ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 11, 2025
ಜೊತೆಯಾಗಿ ಸಾಗಿದೆನಿಂದು
ಸವಿಯಾಗಿ ಬಳಸುತಲಿಂದು
ಮನದೊಳಗೆ ಸೇರುತಲಿಂದು
ಬೆಸುಗೆಯೊಳು ಕಳೆಯುತಲಿಂದು
ನನ್ನ ಸವಿಯು ಬಲ್ಲೆಯೇನು ನೀನೆಯೆಂದು
ನನ್ನ ಮನದ ಬಯಕೆಯೆಲ್ಲ ಒಲವುಯೆಂದು
ಬಾನಿನಲ್ಲಿ ಹಾರುತಲಿಂದು
ಕೈಯ ಹಿಡಿದು ಸಾಗುತಲಿಂದು
ಒಂದಾಗಿ ಬಾಳುತಲಿಂದು
ಮನದುಂಬಿ ಹಾಡುತಲಿಂದು
ಸಂತೋಷ ಹೊಂದೋಣ ನಾವುಯೆಂದು
ಸಂಸಾರ ನಡಸೋಣ ಹೀಗೆಯೆಂದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 10, 2025
ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತು
ಜೀವ ಪಾಠವ ನೀಡಿ ಸಾಗಿದೆ ನಾನೆ ನೀಡುವ ಮುತ್ತು
ಹುಟ್ಟು ಚೆಲುವೊಳು ಪಾತ್ರ ಸೋರಿತೆ ಮತ್ತು ಕರಗಿತು ಏತಕೆ
ಗಟ್ಟಿ ಕುಳವು ಸೋತು ಹೋಗಲು ಮತ್ತೆ ಕಾಡುವ ಮುತ್ತು
ಹಟ್ಟಿ ಕರುವದು ತಾಯ ಬಳಿಗದು ಹೇಗೆ ಓಡಿತು ನೋಡೆಯ
ತಟ್ಟಿ ಮೇಲಣ ಹನಿಯ ಶಬ್ದಕೆ ಕುಣಿದು ಹಾಡುವ ಮುತ್ತು
ಗಾನ ಸುಂದರ ಒಲಿದ ರಾಗವು ಇಂದು ಎಲ್ಲಿಗೆ ಹೋಯಿತೊ
ದಾನ ಮಾಡುವ ಕೈಯು ಎಲ್ಲಿದೆ ಕರೆದು ಬೇಡುವ ಮುತ್ತು
ಸೋತು ಸುಮ್ಮನೆ ಕುಳಿತೆಯಲ್ಲೊ ನನ್ನ ಒಲವಿನ ಈಶ
ಘಾತ ಜೀವನ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 09, 2025
ಚಿಂತಿಸದಿರು ಗೆಳತಿ ಹೀಗೆ
ನಲ್ಲ ಜೊತೆಗೆ ಜೊತೆಯೆ ಇರಲು
ಕೊಡವ ಹಿಡಿದು ನಡೆದೆಯಲ್ಲೆ
ಕಾಲಿಗೆಂಥ ಆಯಿತೇನೊ
ಹೊಕ್ಕ ಮುಳ್ಳ ತೆಗೆಯಲೇನೊ
ನೋವ ತಿನುತ ನಡೆದೆಯಲ್ಲೆ
ಜೀವನದ ಬದುಕಿನೊಳಗೆ
ಜೀವ ಭಾವ ಸೇರಿದಾಗ
ನೋವ ಪಡೆದು ನಡೆದೆಯಲ್ಲೆ
ಕೊಡದಿ ಜಲವು ತುಂಬಿದಾಗ
ಮುಸಿಯ ನಗುವ ಸೂಸುತಲಿ
ಗೆಲುವಿನೊಡನೆ ನಡೆದೆಯಲ್ಲೆ
ತಂಪು ಹೊತ್ತು ನೀರ ತರುತ
ಬಿರು ಬಿಸಿಲಿಗೆ ಮನೆಯ ಸೇರೆ
ಚೆಲುವ ಹೊತ್ತು ನಡೆದೆಯಲ್ಲೆ
ಮನದ ತುಂಬ ನೀನೆ ನೀರೆ
ಕೈಯ ಹಿಡಿದೆ ಬಳಿಗೆ ಬಾರೆ
ಬಾಳಿನೊಳಗೆ ನಡೆದೆಯಲ್ಲೆ
-ಹಾ ಮ ಸತೀಶ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 08, 2025
ಬುದ್ಧಿವಂತರು ನಾವು ಬುದ್ಧಿವಂತರು
ಕರಾವಳಿಯ ಜನರೇ ನಾವು ಬುದ್ಧಿವಂತರು
ಈ ಹೆಸರಂತೆ ಎಲ್ಲೆಲ್ಲೂ
ಹೆಸರುವಾಸಿ ನಾವು ಬುದ್ಧಿವಂತರು!
