ಕವನಗಳು

ವಿಧ: ಕವನ
April 27, 2024
ಸ್ಮಾರಕ  ಈ ಮನುಜ- ಇರುವಾಗ ಬದ್ಧತೆ ಹೋರಾಟ ತರ್ಕಗಳ ತಾರಕ...   ಅವನು  ಅಳಿದ ಮೇಲೆಯೇ- ಅವನಿಗೊಂದು ಮೌನದ ಸ್ಮಾರಕ! *** ಕೆರೆಯ ನೀರನು.... ಜಯಲಲಿತಾ ಆಭರಣ ಪಡೆಯಲು ತಮಿಳುನಾಡು ಸರ್ಕಾರ ಸೂಚನೆಯ ನೋಡಿರೋ...   ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದ ರಾಜಕಾರಣಿಗಳಿವರು ಕಾಣಿರೊ! *** ಮಾನವೀಯತೆ  ಕಾನೂನಿನಂತೆ ನಡೆಯುತ್ತೇನೆ ಎಂದು ಎದೆಯುಬ್ಬಿಸಿ ಹೋಗದಿರಿ ಕೈಕೊಟ್ಟುಬಿಡುತ್ತೆ...   ಮಾನವೀಯತೆಯ ನೆಲೆಗಟ್ಟಿನ ಮೇಲೇ ನಡೆದುಬಿಡಿ- ಇತಿಹಾಸ ನೆನಪಿಟ್ಟುಕೊಳ್ಳುತ್ತೆ! *** ಲೂಟೀ-ಪಲ್ಟೀ  ಎಲ್ಲ…
ವಿಧ: ಕವನ
April 26, 2024
ಕರಿಮಣಿಯ ಮಾಲಿಕನು ನೀನಲ್ಲ ಎನ್ನದಿರು ಇರಬಹುದು ನಮ್ಮೊಳಗೆ ಕಲಹ ನೂರು ಪ್ರೇಮದಲಿ ಕಲಹಗಳು ಅತಿ ಸಹಜ ಎನ್ನುವರು ಸಂಯಮವು ಬೇಕೀಗ ಒಂದು ಚೂರು   ಸಂಸಾರ ಎಂದಾಗ ಮಾತೊಂದು ಬರಬಹುದು ಅದನೊಂದು ವಿಪರೀತ ಎಣಿಸಬಹುದೆ? ಅನುರಾಗ ತುಂಬಿರಲು ಒಂದಿಷ್ಟು ಜೊತೆಯಲ್ಲಿ ಕಳೆದಾಗ ಮುನಿಸೆಲ್ಲ ಮರೆಯದಿಹುದೆ   ನಿನಗಾಗಿ ನಾನೆಂದು ನನಗಾಗಿ ನೀನೆಂದು ನೀನುಡಿದ ಮಾತುಗಳು ಮರೆತು ಹೋಯ್ತೆ ಸತಿ ಪತಿಯ ಬಂಧವದು ಬೆಸೆಯುವುದು ಸಗ್ಗದಲಿ ಒಂದಾಗಿ ಬರೆಯೋಣ ಬಾಳ ಕವಿತೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ:…
ವಿಧ: ಕವನ
April 25, 2024
