ನೋವು ತುಂಬಿದ ಬದುಕಿಂದು ಕನಸುಗಳ ಕಟ್ಟುವುದೇ ಗೆಳೆಯಾ
ಸಾವುಗಳೆ ಕಂಡಿರುವ ಬಾಳಿನಲ್ಲಿ ನನಸುಗಳು ಹುಟ್ಟುವುದೇ ಗೆಳೆಯಾ
ಉಪ್ಪರಿಗೆ ಸಹವಾಸ ಸಾಕಾಯ್ತೊ ಕಾರಣವು ಸರಿಯಿರದೊ ಏನೊ
ತನುವೊಳಗೆ ಶೀಲವೇ ಕೈಜಾರುತ ಬಾಳನ್ನು ಮೆಟ್ಟುವುದೇ ಗೆಳೆಯಾ
ಮಾತುಗಳು ಇಲ್ಲದೆ ಮೌನದಲಿ ದೂರದಲ್ಲೇ ನಡೆದವನು ಸಖನೇನು
ಊಟಕ್ಕೆ ಇಲ್ಲದಿರುವ ಹಣ್ಣುಗಳು ದೇಹವನ್ನು ಮುಟ್ಟುವುದೇ ಗೆಳೆಯಾ
ಬೆಸೆದಿಹ ಬಾಹುಗಳಲ್ಲಿಯ ಶಕ್ತಿ ಉಡುಗಿರುವ ಉಡದಂತೆ ಕಾಣುತ್ತಿದೆ
ಕೊರಳನ್ನು ತಬ್ಬುವ ಬಿಸಿಯುಸಿರು ಮತ್ತೊಮ್ಮೆ ತಟ್ಟುವುದೇ…
ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 31, 2025
ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ
ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಕನಸುಗಳೇ ಬಾಳಿನಲಿ ಬೀಳದೆ ಸವಿಯನ್ನು ಉಣ್ಣುವುದೆ ಬೇಡವೆ ಹೇಳಿಂದು
ಭಯದೊಳಗಿನ ಶೀತಲ ಗೋರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಅಸತ್ಯಗಳ ನಡುವೆಯೇ ಸತ್ಯಗಳು ಮರಣ ಹೊಂದಿವೆಯೋ ನೋಡು ಬಾರೆ
ದಾರಿಯೊಳಗಿನ ನಿರ್ಮಲ ಕೇರಿಯಲ್ಲಿ ನಿನ್ನ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 30, 2025
ಮೋಡ ಮುಸುಕಿತು ಮಳೆಯು ಬಂದಿತು
ಇಳೆಯ ತೊಳೆಯುತ ಸಾಗಿತು
ಸೂರ್ಯ ರಶ್ಮಿಯು ಹೊಳೆದು ಬಂದಿತು
ಬಾನ ಬಣ್ಣವು ಬದಲಿತು
ಏಳು ಬಣ್ಣದ ಕಾಯ ಕಂಡಿತು
ಸುತ್ತ ಸೊಬಗದು ಚೆಲ್ಲಿತು
ಜನರ ಗಮನವು ಅತ್ತ ಸರಿಯಲು
ಮೋಡ ಮಿನುಗುತ ಮಿಂಚಿತು
ಕಾಮನೊಲಿದಿಹ ಬಿಲ್ಲು ಬಾಗಿತು
ಸೃಷ್ಟಿ ಚೆಲುವದು ಹೆಚ್ಚಿತು
ಜಲದಿ ಆಡುತ ಮುಗ್ಧ ಮಗುವದು
ಮೈಯ ಮರೆಯುತ ನೋಡಿತು
ಬಾನಿನೊಲುಮೆಗೆ ನೆಲವು ನಾಚಲು
ಪ್ರಕೃತಿ ಸಿರಿಯನು ಹರಡಿತು
ಬಾನು ಮೋಹದಿ ಒಲವ ಬೆಳಗಲು
ಸಂಜೆ ತಂಪಲಿ ಅರಳಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ:…
ಲೇಖಕರು: Shivaraj Kamble
ವಿಧ: ಕವನ
July 29, 2025
ಹಿಡಿಸಿದ ನಗೆಯೊಂದು
ಎಳೆಮಗುವಾಗಿ
ಮನದಲ್ಲಿ ಮನೆ ಮಾಡಿ
ಮೂರ್ತಿಯಾಗಿಬಿಟ್ಟಿದೆ;
ನೆನಪೇ ಪೂಜೆಯಾಗಿ,
ಕವಿತೆ ಹಣತೆಗಳ ಬೆಳಗಿ
ಆರಾಧಿಸುತ್ತಿದ್ದೇನೆ
ದಿನಂಪ್ರತಿ;
ದೀರ್ಘ ಮೌನಗಳ
ಸುಳಿವಿನಲ್ಲಿ
ಒಮ್ಮೊಮ್ಮೆ ಸಿಲುಕಿ,
ಚಡಪಡಿಸಿದ್ದೇನೆ
ಮಾತ ಹೊಳೆ ಹರಿಸಲು;
ಮಾತಿಗೆ ಬರಗಾಲ ಬಡಿದು
ಕ್ಲಿಕ್ಕಿಸಿಕೊಂಡ
ಫೋಟೋಗಳ ಜಡಿ ಮಳೆ
ಆಗಾಗ
ಹಣಿಯುತ್ತದೆ;
ಮತ್ತೆ
ಗರಿಗೆದರುತ್ತದೆ ಮನಸ್ಸು
ನೋಡುವ ತವಕದಲ್ಲಿ
ಮಾತಾಗುವ ಹಂಬಲದಲಿ
ಹಿಡಿಸಿದಾ ನಗುವ
ಮುಡಿಯುವುದಕ್ಕಾಗಿ,
ಜೊತೆಗೂಡಿ ನಡೆಯುವುದಕ್ಕಾಗಿ.
