ಅಗೋಚರ ಶಕ್ತಿಗೆ....

ಶಕ್ತಿಯಿದ್ದರೆ ಬಂಗಲೆಯಲ್ಲಿ ಒಬ್ಬ, ಬಯಲಿನಲ್ಲಿ ಒಬ್ಬ ವಾಸಿಸುವುದನ್ನು ತಡೆ, ಕರುಣೆ ಇದ್ದರೆ ಪುಟ್ಟ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ತಡೆ, ಆತ್ಮವಿದ್ದರೆ ಒಬ್ಬನಿಗೆ ಭಕ್ಷ್ಯ ಭೋಜನದ ಸುಖ, ಇನ್ನೊಬ್ಬನಿಗೆ ಹಸಿವಿನ ನೋವು ತಡೆ, ಧ್ಯೆರ್ಯವಿದ್ದರೆ ನಿನ್ನದೇ ಮುಗ್ಧ ಜನರನ್ನು ಕೊಲ್ಲುವ ಭಯೋತ್ಪಾದಕರನ್ನು ತಡೆ, ಗೊತ್ತಿದ್ದರೆ ಸಾರ್ವಜನಿಕ ಹಣ ಲೂಟಿ ಹೊಡೆಯುವ ಭ್ರಷ್ಟರನ್ನು ತಡೆ,

Image

ಸ್ಟೇಟಸ್ ಕತೆಗಳು (ಭಾಗ ೧೨೨೫) - ಆಕೆ

ಅವಳು ಮರೆತಿದ್ದಾಳೆ.‌ಅಲ್ಲಾ ಮರೆತಂತೆ ನಟಿಸುತ್ತಿದ್ದಾಳೆ. ಅವಳ ಹವ್ಯಾಸವದು, ಅಕ್ಷರಗಳು ಹಾಡಿನ‌ ಸಾಲುಗಳಾಗುತ್ತಿದ್ದವು, ಮಾತುಗಳು ರಾಗಗಳನ್ನ ನುಡಿಸುತ್ತಿದ್ದವು, ಹೆಜ್ಜೆಗಳು ತಾಳಗಳನ್ನ ಅಪ್ಪಿಕೊಳ್ಳುತ್ತಿದ್ದವು, ಅವಳು ಇವೆಲ್ಲವನ್ನು ಜೀವಿಸಿದ್ದಳು ಅದರ ಜೊತೆಗೆ ಬದುಕುವ ಕನಸು‌ ಕಂಡಿದ್ದವಳು. ಆದರೆ ಕಾಲದ ಓಟದಲ್ಲಿ ಬದುಕಿನ‌ ಅನಿವಾರ್ಯತೆಯಲ್ಲಿ ಮರೆತಿದ್ದಾಳೆ. ಇಲ್ಲ ಇಲ್ಲ ಮರೆತಂತೆ ನಟಿಸುತ್ತಿದ್ದಾಳೆ.

Image

ಕರಗಿದ ಚಾಕ್ಲೇಟ್ ತೆರೆಯಿತು ಅದೃಷ್ಟದ ಬಾಗಿಲು !

ವಿಜ್ಞಾನ ಶೋಧಗಳು ಸಾಮಾನ್ಯವಾಗಿ ಆಕಸ್ಮಿಕಗಳೇ. ಆದರೆ ಅಲ್ಲಿನ ಸನ್ನಿವೇಶ ಸಂಶೋಧನೆಯಲ್ಲಿ ಪಾತ್ರ ವಹಿಸುತ್ತದೆ. ಆಗ ಎರಡನೆಯ ಮಹಾಯುದ್ಧದ ಸಮಯ. ಶತ್ರು ವಿಮಾನಗಳ ಪತ್ತೆಗೆ ರಡಾರ್ ತುಂಬಾ ಸಹಕಾರಿಯಾಗಿದ್ದುದರಿಂದ ಅದರ ಮೇಲಿನ ಸಂಶೋಧನೆ ತ್ವರಿತವಾಗಿ ನಡೆಯುತ್ತಿತ್ತು.

Image

ಬನ್ನಿ, ಹೊರಡೋಣ ಲಕ್ಷದ್ವೀಪಕ್ಕೆ…

ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದಾಗ, ಅಲ್ಲಿಯ ಕಡಲ ತೀರದ ಸೌಂದರ್ಯಕ್ಕೆ ಮಾರು ಹೋಗಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಅಲ್ಲಿಯ ಚಿತ್ರಗಳನ್ನು ಮತ್ತು ವಿಶೇಷತೆಗಳನ್ನು ಹಂಚಿಕೊಂಡಿದ್ದರು. ಅದರ ಜೊತೆಗೇ ಲಕ್ಷದ್ವೀಪಕ್ಕೆ ಪ್ರವಾಸಕ್ಕೆ ಬನ್ನಿ ಎಂದು ಕರೆಕೊಟ್ಟಿದ್ದರು.

