ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ
ಮತ್ತೆ ಬಂದಿದೆ ಸ್ವಾಮಿ ವಿವೇಕಾನಂದರ ಜಯಂತಿ (೧೨ ಜನವರಿ). ಪ್ರತಿಯೊಬ್ಬರ ಆತ್ಮಕ್ಕೂ ಚೇತನ ತುಂಬಬಲ್ಲ, ಪ್ರತಿಯೊಬ್ಬರ ಬದುಕಿಗೂ ಬೆಳಕು ನೀಡಬಲ್ಲ ಅದ್ಭುತ ವ್ಯಕ್ತಿತ್ವ ಅವರದು. ಕೇವಲ ೩೯ ವರುಷ (೧೨.೧.೧೮೬೩ - ೪.೭.೧೯೦೨) ಬಾಳಿದ ಅವರ ಬದುಕಿನ ಸಾಧನೆಗಳು ಅಮೋಘ.
ಮಾನವ ಜನ್ಮ ದೊಡ್ಡದು ಎಂದು ನಂಬಿದ್ದ ಅವರು ಮಾನವ ಜನಾಂಗದ ಒಳಿತಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿದವರು. ರಾಷ್ಟ್ರದ ಹಾಗೂ ವ್ಯಕ್ತಿಗಳ ಪ್ರಗತಿ ಸಾಧನೆಗಾಗಿ ೧೮೯೭ರಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿ, ಧ್ಯೇಯಬದ್ಧ ಸನ್ಯಾಸಿಗಳ ತಂಡ ಕಟ್ಟಿ, ಮುನ್ನಡೆಸಿದ್ದು ಅವರ ದೂರಾಲೋಚನೆಯ ಉಜ್ವಲ ಉದಾಹರಣೆ.
- Read more about ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ
- Log in or register to post comments