-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 29, 2025
ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೋ ತಿಳಿಯೆ
ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೋ ತಿಳಿಯೆ
ಹೊಟ್ಟೆ ಹಸಿವು ತಾಳದೆಯೇ ಕನಸ ಹೆಣೆಯ ಹೊರಟೆಯೇನು
ಚಟ್ಟ ಕಟ್ಟಲೆನ್ನ ಹೀಗೆ ಗೋರಿಯೆಡೆಗೆ ಸಾಗಿರುವರೋ ತಿಳಿಯೆ
ಕುಟ್ಟಿ ಹಾಕದಿರೈಯೆನ್ನ ಮುಕುತಿಯೆಡೆಗೆ ಹಾಗೆಯೇ ಬಿಡಿರೊ
ಬಟ್ಟ ತುಂಬಿಸಲು ಮನುಜರು ಲೋಕ ಕಂಡಿರುವರೋ ತಿಳಿಯೆ
ಮುಟ್ಟ ಬಂದರಿಂದು ಕೇಡಿರುವುದ ಕಾಣಬಹುದೇನೊ ನೋಡು
ತೊಟ್ಟು ಕಳಚಿ ಉದುರಿ ಹೋಗೆ ದೂರ ಹೋಗಿರುವರೋ ತಿಳಿಯೆ
ಮೆಟ್ಟಲೇರಿ ಬಂದವರ ಜೊತೆ ಸೇರಿ ಹೋದನೋ ನಮ್ಮ ಈಶ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 28, 2025
ವಯಸ್ಸು ಮಾಗಿದಂತೆ ಸಾವದು ಕಾಣುವುದು
ಕನಸ್ಸು ಕರಗಿದಂತೆ ಸೋಲದು ಕಾಣುವುದು
ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ
ಕಾಯವು ಬಸವಳಿದಂತೆ ಕೂಳದು ಕಾಣುವುದು
ಹೃದಯವಿಂದು ಸವಿಯನು ಕೊಡಲೇ ಇಲ್ಲವೆ
ಬದುಕಿಂದು ಕ್ಷೀಣಿಸಿದಂತೆ ಸೇಡದು ಕಾಣುವುದು
ಬೇಡದ ಯೋಚನೆಗೆ ದೇಹವದು ಮುದುಡಿದೆ
ಚಿತ್ತಾರವದು ಸರಿದಂತೆ ಸಿಟ್ಟದು ಕಾಣುವುದು
ಬೇಸರವು ಮನಸಿನಲಿ ಮೂಡಿತೇನು ಈಶಾ
ಬಯಕೆಯು ಕಂತಿದಂತೆ ಗುಟ್ಟದು ಕಾಣುವುದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 27, 2025
ಬಹುದಿನದ ಬಯಕೆಯದು ಮೂಡಿರಲು ನನ್ನೊಳಗೆ
ಸುರಿಯೆ ನೀ ಎಲ್ಲಿ ಇಂದು
ಕನಸುಗಳೇ ಕಂಡಿರಲು ನನಸದುವು ಬರದಿರಲು
ಸೋತಿಹೆನು ನಿನ್ನ ನೆನೆದು
ದಿನವೆಲ್ಲ ತಂಪಿರಲು ಪ್ರೀತಿಯದು ಸುಳಿದಿರಲು
ಕಾಡುತಿದೆ ಮೋಹ ತನುವು
ಕೈಹಿಡಿದು ಕರೆದರೂ ಸನಿಹ ಬಾರದೆ ಹೋದೆ
ನೋವ ನೀಡುತಲಿ ಹಸಿವ
ಮೋಡ ಮುಸುಕಿದ ಭಾವ ಹೃದಯ ತುಂಬಿರಲು
ಕಾಡುತಿದೆ ಸವಿಯ ಸಲ್ಲಾಪ
ದೇಹ ಹಸಿವದು ದೂರ ಕೊಟ್ಟು ಹೋದೆಯೆ ನೀರೆ
ಶಯನದೊಳು ನಿನ್ನ ನೆನಪೆ