ಜಾತಿ ಧರ್ಮ ಪರಿವಿಲ್ಲದೆ ಬದುಕುವ ಎಲ್ಲರಿಗಿಂತಲೂ ಭಿನ್ನ ನಾವು!
ಹೌದೇ?
"ಎಂಚಿನ ಸಾವು ಮಾರೇ"
ಎಂದು ಗೊಣಗುತ್ತಾ
ನಗುವಿನಲ್ಲೇ ಎಲ್ಲವನ್ನೂ
ಮರೆತು ಬಾಳುವ ನಾವು
ಇಂದೇಕೆ ಸಾವಿನಲ್ಲಿ ಸುಖ ಕಂಡೆವು?
ಜಾತಿ, ಧರ್ಮ ಕೋಮು ದ್ವೇಷ ಇದರಲ್ಲೇ ನಾವು ಬುದ್ಧಿವಂತರು?
ರಾಜಕೀಯ ಸೋಕು ಇಲ್ಲದೆ ಬದುಕಿದ ನಾವು
ಇಂದೇಕೆ ಹೀಗಾದೆವು?
ದೈವ ದೇವರ ಭಕ್ತಿ ಇದ್ದ ನಾವು ಯಾಕೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 07, 2025
ಮನಸ್ಸಿನ ಭಾವನೆ
ಮೂಡಿದ ಸಮಯ
ಕಾಡಿದೆ ನಿನ್ನನು ಓ ಚೆಲುವೆ
ಮೌನಕೆ ಉತ್ತರ
ಮೂಡಲು ಗಳಿಗೆ
ಒಲವಿನ ಕಾಣಿಕೆ ಓ ಚೆಲುವೆ
ರಾತ್ರಿಯ ಚಂದ್ರನ
ಹಾಲಿನ ಬೆಳಕಲಿ
ಕಾಣುತಲಿದ್ದೆ ಓ ಚೆಲುವೆ
ಮುಖದಲಿ ನಗುವನು
ತೋರುತಲಿರಲು
ಸ್ವರ್ಗವೆ ಇಳಿದಿದೆ ಓ ಚೆಲುವೆ
ಸುಖದೊಳು ಕರಗಿ
ಸವಿದಿದೆ ಸವಿಯ
ತಂಪಿನ ಹೊತ್ತಲಿ ಓ ಚೆಲುವೆ
ಎದೆಯಲಿ ಕಂಡಿಹ
ನೆನಪಿನ ಕವಿತೆ
ನಿನ್ನೊಡಲೊಳಗೆ ಓ ಚೆಲುವೆ
***
ನಿಷ್ಠೆಯಿಂದ
ಕಲಿತ
ಕಲಿಕೆಗಿಂತ
ಇಂದಿನ
ದಿನಗಳಲ್ಲಿ
ವಿರೋಧಿಯ
ಹೇಳಿಕೆಯಿಂದ
ಕಲಿತ
ಕಲಿಕೆಯೇ
ಶ್ರೇಷ್ಠ
ಅನಿಸುತ್ತಿದೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 06, 2025
ಅವರಿವರ ನೋವಿಗೆ
ಸ್ಪಂದಿಸುವ ಗೆಳೆಯನೇ
ನಿನ್ನ ನೋವಿಗೆ ಓಡಿ ಬರುವರಾರಿಹರು
ಬೇಡಿ ಕಾಡಿದರೂ
ಓಡಿ ಬರಲಾರರು
ಅವರಿಗವರಾ ಕೆಲಸ ಇಹುದಂತೆ ಇಹರು
ಕಹಿ ಬೇವು ತಿನುವವಗೆ
ಸಿಹಿಯ ಪರಿಚಯವೆಲ್ಲಿ
ಬಾಳಿನೊಳು ಸವಿಮಾತ ಹೇಳುವನೇ ಅವನು
ಡಂಬಚಾರದ ಸುಳಿಗೆ
ಸಿಲುಕದೆಲೆ ಸಾಗುತಿರು
ಸಿಲುಕಿದರೆ ಕಣ್ಣೀರಾ ಮುಗಿಲ ಬಾನು
ಮನಸನ್ನು ಅರಿಯದೆಲೆ
ದ್ವೇಷವನು ಕಾರಿದರೆ
ಪ್ರೀತಿಯದು ದೊರಕುವುದೆ ನನಗೆ ನಿನಗೆ
ತತ್ವ ಪದಗಳೆ ಬೇಡ
ನೀತಿ ನಿಯಮಗಳಿಲ್ಲ
ಮತಿಗೆಟ್ಟ ನಡವಳಿಕೆ ಸುತ್ತ ಬೇಗೆ
ಬೇಕೆ ಕತ್ತಲ ಗೂಡು
ಸರಿಯಾದ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 05, 2025
ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ
ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ
ಇಂದಲ್ಲ ನಾಳೆ ಸರಿಯಾಗಬಹುದೆನ್ನುವ ಪ್ರಯತ್ನವು ಸೋತು ಹೋಯಿತೇಕೆ
ಬೇಸರದಾಳದೊಳಗಿನ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ ಗೆಳತಿ
