ರುಚಿ ಸಂಪದ

  • ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ಕೊತ್ತಂಬರಿಸೊಪ್ಪು, ಕಾರ್ನ್, ಚೀಸ್, ಗರಂ ಮಸಾಲೆ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಸರಿಯಾಗಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅವುಗಳ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಆ ಉಂಡೆಗಳನ್ನು ಚಪ್ಪಟೆ ಆಕಾರಕ್ಕೆ ಬರುವಂತೆ ಕೈಯಿಂದ ಒತ್ತಿ, ಬ್ರೆಡ್ ಹುಡಿಯಲ್ಲಿ ಹೊರಳಿಸಿ…

    0
  • ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾದ ರುಚಿ ಕಡಿಮೆಯಾಗುತ್ತದೆ. ಹಲಸಿನ ಬೀಜಗಳನ್ನು ಸಣ್ಣದಾಗಿ ಕತ್ತರಿಸಿಟ್ಟು, ನಂತರ ಈ ಕತ್ತರಿಸಿದ ಕಣಿಲೆ ಮತ್ತು ಹಲಸಿನ ಬೀಜವನ್ನು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ೨-೩ ಶೀಟಿ ಬೇಯಿಸಿದರೆ ಸಾಕು. 

    ಕೊತ್ತಂಬರಿ, ಮೆಂತೆ,…

    0
  • ಅಕ್ಕಿಯನ್ನು ೨ ಗಂಟೆ ನೆನೆಸಿ ತೆಗೆದಿಡಿ. ಅದನ್ನು ಹಲಸಿನ ಹಣ್ಣಿನ ಸೊಳೆ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿ ದಪ್ಪನೆ ಬರುವಂತೆ ನೀರು ಹಾಕದೇ ರುಬ್ಬಿ. ಅದಕ್ಕೆ ಎಳ್ಳು ಸೇರಿಸಿ. ಒಂದು ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ಬಳಿಕ ರುಬ್ಬಿದ ಹಿಟ್ಟನ್ನು ಗೋಲಿಯಾಕಾರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸರಿಯಾಗಿ ಕರಿದ ಮೇಲೆ ಗಾರಿಗೆಯನ್ನು ಹೊರ ತೆಗೆದು ಬಿಸಿ ಬಿಸಿಯಾಗಿ ತಿನ್ನಿರಿ. ಇದಕ್ಕೆ ಹಲಸಿನ ಹಣ್ಣಿನ ಮುಳಕ ಎಂದೂ ಕರೆಯುತ್ತಾರೆ.

    0
  • ಅಕ್ಕಿ ಮತ್ತು ತೊಗರಿಬೇಳೆಯನ್ನು ನೀರಿನಲ್ಲಿ ೨ ಗಂಟೆ ನೆನೆಸಿ. ನಂತರ ಅದಕ್ಕೆ ಕೆಂಪು ಮೆಣಸು, ಉಪ್ಪು, ಇಂಗು ಸೇರಿಸಿ ಕಡೆಯಿರಿ. ಹಿಟ್ಟು ಹೆಚ್ಚು ನಯವಾಗದಂತೆ ಕಡೆದು ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ ಹಾಗೂ ಈರುಳ್ಳಿಯನ್ನು ಸೇರಿಸಿ. ಕಾವಲಿಯನ್ನು ಒಲೆಯ ಮೇಲೆ ಕಾಯಿಸಿ ಅದಕ್ಕೆ ಈ ಮಿಶ್ರಣವನ್ನು ರೊಟ್ಟಿ ತಟ್ಟುವಂತೆ ಕೈಯಿಂದ ತಟ್ಟಿ. ಸರಿಯಾಗಿ ಕಾದ ಬಳಿಕ ಕಾವಲಿಯಿಂದ ತೆಗೆಯಿರಿ. ಬಿಸಿ ಬಿಸಿಯಾಗಿ ಊಟಕ್ಕೆ ಹಿತಕರವಾಗಿರುತ್ತದೆ.( ಖಾರ ಜಾಸ್ತಿ ಬೇಕಾದಲ್ಲಿ ಮೆಣಸನ್ನು ಜಾಸ್ತಿ ಹಾಕಿ) 

