ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 26

 

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

 

225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್

 

 

ನನ್ನ ಅನುವಾದ :  

ನೋಡಿರುವೆ ಮೊದಲ ಸಲ

ಪ್ರಿಯತಮನ ಕಣ್ಣಲ್ಲಿ ಪ್ರೇಮಾನ

 

226) ಮೂಲ ಹಾಡು:- ತೇರಾ ಹೋನೇ ಲಗಾ

 

ನನ್ನ ಅನುವಾದ :  

ನಾನೂ

 ಆಗುತಿಹೆ ನಿನ್ನೋನೂ

ನಿನ ಭೇಟಿ

ಆದಾಗಿಂದ

 

 

227) ಮೂಲ ಹಾಡು:- ಕಿಸೀ ದಿನ ಬನೂoಗಿ

 

ನನ್ನ ಅನುವಾದ :  

ಆಗುವೆನು ರಾಣಿ

ಮುಂದೊಮ್ಮೆ ನಿನಗೆ

ಅಲ್ಪ ಇನ್ನೊಮ್ಮೆ ಹೇಳು

 

ಚಂಪಾರಣ್ಯ ಸತ್ಯಾಗ್ರಹ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೫

“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು.

ವಿಚಿತ್ರ ಸ್ವಾರ್ಥದ ನ್ಯಾಯ ನೀತಿ

ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂಗಿ ಕರುಣಾಮಯಿ, ನನ್ನ ಗಂಡ ದಕ್ಷ ಪ್ರಾಮಾಣಿಕ, ನನ್ನ ಮಗ ಮಗಳು ಅತ್ಯಂತ  ಸಹೃದಯಿಗಳು, ಹೀಗೆ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮವರ ಬಗ

Image

ಸ್ಟೇಟಸ್ ಕತೆಗಳು (ಭಾಗ ೧೩೫೬) - ಸ್ವರ್ಗ

ನಿನಗೆ ಸ್ವರ್ಗ ಬೇಕಿದ್ದರೆ ನೀನೇ ಸತ್ತು ಸ್ವರ್ಗಕ್ಕೆ ತೆರಳಿಬಿಡು, ಯಾರೋ ಸತ್ತು ನಿನಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ. ಹೀಗಂದ ಬಾಲಕೃಷ್ಣರ ಮಾತು ಸ್ವಲ್ಪ ಖಾರವಾಗಿತ್ತು. ನನಗೆ ಅದನ್ನು ಅಷ್ಟು ಬೇಗ ಜೀರ್ಣಿಸಿಕೊಳ್ಳಲಾಗಲಿಲ್ಲ. ಹಾಗೆ ಅವರ ಮಾತನ್ನು ಮನಸ್ಸಿನೊಳಗೆ ಮತ್ತೆ ಮತ್ತೆ ಕೇಳುವುದಕ್ಕೆ ಆರಂಭಿಸಿದೆ. ಆಗ ಅದರ ಅದ್ಭುತ ಒಳಾರ್ಥಗಳು ಕಣ್ಣ ಮುಂದೆ ಕಾಣಿಸುವುದಕ್ಕೆ ಪ್ರಾರಂಭ ಆದವು.

Image

ಪ್ರೇಮಪತ್ರ: ಮುನಿಸು ಬಿಟ್ಟು ಕವಿಯ ಕವಿತೆಯಾಗು ಬಾ...

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ ಕಾಣುವೆ. ವಯಸ್ಸು ಕೇವಲ ನಶಿಸಿ ಹೋಗುವ ಈ ತನುವಿಗಿರಬಹುದು, ನಿನ್ನ ಪ್ರೀತಿಯ ನಶೆಗಲ್ಲ. ಪ್ರೀತಿ ಮೂಡಲು ಅದಾವ ಕಾರಣ ಬೇಕಿತ್ತು?