೧. ಮೊತ್ತವನು ಕಳೆದಾಗ ಶೇಷ ಉಳಿಯಿತು ಚಿತ್ತವದು ಸವೆದಾಗ ಕ್ಲೇಷ ಉಳಿಯಿತು   ಬೆತ್ತದೊಳಗಿನ ಮಾಯೆಯು ಹೇಳು ಎಲ್ಲಿದೆ ಬತ್ತದಿರುವ ಮನದಲ್ಲಿ ದೋಷ ಉಳಿಯಿತು   ನರಕದಲ್ಲಿಯ ನಿಲ್ದಾಣದಲಿ ಇಹುದೆ ಪ್ರೀತಿಯು ಮತ್ತೇರದಿರುವ ಬಾಹುವಿನಲ್ಲಿ ವೇಷ ಉಳಿಯಿತು   ನಿದ್ರೆಯಿರದ ರಾತ್ರಿಯಲ್ಲಿ ಕಾಣದೇ ಮೋಹವು ಕಮಲದಳದ ನಡುವೆಯೇ ತೋಷ ಉಳಿಯಿತು   ಸಂಪತ್ತಿನೊಳಗಿನ ಬಯಕೆಯು ಬೇಕೇನು ಈಶಾ ಕರಗದಿಹ ಮೌಲ್ಯದೊಳಗೆ ಘೋಷ ಉಳಿಯಿತು *** ೨. ಮೋಹ ಎನ್ನುವುದೇ ಭ್ರಮೆಯಂತಾಗಿದೆ  ಗೆಳತಿ ಪಾರದರ್ಶಕ ವ್ಯವಸ್ಥೆ ಸೋಲುವಂತಾಗಿದೆ…
ವಿಧ: ಕವನ
April 24, 2024
ಅಡಿಯನು ಮೆಲ್ಲಗೆ ಇಡುತಿರು ಪ್ರಿಯತಮೆ ದಡವದು ಕೊಂಚ ದೂರವಿದೆ ಹಿಡಿದಿರು ಕರವನು ಬಿಡೆ ನಾ ಜಾರಲು ಕೊಡುವೆನು ವಚನ ನಾ ನಿನಗೆ   ಬಾಳಿನ ಪಯಣದಿ ಬೀಳದೆ ಸಾಗಲು ಜೋಳಿಗೆ ತುಂಬ ಪ್ರೀತಿಯಿದೆ ತಾಳುವ ಭಾವವು ಬಾಳಿಗೆ ಬೇಕಿದೆ ತೋಳನು ಚಾಚಿ ನಿಂತಿರುವೆ   ಒಪ್ಪದಿ ಬಾಚಿದ ಕಪ್ಪಿನ ಕೂದಲು ತಪ್ಪಿಸಿಕೊಂಡ ಮುಂಗುರುಳು ಒಪ್ಪಿದ ಮನಗಳು ತಪ್ಪದೆ ಬೆರೆವವು ತುಪ್ಪದ ಸವಿಯು ಪ್ರೇಮದೊಳು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ ವಾಟ್ಸಾಪ್) 
ವಿಧ: ಕವನ
April 23, 2024
ಪುಸ್ತಕವ ತೆರೆದು ಓದುತ ನಲಿಯುತಲಿ ಕಲಿತ ವಿಷಯವು ಮಸ್ತಕದಲಿರಲಿ ಅಜ್ಞಾನವದು ಮನದಿಂದ ದೂರವಾಗುತಲಿ ಪುಸ್ತಕದ ಜ್ಞಾನ ಜಲದಂತೆ ಹರಿದು ಬರಲಿ   ಮೊದಲು ತಲೆಯ ತಗ್ಗಿಸಿ ಓದು ಮತ್ತೆ ಲೋಕದೊಳು ತಲೆಯೆತ್ತಿ ಬಾಳು  ಸನ್ಮಾನ ಗೌರವಗಳು ತಾನಾಗಿ ಬರುವುದು ಬದುಕು ಬಂಗಾರವಾಗುವುದು ಕೇಳು   *ವಿಶ್ವ ಪುಸ್ತಕದ ದಿನ* ಜೈಕಾರ ಹಾಕಿನ್ನು ಕೊಂಡು ಓದುವೆ ಪುಸ್ತಕವ ಅನುದಿನವುಯೆನ್ನು ಪುಸ್ತಕದ ಕೃತಿಸ್ವಾಮ್ಯ ಇರಲಿ ಎಂದೆಂದೂ  ಪ್ರಕಟಿಸಿದ ಪುಸ್ತಕಕೆ ಮನ್ನಣೆ ಸಿಗಲೆಂದು   ದೇಶ ಸುತ್ತುತಲೆ ಪುಸ್ತಕವ ನೋಡು ಜ್ಞಾನ…
ವಿಧ: ಕವನ
