ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 25, 2006
ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ . ಗಳಿಗೆಗಳಿಗೆಯೂ ಹುಟ್ಟುತ್ತಾವೆ ಅಸಂಖ್ಯ ಕವಿತೆಗಳು ಅಲ್ಪಾಯುಷಿಗಳಿದ್ದಲ್ಲಿ ಜನನ ಸಂಖ್ಯೆಯು ಜಾಸ್ತಿ . ಉಪಮಾನ ರೂಪಕ, ಸಂಕೇತ, ಛಂದಸ್ಸು ಇವುಗಳಿಗೆ ಗೊತ್ತಿಲ್ಲ ನೋಡಿ ನಕ್ಕಿರಬಹುದು , ಕುವೆಂಪು ಬೇಂದ್ರೆ .. ... ದಾವಾಗ್ನಿ ಬಡಬಾಗ್ನಿ ಎರಡೂ ಒಂದೇ…
ಲೇಖಕರು: venkatesh
ವಿಧ: Basic page
April 24, 2006
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * ! ಸಾರಾಂಷ : ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ '…
ಲೇಖಕರು: vijayaraghavan
ವಿಧ: ಬ್ಲಾಗ್ ಬರಹ
April 23, 2006
ನನ್ನ ಕನಸಿನಲ್ಲಿ ಅನಂತಮೂರ್ತಿ ಅನಂತಮೂರ್ತಿ ರಾಜ್ಯ ಸಭೆಯ ಚುನಾವಣೆಗೆ ಸ್ಪರ್ಧಿಸಿದ್ದರಲ್ಲ, ಆಗ ನನಗೊಂದು ಕನಸು ಬಿತ್ತು.ಅವರು ಕೋಲಾರದ ಟೇಕಲ್‌ ರೋಡಿನ ಮೂಲೆಯೊಂದರಲ್ಲಿ, ನಮ್ಮ ಮನೆಯ ಹತ್ತಿರವೇ ಒಂದು ದಿನಸಿ ಅಂಗಡಿ ತೆರೆದಿದ್ದರು.ನನಗೋ ಆ ದೇಶ, ಈ ದೇಶ ಸುತ್ತಿ ಸಾಹಿತ್ಯ, ಸಂಸ್ಕೃತಿ ಮಾತಾಡಿ ಬರೆದುಕೊಂಡಿರುವ ಅನಂತಮೂರ್ತಿ ಇದೇಕೆ ಹೀಗೆ ಮಾಡಿದರು ಅಂತ ಕುತೂಹಲ. ಪಾಪ,ಜಾಗತೀಕರಣದ ವ್ಯಾಪಾರದ ವಿಚಾರ ಮಾತ್ರ ಮಾತಾಡಿ ಗೊತ್ತಿರುವ ಅನಂತಮೂರ್ತಿ ಇಲ್ಲಿ ಏನು ವ್ಯಾಪಾರ ಮಾಡುತ್ತಾರೆ? ಟೋಪಿ…
ಲೇಖಕರು: venkatesh
ವಿಧ: Basic page
April 23, 2006
ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು ! ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿ ಕಾಣಿಸದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ! ಆ ಕ್ಷಣಗಳನ್ನು ಸ್ಮರಿಸಲು ಬರೆದ ಭಾವಪೂರ್ಣ 'ಶ್ರಧ್ಧಾಂಜಲಿ' ಇದು. ಪಾರ್ಕಿನೊಳು ಕುಳಿತೆದ್ದೆ ಥಟ್ಟನು ಲಿಯಿತು ಮನವು…
ಲೇಖಕರು: ಶ್ರೀನಿಧಿ
ವಿಧ: ಚರ್ಚೆಯ ವಿಷಯ
April 23, 2006
ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ ನನ್ನ ಕಿವಿ-ಮನಸ್ಸುಗಳನ್ನು ಅವಳು ಸೂರೆಗೊಂಡಳು. ನಂತರ ತಿಳಿಯಿತು ಅವಲ ಹೆಸರು ಸುಚರಿತ್ರಾ ಎಂದು. ಇದೇನಿದು ಯಾವುದೋ ಪ್ರೇಮಕಥೆ ಅಂದ್ಕೋಬೇಡಿ ಮತ್ತೆ. ಹಿಂದಿನ ತಿಂಗಳು ಸಂಜಯ್ ಸುಬ್ರಮಣ್ಯಂ ಅವರ ಕಛೇರಿಯಲ್ಲಿ ಕೇಳಿದ ರಾಗ. ವಿಶೇಷ ಏನು ಅಂತಿರಾ?? ಇದನ್ನು ನಾನು ಮುಂಚೆ…
ಲೇಖಕರು: aithalsandy
ವಿಧ: Basic page
April 22, 2006
ಶಂಕರ್ ನಾಗ್ ,ಮಂಜು & ಆಗುಂಬೆ ಇಲ್ದಿದ್ರೆ ನಮಗೆ,ಮಾಲ್ಗುಡಿ ಮನಸ್ಸಿಗೆ ನಾಟ್ತಾ ಇರ್ಲಿಲ್ವೇನೋ... ಮಲ್ಲೇಶ್ವರಂ + ಬಸವನಗುಡಿ = ಮಾಲ್ಗುಡಿ ಮೈಲಾಪುರ + ಲಾಲ್ಗುಡಿ = ಮಾಲ್ಗುಡಿ ಮಾಲ್ಗುಡಿ ಹೆಸರಿನ ಸ್ಪೂರ್ತಿ ಬೇರೆ ಯಾವ್ದಾದ್ರು ಇದ್ರೆ ತಿಳಿಸಿ... Netಲ್ಲಿ ಸಿಕ್ಕಿದ್ದು, ಮಾಲ್ಗುಡಿ ಮಾಂತ್ರಿಕನಿಗೆ ವಿಶ್ವದ ಅತ್ಯುತ್ತಮ ಪತ್ರಿಕೆಗಳಲ್ಲಿ ಒಂದಾದ ನ್ಯೂಯಾರ್ಕ್ ಟೈಮ್ಸ್ ನ ನಮನಗಳು http://www.nytimes.com/2001/05/14/obituaries/14NARA.html?ei=5070&en=ebc04998d356a939…
