ಕವನಗಳು

ವಿಧ: ಕವನ
July 03, 2025
ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ ಸೋಲು ಇದೆ, ಕೂಡಲಿಲ್ಲ  ನೋಡಿಯೇ ಇದ್ದ   ಬಾಳು ಕರಗದೇ, ಮತ್ಯಾಕೆ ನಡೆದು ಹೋದ ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ   ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ   ನೂಲು ಹರಿಯಲಿಲ್ಲ, ಬಟ್ಟೆಗೆ ಸಿಟ್ಟದು ಬಾರದೆ ಶಾಲು ಕೊಡಲಿಲ್ಲ ,ಹಾಗೆಂದು ಕಾಡಿಯೇ ಇದ್ದ   ಎಷ್ಟು ಹೊರಲಿಲ್ಲ ,ಸತ್ತವರು ಬರುವರೆ ಈಶಾ ಕಷ್ಟ ಸಾಯಲಿಲ್ಲ ,ಬದುಕಲ್ಲಿ ಬಾಡಿಯೇ ಇದ್ದ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
July 02, 2025
ನಾನು ಕವಿಯಲ್ಲ!!... ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ  ಸಂತ್ರಸ್ತ ಮನಸುಗಳ ಸಂತೈಸಲಿಲ್ಲ  ಆಕ್ರೋಶದ ಧ್ವನಿಗಳಿಗೆ  ಗಂಟಲು ಗೂಡಿಸಲಿಲ್ಲ  ನಾನೇನೂ ಮಾಡಿಲ್ಲ  ನಾನು ಕವಿಯಲ್ಲ!..   ಸರ್ಕಾರ ಸರ್ವಾಧಿಕಾರವಾದಾಗ  ತೆಪ್ಪಗೆ ಬಾಯಿಮುಚ್ಚಿಕೊಂಡಿದ್ದವನಿಗೆ  ಜನ ಜೀವನ ಶೈಲಿಯಲ್ಲಿ  ಕ್ರಾಂತಿ ತರಲಾಗಗಿಲ್ಲ..   ಧ್ವನಿಯೆತ್ತಿ ಪ್ರಶ್ನಿಸುವ  ಗುಂಡಿಗೆಯೇ ಇಲ್ಲದವನಿಗೆ  ನಿಷ್ಠುರವಾಗಿ ಮಾತನಾಡಿ  ವ್ಯವಸ್ಥೆಯನು ಎಚ್ಚರಿಸಲಾಗಲಿಲ್ಲ..   ಕ್ರೌರ್ಯದಾ ಕೋಟೆಯನು  ಬೇಧಿಸಲಾಗದವನಿಗೆ  ಎದೆಕೊಟ್ಟು ನಿಲ್ಲಲು…
ವಿಧ: ಕವನ
July 01, 2025
ನಾಡು ಬೆಳಗಿತು,ಬಾನು ಮಳೆಯ ಹೆರಬೇಡವೆ ಸಖಿ ಕಾಡು ಉಳಿದರೆ ಸಾಕೇ ಹಸಿರನು ಹೊರಬೇಡವೆ ಸಖಿ   ಕೇಡು ಮಾಡಿರುವ ಹಣತೆಗೆ,ಬೆಳಕ ಹಚ್ಚುವರು ಯಾಕೆ ಹಾಡು ಹೇಳಿದರೆ ಸಾಕೇನು,ಲಯವು ಬರಬೇಡವೆ ಸಖಿ   ಜಾಡು ಹಿಡಿದು ಹೊರಟ ಇರುವೆಗಳ,ನೀನು ಕಂಡೆಯಾ ಪಾಡು ಮುಂದಿನ ದಿನಕ್ಕೇ, ಆಹಾರ ತರಬೇಡವೆ ಸಖಿ   ಬೇಡು ಒಳ್ಳೆಯದ ಜೀವನ ಬೆಳಗಲು, ಬೇಡ ಆತುರವು ನೋಡು ಈಗ ಅವಸರದ ಪ್ರೀತಿಯ ಹೇರಬೇಡವೆ ಸಖಿ   ಸೇಡು ಇರದೆಲೆ,ಬದುಕ ರೀತಿಯನು ಅರಿತುಕೋ ಈಶಾ ಆಡು ಮುಟ್ಟದ ಸೊಪ್ಪಿಲ್ಲ,ಎನ್ನುತ್ತಾ ದೂರಬೇಡವೆ ಸಖಿ   -ಹಾ ಮ ಸತೀಶ…
ವಿಧ: ಕವನ
June 30, 2025
