ಯಾವುದು ಬದುಕು ?
11 hours ago - ಬರಹಗಾರರ ಬಳಗಬದುಕು ಅಂದ್ರೆ ಯಾವುದು...? ಇದರ ಬಗ್ಗೆ ನೋಡೋಣ. ಗೋಪಾಲ ಎಂಬ ಯುವಕನಿದ್ದನು. ಈತನ ತಂದೆಗೆ ಎರಡು ಜನ ಪತ್ನಿಯರು. ಈತ ಮೊದಲ ಹೆಂಡತಿಯ ಮಗ. ಈತನ ಜೊತೆಗೆ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ತಂಗಿ ಇದ್ದಳು. ಮಲತಾಯಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇತ್ತು. ಈತ ಎಸ್ ಎಸ್ ಎಲ್ ಸಿ ಅನುತ್ತೀರ್ಣನಾಗಿದ್ದನು. ನಂತರ ಪಾಸ್ ಆಗಿ ಐಟಿಐ ಸೇರಿ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿದನು. ನಂತರ ತನ್ನ ತಂಗಿಯನ್ನು ದೊಡ್ಡ ವ್ಯವಸಾಯಗಾರನಿಗೆ ಕೊಟ್ಟು ಮದುವೆ ಮಾಡಿದನು. ತನ್ನ ತಮ್ಮಂದಿರು ಇಬ್ಬರಿಗೂ ಮಲತಾಯಿ ಮಗನಿಗೂ ಕೆ ಎಸ್ ಆರ್ ಟಿ ಸಿ ಡ್ರೈವರ್ ಕೆಲಸ ದೊರಕುವಲ್ಲಿ ಪ್ರಯತ್ನಿಸಿ ಅವರೆಲ್ಲರೂ ಡ್ರೈವರ್ ಆದರು.
ಈತ ಮತ್ತು ಈತನ ತಮ್ಮಂದಿರಿಗೆ ಶ್ರೀಮಂತರಾಗಿ ಬದುಕಬೇಕೆಂಬ ಆಸೆ. ರಜಾ ಅವಧಿಯಲ್ಲಿ ಜಮೀನಿನಲ್ಲಿ ದುಡಿಯುವುದು, ಕೆಲಸದ ಸಮಯಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಈ ಮೂವರು ಬ್ಯಾಂಕಿನಲ್ಲಿ ಸಾಲ ಮಾಡಿ, ಬೇರೆ ಬೇರೆ, ಒಂದೇ ರೀತಿ ಅಕ್ಕಪಕ್ಕದಲ್ಲಿ ಮನೆ ನಿರ್ಮಿಸಿದರು. ಮನೆಗೆ ಇನ್ಸೂರೆನ್ಸ್ ಕೂಡ ಮಾಡಿಸಿದರು. ಬದುಕಿಗೆ ಕೊರತೆ ಏನೂ ಇರಲಿಲ್ಲ. ಮಧ್ಯದವನಿಗೆ ಒಂದು ಹೆಣ್ಣು ಮಗುವಿತ್ತು. ಆತ ತಾನು ಸತ್ತರೆ ಮನೆ ಸಾಲ ಕಟ್ಟುವಂತಿಲ್ಲ. ಪತ್ನಿಗೆ ಅನುಕಂಪದ ಹುದ್ದೆ ದೊರಕುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡನು. ಹಾಗೆ ಪತ್ನಿ ಮತ್ತು ಮಗಳು ಕೆಲಸದ ಮೇಲೆ ಬೇರೆ ಕಡೆ ವಾಸವಾದರು. ಗೋಪಾಲನಿಗೆ ಒಬ್ಬ ಮಗನಿದ್ದನು. ಆತ ಸರಿಯಾಗಿ ವಿದ್ಯಾಭ್ಯಾಸ ಮಾಡಲಿಲ್ಲ. ಗೋಪಾಲ ಒಂದು ರೂಪಾಯಿ ಅನಾವಶ್ಯಕವಾಗಿ ಖರ್ಚು ಮಾಡುತ್ತಿರಲಿಲ್ಲ. ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತಿದ್ದನು. ಒಂದು ನಿಮಿಷ ಮನೆಯಲ್ಲಿ ಕೂರುತ್ತಿರಲಿಲ್ಲ. ತನ್ನ ಕೆಲಸ ಮುಗಿಸಿ ಬಂದ ತಕ್ಷಣ ಜಮೀನಿನಲ್ಲಿ ದುಡಿಯುತ್ತ… ಮುಂದೆ ಓದಿ...