ಕವನಗಳು

ವಿಧ: ಕವನ
March 18, 2024
ದೇವ ಕೊಟ್ಟ ನಿನ್ನ ನಗುವ ಹಂಚಿ ಹೋದೆ ಎಲ್ಲೆಡೆ ಕೊನೆಗೆ ಬಿಟ್ಟು ನೀನು ಅಳುವ ಉಳಿಸಿ ಹೋದೆ ನಮ್ಮೆಡೆ   ಗಾಢ ನಿದ್ರೆಯಲ್ಲಿ ಜಾರಿ ಮಲಗಿದ್ದೆ ಕೆ ಸುಮ್ಮನೆ ಕೂಗಿ ಅತ್ತ ರೂನು ಬಾರಿ ಏಳದಾದೆ ಏಕೆ ಗಮ್ಮನೆ   ಬಿಟ್ಟು ಹೋಗುವಂತ ಕೆಲಸ ಅಂತದೇನು ಉಳಿದಿತ್ತು ಬೆಟ್ಟು ಮಾಡಿ ತಿಳಿಸಿದ್ರೆ ಅರಸ ಕ್ಷಣದಲ್ಲೇನೇ ಮುಗಿತಿತ್ತು   ಅಪ್ಪಿಕೊಂಡು ಜನಕೆ ನೀನು ಹಂಚಿ ಹೋದೆ ಪ್ರೀತಿಯ ತಪ್ಪಿ ಕೂಡ ಜನರು ನಿನ್ನ ಮರೆವು ದುಂಟೆ ನೀತಿಯ.  (ಪುನೀತ್ ರಾಜಕುಮಾರ್ ಜನ್ಮದಿನದ ನೆನಪಿನಲ್ಲಿ) -ಕೆ. ವಾಣಿ, ಚನ್ನರಾಯಪಟ್ಟಣ…
ವಿಧ: ಕವನ
March 17, 2024
ಜಗದ ಒಡೆಯನೆ ರಾಮಚಂದಿರ ಸಿದ್ಧಗೊಂಡಿದೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಕ್ಷಣವು ಸುಂದರ ನೋಡಿ ಧನ್ಯತೆ ಪಡೆವ ಕಾತರ   ನೆಲೆಸಿ ಭಕ್ತರ ಹೃದಯ ಮಂದಿರ ಕೇಳಿ ಬರುತಿದೆ ನಾಮದಿಂಚರ ರಾಮ ನಾಮದ ಘೋಷ ಸುಸ್ವರ ಮೇರೆ ಮೀರಿದ ಪುಳಕದಾತುರ   ಎನಿತು ಪುಣ್ಯವ ಪಡೆದ ದಶರಥ ಆಯ್ತು ಪಾವನ ನಮ್ಮ ಭಾರತ ನಾಮ ನುಡಿಯಲಿ ಮನವು ಸಂತತ ನಿನ್ನ ಸೇವೆಗೆ ಜನ್ಮ ಸೀಮಿತ   ಮಾತೆ ಸೀತೆಯ ಕದ್ದ ರಾವಣ ಅವನ ಅಂತ್ಯಕೆ ಆಯ್ತು ಕಾರಣ ಕಳುಹಿ ಲಂಕೆಗೆ ವೀರ ಹನುಮನ ಮಾಡಿ ಕಡಲಿಗೆ ಸೇತು ಬಂಧನ   ಜೊತೆಯಲಿದ್ದನು ಅನುಜ ಲಕ್ಷ್ನಣ ಲಂಕೆ…
ವಿಧ: ಕವನ
March 16, 2024
ಬೆವರಿನ ಹನಿಗಳು ಮೂಡಿತೆ ತನುವಲಿ ಇನಿಯನ ಸರಸದ ದೆಸೆಯಿಂದ ನಿನ್ನಯ ಸುಂದರ ನಗುವನು ನೋಡುಲು ಮನದಲಿ ಉಕ್ಕಿದೆ ಆನಂದ   ಗಿಡದಲಿ ಅರಳಿದ ಹೂವಿನ ಸೊಬಗಿದು ನೋಡಲು ಕಣ್ಣಿಗೆ ಬಲು ಚಂದ ಹೂವಿನ ಎದೆಯಲಿ ತುಂಬಿದ ಜೇನಿದೆ ದುಂಬಿಗೆ ಔತಣ ಮಕರಂದ   ಘಮಘಮ ಪರಿಮಳ ಹೊಮ್ಮುತಲಿರುವುದು ಎಲ್ಲರ ತನ್ನೆಡೆ ಸೆಳೆಯುತಿದೆ ಸಂತಸ ಸಂಭ್ರಮಗೊಂಡಿಹ ಮನವಿದು ಮೌನದೆ ಗಾನವ ಹಾಡುತಿದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 15, 2024
