ಎಲ್ಲ ಪುಟಗಳು

ಲೇಖಕರು: ರಾಮಕುಮಾರ್
ವಿಧ: Basic page
May 29, 2006
೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ. ೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ. ೩. ಕಳ್ಳನ ಮನಸ್ಸು ಹುಳ್ ಹುಳ್ಳಗೆ. ೪. ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ. ೫. ದಿನಾ ಸಾಯೋರಿಗೆ ಅಳೋರು ಯಾರು. ೬. ಅಕ್ಕನ ಚಿನ್ನವಾದರೂ ಅಕ್ಕಸಾಲಿಗ ಬಿಡ. ೭. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ. ೮. ಎತ್ತಿಗೆ ಜ್ವರ, ಎಮ್ಮೆಗೆ ಬರೆ. ೯. ಕೆಲಸವಿಲ್ಲದ ಆಚಾರಿ ಮಗಳ ಕಾಲು ಕೆತ್ತಿದ. ೧೦. ಸಾವಿರ ಕಾಲ ಸಾಮ ಓದಿದ ಮಗ ಮನೆ ಅಜ್ಜಿ ಸೊಂಟ ಮುರಿದ.
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 28, 2006
ಓದಿದ ದಿನಗಳು ಹೇಗೆ ಮರೆಯಲಿ ನಾನುಸಾವಿರದ ದಿನಗಳನುಭಾಗೇಪಲ್ಲಿಯ ಎರಡುಸಾವಿರದ ದಿನಗಳನು ಸಾಸಿವೆಯ ನನ್ನನ್ನುಸಾಗರವ ಮಾಡಿರುವನಿಮ್ಮ ನೆರಳಿನ ಎರಡುಸಾವಿರದ ದಿನಗಳನು ಮನೆಯಲ್ಲಿ ರಸದೂಟಶಾಲೆಯಲಿ ಗುರುಪಾಠಸಂಘದಾ ಶಾಖೆಗಳಸವಿಯಾದ ದಿನಗಳನು ಚಿಕ್ಕಪ್ಪನಾ ಯೋಗಚಿಕ್ಕಮ್ಮನಾ ತ್ಯಾಗತಮ್ಮನಾ ಜತೆಗಿನಾತಂಪಾದ ದಿನಗಳನು ಪುಟ್ಟ ಮನೆಯಲಿ ಹೆಚ್ಚುಆನಂದ ತೋರಿಸಿದರಾಮನಾ ಸನಿಹದಾನೋವಿರದ ದಿನಗಳನು. ಅಹೋರಾತ್ರ.
ಲೇಖಕರು: ahoratra
ವಿಧ: Basic page
May 28, 2006
ಬ್ರಹ್ಮ ಕಮಲ. ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದುನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು `ಅ' ಕಾರದಿಂದ ರಾಗ ಹಾಡಿ ನಮ್ಮ ಹರಸಿ ಜನಿಸುತು`ಉ' ಕಾರದಿಂದ ಹಾಲ ಕೇಳಿ ತಾಯ ತಂಪು ಗೊಳಿಸಿತು`ಮ' ಕಾರದಿಂದ ಮನೆಯಲ್ಲಿ ಮಮತೆಯನ್ನು ಹರಡಿತುಪ್ರಣವನಾದ `ಓಂ' ಕಾರಕೆ ನಮಿಸಿ ಬಂದ ಮಗುವಿದು ಬ್ರಹ್ಮ ತನ್ನ ಕೈಗಳಿಂದ ತಾನೆ ಮಾಡಿ ಕಳುಹಿದವಿಷ್ಣು ಇವಳ ಬೆಳೆಯಲೊಸುಗ ಪ್ರಥಮ ಉಸಿರ ನೀಡಿದಮಹೇಶ್ವರನ ಮಹಿಮೆಯಿಂದ ಮಗುವು ಬೆಳೆಯುತಿರುವುದುತ್ರಿಮೂರ್ತಿಯರ ಒಲವು ಗಳಿಸಿ ಧರೆಗೆ ಬಂದ ಮಗುವಿದು ದೇವರಿಂದ…
ಲೇಖಕರು: taleharate
ವಿಧ: ಬ್ಲಾಗ್ ಬರಹ
May 27, 2006
ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ. ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ…
ಲೇಖಕರು: hpn
ವಿಧ: ಚರ್ಚೆಯ ವಿಷಯ
May 27, 2006
ಸದಸ್ಯರೆಲ್ಲರ ಗಮನಕ್ಕೆ, 'joshsatish' ಎಂಬ ಐಡಿಯಿಂದ ಲಾಗಿನ್ ಆಗುತ್ತಿರುವವರು ಸಂಪದದ ಇತರ ಸದಸ್ಯರ ಬ್ಲಾಗ್ ಬರಹಗಳನ್ನು ಹಾಗೂ ಲೇಖನಗಳನ್ನು ಕಾಪಿ ಹೊಡೆದು ತಮ್ಮ ಬ್ಲಾಗಿನಲ್ಲಿ ಸೇರಿಸಿಕೊಳ್ಳುತ್ತಿರುವುದರಿಂದ ಈ‌ ಐಡಿಯನ್ನು ಬಹಿಷ್ಕರಿಸಲಾಗಿದೆ. ಇಂತಹ plagiarism ಮತ್ತೆ ಕಂಡುಬಂದಲ್ಲಿ ಸಂಪದದ ಸದಸ್ಯರು ನಿರ್ವಾಹಕರ ಗಮನಕ್ಕೆ ತರುವಿರೆಂದು ನಂಬುತ್ತೇನೆ.
