ಸ್ಟೇಟಸ್ ಕತೆಗಳು (ಭಾಗ ೧೨೭೮) - ಬದಲಾಗು

ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿ‌ಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹಿಂದೆ ಆಗಿರುವುದ್ದಕ್ಕೆ ಮತ್ತೆ ಮತ್ತೆ ವ್ಯಥೆ ಪಡಬೇಡ. ಇನ್ನು ಮುಂದೆ ಹಾಗಿರುವುದಿಲ್ಲ ಅಂದುಕೊಂಡು ಹೊಸ‌ ವ್ಯಕ್ತಿ ಆಗು. ಬದಲಾದರೆ‌ ಜಗತ್ತು  ಒಪ್ಪಿಕೊಳ್ಳುತ್ತದೆ.

Image

ದೃಷ್ಟಿಯಲ್ಲಿ ವಿಧಗಳಿವೆ

ನಿಮ್ಮ ಎದುರಿನಲ್ಲಿ ಒಂದು ಮರವಿದೆಯಲ್ಲ. ಈ ಮರದಿಂದ ಪ್ರತಿಫಲಿಸಲ್ಪಟ್ಟ ಬೆಳಕು ನಿಮ್ಮ ಕಣ್ಣಿನ ಕಾರ್ನಿಯಾದ ಒಳ ಪ್ರವೇಶಿಸುತ್ತದೆ. ಕಾರ್ನಿಯಾ, ಕಣ್ಣಿನ ಒಳಗಿರುವ ಮಸೂರ (crystalline lens) ಮತ್ತು ಮಸೂರ ಮತ್ತು ರೆಟಿನಾಗಳ ನಡುವೆ ಇರುವ ಗಾಜಿನಂತಹ ದ್ರವ ಚಾಕ್ಷುಷ ರಸ (vitreous humour) ಗಳು ಇದನ್ನು ಬಗ್ಗಿಸಿ ಪ್ರತಿಬಿಂಬವನ್ನು ರೆಟಿನಾದ ಮೇಲೆ ಮೂಡುವಂತೆ ಮಾಡುತ್ತವೆ.

Image

ರೀ Start

ಪುಸ್ತಕದ ಲೇಖಕ/ಕವಿಯ ಹೆಸರು
ವಾಗೀಶ ಕಟ್ಟಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೫

“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್‌, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ.

ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತ…

ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ  ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್ರವಾಗಿ ಇಡೀ ಜಗತ್ತಿನಾದ್ಯಂತ ಪ್ರಸರಿಸಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ

ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡುಗ ಆ ಗಿಡಕ್ಕೆ ಎಲ್ಲಕ್ಕಿಂತ ಹೆಚ್ಚು ನೀರು ಗೊಬ್ಬರವನ್ನು ಹಾಕಿ ಉಳಿದ ಗಿಡಗಳನ್ನು ಕಡೆಗಣಿಸ್ತಾ ಬಂದ.

Image

ತಿರಸ್ಕಾರ

ಈ ದಿನ ತಿರಸ್ಕಾರದ ಬಗ್ಗೆ ತಿಳಿದುಕೊಳ್ಳೋಣ... ದ್ವೇಷ, ತಿರಸ್ಕಾರ ಎನ್ನುವುದು ನಮ್ಮ ಮನೋಭೂಮಿಯಲ್ಲಿ ಬೆಳೆಯುವ ಮುಳ್ಳು ಮತ್ತು ಕಲ್ಲುಗಳು ಇದ್ದಂತೆ. ಭೂಮಿಯಲ್ಲಿ ಮುಳ್ಳು, ಕಲ್ಲುಗಳು ಇದ್ದರೆ, ಸುಂದರ ತೋಟ ಮಾಡಲು ಆಗುವುದಿಲ್ಲ. ಹಾಗೆಯೇ ಮನಸ್ಸಿನಲ್ಲಿ ದ್ವೇಷ, ತಿರಸ್ಕಾರ ತುಂಬಿದ್ದರೆ, ಮನಸ್ಸು ಮಧುರ ಮಾಡಲು ಆಗುವುದಿಲ್ಲ. ಆದ್ದರಿಂದ ಈ ಮುಳ್ಳು, ಕಲ್ಲುಗಳನ್ನು ಮನೋಭೂಮಿಯಿಂದ ತೆಗೆಯಬೇಕು.

Image

ಗಡಿ

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ಥ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು... ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ...

ಯುಗಾದಿ ಹಬ್ಬ ಬಂದೈತಿ

ಮಾಮರದಲ್ಲಿ ಹಾಡುತಿದೆ 

ಕೋಗಿಲೆಯೊಂದು ಕೂಗುತಿದೆ 

ಪ್ರಕೃತಿ ಸೌಂದರ್ಯ ಹೊಳೆಯುತಿದೆ 

ಮನುಕುಲಕ್ಕೆ ಖುಷಿ ತಂದೈತಿ

 

ಅರಳಿಸು ಎನ್ನ ಮನವು

ತಣಿಸು ನನ್ನ ತನುವು 

ಪ್ರಕೃತಿ ಸೌಂದರ್ಯವು 

ಹನುಮಂತ ದೇವರ ಜಾತ್ರೆಯು

 

ಕೋಗಿಲೆ ಧ್ವನಿಯಲ್ಲಿ ಸಂಗೀತವು 

ಜನಮನದಲ್ಲಿ ಸಂತೋಷವು 

ಮಕ್ಕಳ ಮುಖದಲ್ಲಿ ಮಂದಹಾಸವು 

ಇದು ದೇವರ ಕೊಟ್ಟ ಫಲವು

 

ಉತ್ಸವದ ಜಾತ್ರೆ ನಡದೈತೊ 

ಹನುಮಪ್ಪನ ತೇರು ಎಳೆದೈತೊ 

ಭಕ್ತರ ಹೃದಯಕ್ಕೆ ಹರ್ಷ ತಂದೈತೊ 

ಯುಗಾದಿ ಹಬ್ಬದ ಜಾತ್ರೆ ನಡದೈತೊ

 

ದೇವಾನು ದೇವತೆಗಳ ವರವು 

ಪ್ರಕೃತಿ ಮಾತೆ ವರದಾನವು 

ದೇವರು ಇಲ್ಲಿ ಪ್ರದಾನವು