April 22, 2024
ಕೊರಗಿ ಕೊರಗಿ ಮನದೆ ಶಶಿಯು ಸೊರಗಿ ಸೊರಗಿ ಕೊಂಚ ಕೊಂಚ ಕರಗಿ ಮುಗಿದು ಕೊನೆಯಲೊಮ್ಮೆ ಶೂನ್ಯ ತಲಪಿದ ಮರುಗಿದಂಥ ಚುಕ್ಕಿ ತಾರೆ ಕರೆದು ಶಶಿಯ ನೋವ ಕಳೆಯೆ ಮೆರೆಯೆ ಮತ್ತೆ ಗುಂಡಗಾದ ಬೆಳಕು ಚೆಲ್ಲಿದ   ಇರುಳ ಲಾಂದ್ರ ಚುಕ್ಕಿ ಚಂದ್ರ ಮರಳೆ ತನ್ನ ಕಾರ್ಯವೆಸಗೆ ಧರಣಿಯಲ್ಲಿ ಮತ್ತೆ ಬಂತು ಸೆಳೆವ ಹುಣ್ಣಿಮೆ ಮರೆಯನೇನು ಹಳೆಯ ಚಾಳಿ ಕೊರಗಿನಲ್ಲಿ ಸವೆಯತೊಡಗಿ ಕರಗಿ ಶೂನ್ಯವಾಗೊ ಚಟದ ಪುನರಾವರ್ತನೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ:  ಅಂತರ್ಜಾಲ 
ವಿಧ: ಕವನ
April 21, 2024
ಮತ್ತೆ ಮತ್ತೇ ಅಲ್ಲೆ ನಿಂತು ಮುಗುಳು ನಗೆಯಾ ಚೆಲ್ಲುತ ಹಿಂದೆ ತಿರುಗೀ ನನ್ನ ನೋಡಿ ಕಣ್ಣು ಕಣ್ಣೂ ಬೆರೆಸುತ   ನನ್ನಲೇನೋ ಬೆಂಕಿ ಹಚ್ಚಿ ದೂರ ಹೋಗೀ ಕುಳಿತೆಯಾ ಒಳಗೆ ಸುಡುತಾ ಬೇಯಲೀಗ ನಗುತ ಸುತ್ತಾ ಸುಳಿದೆಯಾ   ರವಿಯ ಕಿರಣಾ ರಾಶಿಯೊಳಗೆ ಕೇಶರಾಶೀ ಸೇರುತ ಅದರ ರಶ್ಮೀ ನನ್ನ ಮೈಗೆ ತಾಗಿ ಮುತ್ತಾ ಒತ್ತುತ   ನೀನು ಬರದೇ ಇರುಳನಿಲ್ಲಿ ನಾನು ಹೇಗೇ ಕಳೆಯಲಿ ಚಂದ್ರ ತಾರೇ ಚೆಲುವಿನಲ್ಲಿ ನಮ್ಮ ಪಯಣಾ ಸಾಗಲಿ *** ಗಝಲ್ ಬದುಕಿನಲ್ಲಿ ಸವಿಯನು ತಿನಿಸಲೇ ಗೆಳತಿ ಜೀವನದಲ್ಲಿ ಪ್ರೇಮವ ಕುಣಿಸಲೇ ಗೆಳತಿ  …
ವಿಧ: ಕವನ
April 20, 2024
ಹಸಿರಿನ ಗಿಡಮರ ನಶಿಸಲು ತೊಡಗಿವೆ ಬಿಸಿಲಿನ ತಾಪ ಮಿತಿಮೀರಿ ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ ಮುಸುಕಿದೆ ಚಿಂತೆ ಬಾಯಾರಿ   ಮಾತಲಿ ನುಡಿವರು ರೈತಗೆ ಬೆಂಬಲ ಕಾತರದಿಂದ ಕಾದಿಹನು ಭೂತದ ಬಾಯಲಿ ಗೀತೆಯ ಕೇಳುತ ಸೋತಿಹ ಕೃಷಿಕ ನೊಂದಿಹನು   ಮೋಡವು