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 27, 2006
ಹೌದು ಜೀವಿಸಬಹುದು, ಜೀವಿಸುತ್ತಿದ್ದಾರೆ, ಮುಂಬೈ ನಲ್ಲಿ ಇದು ಸಾಮಾನ್ಯವಾಗಿ ಕಂಡು ಬರುವ ಸಂಗತಿ. ಮುಂಬಯಿಯಲ್ಲಿ ಎಲ್ಲೆಲ್ಲಿ ನೋಡಿದರೂ ಭಿಕ್ಷುಕರು ಕಾಣುವುದು ಸಹಜ. ಹೂಂ! ಭಾರತದ ಎಲ್ಲ ನಗರಗಳಂತೆಯೇ ಇಲ್ಲಿಯೂ ಸಹ. ಆದರೆ ಮುಂಬಯಿಯಲ್ಲಿ ಏನೇ ಕೆಲಸ ಮಾಡಿದರೂ ಹೊಟ್ಟೆ ತುಂಬುವಷ್ಟು ಗಳಿಸಬಹುದು. ಇದೊಂದು ಮಾಯಾನಗರಿ. ಕನಸನ್ನು ತೋರಿಸುತ್ತದೆ, ಅದನ್ನು ನನಸಾಗಿಸಲು ಏನೆಲ್ಲಾ ಮಾಡಲು ಪ್ರೇರೇಪಿಸುತ್ತದೆ. ಮುಂಬಯಿಗೆ ಮೊದಲ ಬಾರಿಗೆ ಬಂದವರಿಗೆ, ಬಣ್ಣದ ಜಗತ್ತು ಅಂದ್ರೆ ಸಿನೆಮಾ ಕೈಬೀಸಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 26, 2006
ನಿನ್ನೆ ನಾನು ರಜೆಯ ಮೇಲಿದ್ದು ಸ್ವಲ್ಪ ಸಮಯ ಹೊಂದಿಸಿಕೊಂಡು ಇಲ್ಲಿ ( ಮುಂಬಯಿ)ಯಲ್ಲಿನ ದಾದರ್ ಹತ್ತಿರ ಇರುವ ಭಾರತೀಯ ಸಾಹಿತ್ಯ ಅಕಾಡೆಮಿ ಕಛೇರ್‍ಇಗೆ ಹೋದೆ . ಸಾಹಿತ್ಯ ಅಕಾಡೆಮಿ ಭಾರತೀಯ ಭಾಷೆಗಳ ಶ್ರೇಷ್ಠ ಪುಸ್ತಕಗಳನ್ನು ಭಾರತದ ಇಪ್ಪತ್ತೈದು ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುತ್ತದೆ. ಎಲ್ಲ ಭಾಷೆಗಳ ಪುಸ್ತಕಗಳೂ ಇಲ್ಲಿ ಲಭ್ಯವಿದ್ದವು . ( ಬೆಂಗಳೂರಿನಲ್ಲಿ ಅವರ ಶಾಖೆ ಅಂಬೇಡ್ಕರ್ ಬೀದಿಯಲ್ಲಿದೆ). ಸರಕಾರದ ಸಂಸ್ಥೆಯಾಗಿದ್ದರಿಂದ ಬೆಲೆಯೂ ಕಡಿಮೆ; ಶೇ. ೨೫ ರಷ್ಟು ರಿಯಾಯಿತಿಯನ್ನು…
ಲೇಖಕರು: venkatesh
ವಿಧ: Basic page
May 26, 2006
ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ ಕೌತುಕವಾಗದಿರಲಾರದು ! ಮುಂಬೈ ನಗರಕ್ಕೆ ವರುಣನಕೃಪೆಯಿಂದ ಜೂನ್ ತಿಂಗಳ ಮೊದಲೆನೆ ವಾರದಿಂದ ಶುರುವಾಗುವ 'ಮಾನ್ ಸೂನ್' ಸೆಪ್ಟೆಂಬರ್ ಕೊನೆಯವರೆಗೆ, ಹಾಗೂ ಮುಂದೆಯೂ ಕಂತುಗಳಲ್ಲಿ ಮಳೆಬಿದ್ದು, ವರ್ಷದ ಸರಾಸರಿ ೧,೮೦೦ ರಿಂದ ೨,೪೦೦ ಮಿ.ಮಿ.ವರೆಗೆ ಆಗುವುದು. ಆದರೆ ಜುಲೈ ೨೬ ರಂದು ಒಂದೇ ದಿನ, ೯೪೪ ಮಿ.ಮಿ. ಮಳೆ ಹಿಂದಿನ ೯೫…
ಲೇಖಕರು: ahoratra
ವಿಧ: Basic page
May 25, 2006
ನನ್ನ ತಮ್ಮ. ಹುಡುಕಿ ಹುಡುಕಿ ಸಾಕಾಗಿದೆಹುಡುಗಿ ನಮಗೆ ಬೇಕಾಗಿದೆ ನನ್ನ ತಮ್ಮ ವೆಂಕಟಇವನಿಗಿಲ್ಲ ಸಂಕಟಇವನ ಮಾತು ಪಟಪಟನಮ್ಮ ಮನೆಯ ಗೊಮ್ಮಟ ಆಗಾಗ ಕುಡಿಯುವನುಹೊಟ್ಟೆ ತುಂಬ ಜ್ಯೂಸನುಬೇಕಾದರೆ ಸೇದುವನುಬಾವಿಯಿಂದ ನೀರನು ನಮ್ಮ ಹುಡುಗ ಸುಂದರಇವನ ಮನಸು ಮಂಧಿರಮೈಯ್ಯ ಬಣ್ಣ ಬಂಗಾರನಡತೆಯಲ್ಲಿ ಗಂಭೀರ. ಜೇನಿನಂತ ಹುಡುಗನುಕೆದಕಿದರೆ ಕುಟುಕುವನುಕೆಲಸದಲ್ಲಿ ಜಾಣನುನಿದ್ದೆಯಲ್ಲಿ ಕೋಣನು ಬೇಕಾಗಿದೆ ವರದಕ್ಷಿಣೆಹುಡುಗಿ ಮುಖದ ಲಕ್ಷಣಅವಳು ಪಡೆದ ಶಿಕ್ಷಣಗುರು ಹಿರಿಯರ ರಕ್ಷಣ ಅಹೋರಾತ್ರ.
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 25, 2006
ನಮ್ಮ ದೇಶದಲ್ಲಿ ಬಹಳವಾಗಿ ಉಕ್ತವಾಗುವ ಮಾತೆಂದರೆ 'ಮೇರಾ ಭಾರತ್ ಮಹಾನ್'. ನಾನು ಅದಕ್ಕೆ ಇನ್ನೊಂದನ್ನು ಸೇರಿಸಬಯಸುವೆ, ಮೇರಾ ಸೋಪ್ ಹಮಾಮ್. ಏಕೆಂದರೆ ಈ ಎರಡೂ ಚಿರಂಜೀವಿಗಳು (ನನ್ನ ಮಟ್ಟಿಗೆ). ಸ್ವತಂತ್ರ ಬಂದು ೬೦ ವರುಷಗಳಾಗುತ್ತಿದ್ದರೂ ನಮ್ಮ ದೇಶದ ಜನಸಂಖ್ಯೆ ಒಂದೇ ಮೇಲೇರುತ್ತಿರುವುದು. ಇದೊಂದು ದೃಷ್ಟಿಯಿಂದ ನಮ್ಮ ದೇಶ ಎಂದಿಗೂ ಮಹಾನ್. ಹಾಗೆಯೇ ಹಮಾಮ್ ಸೋಪನ್ನು ಉಪಯೋಗಿಸುವವರು ಅದನ್ನೇ ಉಪಯೋಗಿಸುತ್ತಿದ್ದಾರೆ (ನನ್ನಂತಹವರು - ಅಪ್ಪ ಹಾಕಿದ ಹಳೆಯ ಆಲದ ಮರಕ್ಕೇ ಜೋತು ಬೀಳುವಂತಹವರು…