ಕನಸಿನೂರಿಗೆ ಒಮ್ಮೆಯಾದರೂ.. ನಿನ್ನೊಡನೆ  ಹೋಗಿದ್ದರೆ... ಎಷ್ಟು ಚೆಂದವಿತ್ತು.!   ಒಲವಿನರಮನೆಯಲ್ಲಿ  ಪ್ರೇಮಸಿಂಹಾಸನದಿ ಕರಪಿಡಿದು ಕುಳಿತು ಜೊತೆ ಬೀಗುತ್ತಿದ್ದರೆ... ಅದೆಷ್ಟು ಸೊಗಸಿತ್ತು.!   ಮಧು ಕಾವ್ಯಧಾರೆಯಲಿ ಮೆಲ್ಲ ನೆನೆಯುತ್ತ  ನನ್ನದೇ.. ಸಾಲುಗಳಿಗೆ ಹೆಜ್ಜೆ ಹಾಕುತ್ತಿದ್ದರೆ ಎಂತಹ ಮುದವಿತ್ತು.!   ಪ್ರತಿಪದ ಪದವು  ಪದ್ಯಗಳಾಗಿ ಹೃದ್ಯವಾಗಿ ನೋಟ ನಗೆ ವೇದ್ಯವಾಗಿ   ಭಾವವೀಣೆಯಾಗಿದ್ದರೆ.. ಅದೆಂತ ಹಿತವಿತ್ತು.!   ಜಗದ ಜಾತ್ರೆಯಲಿ  ಕಳೆದುಹೋದ ನೀನೊಮ್ಮೆ ಸಿಗಬೇಕಿತ್ತು.!…
ವಿಧ: ಕವನ
June 29, 2025
ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು ಬುವಿಯಲಿ ಬೆಳಕಿತ್ತು, ಎಂದೂ ನೋಡದೆ ಇಹರು   ಶಿಖರದಲಿ ಹಿಂದೆ ಮರಗಳಿದ್ದವೋ, ಇಂದಿಲ್ಲ ಏಕೆ ಒಡಲಿನಲಿ ತುಂಬಿದ್ದ ಪ್ರಾಣವನು, ಕಾಣದೆ ಇಹರು   ಮನದಲಿ ಮಲಗಿರುವ ಹೆಣ್ಣಿನಲಿ, ಕನಸದು ಇದೆಯೆ ಜೀವನ ದೋಣಿ ಮುಳುಗುತ, ಜನರು ಹಾರದೆ ಇಹರು   ಭವದಲಿ ಮೂಡಿರುವ ಬಯಕೆಗಳಿಗೆ, ಕೊನೆ ಇಲ್ಲವೆ ತಳದಲಿ ಕಂಡಿರುವಂತ ನೋವನು, ಹೇಳದೆ ಇಹರು   ಕತ್ತಲಲಿ ಬೆಳಕ ಹೇಗೆ ಹುಡಕಿದರೂ, ಸಿಗಲಿಲ್ಲ ಈಶಾ ಮರದಲಿ ಕುಳಿತವರ ನೋಡಿದರೂ, ಚೀರದೆ ಇಹರು   -ಹಾ.ಮ ಸತೀಶ ಬೆಂಗಳೂರು ಚಿತ್ರ…
ವಿಧ: ಕವನ
June 28, 2025
ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು ಇದ್ದದ್ದನ್ನು ಇದ್ದ ಹಾಗೆ ಮುಕ್ಕಿ ಬಿಡು   ಕಾರಣ ಇಲ್ಲದೆ ಯಾರೂ ಬೈಯರೇ ದ್ವೇಷ ಅಸೂಯೆಯನು ಮೆಟ್ಟಿ ಬಿಡು   ರೋಗಗ್ರಸ್ಥ ಮನಕಿಂದು ಏನೆನ್ನಲಿ ಗಾಯಕ್ಕೆ ಮುಲಾಮು ಹಚ್ಚಿ ಬಿಡು   ಜೊತೆ ಆದವ ಕೊಲೆಗಾರ ಹೇಗಾದ ವೇದನೆಯೊಳು ಅವನ ಸುದ್ದಿ ಬಿಡು   ಬಚ್ಚಿಟ್ಟ ನೋವ ಮರೆಯಲೇ ಈಶ ಅಸಲ ಕೊಡುವೆನು ನಾ ಬಡ್ಡಿ ಬಿಡು    -ಹಾ.ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
June 27, 2025
ಬಾವನೆ ಇರುವಲ್ಲಿ ಪ್ರೀತಿ ತಾನ್ ಬರುವುದು ಖುಷಿಯ ವಿಚಾರಗಳು ನಮ್ಮೊಳಗೆ ಇರುವುದು ಏನನ್ನು ಸಾಧಿಸಬಹುದು ದ್ವೇಷ ಅಸೂಯೆಯಿಂದ  ಕೈಹಿಡಿದು ಸಾಗುತಿರೆ ಒಲವಿಂದು ಸೇರುವುದು  * ಉಪ್ಪು ಖಾರ ಹುಳಿ ತಿಂದ ದೇಹವು  ತಪ್ಪು ಮಾಡಿದರೂ ಒಳ ಮರೆವು ಮಾಡುತ್ತಾ , ಇನ್ನೊಬ್ಬನ ತಪ್ಪ ಹೇಳಿದರೆ  ಸತ್ಯಕ್ಕೂ ಮತ್ತೆ ಬಂದೀತೆ ಅರಿವು  * ಜೀವನವು ಜಂಜಾಟ  ಬದುಕಿನಲಿ ಬರಿಯಾಟ ಹೊತ್ತಾರೆ ಎದ್ದರೂ ಬಾಳಿನೊಳು ಗೋಳಾಟ  * ಯಾರು ದೊಡ್ಡವರು ಸಣ್ಣವರು ಯಾರದು  ಅವರವರ ಕೌಶಲ್ಯವು ಅವರವರಿಗೆ ಇಹುದು ಸಣ್ಣತನ ತೋರದಿರಿ…
