ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು

ನಾವು ಈ ಬಾರಿ ಒಂದು ನರ್ಸರಿ ಗೆ ಭೇಟಿ ನೀಡೋಣವೇ? ನರ್ಸರಿ ಎಂದರೆ ನೆಡಲು ಸಿದ್ಧಗೊಳಿಸಿದ ಗಿಡಗಳನ್ನು ಪೋಷಿಸಿ ಮಾರುವ‌ ಸ್ಥಳ. ನಾವೀಗ ಹೋಗುತ್ತಿರುವ ನರ್ಸರಿ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿದೆ. ಬನ್ನಿ , ನರ್ಸರಿಯ ಒಳಗೆ ಹೋಗೋಣ. ಕಣ್ಣಿಗೆ ತಂಪು ನೀಡುವ, ಮನಸನ್ನು ಮುದಗೊಳಿಸುವ, ನಮ್ಮನ್ನೇ ನಾವು ಮರೆಯುವಂತೆ ಮಾಡುವ ಈ ಗಿಡಗಳನ್ನೊಮ್ಮೆ ನೋಡಿರಿ. ಇದೊಂದು ಪುಟಾಣಿ ಉದ್ಯಾನವನ!

Image

ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ ಯಾರು ಬರೆದ ಕವನ ಎಂದು ಗೊಂದಲಗಳಿವೆ. ಇಲ್ಲಿ ಪ್ರಕಟಿಸಲಾದ ಕವನ ೧೯೩೦ರಲ್ಲಿ ಮುದ್ರಿತವಾದ ‘ರಾಷ್ಟ್ರೀಯ ಪದ್ಯಗಳು’ ಸಂಕಲನದಲ್ಲಿದೆ.

Image

ಮುಂಜಾವಿನ ರತ್ನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೭೦.೦೦, ಮುದ್ರಣ: ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ಸಾಲುಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ನುಡಿಗಳಿಗಿವೆ.

ಸ್ಟೇಟಸ್ ಕತೆಗಳು (ಭಾಗ ೧೨೦೯) - ಕಸ

ಕಸ ರಾಶಿಯಾಗಿ ಬಿದ್ದಿದ್ದಾಗ ಅಲ್ಲಿ ಕಸ ಚೆಲ್ಲುಬಾರದು ಅಂತ ಯಾರಿಗೂ ಅನ್ನಿಸೋದೇ ಇಲ್ಲ. ಆದರೆ ಸ್ವಚ್ಛವಾಗಿದ್ದು ಬಿಟ್ರೆ ಅಲ್ಲಿ ಕಸ ಚೆಲ್ಲುವುದಕ್ಕೆ ಮನಸ್ಸು ಬರೋದಿಲ್ಲ. ಆ ಒಂದು ಸ್ಥಳದಲ್ಲಿ ಬಂದವರೆಲ್ಲರೂ ಕಸವನ್ನ ಚೆಲ್ಲುತ್ತಾ ಹೋಗುತ್ತಿದ್ದಾರೆ. ತಮಗೆ ಬೇಡವಾಗಿರುವುದನ್ನ ಆ ಸ್ಥಳಕ್ಕೆ ಬಂದು ಸುರಿದು ಅಲ್ಲಿಂದ ನಡೆದು ಬಿಡುತ್ತಾರೆ.

Image

ಉಚಿತಗಳ ಆವಾಂತರ - ಭಾಗ 1

ಉಚಿತ….. ಉಚಿತ… ಉಚಿತ! ಈ ಪದ ಕರ್ಣ ತಮಟೆಗೆ ಬಡಿದೊಡನೆಯೇ ಅಗಸನಿಂದ ಅರಸನ ತನಕ ಎಲ್ಲರೂ ಬಾಯಿ ಬಾಯಿ ಬಿಡುವರು. “ಉಚಿತ” ದ ಆಕರ್ಷಣಾ ಬಲ ಭೂಮಿಯ ಆಕರ್ಷಣಾ ಬಲಕ್ಕೂ ಮಿಗಿಲು. “ಫ್ರೀ” ಎಂಬ ಅಯಸ್ಕಾಂತೀಯ ಮಾರುಕಟ್ಟೆ ತಂತ್ರದ ಹಿಂದೆ ಶೀಘ್ರವಾಗಿ ಹಣ ಮಾಡುವ ಮತ್ತು ತಮಗಾಗಬಹುದಾದ ನಷ್ಟವನ್ನು ಗ್ರಾಹಕರ ತಲೆಗೆ ಕಟ್ಟುವ ಭ್ರಷ್ಟ ಜಾಲದ ಭುಗಿಲು ಮುಗಿಲೆತ್ತರ.

Image

ಗೋಹತ್ಯೆ, ಗೋಹಿಂಸೆ ನಿಲ್ಲಿಸಿ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಚ್ಚಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಘನಘೋರ ಘಟನೆ ನಡೆದಿದೆ. ದುಷ್ಕರ್ಮಿಗಳು ಗರ್ಭಿಣಿ ಹಸುವೊಂದರ ತಲೆ ಮತು ಕಾಲು ಕಡಿದುಹಾಕಿದ್ದು ಮಾತ್ರವಲ್ಲದೆ, ಅದರ ಹೊಟ್ಟೆಯನ್ನೂ ಸೀಳಿ ಗರ್ಭಸ್ಥ ಕರುವನ್ನು ಹತ್ಯೆ ಮಾಡಿದ್ದಾರೆ. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರ ಹಸು ಇದು.

Image