ಮಣ್ಣಿನ ಫಲವತ್ತತೆಯನ್ನು ಉಳಿಸೋಣ ಬನ್ನಿ..!

ಡಿಸೆಂಬರ್ ೫ ವಿಶ್ವ ಮಣ್ಣಿನ ದಿನ. ೨೦೦೨ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್  ಸಾಯಿಲ್ (ಮಣ್ಣು) ಸೈನ್ ಎಂಬ ಸಂಸ್ಥೆಯು ಮೊತ್ತ ಮೊದಲಿಗೆ ಮಣ್ಣಿನ ದಿನವನ್ನು ಆಚರಿಸಿತು.

Image

ಭಾರತೀಯ ನೌಕಾಪಡೆಯ ದಿನ

ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

Image

ಸೋಮಾರಿ ಸಿಂಹದ ಪಾಡು

ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು.

ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನನ್ನೂ ಮಾಡಲು ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ಹಗಲುರಾತ್ರಿಯೆಲ್ಲ ಸೋಮಾರಿ ಸಿಂಹ ಮಲಗಲು ತಯಾರಿತ್ತು. ಯಾವಾಗಾದರೊಮ್ಮೆ ಏನಾದರೂ ತಿನ್ನಲಿಕ್ಕಾಗಿ ಎದ್ದರೆ ಸಾಕು ಎಂದು ಅದು ಹಗಲುಗನಸು ಕಾಣುತ್ತಿತ್ತು. ಆಗ, ಅಲ್ಲೊಂದು ಹೈನಾ ಓಡಿ ಹೋಯಿತು. ಅದು, "ಸೋಮಾರಿ ಸಿಂಹ, ಏಳು. ನಿನಗೆ ನೀರಿನಲ್ಲಿ ಈಜುವುದು ಬೇಡವಾಗಿದ್ದರೆ ಏಳು. ಯಾಕೆಂದರೆ ಇನ್ನೇನು ಮಳೆ ಸುರಿಯಲಿದೆ" ಎನ್ನುತ್ತಾ ಅಲ್ಲಿಂದ ದೂರ ಹೋಯಿತು.

Image

ಹಾಗಲಕಾಯಿ ತುಂಡು ಮಸಾಲಾ

Image

ಮೊದಲಿಗೆ ಲಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯ ರಸವನ್ನು ಮಾಡಿ ಇಟ್ಟುಕೊಂಡಿರಿ. ಮೆಂತ್ಯೆ, ಕೊತ್ತಂಬರಿ ಮತ್ತು ಬ್ಯಾಡಗಿ ಮೆಣಸನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿರಿ. ಹಾಗಲಕಾಯಿಯನ್ನು ವೃತ್ತಾಕಾರದಲ್ಲಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಕತ್ತರಿಸಿ ಇಟ್ಟುಕೊಂಡಿರಿ. ಒಲೆಯ ಮೇಲೆ ಬಾಣಲೆಯನ್ನು ಇರಿಸಿ ಮೊದಲೇ ಕತ್ತರಿಸಿದ ಹಾಗಲ ಕಾಯಿಯ ತುಂಡುಗಳನ್ನು ಅದಕ್ಕೆ ಹಾಕಿ.

ಬೇಕಿರುವ ಸಾಮಗ್ರಿ

ಹಾಗಲಕಾಯಿ ೨ (ಮಧ್ಯಮ ಗಾತ್ರ), ಹುಣಸೆಹುಳಿ - ಲಿಂಬೆ ಹಣ್ಣು ಗಾತ್ರದ್ದು, ಬೆಲ್ಲ - ರುಚಿಗೆ ತಕ್ಕಷ್ಟು, ಕೊತ್ತಂಬರಿ ೩ ಸಣ್ಣ ಚಮಚ, ಮೆಂತ್ಯೆ  ಅರ್ಧ ಚಮಚ, ಬ್ಯಾಡಗಿ ಮೆಣಸಿನಕಾಯಿ ೫, ಕಾಯಿ ಮೆಣಸು ೧, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು ಸೊಪ್ಪು

 

ಒಮ್ಮೆ ನಕ್ಕು ಬಿಡಿ!

ಆಫೀಸ್‌ಗೆ ಹೋದೆ. ಮುಖದಲ್ಲಿ ಇದ್ದ ಪ್ರಸನ್ನತೆ, ಗೆಲುವನ್ನು ಕಂಡು ಜ್ಯೂನಿಯರ್‌ಗಳು ಕೇಳಿದವು  - "ಏನ್ ಸಾರ್? ತುಂಬಾನೇ ಖುಷಿಯಾಗಿದ್ದೀರಿ !! ಪ್ರಮೋಷನ್ನಾ ? ಹೊಸಾ ಮೊಬೈಲ್ ತಗೊಂಡ್ರಾ ? ಹೊಸಾ ಬೈಕ್ ಬುಕ್ ಮಾಡಿದ್ರಾ ? ಲೋನ್ ಕ್ಲಿಯರ್ ಆಯ್ತಾ ? 

Image

ಬದುಕು ಬದಲಿಸಬಹುದು

ಪುಸ್ತಕದ ಲೇಖಕ/ಕವಿಯ ಹೆಸರು
ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ
ಪುಸ್ತಕದ ಬೆಲೆ
ರೂ.೧೧೦/-

ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ.

“ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ? ಎಷ್ಟು ಬದುಕನ್ನು ವ್ಯರ್ಥವಾಗಿ ಕಳೆದದ್ದಿದೆ, ಪ್ರೀತಿಸದೆ, ಬಯಸಿದ್ದನ್ನು ಮಾಡದೆ, “ಅಯ್ಯೋ ಟೈಮೇ ಇಲ್ಲ” ಎಂಬ ಸಬೂಬುಗಳನ್ನು ಮುಸುಕು ಹಾಕಿ ಮಲಗಿದ್ದಿದೆ?”

ಸಾಮಾಜಿಕ ಜಾಲತಾಣಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ...

ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ  ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಹಳ ಉಪಯೋಗವಾಗಿದೆ ಎಂಬುದನ್ನು ಗಮನಿಸಬಹುದು.

Image