ಹೇಗೆ ಕಳೆಯಲಿ ದಿನವ ನೀನಿಲ್ಲದೇ ಮೌನ
ಒಲವಿರದೆ ಮೂಕನಾದೆ
ತಪ್ಪು ಒಪ್ಪಿನ ನಡುವೆ…
ಲೇಖಕರು: Nagendra Kumar K S
ವಿಧ: ಕವನ
July 27, 2025
ಅಕೋ ನೋಡೇ ಸಖಿ
ಶ್ಯಾಮ ಬಹನು।
ವಿರಹ ತುಂಬಿದ ಮನಕೆ
ಸಂತಸ ತಂದನು।।
ಮೂರು ದಿನಗಳಾಯ್ತು ಕೇಳಿ
ಶ್ಯಾಮನ ಕೊಳಲ ಆ ದನಿಯ।
ಅವನ ಮುಖವ ಕಾಣದೆ
ಕಂಬನಿ ಸುರಿಸಿದೆ ಈ ಹೃದಯ||
ಏಕೋ?, ಏನೋ?,
ಎಲ್ಲಿ ಹೋದನೋ ಶ್ಯಾಮನ ನೆನೆದೆ ।
ಆತಂಕ ಮೈ ಮನದಲ್ಲಿ
ಮನೆಮಾಡಿ ಶಾಂತಿಯ ಕದಡಿದೆ ।।
ಶ್ಯಾಮನಿಲ್ಲದ ಗೋಕುಲ,
ಏತಕೆ ಹೇಳೇ ಸಖಿ?|
ಮನವೆಲ್ಲಾ ಕತ್ತಲೆ,
ಈ ಬಾಳು ಬೇಕೇ ಸಖಿ?||
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 26, 2025
ಮೌನ ತುಂಬಿದೆ ಮನದಿ
ಬಳಲಿ ಬೆಂಡಾಗಿಹೆನು
ದಯೆ ತೋರಿ ಎನ್ನನು
ಉದ್ಧರಿಸು ಹರಿಯೇ
ಜಪತಪದ ಸುಳಿವಿಲ್ಲ
ಮಂತ್ರ ತಂತ್ರಗಳಿಲ್ಲ
ಏನಿದ್ದರೇನಿನ್ನು
ನಾಲಿಗೆಲಿ ನೀನೇ
ಹತ್ತೂರ ಸುತ್ತಿದೆನು
ಎಲ್ಲೂ ನೆಲೆಯನು ಕಾಣೆ
ಬಾಳಿನೊಳು ಬೆಂದಿಹೆನು
ಕೇಳು ಶ್ರೀ ಹರಿಯೇ
ಕಾಲು ನೋಯುತಲಿದೆ
ಹೃದಯ ಬಾಡುತಲಿದೆ
ಬದುಕು ಬೇಡುತಲಿದೆ
ನೀ ಹರಸು ಇಂದೇ
ನೆಮ್ಮದಿಯ ಅರಸುತಲಿ
ಕ್ಷೇತ್ರ ತಿರುಗುತಲಿಹೆನು
ತನುವಿನೊಳಗೇ ನೆಲೆಸು
ಎನ್ನ ಒಡೆಯನೇ
ಸಾಕಾಗಿ ಹೋಗಿಹುದು
ಭಾವ ಬಂಧ ಎನಗಿಂದು
ನಿನ್ನೊಡಲ ಜೊತೆಗಿಂದು
ಎನ್ನ…
ಲೇಖಕರು: Nagendra Kumar K S
ವಿಧ: ಕವನ
July 26, 2025
ಇಂದೇನೋ ಮುಗಿಯಿತು, ನಾಳೆ ಏನು?
ಬೆಳಕು ಮುಗಿದು ಕತ್ತಲ ಹೊಳೆ ಹರಿದಿದೆ;
ಇಂದೇನಾಯಿತು? ಅವಲೋಕಿಸು ಮಲಗುವ ಮುನ್ನ ;
ಪ್ರಶ್ನೆಗಳಿರಲಿ ಮನದಲ್ಲಿ ಅರಿವ ಸಂಶೋದಿಸು;
ನೂರು ಯೋಜನದ ಗುರಿಗೆ ಇಂದೇ ಅಡಿಯಿಡು;
ಪ್ರತಿದಿನವೂ ಕಲಿಕೆಗಿದೆ ಹೊಸ ಹಾದಿಯಿಲ್ಲಿ;
ನಾಳೆಗೆ ಇಂದೇ ಮುನ್ನುಡಿ ಬರೆಯಬೇಕಾಗಿದೆ;
ಪ್ರೀತಿಸು, ಧ್ಯಾನಿಸು, ಮೋಹಿಸು,ಅನುಭವಿಸು;
ಸಿಹಿ- ಕಹಿಯ ಸವಿ ಮಾಡುವ ಎಲ್ಲಾ ಕೆಲಸದಲ್ಲಿ;
ವಿವೇಕದಲಿ ಹೆಜ್ಜೆಯಿಡು ದಾರಿ ತೆರೆಯುವುದು;
ಮುಕ್ತ ಮನಸಿರಲಿ, ಭರವಸೆ ಮನದಲ್ಲಿರಲಿ;
ನಂಬಿಕೆ,…