Image

ಟ್ರಂಪ್ ಕ್ಷಣ ಚಿತ್ತ, ಕ್ಷಣ ಪಿತ್ತ

ತೆರಿಗೆ ಅಸ್ತ್ರವನ್ನು ಮುಂಡಿಟ್ಟುಕೊಂಡು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅವರ ಈ ಹೆಜ್ಜೆಯಲ್ಲಿ ಸಾಕಷ್ಟು ಗೊಂದಲಗಳೂ, ಅವೈಜ್ಞಾನಿಕ ನಿಲುವುಗಳೂ ಗೂಡು ಕಟ್ಟಿದಂತಿವೆ. ತನ್ನ ನೆರೆಯ ಕೆನಡಾ, ಮೆಕ್ಸಿಕೋವನ್ನು ಶಿಕ್ಷಿಸುವ ದೃಷ್ಟಿಯಿಂದ ಶೇ.

Image

ನ್ಯಾಯ ಮತ್ತು ಸತ್ಯ ಸಾರ್ವಕಾಲಿಕ

ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ.

Image

ಸ್ಟೇಟಸ್ ಕತೆಗಳು (ಭಾಗ ೧೨೨೪) - ಅಂತರಾಳ

ಅವಳ ನಗು ಒಂದೇ ಅವಳನ್ನ ಇಂದಿನವರೆಗೂ ಬದುಕಿಸಿದೆ. ಮುಖದ ತುಂಬಾ ನಗುವ ತುಂಬಿಕೊಂಡು ಎಲ್ಲರನ್ನೂ ಎದುರುಗೊಳ್ಳುತ್ತಾಳೆ, ಆ ನಗುವಿನ ಹಿಂದೆ ಕಣ್ಣಿನ ಒಳಗೆ ಒಂದಷ್ಟು ನೋವಿನ ಹನಿಗಳು ತಡೆಗಟ್ಟಿ ನಿಂತಿವೆ. ಪ್ರೀತಿಸಿದ ಜೀವ ಒಂದು ನೆನಪಿನ ಶಕ್ತಿ ಕಳೆದುಕೊಂಡು ಪುಟ್ಟ ಮಗುವಿನಂತೆ ಕಣ್ಣ ಮುಂದೆ ಮಲಗಿರುವಾಗ ಆಕೆ ಅದನ್ನು ಸಹಿಸಿಕೊಂಡು ನಗುತ್ತಿರುವ ಶಕ್ತಿ ಎಂತಹದು. ಈ ನೋವು ಯಾರಿಗೂ ಅರ್ಥವಾಗುತ್ತಿಲ್ಲ.

Image

ಅಂತರಿಕ್ಷ ನಡಿಗೆಯಲ್ಲೂ ದಾಖಲೆ ನಿರ್ಮಿಸಿದ ಸುನೀತಾ ವಿಲಿಯಮ್ಸ್!

"ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!" ಎಂದು ಖ್ಯಾತ ಉರ್ದು ಕವಿ ಅಲ್ಲಾಮ ಇಕ್ಬಾಲ್ ಅವರು ಹಾಡಿದ್ದರು. ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿವಿಧ ದಾಖಲೆಗಳನ್ನು ನಿರ್ಮಿಸುತ್ತಾರೆ; ಹಾಗೆಯೇ, ಅವರ ದಾಖಲೆಗಳನ್ನು ಸರಿಗಟ್ಟಲು ಹೊಸಬರು ಬರುತ್ತಾರೆ. ಆದರೆ, ಸುನೀತಾ ವಿಲಿಯಮ್ಸ್ ಅವರು ತಮ್ಮ ಹೆಸರನ್ನು ಬಾಹ್ಯಾಕಾಶದಲ್ಲಿ ಮಿನುಗುತ್ತಿರುವ ಅಗಣಿತ ತಾರೆಗಳೊಂದಿಗೆ ಬರೆದಿದ್ದಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೮೬) - ನೆಲ ಸೇವಂತಿಗೆ ಸಸ್ಯ

ಇಂದು ನಾವು  ವಿಟ್ಲದ ಸಮೀಪ ವಾಸ್ತವ್ಯ ಇರುವ ಶ್ರೀಕಾಂತ ಮತ್ತು ಮಂಜುಳರವರ ಅಡಿಕೆ ತೋಟಕ್ಕೆ ಹೋಗೋಣ. ನೀವಲ್ಲಿ ಬಳ್ಳಿಯೊಂದು ಏಕಾಂತದಲ್ಲಿ ಹಾಡುತ್ತಿರುವುದನ್ನು ಕೇಳಬಹುದು. ಆದರೆ ಅದು ತುಂಬಾ ಸೂಕ್ಷ್ಮ ವಾಗಿ ಆಲಿಸಿದರೆ ಮಾತ್ರ ಕೇಳಿಸುವುದು. 

Image