ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ

ಮತ್ತೆ ಬಂದಿದೆ ಸ್ವಾಮಿ ವಿವೇಕಾನಂದರ ಜಯಂತಿ (೧೨ ಜನವರಿ). ಪ್ರತಿಯೊಬ್ಬರ ಆತ್ಮಕ್ಕೂ ಚೇತನ ತುಂಬಬಲ್ಲ, ಪ್ರತಿಯೊಬ್ಬರ ಬದುಕಿಗೂ ಬೆಳಕು ನೀಡಬಲ್ಲ ಅದ್ಭುತ ವ್ಯಕ್ತಿತ್ವ ಅವರದು. ಕೇವಲ ೩೯ ವರುಷ (೧೨.೧.೧೮೬೩ - ೪.೭.೧೯೦೨) ಬಾಳಿದ ಅವರ ಬದುಕಿನ ಸಾಧನೆಗಳು ಅಮೋಘ.

ಮಾನವ ಜನ್ಮ ದೊಡ್ಡದು ಎಂದು ನಂಬಿದ್ದ ಅವರು ಮಾನವ ಜನಾಂಗದ ಒಳಿತಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿದವರು. ರಾಷ್ಟ್ರದ ಹಾಗೂ ವ್ಯಕ್ತಿಗಳ ಪ್ರಗತಿ ಸಾಧನೆಗಾಗಿ ೧೮೯೭ರಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿ, ಧ್ಯೇಯಬದ್ಧ ಸನ್ಯಾಸಿಗಳ ತಂಡ ಕಟ್ಟಿ, ಮುನ್ನಡೆಸಿದ್ದು ಅವರ ದೂರಾಲೋಚನೆಯ ಉಜ್ವಲ ಉದಾಹರಣೆ.

Image

ಪ್ರಾರ್ಥನೆ ಮತ್ತು ವಿಶ್ವಾಸ

ಈ ಕಿರು ಕಥೆಯನ್ನು ನೀವು ವಾಟ್ಸಾಪ್, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಓದಿರಬಹುದು, ಆದರೆ ಈ ಕಥೆಯನ್ನು ಪ್ರತೀಬಾರಿ ಓದುವಾಗಲೂ ನಮ್ಮಲ್ಲಿ ಹೊಸದಾದ ಚೈತನ್ಯವೊಂದು ಮೂಡುತ್ತದೆ ಎನ್ನುವುದು ಸತ್ಯ. 

Image

ಕಸದ ರಾಶಿಯಿಂದ ಪಾರಾದ ಟೆಡ್ಡಿ ಕರಡಿ

“ಇಲ್ಲಿನ ಕಸದ ರಾಶಿಯನ್ನು ಒಮ್ಮೆ ದಾಟಿ ಹೋದರೆ ಸಾಕಾಗಿತ್ತು" ಎನ್ನುತ್ತಾ, ಮೂಗು ಮುಚ್ಚಿಕೊಂಡು ಆಕಾಶದಲ್ಲಿ ಮಾಯಾ ಕಿನ್ನರಿ ಹಾರಿ ಹೋಗುತ್ತಿದ್ದಳು. ಆಗ ಅವಳಿಗೆ ಆ ಕಸದ ರಾಶಿಯಿಂದ ಒಂದು ಸದ್ದು ಕೇಳಿಸಿತು - ಯಾರೋ ಅಳುತ್ತಿರುವ ಸದ್ದು.

“ಅಯ್ಯೋ, ಇದೊಂದು ಟೆಡ್ಡಿ ಕರಡಿ ಅಳುವ ಸದ್ದು. ನನ್ನಿಂದ ಏನಾದರೂ ಸಹಾಯ ಮಾಡಲಾದೀತೇ ನೋಡುತ್ತೇನೆ” ಎಂದು ಕಿನ್ನರಿ ಅತ್ತ ಹಾರಿದಳು. ಆಕೆ ಕೆಳಕ್ಕೆ ಹಾರುತ್ತಾ ಅತ್ತಿತ್ತ ನೋಡಿದಳು. ನಿಜಕ್ಕೂ ಅಲ್ಲೊಂದು ಹಳೆಯ ಟೆಡ್ಡಿ ಕರಡಿ ಕುಳಿತಿತ್ತು!ಅದು ಆಲೂಗಡ್ಡೆ ಮತ್ತು ಬಾಳೆಹಣ್ಣಿನ ಸಿಪ್ಪೆ ಇತ್ಯಾದಿ ಕಸದ ರಾಶಿಯ ಮೇಲೆ ಕುಳಿತು ಅಳುತ್ತಿತ್ತು.

