ಜೇನು ತಿನ್ನುವ ಓತಿಕ್ಯಾತ (ಭಾಗ 1)
1 day 5 hours ago - ಬರಹಗಾರರ ಬಳಗನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ್ನಲು ಅಂತ ಇದ್ದ ಏಕ ಮಾತ್ರ ವಸ್ತು ಅಂದರೆ ಅದು ಮನೆಗೆ ತಿನ್ನಲು ಅಂತ ತೆಗೆದಿರಿಸಿದ ಕಡಲೆಕಾಯಿ ಮಾತ್ರ. ಅದು unlimited ಆಗಿ ಇರದೇ ಬಹಳ Limit ಆಗಿಯೇ ಇರತ್ತಿತ್ತು. ಆ ಕಡಲೇಕಾಯಿ ಚೀಲದ ಪಕ್ಕದಲ್ಲಿ ಇದ್ದ ನಾಲ್ಕಾರು ಚೀಲ ಶೇಂಗಾಕಾಯಿಯನ್ನು ಬಿಲ್ ಕುಲ್ ಮುಟ್ಟುವ ಹಾಗೆ ಇರಲಿಲ್ಲ. ಅದು ಮುಂಬರುವ ಮುಂಗಾರಿಗೆ ಬಿತ್ತಲಿಕ್ಕೆ ಅಂತ ಆಯ್ದು ತೆಗೆದಿರಿಸಿದ ಕಡಲೆಕಾಯಿ. ಮೇ ಜೂನ್ ತಿಂಗಳಲ್ಲಿ ಕಡಲೇಕಾಯಿ ಸುಲಿದು ಮಳೆಗಾಲಕ್ಕೆ ಬೀಜ ಬಿತ್ತಲು ಒಪ್ಪ ಮಾಡುವ ಕೆಲಸ ಆರಂಭ ಆಗುತ್ತಿತ್ತು. ಆಗ ಮಾತ್ರ ಕಡಲೆಕಾಯಿಯನ್ನು ಸುಲಿಯುವ ನೆಪದಲ್ಲಿ ಒಂದಷ್ಟು ಹೆಚ್ಚಿಗೆ ತಿನ್ನುತ್ತಿದ್ದೆವು. ಅದು ನಾಲ್ಕೈದು ದಿನಕ್ಕೆ ಮುಗಿದು ಹಸನು ಮಾಡಿದ ಬೀಜಕ್ಕೆ ಕೆಂಪಿರುವೆಗಳು ಹೋಗಿ ತಿನ್ನಬಾರದೆಂದು ಡಿ ಡಿ ಟಿ ಪುಡಿಯನ್ನು ಹಾಕಿ ಹುಷಾರಾಗಿ ಒಂದು ಕಡೆ ಎತ್ತಿಡುತ್ತಿದ್ದರು.
ಆಗ ತಿನ್ನಲು ಉಳಿಯುತ್ತಿದ್ದುದು ಬಿತ್ತಲು ಸೂಕ್ತವಲ್ಲದ ಎಳಸು ಬೀಜಗಳು. ಸೀರಲು ಎಂದು ಕರೆಯುವ ಬಹಳ ರುಚಿಕಟ್ಟಾದ ಈ ಸೀರಲು ಬೀಜ ಅಪರೂಪಕ್ಕೆ ಒಂದು ಹಿಡಿ ಸಿಗುತ್ತಿತ್ತು. ಅದು ಎಲ್ಲೆಲ್ಲಿಗೂ ಸಾಕಾಗದೇ ಹೊಟ್ಟೆಯ ತಾಳಕ್ಕೆ ಹೆಜ್ಜೆಹಾಕುತ್ತಾ ನಾನು ಒಂದರ್ಥದಲ್ಲಿ ಜೇನಿನ ಹಿಂದೆ ಬಿದ್ದದ್ದು ಅಂತ ಹೇಳಬಹುದು. ಆಗಾಗ ಸಿಗುತ್ತಿದ್ದ ಜೇನುಗಳು ಮನೋರಂಜನೆ ನೀಡುತ್ತಾ, ಆಗಾಗ ಕಚ್ಚಿ ನೋವನ್ನೂ ನೀಡುತ್ತಾ, ನನ್ನ ಹೊಟ್ಟೆಯನ್ನು ತುಂಬಿಸುತ್ತಿದ್ದವು. ನಮ್ಮ ಅತ್ಯಲ್ಪ ಫ್ರೆಂಡ್ಸ್ ಸರ್ಕಲ್ ನಲ್ಲಿ ನನ್ನ ಗೆಳೆಯ… ಮುಂದೆ ಓದಿ...