ಹಳದಿಯ ಕದವನು ಮೆಲ್ಲಗೆ ಸರಿಸುತ ಇಣುಕುವ ಸುಂದರಿ ನೀನ್ಯಾರೆ ನಲ್ಲನು ಬರುವನೆ ಸೇರಲು ನಿನ್ನನು ಲಜ್ಜೆಯ ತೊರೆಯುತ ನೀ ಬಾರೆ   ಬಿರಿದಿಹ ಕ್ಷಣದಲೆ ಸರಸದ ಬಯಕೆಯೆ ಏತಕೆ ಈತರ ವೈಯಾರ ಕೊಂಚವೆ ಸೈರಿಸು ಆತುರ ಸಲ್ಲದು ಅರಸುತ ಬರುವನು ಸರದಾರ   ನೆತ್ತರ ಕೆಂಪಿನ ಬಣ್ಣದ ಚೆಲುವೆಯೆ ಚಂದಕೆ ಸೋತೆನು ವೈಯಾರಿ ನಿನ್ನಲಿ ತುಂಬಿದ ಜೇನನು ಹೀರಲು ದುಂಬಿಯು ಬರುವುದು ಬಾಯಾರಿ   ಹಸಿರಿನ ಚಂದದ ಗಿಡದಲಿ ಅರಳಿದೆ ಸುಂದರ ಹೂವಿದು ದಾಸ್ವಾಳ ಹೂವಿನ ಎದೆಯಲಿ ಮೆಲ್ಲಗೆ ಇಣುಕಿದೆ ಕೆಂಪಿನ ಬಣ್ಣದ ಮಕರಂದ|| -ಪೆರ್ಮುಖ…
ವಿಧ: ಕವನ
March 14, 2024
  ರಾಜಕೀಯ ಹೊಂದಾಣಿಕೆ  ಈ ರಾಜಕೀಯದಲ್ಲಿ ಕಾರ್ಯಾಭಿಲಾಶೆಗೆ ಒಂದಾದವರು- ಎಂದೂ ಹಾಲೂ-ಜೇನಾಗಿ ಬೆರೆಯದ ಚಾಣಾಕ್ಷರು...   ಅವರು ಬೆರೆತದ್ದು ನೀರು-ಸೀಮೇಎಣ್ಣೆಯಂತೆ; ಬೇಡವೆನಿಸಿದಾಗ ಶೋಧಿಸಿ ಬೇರೆಯಾಗುವ ಬುದ್ಧಿವಂತರು! *** ಪ್ರಜಾಪ್ರಭುತ್ವದ ಮೌಲ್ಯ  ನಮ್ಮದು ಮೌಲ್ಯಯುತ ಪ್ರಜಾಪ್ರಭುತ್ವ- ಇಲ್ಲಿ ಬರೀ ಅಧಿಕಾರಕಾಗಿ ಸಾಫ್ಟ್ ಕಚ್ಛಾಟ...   ಮಿಲಿಟರೀ ಆಡಳಿತದ ರಾಷ್ಟ್ರಗಳನು ನೋಡಿ- ಅಲ್ಲಿ ಅಧಿಕಾರಕಾಗಿ ಕ್ರೂರ ಕೊಚ್ಛಾಟ! *** ಭೂತ-ಪ್ರೇತ.... ಆ ಎಳೆ ಮಗುವನ್ನು ಕರುಣೆಯಿಲ್ಲದೆ, ಕೊಂದದ್ದು ಆ…
ವಿಧ: ಕವನ
March 13, 2024
ತೇಗುತಲಿರುವಗೆ ಮೃಷ್ಟಾನ್ನ ಹಸಿದವಗಿಲ್ಲ ಭಿಕ್ಷಾನ್ನ ಗಳಿಕೆ ಸಿರಿವಂತರಿಗೆ  ಸೋರದ ಮಾಳಿಗೆ   ತೂತುಬಿದ್ದ ಗುಡಿಸಲು ಮಳೆಗೆ ಸೋರಲು  ದುರ್ಬಲಗೆ ಚಳಿ  ಸಿರಿವಂತಗೆ ಓಕುಳಿ   ದೀಪವಿರದೆ ಕತ್ತಲು ಕಾಣದ ಕಣ್ಣೀರು ಮಿನುಗುವ ಬೆಳಕು ಕಿರುಚಾಟ ಮೋಜು   ದೇಹದ ಕಲೆಗಳು ಜೀತದ ಕುರುಹು ಒಡವೆ ಆಭರಣ ಒಡೆಯನ ಮೆರಗು..   -ನಿರಂಜನ ಕೆ ನಾಯಕ, ಮಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
March 12, 2024
ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ   ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ?   ಕೃಷ್ಣನು ಜೀಕಲು ಬಯಸಿಹನೇನು ಚಂದಿರನಾದನೆ ಉಯ್ಯಾಲೆ ಲೋಕದ ಸೂತ್ರವ ಹಿಡಿದಿಹ ದೇವನು ಕಾಣುವುದೆಲ್ಲವು ಹರಿಲೀಲೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಶ್ರೀ ಸತೀಶ್ ಎಲೆಸಾರರವರ ವಾಲ್ನಿಂದ) 