ವಿಧ: ಕವನ
June 26, 2025
ತಂದೆ ಜೀವದುಸಿರಿರುವಂಥ ದೇವನು ತಿಳಿಯು  ಬಂದು ಕಾಲನು ಹಿಡಿಯು ಅವನ ದಿನವಿಂದು | ತಂದೆಗಿಂತಲು ಬಳಗ ಬೇಕೆ ನಿನಗೆಂದೆಂದು ತಂದೆ ಒಲುಮೆಯ ಗಳಿಸೊ --- ಛಲವಾದಿಯೆ|| * ಬರದಿರುವ ಕನಸುಗಳ ಬಗೆಗೆ ಚಿಂತೆಯು ಬೇಕೆ  ಬರುವಂಥ ಕನಸುಗಳ ಬಳಸಿ ನೀ ಬೆಳೆಯು | ತರತರದ ಕಷ್ಟಗಳ ಎದುರಿಸುತ ಬೆಳಗುತಲಿ  ಚಿರಕಾಲ ಬಾಳು ನೀ --- ಛಲವಾದಿಯೆ|| * ಯೋಗದಿನದೊಳು ನಾವು ಯೋಗಿಯಾಗುತ ಸಾಗೆ ಯೋಗತನವದು ನಮ್ಮ ತನುವೊಳಗೆ ಸೇರೆ| ಭೋಗ ಅತಿ ಭೋಗಗಳು ಕಳಚಿ ದೂರದಿ ಬೀಳೆ ಯಾಗ ಮಾಡಿದ ಫಲವು -- ಛಲವಾದಿಯೆ || * ಕಷ್ಟ ನಷ್ಟ …
ವಿಧ: ಕವನ
June 25, 2025
ಮಳೆ ನಿಂತಾಗ  ಅವಳ ಪ್ರತೀಕಾರವಿತ್ತು; ಮನಸಿನಲಿ ಮೂಡಿದ  ನೂರೆಂಟು ಪ್ರಶ್ನೆಗಳ  ಹನಿಗಳು  ಇನ್ನೂ ಮೋಡದಲ್ಲೇ  ಉಳಿದಿತ್ತು..   ಊಹೆಗೆ ನಿಲುಕದ  ಮೂರ್ಕಾಸಿನ ಬದುಕು  ಬದುಕಿದ್ದಷ್ಟೂ ವನವಾಸ; ನಗುವೆಂದರೆ  ಎಂದೋ ಮೂಡುವ  ಕಾಮನ ಬಿಲ್ಲು..   ಕಡೆ ಪಕ್ಷ ಕೊಚ್ಚಿಹೋದರೂ  ಅಡ್ಡಿಯಿರಲಿಲ್ಲ  ಸೋನೆಯೇ ಸಂಕಟ  ದೂರಮಾಡಿದರೆ  ಅದಕಿಂತ ಮಿಗಿಲಾದ  ಅತ್ಯಾಪ್ತರಿಲ್ಲ..   ಸಿಕ್ಕು ಹಿಡಿದ ಕೂದಲಿಗೂ  ಮಲ್ಲಿಗೆಯ ಪರಿಚಯವಿತ್ತು; ಎಂದೋ ನೇಪಥ್ಯಕೆ ಸೇರಿದ  ಅವನ ಚಿತ್ರಪಟ  ಹಳೇ ಊದು ಕಡ್ಡಿಯ  ಉಪಸ್ಥಿಯ…
ವಿಧ: ಕವನ
June 24, 2025
ಎಲ್ಲ ಮರೆತು ಹೋದೆ ತಂದೆ  ನನ್ನ ಬುವಿಗೆ ತರುತಲೆ ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ ಮಾತುಕತೆಯ ನೋಡದಾದೆ ಮುದ್ದಿಸುವುದ ಕಾಣದಾದೆ ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ   ನಿನ್ನ ಒಡಲ ಪ್ರೀತಿ ಸಿಗದೆ ಸಾಗುತಿರುವೆ ಎಲ್ಲೆ ಇರದೆ ಹೃದಯದಾಳದೊಳಗೆ ಇರುವ ನಲಿವ ಮರೆತು ಕುಳಿತೆನೆ ಬೀದಿಯೆಡೆಯೆ ತಿರುಗಿ ನಿಂದೆ ದಾರಿ ಸವೆದ ಚಿತ್ರವೆಂದೆ ಬದಿಗೆ ಸರಿದ ಒಲುಮೆಯನ್ನು ತಬ್ಬಿ ಹಿಡಿದು ಮಲಗಿದೆ    ವ್ಯಾಧಿಯೊಳಗೆ ಸಾಗುತಿರುವೆ ಮತ್ತೆ ಸವಿಯು ಮೂಡದೆ ಅಂತರಂಗ ಗಗನ ಕುಸುಮ ಎನುತ ಕಾಲ…