ಮಿತ ಆಹಾರದಿಂದ ಉತ್ತಮ ಆರೋಗ್ಯ

ಆಹಾರದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ನೀರು ಮೊದಲಾದ ಅಂಶಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಕ್ಕಿದರೆ ಮಾತ್ರ ದೇಹವು ಸಮತೋಲನವಾಗಿರುತ್ತದೆ. ಮನುಷ್ಯನ ಜೀವನದಲ್ಲಿ ಆಹಾರ ಅತಿ ಮುಖ್ಯ. ನಮ್ಮ ಶರೀರದ ಬೆಳವಣಿಗೆಗೆ, ಶಕ್ತಿಗೆ, ಮಾನಸಿಕ, ದೈಹಿಕ ಆರೋಗ್ಯಗಳು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಆಹಾರದಲ್ಲಿ ಇರುವಷ್ಟು ವೈವಿಧ್ಯ ಬೇರೆ ಯಾವುದರಲ್ಲಿಯೂ ಇರಲಿಕ್ಕಿಲ್ಲವೇನೋ? ಆಹಾರವು ಆಯಾ ಪ್ರದೇಶದ ಜನಜೀವನ, ಸಂಸ್ಕೃತಿ, ಆಚಾರ-ವಿಚಾರ, ಹವಾಗುಣಕ್ಕೆ ಅನುಗುಣವಾಗಿ ಇರುತ್ತದೆ. ನಾವು ಸೇವಿಸುವ ಆಹಾರ ಹೇಗಿರಬೇಕು, ಎಷ್ಟು ಆಹಾರ ಒಬ್ಬ ಮನುಷ್ಯನಿಗೆ ಅಗತ್ಯ, ಎಂತಹ ಆಹಾರ ಮುಖ್ಯ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಆ ಕರಾಳ ರಾತ್ರಿ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. ‘ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.’

Image

ಅಪ್ಪನ ಡೈರಿಯಲ್ಲಿ...

ಅಪ್ಪನೆಂದರೆ , ಅದೇನೋ ಅಸಹ್ಯ. ಆತನ "ಕುಡಿತ " , ಆತನ ಜೀವನ ಶೈಲಿಯ ಬಗ್ಗೆ ...ನನಗೆ ಮೊದಲಿನಿಂದಲೂ ಒಂದು "ಕೆಟ್ಟ" ವಿಚಾರಧಾರೆ ತಲೆಯೊಳಗೆ ಕುಳಿತಿತ್ತು.   ಅಮ್ಮನ ದೂರ ಮಾಡಿದ , ಅಣ್ಣನ ಮುಖ ನೋಡದ ಹಾಗೆ ಮಾಡಿದ ಅವ.... ಯಾವತ್ತಿಗೂ ಕ್ರೂರ ನನ್ನ ಪಾಲಿಗೆ .  ಆದರೆ ಒಂದೇ ಸಂತೋಷವೆಂದರೆ , ನನಗೇನು ಕಡಿಮೆ ಮಾಡಿರಲಿಲ್ಲ. ಉತ್ತಮ ವಿದ್ಯಾಭ್ಯಾಸ , ಕಡೆಗೆ ಉತ್ತಮ ಸಂಬಂಧ ಹುಡುಕಿ ....ಮದುವೆ ಮಾಡಿ ಕೈ ತೊಳೆದುಕೊಂಡು ... ಆತನ "ಮನೆಯಲ್ಲೇ" ವಾಸ ಇದ್ದ ಅಪ್ಪ ಒಂಟಿಯಾಗಿ

ಹಾಗೆಯೇ ಕುಡಿದು "ಕುಡಿದು" ಸತ್ತು ಹೋದಾಗ ಮಾತ್ರ , ನನ್ನಲ್ಲಿ ಆತನ ಬಗ್ಗೆ ಸಣ್ಣ ಸಂತಾಪವಿತ್ತು ಅಷ್ಟೇ.

ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 2)

ಹಿಂದಿನ ಸಂಚಿಕೆಯಲ್ಲಿ ಆಸ್ತಿಕ, ನಾಸ್ತಿಕ, ಗೃಹಸ್ಥ, ಋಷಿ ಮತ್ತು ಮಹರ್ಷಿಗಳ ಬಗ್ಗೆ ಮಾಹಿತಿಗಳನ್ನು ಪಡೆದಿರುವಿರಿ. ಮುಂದುವರಿದ ಭಾಗವಾಗಿ ಈ ಲೇಖನದಲ್ಲಿ ಮುನಿ, ಸಾಧು ಮತ್ತು ಸಂತರ ಬಗ್ಗೆ ತಿಳಿಸುವ ಪುಟ್ಟ ಪ್ರಯತ್ನವಿದೆ.

Image