ಎಲ್ಲ ಪುಟಗಳು

ಲೇಖಕರು: BogaleRagale
ವಿಧ: ಬ್ಲಾಗ್ ಬರಹ
May 31, 2006
(ಬೊಗಳೂರು ಆರೋಗ್ಯ ಬ್ಯುರೋದಿಂದ) (http://bogaleragale.blogspot.com) ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರೋಗ ಕೂಡ ಡಾರ್ವಿನ್ನನ ವಿಕಾಸವಾದದಿಂದ ಪ್ರೇರಣೆಗೊಂಡು ಮಾನವನಿಗೆ ತಗುಲಿದೆ ಎಂಬ ಅಂಶ ಇಲ್ಲಿ ಬಯಲಾಗಿದೆ. ಈ ವರ್ಷ ಎಚ್ಐವಿ ವೈರಸ್ ಪತ್ತೆಯಾದ ಬೆಳ್ಳಿ ಹಬ್ಬ (25ನೇ ವರ್ಷ) ಆಚರಿಸಲಾಗುತ್ತಿದೆ. ಇಂಥ ಶುಭ ಸಂದರ್ಭದಲ್ಲಿ ಚಿಂಪಾಂಜಿಯಲ್ಲೂ ಏಡ್ಸ್ ವೈರಸ್‌ಗಳು ಪತ್ತೆಯಾಗಿರುವುದು…
ಲೇಖಕರು: Rohit
ವಿಧ: ಚರ್ಚೆಯ ವಿಷಯ
May 31, 2006
ಈ ತಾಣವನ್ನು ನೋಡಿ, http://www.sahiti.org/index.jsp?l=kn_IN
ಲೇಖಕರು: tvsrinivas41
ವಿಧ: Basic page
May 31, 2006
ಫುಟ್‍ಪಾತ್ ಇಲ್ಲದ ರಸ್ತೆಗಳು ಸಾಲು ಮರಗಳಿಲ್ಲದ ಹೆದ್ದಾರಿಗಳು ಒಡೆಯ(ತಿ) ಇರದ ಮನೆಗಳು ಚಿಂತನೆಗಳಿಲ್ಲದ ಮನಗಳು ಇದ್ದರೆಷ್ಟು ಬಿಟ್ಟರೆಷ್ಟು ಕೊನರದ ಬೋಳು ಮರಗಳು ಚಿಗುರದ ಬಕ್ಕ ತಲೆಗಳು ಪುಟಿಯದ ಚೆಂಡುಗಳು ಮನತಣಿಸದ ನಗೆ ಬುಗ್ಗೆಗಳು ಇದ್ದರೆಷ್ಟು ಬಿಟ್ಟರೆಷ್ಟು ನೀರಿರದ ಬಾವಿಗಳು ಪ್ರಜೆಗಳಿಲ್ಲದ ಊರುಗಳು ಉಣಲು ಬಾರದ ತಿನಿಸುಗಳು ನಡೆ ಇಲ್ಲದ ನುಡಿಗಳು (ನಡೆ = ನಡತೆ) ಇದ್ದರೆಷ್ಟು ಬಿಟ್ಟರೆಷ್ಟು ಜೋಡಿ ಇಲ್ಲದ ಎತ್ತುಗಳು ರಿಕಾಪಿಲ್ಲದ ಕುದುರೆಗಳು ಚಲನೆಯಿರದ ಕೈ ಕಾಲುಗಳು ಎಣ್ಣೆ ಬತ್ತಿ ಇರದ…
ಲೇಖಕರು: tvsrinivas41
ವಿಧ: Basic page
May 31, 2006
ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರು ಇವುಗಳನ್ನು ಸ್ಪ್ಯಾಮ್ ಮೈಲ್‍ಗಳು ಎಂದೂ ಪರಿಗಣಿಸುವರು. ಇವರ ಚಟುವಟಿಕೆಗಳು ಹೇಗಿರುತ್ತದೆ ಎಂಬುದು ಬಹಳ ಕೌತುಕವಾದ ವಿಷಯ. ಮೊದಲಿಗೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರೂ ಪುಕ್ಕಟೆ ಊಟ ಕೊಡುವುದಿಲ್ಲ. ಎಲ್ಲರೂ ಎಲ್ಲ…
ಲೇಖಕರು: ahoratra
ವಿಧ: Basic page
May 30, 2006
ನಿರಾಕಾರ. ನಿರಾಕಾರನು ಸಾಕಾರನಾದದ್ದುಚಮತ್ಕಾರ,ಸಾಕಾರನಿಗೆ ಕಂಡ ನಿರಾಕಾರವೇಸಾಕ್ಷಾತ್ಕಾರ,ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇಪರೋಪಕಾರ,ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇಸಂಸ್ಕಾರ.ನಿರಾಕಾರನಅಸಮಾನತೆಯೇ 'ಅ' ಕಾರ,ಉತ್ತುಂಗವೇ 'ಉ' ಕಾರ,ಮಮಕಾರವೇ 'ಮ' ಕಾರ.ಈ ಮೂರರಗುಣಾಕಾರವೇ'ಓಂ'ಕಾರ.ಪ್ರಣವನಾದಓಂಕಾರದಭಾಗಾಕಾರವೇಚತುರ್ವೇದದ ಜಗದಾಕಾರ.{ಅಹೋರಾತ್ರ}
