ವಿಧ: ಪುಸ್ತಕ ವಿಮರ್ಶೆ
December 04, 2020
ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು ಸಹಲೇಖಕಿಯಾಗಿ ರಚಿಸಿದ ‘ಮನೆಯಂಗಳದಲ್ಲಿ ಔಷಧಿವನ' ಪುಸ್ತಕ ಹಲವಾರು ಮುದ್ರಣಗಳನ್ನು ಕಂಡಿದ್ದು, ಈ ಕೃತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ಶ್ರೇಷ್ಟ ಲೇಖಕಿ' ಪುರಸ್ಕಾರ ದೊರೆತಿದೆ.
ಪ್ರಾಚೀನ ಕಾಲದಿಂದಲೂ ಭಾರತದ ಸಂಬಾರ…
ವಿಧ: Basic page
December 01, 2020
To request data deletion for users who have logged in using Social Media login, please write to support AT sampada DOT net or mail AT sampada DOT net from your registered email address.
Thank you!
ಸೋಶಿಯಲ್ ಮೀಡಿಯ ಲಾಗಿನ್ ಬಳಸಿ ಲಾಗಿನ್ ಆದ ಬರಹಗಾರರು ಹಾಗು ಬಳಕೆದಾರರು ಡೇಟ ಅಳಿಸಿಹಾಕುವ ಕೋರಿಕೆ ಇದ್ದಲ್ಲಿ ದಯಮಾಡಿ support AT sampada DOT net ಅಥವ mail AT sampada DOT net ಇ-ಮೇಯ್ಲ್ ವಿಳಾಸಕ್ಕೆ ನಿಮ್ಮ ನೋಂದಾಯಿತ ಐಡಿಯಿಂದ …
ವಿಧ: ಪುಸ್ತಕ ವಿಮರ್ಶೆ
December 01, 2020
ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ ಪುಸ್ತಕದಲ್ಲೂ ಮುಂದುವರೆದಿದೆ. ಈ ಸರಣಿ ಪುಸ್ತಕಗಳನ್ನು ಓದುತ್ತಾ ಓದುತ್ತಾ ಮಲೆನಾಡು ಇನ್ನಷ್ಟು ಆಪ್ತವಾಗುತ್ತಾ ಹೋಗುತ್ತದೆ. ರೋಚಕತೆ ಪ್ರತಿಯೊಂದು ಘಟ್ಟದಲ್ಲೂ ಕಂಡು ಬರುತ್ತದೆ. ಮಲೆನಾಡಿನ ಮರೆಯದ ನೆನಪುಗಳು ಪುಸ್ತಕವನ್ನು ಲೇಖಕರು ಕಥನ ಸಂಗ್ರಹ ಎಂದು…
ವಿಧ: ಪುಸ್ತಕ ವಿಮರ್ಶೆ
November 28, 2020
ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಎನ್ನುವುದು ವಿಠಲ್ ಶೆಣೈ ಅವರ ಬರಹದ ವಿಶೇಷತೆ. ಸರಳವಾದ ವಾಕ್ಯಗಳು, ನಮಗೆ ಗೊತ್ತಿರುವ ಸುಲಭ ಪದಗಳು, ನಮ್ಮ ಸುತ್ತ ಮುತ್ತಲಿನಲ್ಲೇ ನಡೆಯುವಂಥಹ ಕಥಾ ಹಂದರ ಇವು ಈ ಕಥೆಗಳಿಗೆ ವಿಶೇಷ ಮೆರುಗನ್ನು ನೀಡಿವೆ.
ವಿಠಲ್ ಶೆಣೈ ಅವರು ‘…
ವಿಧ: ಪುಸ್ತಕ ವಿಮರ್ಶೆ
November 26, 2020
*ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"*
" ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆ" ಯಲ್ಲಿ ತೃತೀಯ ಬಹುಮಾನ ಪಡೆದ ನಾಟಕ. ಇದನ್ನು ನಾಲ್ಕು ದಶಕಗಳ ಬಳಿಕ ಉಡುಪಿಯ "ತುಳು ಕೂಟ" ಪ್ರಕಾಶಿಸಿದೆ. 88 ಪುಟಗಳ ಕೃತಿಯ ಬೆಲೆ ನೂರು ರೂಪಾಯಿ.
ಕೃತಿಯಲ್ಲಿ ಅಂಶುಮಾಲಿಯವರ "ಸೊಲ್ಮೆಲು", ಸೀತಾರಾಮ ಹೆಗ್ಡೆಯವರು ಅಂಶುಮಾಲಿಯವರಿಗೆ…
ವಿಧ: ಪುಸ್ತಕ ವಿಮರ್ಶೆ
November 24, 2020
ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಸಿದ್ಧರಾಮಯ್ಯನವರು ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕವನ, ನಾಟಕ, ವಿಮರ್ಶೆ…
ವಿಧ: ಬ್ಲಾಗ್ ಬರಹ
November 23, 2020
ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು.
ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಜನ ಕುರಿತಾಗಿ ಈ ಲೇಖನ ಇತ್ತು. ಕೃಷ್ಣನು ಸಾಕ್ಷಾತ್ ಕಾಲನೇ ಆಗಿದ್ದು ಲೋಕದ ನಾಶಕ್ಕೆ ಕಾರಣ ಎಂದು ಸ್ವತಃ ಹೇಳಿಕೊಂಡಿದ್ದಾನೆ. ಅವನ ಪಾಲಿಗೆ ಮಹಾಭಾರತದಲ್ಲಿ ಬರುವ 14 ಅಕ್ಷೋಹಿಣಿ ಸೈನ್ಯದಷ್ಟು ಜನರ ಸಾವು ಸಹಜ. ಅವನ ಪಾಲಿಗೆ…
ವಿಧ: ಪುಸ್ತಕ ವಿಮರ್ಶೆ
November 21, 2020
ಪಿಂಚ್ ಆಫ್ ಪ್ರಪಂಚ ಪುಸ್ತಕವು ರಂಗಸ್ವಾಮಿ ಮೂಕನಹಳ್ಳಿ ಇವರ ಒಂಬತ್ತನೇ ಪ್ರಕಟಿತ ಪುಸ್ತಕ. ತುಮಕೂರು ಜಿಲ್ಲೆಯ ಸಿರಾದಲ್ಲಿ ಇವರ ಜನನ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿರಾ ಮತ್ತು ಬೆಂಗಳೂರಿನಲ್ಲಿ. ಇಪ್ಪತ್ತಮೂರನೆಯ ವಯಸ್ಸಿಗೆ ದುಬಾಯಿ ಪ್ರಯಾಣ. ನಂತರ ಕೈಬೀಸಿ ಕರೆದದ್ದು ಬಾರ್ಸಿಲೋನಾ. ಇಂಗ್ಲೆಂಡ್ ನ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿ. ಇದುವರೆಗೆ ಅರವತ್ತು ದೇಶಗಳ ಪ್ರಯಾಣ, ಪ್ರವಾಸ. ಆ ದೇಶಗಳ ಆರ್ಥಿಕ ಸ್ಥಿತಿಗತಿ…
ವಿಧ: ಪುಸ್ತಕ ವಿಮರ್ಶೆ
November 19, 2020
*ಡಾ. ಜಿ. ಭಾಸ್ಕರ ಮಯ್ಯ ಅವರ "1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ"*
ಡಾ. ಜಿ. ಭಾಸ್ಕರ ಮಯ್ಯ ಅವರು ಅನುವಾದಿಸಿದ ವಿಷ್ಣು ಭಟ್ಟ ಗೋಡ್ಸೆಯವರ "ನನ್ನ ಪ್ರವಾಸ" ಅಥವಾ "ಮಾಝಾ ಪ್ರವಾಸ" 2018ರಲ್ಲಿ ಮುದ್ರಣವಾದ 256 ಪುಟಗಳ ಕೃತಿ. 200 ರೂಪಾಯಿ ಬೆಲೆಯ ಕೃತಿಯನ್ನು ಅನುವಾದಕರಾದ ಭಾಸ್ಕರ ಮಯ್ಯರವರೇ ತಮ್ಮ "ಜನವಾದಿ ಪ್ರಕಾಶನ, ಗುಂಡ್ಮಿ, ಕುಂದಾಪುರ - 576226" ಮೂಲಕ ಪ್ರಕಟಿಸಿದ್ದಾರೆ.
ಮುಂಬೈನ ಕುಲಾಬಾ ಜಿಲ್ಲೆಯ ಪೇಣ ತಾಲೂಕಿನ ವರಸಯಿ…
ವಿಧ: ರುಚಿ
November 17, 2020
ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ನೀರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಆ ರುಬ್ಬಿದ ಮಿಶ್ರಣಕ್ಕೆ ಬೆರೆಸಿರಿ. ದೋಸೆಯ ಕಾವಲಿಯನ್ನು ಒಲೆಯ ಮೇಲಿಟ್ಟು ಸಣ್ಣ ಸಣ್ಣ ದೋಸೆ ಆಕಾರದಲ್ಲಿ ಈ ರುಬ್ಬಿದ ಮಿಶ್ರಣವನ್ನು ಹಾಕಿರಿ. ಬೇಕಾದಲ್ಲಿ ಕಾವಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿರಿ. ದೋಸೆಯನ್ನು…