ಮಳೆಯನು ನೀಡದೆ ನಡೆದಿರೆ ಕಾಡಿದೆ ಬುವಿಯ ನೀರಿರದೆ ಮೋಡಿಯ ಮಾತಿಗೆ ಹಾಡಿತು ಹೃದಯವು ತೋಡಿತು ಗುಂಡಿ ಅರಿವಿರದೆ   ಕೃಷಿಕನ ಬಾಳಲಿ ಖುಷಿಯದು ಮೂಡಲಿ ನೊಸಲಲಿ ನೆರಿಗೆ ಬರದಿರಲಿ ಕೆಸರಲಿ ಕರಗಳ ಬೆಸೆಯುವ ರೈತನ ಮೊಸರಿನ ತಟ್ಟೆ ತುಂಬಿರಲಿ||   -…
ವಿಧ: ಕವನ
April 19, 2024
ಈಟಿನ ಗಿಡವಿದು ಚಂದದಿ ಚಿಗುರಿದೆ ಸಾಟಿಯು ಇಲ್ಲದೆ ಸೊಗಸಾಗಿ ತೋಟದಿ ಬೆಳೆಯುವ ಗಿಡಕಿದು ಪೋಷಣೆ ಕಾಟವ ನೀಡದು ಕಳೆಯಾಗಿ   ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ ನಾಟಿದರಾಯಿತು ಬೆಳೆಯುವುದು ಕೋಟೆಗೆ ಬೇಲಿಯ ರೂಪದಿ ಬೆಳೆದರೆ ದಾಟಲು ಬಿಡದಿಹ ಭದ್ರತೆಯು   ಮಳೆಯಲಿ ದೊರೆಯುವ ನೀರನು ಬಳಸುತ ಬೆಳೆವುದು ತಾನೇ ಚಂದದಲಿ ಬೆಳೆಗಳ ಗಿಡಕಿದು ಉತ್ತಮ ಗೊಬ್ಬರ ಕೊಳೆತಿಹ ಈ ಗಿಡದೆಲೆಗಳಲಿ   ಸಾಕುವ ಸಲಹುವ ಪ್ರೀತಿಯ ಬಯಸದು ಸಾಕೆನುವಷ್ಟರ ಹಸಿರಿಹುದು ಬೇಕಿಹ ಸತ್ವವ ತಾನೇ ಪಡೆವುದು ಶೋಕವ ತೋರದು ಬಸವಳಿದು||   -…
ವಿಧ: ಕವನ
April 18, 2024
ಸೋತಿರುವ ಮುಖದಲ್ಲಿ  ಮಂದಹಾಸ ಮೂಡುವುದೆ ಜಗದ ನಿಯಮಗಳರಿವು ತಿಳಿಯುವುದೇ ಹೇಳು ಮದನ ಮೋರೆಯು ಇಲ್ಲ ಸುಖದ ನನಸದು ವಿಷವೆ ಕನಸ ಗೋಪುರದೊಳಗೆ  ಬಾಳುವೆಯೇ ಹೇಳು   ಹುಟ್ಟಿದಾಕ್ಷಣ ನಗುವು ಸತ್ತಾಗ ಅಳುವೆಲ್ಲ ಕಿತ್ತು ತಿನ್ನುವ ನೋವು ಹೃದಯದಲೇ ಹೇಳು ಬಾಲ್ಯವನು ಕಳೆಯುತಲೆ ಯೌವ್ವನದ ಮೋಹದಲಿ ಮುದ್ದಾದ ಪ್ರಿಯತಮನ ಪಡೆಯುವೆನೇ ಹೇಳು   ತಿರುಗಾಟ ಹುಡುಕಾಟ ನಡೆಯುತಿರೆ ಶನಿಕಾಟ ಜೊತೆಗೆ ಇರುವರ ಕಾಟ ಬದುಕುವೆನೇ ಹೇಳು ಶಿಖರ ದಾಟಿದ ಸಾಲ ತನುಮನವ ಬಂಧಿಸಿರೆ ಚಿತ್ತ ಶಾಂತಿಯು ಹೋಗೆ ಮೌನವಿದೆಯೇ ಹೇಳು  …