ಲೇಖಕರು: srikanth
ವಿಧ: Basic page
May 30, 2006
“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 30, 2006
ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ್ಲಿ ಸಂಗೀತದ ಚ್ಯಾನೆಲ್ಲುಗಳೆಲ್ಲವೂ ಮೋಡ, ಮಳೆ, ಗಾಳಿಯ ಹಾಡುಗಳನ್ನು ಹೊರತೆಗೆದಿವೆ. ನಾನೂ ಕೂಡ ಕಾಳಿದಾಸನ ಮೇಘದೂತವನ್ನು ಹೊರತೆಗೆದೆ. ನೂರಿಪ್ಪತ್ತು ಪದ್ಯಗಳು ಇಲ್ಲಿವೆ . ಕಛೇರಿಗೆ ಬರುವ ದಾರಿಯಲ್ಲಿ ಓದತೊಡಗಿದೆ. ಸುಮಾರು ೧೦ ಪದ್ಯ ; ಮೂಲ ; ಭಾವಾನುವಾದ; ವಿವರಣೆ…
ಲೇಖಕರು: prashanth kota
ವಿಧ: ಚರ್ಚೆಯ ವಿಷಯ
May 30, 2006
ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ. ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ. ಹಾಗೆಯೆ, ಲೆಖನಗಳ ಸಂಖ್ಯೆಕೂಡ ಬೆಳೆಯುವಂತೆ ಮಾಡೋಣ. ಈ ಕೆಲವು ದಿನಗಳಿಂದ ನಮಗೆಲ್ಲಾ ಒಳ್ಳೆ ಕವಿತೆ, ಕಥೆ, ಪ್ರಬಂಧಗಳನ್ನು ಓದಲು ಕೊಡುತ್ತಿರುವ ಬೆನಕ, ವೆಂಕಟೇಶ, ಸುನೀಲ, ಅಹೋರಾತ್ರ, ಮಹೇಶ ಮುಂತಾದ ಎಲ್ಲರಿಗೂ ಧನ್ಯವಾದಗಳು. ನಮಗೆ ಸಂಪದ ವನ್ನು ತಂದು ಕೊಟ್ಟ ನಾಡಿಗರಿಗೆ ವಿಶೇಷ ಕೃತಜ್ಞತೆಗಳು. ಪ್ರಶಾಂತ.
ಲೇಖಕರು: ramesh1069
ವಿಧ: ಬ್ಲಾಗ್ ಬರಹ
May 30, 2006
ಸ್ನೇಹಿತರೆ, ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂದರೆ ಅತಿಶಯವಾಗುವುದಿಲ್ಲ. ಈಗಿನ ಜನಾಂಗದವರು ನಮ್ಮ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಸಂಪದ ಮತ್ತು ಇತ್ತೀಚೆಗೆ ನಡೆದಂತಹ ವಿಕಿಪೀಡಿಯ ಸಮಾರಂಭಗಳು ಈ ಪ್ರಯತ್ನಕ್ಕೆ ವೇದಿಕೆಯಾಗಬಹುದು.  ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆಗಳನ್ನು ಈ ಬ್ಲಾಗ್ನಲ್ಲಿ ಮಂಡಿಸಬೇಕಾಗಿ…
ಲೇಖಕರು: Gopinath Rao
ವಿಧ: Basic page
May 29, 2006
ಒಂದು ಸಣ್ಣ ಲೆಕ್ಕ ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ! ಇಂತಹ ಒಂದು ಸಮಸ್ಯೆ ತಲೆಯಲ್ಲಿ ಉಳಿದುಕೊಂಡಿದೆ. ಹೊರಗೆ ಹಾಕಲು ಶ್ರಮಿಸಿದರೂ ಜಗ್ಗದೆ ಕುಳಿತುಕೊಂಡಿದೆ. ಬಲ್ಲವರು ಹೊರಗೆ ಸಾಗಿಸಲು ಸಹಾಯಮಾಡಬೇಕು. ಸಮಸ್ಯೆ ಇಷ್ಟೇ.. ನೂರಾರು ಅಂದರೆ ಸಾವಿರಾರು ಎನ್ನುವುದಕ್ಕಿಂತ ಎಷ್ಟು ಕಡಿಮೆ? ಅಥವಾ "ಅಲ್ಲಿ ಸಾಹಿತ್ಯದ ಸಭೆಯಲ್ಲಿ ನೂರಾರು ಜನ ಸೇರಿದ್ದರು" ಎಂದು ಒಂದು ಕಡೆ ಬರೆದ…