ಚಿಂತನೆಗಳು ಚಿಂತೆಗಳೆನ್ನುವ ಆಳದ ನಡುವೆಯೆ ಪಯಣಿಸಿತ್ತಿರುವ ನಾವಿಕನಾಗಿದೆ
ಕಲ್ಪ ವಿಕಲ್ಪಗಳ ಸಂಘರ್ಷದಲ್ಲಿ ತನುವಿನಾಳದ ಪಯಣ ಮುಂದೆ ಸಾಗಲಿಲ್ಲ ಗೆಳತಿ
ಬಯಕೆಗಳೇ ಮೂಡದೆಯಿರಲು ಹೊಂಬಿಸಿಲು ಉದಯಿಸಿದರೆ ಪ್ರಯೋಜನವಿದೆಯೆ
ಹೊಂಗಿರಣಗಳ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 04, 2025
ಅವಳೆ ಇವಳು ಇವಳೆ ಅವಳು
ನನ್ನ ಮೋಹ ರಾಗಿಣಿ
ಒಲುಮೆ ಬಲುಮೆ ಚಿಲುಮೆಯರಳೆ
ಚೆಲುವ ಪಡೆದ ಮೋಹಿನಿ
ಅಂತರಂತರಂಗದೊಳಗೆ
ಮೀಟಿ ಪ್ರೇಮ ಹೂ ನಗೆ
ಬಂತು ಮನಕೆ ವೇಣುಗಾನ
ಚಿತ್ತದೊಳಗೆ ಸವಿಬಗೆ
ರೂಪವರಳಿ ತನುವು ಹೊರಳಿ
ತೀರ ಸೇರಿ ನಲಿಯಿತು
ಬಾಳ ಪಯಣದೊಳಗೆ ಭಾವ
ವಿಶ್ವರೂಪ ತಳೆಯಿತು
ಎಂಥಯೆಂಥ ಪ್ರೀತಿಯೆಂಥ
ತಾರೆಯಂತೆ ಮಿನುಗಿದೆ
ಬೆಸುಗೆಯೊಳಗೆ ಹೊಸತು ಜೀವ
ಪೂರ್ಣ ರೂಪ ಪಡೆದಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 03, 2025
ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ
ಸೋಲು ಇದೆ, ಕೂಡಲಿಲ್ಲ ನೋಡಿಯೇ ಇದ್ದ
ಬಾಳು ಕರಗದೇ, ಮತ್ಯಾಕೆ ನಡೆದು ಹೋದ
ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ
ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ
ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ
ನೂಲು ಹರಿಯಲಿಲ್ಲ, ಬಟ್ಟೆಗೆ ಸಿಟ್ಟದು ಬಾರದೆ
ಶಾಲು ಕೊಡಲಿಲ್ಲ ,ಹಾಗೆಂದು ಕಾಡಿಯೇ ಇದ್ದ
ಎಷ್ಟು ಹೊರಲಿಲ್ಲ ,ಸತ್ತವರು ಬರುವರೆ ಈಶಾ
ಕಷ್ಟ ಸಾಯಲಿಲ್ಲ ,ಬದುಕಲ್ಲಿ ಬಾಡಿಯೇ ಇದ್ದ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 02, 2025
ನಾನು ಕವಿಯಲ್ಲ!!...
ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ
ಸಂತ್ರಸ್ತ ಮನಸುಗಳ ಸಂತೈಸಲಿಲ್ಲ
ಆಕ್ರೋಶದ ಧ್ವನಿಗಳಿಗೆ
ಗಂಟಲು ಗೂಡಿಸಲಿಲ್ಲ
ನಾನೇನೂ ಮಾಡಿಲ್ಲ
ನಾನು ಕವಿಯಲ್ಲ!..
ಸರ್ಕಾರ ಸರ್ವಾಧಿಕಾರವಾದಾಗ
ತೆಪ್ಪಗೆ ಬಾಯಿಮುಚ್ಚಿಕೊಂಡಿದ್ದವನಿಗೆ
ಜನ ಜೀವನ ಶೈಲಿಯಲ್ಲಿ
ಕ್ರಾಂತಿ ತರಲಾಗಗಿಲ್ಲ..
ಧ್ವನಿಯೆತ್ತಿ ಪ್ರಶ್ನಿಸುವ
ಗುಂಡಿಗೆಯೇ ಇಲ್ಲದವನಿಗೆ
ನಿಷ್ಠುರವಾಗಿ ಮಾತನಾಡಿ
ವ್ಯವಸ್ಥೆಯನು ಎಚ್ಚರಿಸಲಾಗಲಿಲ್ಲ..
ಕ್ರೌರ್ಯದಾ ಕೋಟೆಯನು
ಬೇಧಿಸಲಾಗದವನಿಗೆ
ಎದೆಕೊಟ್ಟು ನಿಲ್ಲಲು…