Image

ನೂರೆಂಟು ಮಾತು (ಭಾಗ ೨)

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
೧೨೦.೦೦, ಮುದ್ರಣ: ೨೦೦೭

ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ‘ನೂರೆಂಟು ಮಾತು'. ಈ ಪುಸ್ತಕವು ಎರಡನೇ ಭಾಗವಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಯ ಶೈಲಿಯ ಪ್ಲಸ್ ಪಾಯಿಂಟ್ ಎಂದರೆ ಅವರ ಬರಹಗಳಲ್ಲಿ ವಿವಿಧತೆ ಇದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅವರು ಬರೆಯುವ ಬರಹಗಳಿಗೆ ಸೂಕ್ತ ದಾಖಲೆಗಳನ್ನೂ ಕೊಡುತ್ತಾರೆ.

ಹಿತನುಡಿ

  • ಒಳ್ಳೆಯವರು ಸಂತಸ ಕೊಡುತ್ತಾರೆ
  • ಕೆಟ್ಟವರು ಅನುಭವ ಕೊಡುತ್ತಾರೆ 
  • ದುಷ್ಟರು ಪಾಠ ಕಲಿಸುತ್ತಾರೆ 
  • ಉತ್ತಮರು ಸವಿನೆನಪನ್ನು ಹಂಚುತ್ತಾರೆ
  • ಹೀಗಾಗಿ ಈ ಬಾಳ ದೋಣಿ ಸಾಗಿಸಲು ಎಲ್ಲರೂ ಬೇಕು

 

ಎಲ್ಲರೂ ಬೇಕು

ಒಳ್ಳೆಯವರು ಸಂತಸ ಕೊಡುತ್ತಾರೆ.

ಕೆಟ್ಟವರು ಅನುಭವ ಕೊಡುತ್ತಾರೆ. 

ದುಷ್ಟರು ಪಾಠ ಕಲಿಸುತ್ತಾರೆ.

ಉತ್ತಮರು ಸವಿನೆನಪನ್ನು ಹಂಚುತ್ತಾರೆ,

ಹೀಗಾಗಿ ಈ ಬಾಳ ದೋಣಿ ಸಾಗಿಸಲು ಎಲ್ಲರೂ ಬೇಕು

‘ಡಿಂಡಿಮ ಕವಿ' ಶನಿ ಮಹಾದೇವಪ್ಪನವರಿಗೆ ನುಡಿನಮನ

‘ಕಮಲೇ ಕಮಲೋತ್ಪತ್ತಿ' ಎಂದು ಹೇಳುತ್ತಾ ತನ್ನ ಡಮರುಗವನ್ನು ಆಡಿಸಿ ಶಬ್ದ ಮಾಡುತ್ತಾ ಭೋಜರಾಜನ ಆಸ್ಥಾನಕ್ಕೆ ಬಂದು ಅಲ್ಲಿಯ ವಿದ್ವಾಂಸರಿಗೆ ಪಂಥ ಒಡ್ಡುವ ಡಿಂಡಿಮ ಕವಿಯ ಅಭಿನಯವನ್ನು ನೋಡಿ ಮೆಚ್ಚದವರು ಯಾರಿದ್ದಾರೆ? ಈ ದೃಶ್ಯವಿರುವುದು ‘ಕವಿರತ್ನ ಕಾಳಿದಾಸ' ಚಲನಚಿತ್ರದಲ್ಲಿ. ಅದರಲ್ಲಿ ಡಿಂಡಿಮ ಕವಿಯಾಗಿ ಅಭಿನಯಿಸಿದ ವ್ಯಕ್ತಿಯೇ ಶನಿ ಮಹಾದೇವಪ್ಪನವರು.

Image