ವಿಧ: ಕವನ
March 11, 2024
೧.  ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯಾ ಗೆಳತಿ ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯಾ ಗೆಳತಿ   ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ  ಮೈಮನಗಳಲ್ಲಿಯ ಮಧುರವಾಗಿಹ ಭಾವನೆಗಳ ಒಲವಿನೊಳಗೆ ಇರಲಾರೆಯಾ ಗೆಳತಿ   ಪ್ರೇಮ ಪೂಜಾರಿಯ ಹೃದಯದೊಳಗೆ ಸವಿಯು ಇರುವುದನು ಅನುಭವಿಸಿದೆಯೇನು ಗೆಳತಿ ಬದುಕೊಳು ಛಲವಿದೆಯೆಂದಾದಲ್ಲಿ ಹೊಂಗನಸುಗಳ ನಡುವೆಯೇ ಅರಳಲಾರೆಯಾ ಗೆಳತಿ   ಸುಂದರವೆನಿಸುವ ಕೆಂಪಗಿನ ಗುಲಾಬಿಯಲ್ಲಿರುವ…
ವಿಧ: ಕವನ
March 10, 2024
ದೂರನು ತಂದರು ನಾರೀ ಮಣಿಗಳು ಕೇಳುತ ಸುಮ್ಮನೆ ಹೇಗಿರಲಿ ಅವರುಗಳೆದುರಲಿ ನಿನ್ನನು ಬೈದೆನು ಮುನಿಸನು ಕಳೆಯುವ ನಿಟ್ಟಿನಲಿ   ನನ್ನಯ ಮುದ್ದಿನ ಕಂದನ ಜರೆವೆನೆ ಅರಿಯೆಯ ಮಾತೆಯ ಮನಸನ್ನು ಮುನಿಸನು ತೊರೆಯುತ ನಸುನಗು ಹೊಮ್ಮಲಿ ಈತರ ಕೋಪವು ಸಾಕಿನ್ನು   ಮಡಿಲಲಿ ಕೂರಿಸಿ ಮುದ್ದಿಸಿ ನಿನ್ನನು ನೀಡುವೆ ಸುಮಧುರ ನವನೀತ ಕೂತಿರು ಇಲ್ಲಿಯೆ ಅಲ್ಲಿಹ ಗುಮ್ಮನು ಬರುವನು ಮಕ್ಕಳ ಹಿಡಿವಾತ   ಅಣ್ಣನ ಜೊತೆಯಲಿ ಆಡುತ ಬಳಲಿದೆ ಎಲ್ಲಿಗೆ ಹೋದನು ಬಲರಾಮ ಇಬ್ಬರು ಜೊತೆಯಲಿ ಬೆಣ್ಣೆಯ ಮೆಲ್ಲಿರಿ ಸುಮ್ಮನೆ ಕುಳಿತಿರಿ…
ವಿಧ: ಕವನ
March 09, 2024
ಎಂಥ ಚಂದ ಕ್ಷೇತ್ರವಿಲ್ಲಿ ಎನಿತು ಸುಂದರ ಮರೆತು ಹೋದೆ ನನ್ನ ನಾನೆ ಶಿಶಿಲೇಶ್ವರ||ಪ||   ಪುಣ್ಯನಾಡು ಹರನು ಇಲ್ಲಿ ಆಗಿ ಉದ್ಭವ ನಂಬಿದವರ ಬಿಡದೆ ಪೊರೆವ ಶಿಶಿಲೇಶ್ವರ ಭಕ್ತಿಯಲ್ಲಿ ಬರುವ ಮಂದಿ ಅರುಹೆ ಕಷ್ಟವ ಕಳೆದುಬಿಡುವ ಒಲವಿನಿಂದ ದೇವ ಈಶ್ವರ||   ಕಪಿಲ ನದಿಗೆ ತಾಗಿದಂತೆ ದಿವ್ಯ ದೇಗುಲ ಗುಡಿಯ ಸುತ್ತ ಹಸಿರು ಸಿರಿಯ ಭವ್ಯ ವರ್ತುಲ ಮತ್ಸ್ಯ ತೀರ್ಥ ಮತ್ಸ್ಯ ರಾಶಿ ಮನವ ಸೆಳೆವುದು ತಿನಿಸು ಕೊಡಲು ತಿನ್ನಲದನು ನೃತ್ಯಗೈವುದು||   ಕಾಣುತಿಹುದು ಗುಡ್ಡ ಬೆಟ್ಟ ಸೆಳೆದು ಮೈಮನ ಬೆಟ್ಟವನ್ನು…