    0
  • ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಕಡಿಯುವ ಕಲ್ಲಿನಲ್ಲಿ ನೀರು ಹಾಕದೇ ರುಬ್ಬಬೇಕು. ರುಬ್ಬುವ ಹಿಟ್ಟು ನಯವಾದಾಗ ಒಂದು ಪಾತ್ರೆಯಲ್ಲಿ ತೆಗೆದು ಇಡಿ. ಬಾಳೆ ಎಲೆಯನ್ನು ಒಲೆಯಲ್ಲಿ ಬಾಡಿಸಿ ಅದರ ಮೇಲೆ ಮೊದಲು ರುಬ್ಬಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹರಡಿ, ಮಡಚಿ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ೪೦ ರಿಂದ ೪೫ ನಿಮಿಷ ಬೇಯಿಸಿ. ನಂತರ ಪಾತ್ರೆಯ ಮುಚ್ಚಳ ತೆಗೆದು ಬೆಂದಿದೆಯಾ ಎಂದು ಪರೀಕ್ಷಿಸಿ. ಸರಿಯಾಗಿ ಬೆಂದ ಬಳಿಕ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ತುಪ್ಪ ಹಾಗೂ ಉಪ್ಪಿನಕಾಯಿ ಜೊತೆ ತಿನ್ನಲು ಬಲು ರುಚಿಕರ. ಮಳೆಗಾಲದಲ್ಲಿ ಹಲಸಿನ ಹಣ್ಣು ದೊರೆತಾಗ…

    0
  • ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ೧೦ ನಿಮಿಷ ನೆನೆಸಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಾಯಿಮೆಣಸು, ಕತ್ತರಿಸಿದ ನೀರುಳ್ಳಿ, ಕರಿಬೇವು ಹಾಕಿ ಹುರಿಯಿರಿ. ಅದಕ್ಕೆ ನೆನೆಸಿಟ್ಟ ಅವಲಕ್ಕಿ, ಬೇಯಿಸಿದ ಬಟಾಟೆ, ಉಪ್ಪು, ಅರಸಿನ ಹುಡಿ, ನೆಲಕಡಲೆ, ಸಕ್ಕರೆ ಹಾಕಿ ಒಂದೆರಡು ಚಮಚ ನೀರು ಹಾಕಿ ಬಾಣಲೆಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ಬಳಿಕ ಲಿಂಬೆ ರಸವನ್ನು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಅಲಂಕರಿಸಿ.…

    0
  • ತಯಾರಿಕಾ ವಿಧಾನ: ಮೊದಲಿಗೆ ತೊಗರಿ ಬೇಳೆ ಹಾಗೂ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ ಹಾಗೂ ಬೇಳೆ, ಮೆಣಸು, ಹುಣಸೆ ಹುಳಿ, ಇಂಗು, ಉಪ್ಪು, ಕಾಯಿ ತುರಿ ಎಲ್ಲವನ್ನೂ ಸೇರಿಸಿ ನಯವಾಗಿ ರುಬ್ಬಿರಿ. ಆ ರುಬ್ಬಿದ ಮಿಶ್ರಣಕ್ಕೆ ಕತ್ತರಿಸಿದ ನೀರುಳ್ಳಿ ಹಾಗೂ ಸಣ್ಣದಾಗಿ…

    0
  • ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಸ್ವಲ್ಪ ನೀರು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ ನೀರುಳ್ಳಿ, ಮೆಣಸನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಚೂರುಗಳನ್ನು ಹಾಗೂ ಒಣ ದ್ರಾಕ್ಷಿಯನ್ನು ಹುರಿದು ತೆಗೆದು…

    0
  • ಮೊದಲಿಗೆ ಬಟಾಟೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಫಿಷ್ ಫ್ರೈ /ಬೋಂಡಾ ಮಸಾಲವನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರಹ ಮಾಡಿ ಚೆನ್ನಾಗಿ ತಾಗಿಸಿ. ಉಪ್ಪು ಬೇಕಾದಲ್ಲಿ ರುಚಿಗೆ ತಕ್ಕಷ್ಟು ಹಾಕಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮಸಾಲೆ…

    0
  • ಮೊದಲಿಗೆ ನೀರುಳ್ಳಿಯನ್ನು ಉದ್ದಕ್ಕೆ ಸಪೂರವಾಗಿ ಕತ್ತರಿಸಬೇಕು. ಅದಕ್ಕೆ ಉಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ನೀರು ಬಿಟ್ಟು ಕೊಳ್ಳುತ್ತೆ. ಆಗ ಅದಕ್ಕೆ ಮೆಣಸಿನ ಹುಡಿ, ಜೀರಿಗೆ, ಕರಿಬೇವು ಹಾಕಿ ಚೆನ್ನಾಗಿ ಬೆರೆಸಿ ನಂತರ ಅದಕ್ಕೆ ಹಿಡಿಯುವಷ್ಟು ಕಡಲೇ ಹಿಟ್ಟು ಬೆರೆಸಿ. ಅಗತ್ಯ ಇದ್ದಲ್ಲಿ ಮಾತ್ರ ಸ್ವಲ್ಪ ನೀರು…

    0