ಪುಸ್ತಕದ ಲೇಖಕ/ಕವಿಯ ಹೆಸರು
ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ
ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ.
“ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ? ಎಷ್ಟು ಬದುಕನ್ನು ವ್ಯರ್ಥವಾಗಿ ಕಳೆದದ್ದಿದೆ, ಪ್ರೀತಿಸದೆ, ಬಯಸಿದ್ದನ್ನು ಮಾಡದೆ, “ಅಯ್ಯೋ ಟೈಮೇ ಇಲ್ಲ” ಎಂಬ ಸಬೂಬುಗಳನ್ನು ಮುಸುಕು ಹಾಕಿ ಮಲಗಿದ್ದಿದೆ?”