ಲೇಖಕರು: shreekant.mishrikoti
ವಿಧ: Basic page
April 22, 2006
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು. ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್‍ಯೇ? ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ, ಮೊಟ್ಟೆ ತಿ೦ದವರಿಗೆ ಮರಿ ಇಲ್ಲ. ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ. ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ. ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ. ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 22, 2006
ನೀವು ಪುರಂದರದಾಸರ 'ಹರಿದಾಸರ ಸಂಗ ದೊರಕಿತು ಎನಗೆ , ಇನ್ನೇನಿನ್ನೇನು ? ' ಹಾಡನ್ನು ಕೇಳಿದ್ದೀರಾ? . ನಾನು ಬಾಲಮುರಳಿಕೃಷ್ಣ ಅವರ ಧ್ವನಿಯಲ್ಲಿ ಕೇಳಿದ್ದೇನೆ. ಇತ್ತೀಚೆಗೆ ನಾನು ನಮ್ಮ ಸಂಸ್ಥೆಯಲ್ಲಿ ಇಪ್ಪತ್ತು ವರ್ಷಗಳ ಸೇವೆಯನ್ನು ಪೂರ್‍ಐಸಿದೆ . ಆ ಕಾರಣದಿಂದ ನಿವೃತ್ತಿವೇತನ ( ಅದು ಎಷ್ಟೇ ಇರಲಿ , ಆ ಮಾತು ಬೇರೆ) ಸೌಲಭ್ಯಕ್ಕೆ ಹಕ್ಕುದಾರನಾದೆ . ಇದು ಒಂದು ಪ್ರಮುಖ ಮೈಲಿಗಲ್ಲೇ ಸರಿ . ಆ ಸಂತೋಷದಲ್ಲಿ ನಾನು ಹೀಗೆ ಹಾಡಿಕೊಂಡೆ. ಇಪ್ಪತ್ತು ವರುಷ ಆಯಿತು ಸರ್ವೀಸು,…
ಲೇಖಕರು: shreekant.mishrikoti
ವಿಧ: Basic page
April 22, 2006
ಕಾಸಿಗೆ ತಕ್ಕ ಕಜ್ಜಾಯ ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅಡುಗೆ ಮಾಡಿದವಳಿಗಿಂತ ಬಡಿಸಿದವಳೆ ಮೇಲು ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ? ಕದ ತಿನ್ನೋವನಿಗೆ ಹಪ್ಪಳ ಈಡಲ್ಲ ಕಣ್ಣರಿಯದಿದ್ದರೂ ಕರುಳರಿಯುತ್ತದೆ ಹಳೇ ಚಪ್ಪಲಿ, ಹೊಸಾ ಹೆಂಡತಿ ಕಚ್ಚುಲ್ಲ ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ…
ಲೇಖಕರು: shreenidhi
ವಿಧ: ಚರ್ಚೆಯ ವಿಷಯ
April 22, 2006
ಎಲ್ಲರಿಗೂ ನಮಸ್ತೆ.... ನಾನು ಸಂಪದ ದ ಸದಸ್ಯನಾಗಿ ಒಂದು ತಿಂಗಳಾಯ್ತು.... ಇನ್ನೂ ಪರಿಚಯಿಸಿಕೊಂಡಿರಲಿಲ್ಲ.. ಕಾರಣ, ಸೋಮಾರಿತನ ! ನಾನು ಸಾಹಿತ್ಯಾಸಕ್ತ,ಬರಹಗಾರ. ಕತೆ , ಕವನಗಳು, ನನಗೆ ಖುಷಿ ಕೊಡುವ ಪ್ರಕಾರಗಳು.ಈವರೆಗೆ ಅಲ್ಪ-ಸ್ವಲ್ಪ ಬರೆದು, ಹಾಗೇ ಇಟ್ಟಿದ್ದೇನೆ. ಇನ್ನಾದರೂ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಸಂಪದ ದ ಗೊಂಚಲಿನ ಹೀಚುಕಾಯಿ ನಾನು,ನೀವು ಬೆಳೆಯಲು ಪ್ರೋತ್ಸಾಹಿಸುತ್ತೀರಿ ಎಂಬ ವಿಶ್ವಾಸದೊಂದಿಗೆ, ಶ್ರೀನಿಧಿ.ಡಿ.ಎಸ್.