ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾಪಮಾನ ಏರುತ್ತಿದೆ ಎಂದು ಹಳ್ಳಿಮನೆ ಬದಲಿಸದಿರಿ

ಕಳೆದ ಒಂದು ತಿಂಗಳಿಂದ ಕರಾವಳಿ ಭಾಗದಲ್ಲಿ ಸೊಗಸಾದ ಮಳೆ ಬರುತ್ತಿದೆ. ಮಳೆ ಬರುತ್ತಿರುವ ಸಮಯದಲ್ಲಿ ತಂಪಾದ ವಾತಾವರಣ ಇದ್ದರೂ, ಒಂದು ಅರ್ಧ ದಿನ ಮಳೆ ನಿಂತು ಬಿಸಿಲು ಬಂದರೆ ಸೆಖೆಯಾಗಲು ಶುರುವಾಗುತ್ತದೆ. ಇದು ವಾತಾವರಣ ಬಿಸಿಯೇರುತ್ತಿರುವ ಪರಿಣಾಮ. ಇತ್ತೀಚೆಗೆ ಪ್ರತೀ ವರ್ಷ ಮಾರ್ಚ್ ತಿಂಗಳಿಗೇ ಭಾರೀ ಬಿಸಿಲಿನ ಝಳ ಕಾಣಿಸಿಕೊಳ್ಳುತ್ತಿದೆ.

Image

ಬೀದಿ ನಾಯಿ ಉಪಟಳ ತಡೆಯುವ ತುರ್ತು

ಬ್ರ್ಯಾಂಡ್ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿರುವ ನಡುವೆ, ನಾಯಿ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

Image

7 ನೇ ವೇತನ ಆಯೋಗ...

ಏಳನೇ ವೇತನ ಆಯೋಗದ ವರದಿ ಜಾರಿಯಾಗಿದೆ. ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರಿ ನೌಕರರ ಸಂಬಳ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 20,208.೦೦ ( ಇಪ್ಪತ್ತು ಸಾವಿರದ ಇನ್ನೂರ ಎಂಟು  ಕೋಟಿ ) ಹೆಚ್ಚುವರಿ ಒತ್ತಡ ಬೀಳಲಿದೆ. ತುಂಬಾ ಸಂತೋಷ ಸಂಬಳ ಹೆಚ್ಚಾಗಿದ್ದಕ್ಕೆ, ಅಭಿನಂದನೆಗಳು ಸುಖವಾಗಿರಿ.

Image

ಸ್ಟೇಟಸ್ ಕತೆಗಳು (ಭಾಗ ೧೦೨೬)- ಮನಸ್ಸು

ರಸ್ತೆ ಬದಿಯ ಸಣ್ಣ ಅಂಗಡಿಯ ಮುಂದಿನ ಮರದ ಬೆಂಚಿನ ಮೇಲೆ ಕುಳಿತು ತನ್ನ ಮಗನಿಗೆ ತಿಂಡಿ ತಿನ್ನಿಸುತ್ತಿದ್ದ ಆತ ಆದರೆ ತಿನ್ನಿಸುವ ಕ್ಷಣದಲ್ಲಿ ಸಂಭ್ರಮವಿಲ್ಲ, ಒಂದಷ್ಟು ನೋವು ತುಂಬಿದೆ. ಕಣ್ಣೀರು ಹೊರಗೆ ಬರುವುದಕ್ಕೆ ಕಾಯ್ತಾ ಇದೆ. ಮಗುವಿಗೆ ಹೊಟ್ಟೆ ತುಂಬುತ್ತಿದ್ದರೂ ಸುತ್ತಮುತ್ತ ಕಾಣುತ್ತಾ ಇರುವ ಕೆಲವು ವಿಚಾರಗಳು ಮನಸ್ಸನ್ನು ಆಕರ್ಷಿಸುತ್ತಿದೆ.

Image

ಯಮ - ಅಸ್ತೇಯ

ಇಂದು ಯಮದಲ್ಲಿ ಮೂರನೇ ಸೋಪಾನ ಅಸ್ತೇಯದ ಬಗ್ಗೆ ತಿಳಿದುಕೊಳ್ಳೋಣ. ಯೋಗ ಮನಸ್ಸನ್ನು ಅತಿ ಎತ್ತರಕ್ಕೆ ಏರಿಸಿ, ವಿಸ್ತರಿಸಿ ಕೊನೆಗೆ ಅನಂತತೆಯಲ್ಲಿ ಬೆರೆಸುತ್ತದೆ. ಆದ್ದರಿಂದ ಈ ಯೋಗ ಅಪರೂಪದ ಕೊಡುಗೆ. ಇದರಲ್ಲಿ ಇಂತಿಂಥವರಿಗೆ ಅಂತ ಇಲ್ಲ. ಇಲ್ಲಿ ಜಾತಿ, ಧರ್ಮ, ಮತ ಯಾವುದೂ ಇಲ್ಲ. ಯಾರಲ್ಲಿ ಶಾಂತಿ ಅನುಭವಿಸ ಬೇಕೆಂಬ ಇಚ್ಛೆ ಇದೆ, ಮನಸ್ಸನ್ನು ವಿಸ್ತರಿಸಬೇಕೆಂಬ ಬಯಕೆ ಇದೆ, ಅಂತಹವರಿಗೆ ಈ ಯೋಗ.

Image

ಪುದೀನ ಸೂಪ್

Image

ಪುದೀನ, ಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಬಿಸಿಯಿರುವಾಗಲೇ ಸೇವಿಸಿ. ಈ ಸೂಪ್ ಆರೋಗ್ಯಕ್ಕೆ ಉತ್ತಮ. 

ಬೇಕಿರುವ ಸಾಮಗ್ರಿ

ಪುದೀನ ಸೊಪ್ಪು ೧/೨ ಕಟ್ಟು, ಕೊತ್ತಂಬರಿ ಸೊಪ್ಪು ೧/೪ ಕಟ್ಟು, ಕಾಳುಮೆಣಸಿನ ಪುಡಿ ೧/೪ ಚಮಚ, ಬೆಣ್ಣೆ ೧ ಚಮಚ, ಉಪ್ಪು ರುಚಿಗೆ.

ಮಾತೊಂದ ಹೇಳುವೆ

ಪುಸ್ತಕದ ಲೇಖಕ/ಕವಿಯ ಹೆಸರು
ಗುರುಪಾದ ಬೇಲೂರು
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೪

“ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ.

ಮನಸಿನೊಳಗೊಂದು ಪಯಣ...

ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ, ಅಸಹನೆ, ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ ಸಮಯವೇ ಇರುವುದಿಲ್ಲ. ಕೆಲವೊಮ್ಮೆ ಸಮಯವಿದ್ದರು ಅದರ ಆಗಾಧತೆಗೆ ಅಂಜಿ ಅದರೊಳಗೆ ಪ್ರವೇಶಿಸಲು ಭಯ ಮತ್ತು ನಿರಾಸಕ್ತಿ ಮೂಡುತ್ತದೆ.

Image