹೊರ ಬಂದು ನೋಡಿದರೆ, ಕಂಡುದಿನ್ನೇನು?
ಅವನ ಪಕ್ಕದಿ ಕತ್ತಿ, ಕೈಯೆಲ್ಲ ರಕ್ತ.
ಕಣ್ಣಾಲಿಗಳು ತುಂಬಿ ಮಾತೇ ಹೊರಡುತಲಿಲ್ಲ
ಇನಿಯನಾ ಪಾಡನು, ನೋಡುವುದು ಹೇಗೆ..
ಒಳಗೋಡಿ…
ವಿಧ: ಬ್ಲಾಗ್ ಬರಹ
January 07, 2007
೧) ಮದುವೆಯ ಬಗ್ಗೆ ಒಂದು ವ್ಯಂಗ್ಯಾತ್ಮಕ ನಿಲುವು
ಮದುವೆಗೆ ಮುಂಚೆ ಅವನೆಂದ ಅವಳಿಗೆ "ನೀ ಎನ್ನ ಅಂತರಂಗದ ಚಿಲುಮೆ" ಮದುವೆಯ ನಂತರ ಅಂದುಕೊಂಡ "ಯಾಕಾಯಿತು ನನ್ನೆದೆ ಉರಿಯುವ ಕುಲುಮೆ?!"
೨) ಬೆಂಗಳೂರಿನ ಫ್ಲೈ ಓವರ್ ಗಳ ಆಮೆಗತಿ ಕಾಮಗಾರಿ ಬಗ್ಗೆ ...
ಎಲ್ಲಿ ನೋಡಿದರಲ್ಲಿ ಫ್ಲೈ ಓವರ್ ಜನರಿಗೆಲ್ಲಾ ಹಾರರ್ ಯಾವಾಗ ಎಲ್ಲಿ ರಸ್ತೆ ಜ್ಯಾಮ್ ಆಗತ್ತೊ ಹುಷಾರ್!!!
೩) ಆಗತಾನೆ ಪ್ರೀತಿಯಲ್ಲಿ ಹುಚ್ಚನಾಗಿರುವವನ ಪ್ರಲಾಪ
ಮನಸೆಲ್ಲ ನೀನು ತುಂಬಿ ನಾನಾಗಿರುವೆನು ದುಂಬಿ ಮಾತಾಡದೆ…
ವಿಧ: ಚರ್ಚೆಯ ವಿಷಯ
January 07, 2007
ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ತುಂಬಾ ಹಿಡಿಸಿದ ಚಿತ್ರ ಮುಂಗಾರು ಮಳೆ. ಒಂದು ಸಣ್ಣ ಪ್ರೀತಿಯ ಎಳೆಯನ್ನು ಹಿಡಿದು ಎಂಥ ಸೊಗಸಾದ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದಾರೆ ನಮ್ಮ ಯೋಗರಾಜಭಟ್ಟರು.
ಚಿತ್ರಕಥೆ,ಹಾಡು,ನಟನೆ,ಛಾಯಾಗ್ರಹಣ ಎಲ್ಲವೂ ಅದ್ಭುತ.ಗಣೇಶ್ ಅಷ್ಟು ಚೆನ್ನಾಗಿ ನಟಿಸಬಲ್ಲರೆಂದು ನಾನು ನಿರೀಕ್ಷಿಸಿರಲಿಲ್ಲ.ಆದರೆ ಮುಂಗಾರು ಮಳೆ ಅವರ ಪ್ರತಿಭೆಗೆ ಸಾಕ್ಷಿ.
ಇದರಲ್ಲಿ ಜೋಗದ ತುದಿಯಲ್ಲಿ ಒಂದು ಸನ್ನಿವೇಶವಿದೆ.ಬಹುಶಃ ಇದುವರೆಗೆ ಯಾರೂ ಜೋಗದ ಸಿರಿಯನ್ನು ಆ ಕೋನದಿಂದ…
ವಿಧ: ಚರ್ಚೆಯ ವಿಷಯ
January 07, 2007
ಆತ್ಮೀಯ ಸಂಪದಿಗರೇ,
ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲೇ, ನಮ್ಮದೇ ನೆಲದ ಕಂಪನಿಯೊಂದು, ರಜೆ ಘೋಷಿಸಿಲ್ಲವಂತೆ. ಪೂರ್ತಿ ಸುದ್ದಿ ಓದಿ ನೋಡಿ: ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು! ಅದಕ್ಕೆ ಬದಲಾಗಿ ಓಣಂ ಹಬ್ಬಕ್ಕೆ ರಜೆಯಂತೆ.
ನನಗೆ ವೈಯಕ್ತಿಕವಾಗಿ ಯಾವ ಕಂಪೆನಿಯ ಬಗೆಗೂ ವಿರೋಧವೂ ಇಲ್ಲ, ಪೂರ್ವಾಗ್ರಹವೂ ಇಲ್ಲ…
ವಿಧ: ಬ್ಲಾಗ್ ಬರಹ
January 07, 2007
ಇತ್ತೀಚಿಗೆ "ದಟ್ಸ್ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್ಕನ್ನಡ"ದಲ್ಲಿ "ತೆರೆದ್ ಬಾಗಿಲು" ಅನ್ನುವ ಹೆಸರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಒಂದು ಅಂಕಣ "ಓದುವ ಸುಖ, ಬರೆಯುವ ಸುಖ ಮತ್ತು ಆತ್ಮೀಯರೊಂದಿಗಿನ ಹರಟೆಯ ಸುಖದ" ಬಗ್ಗೆ ಇದೆ. ಅದರಲ್ಲಿ ಬರೆದಿರುವ ವಿಚಾರ ನನಗೆ ಇವತ್ತಿಗೆ ಎಷ್ಟು ಪ್ರಸ್ತುತ ಅನ್ನಿಸಿತು ಅಂದರೆ, ನಿಮ್ಮೊಂದಿಗೂ…
ವಿಧ: Basic page
January 07, 2007
ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್ಲಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಟೊಯೊಟಾ ಕಂಪೆನಿಯು ಇಂತಹ ಕಾರು ತಯಾರಿಸಿದೆ. ಈ ಕಾರಿನ ಸ್ಟಿಯರಿಂಗ್ ವೀಲಿನಲ್ಲಿ ಬೆವರಿನಲ್ಲಿ ಬೆರೆತಿರುವ ಮದ್ಯದ ವಾಸನೆ ಪತ್ತೆ ಹಚ್ಚುವ ಸಂವೇದಕಗಳಿವೆ. ಕುಡಿದ ಚಾಲಕ ಕಾರು ಚಲಾಯಿಸಿದರೆ, ಕಾರಿನ ಸಂವೇದಕಗಳು ಕಾರಿನ…