ಕವನಗಳು

ವಿಧ: ಕವನ
January 14, 2025
ಗಝಲ್ ೧ ನನ್ನೊಲವಿನ ಹೃದಯದಾಳಕೆ ಬಂದು ಬಿಡು ಓ ಚೆಲುವೆ ನಿನ್ನೊಳಗಿನ ಚೆಲುವನು ನನಗೆ ಕೊಡು ಓ ಚೆಲುವೆ   ಮತ್ಸರದ ನೋಟದೊಳು ಒಲುಮೆ ಗತಿಸುವುದೇನೆ ಹೇಳೆ ಮೌನದಾಳ ನಡುವೆಯೂ ಸುತ್ತ ಆಡು ಓ ಚೆಲುವೆ   ಉಕ್ಕಬಹುದು ಆಂತರ್ಯದ ಸವಿ ನೆನಪುಗಳ ತಿಳಿಯದಾದೆ ಹೊತ್ತೇರಿದರೂ ಬೆಸುಗೆಯೊಳು ದಿಟ್ಟೆ ಕಾಡು ಓ ಚೆಲುವೆ   ಅಂತರಂಗ ಭಾವನೆಯೊಳು ಸಿಲುಕಿ ಹೋದೆಯೇನು ಕೂಸೆ ಕೈಯ ಹಿಡಿದು ನಡೆಯದಿರೆ ನಿನಗೆ ಕೇಡು ಓ ಚೆಲುವೆ   ಈಶನೆಂದೋ ಮರೆತಿರುವ ವಿಷದ ಒಡಲ ತೊರೆದು ಬಿಡೆ  ವರುಷ ಕಳೆದ ಮೈ ಮನದೆ ಮತ್ತೆ ಹಾಡು ಓ…
ವಿಧ: ಕವನ
January 13, 2025
ಏತಕೋ ಮನ ಬೇಸರದಿ ತಲ್ಲಣಿಸುತಾ ಸಾಗಿದೆ ಜೀವದೊಳು ಭಾವವಿಲ್ಲ ಸೊರಗುತಾ ಹೋಗಿದೆ   ನೆನಪಿನೋಲೆ ಹೀಗೆ ಸಿಗಲು ಸನಿಹ ಯಾರು ಇಲ್ಲದೆ ಓದಿಕೊಳಲು ನನ್ನೊಳಗೆ ಖುಷೀ ಹೊನಲು ಕಾಣದೆ   ಭವ್ಯವಾದ ಹೃದಯದಲ್ಲಿ ಮಸಿಯ ತುಂಡು ಕುಳಿತಿದೆ ಕತೆಯ ಜೊತೆ ವ್ಯಥೆಯು ಸೇರೆ ಕಾವ ಕೈಯು ಸೋತಿದೆ   ಕಣ್ಣಸುತ್ತ ಕಪ್ಪು ಕಲೆಯ ಕಂಡು ಒಡಲೋ ಮರುಗಿದೆ ತಾಯ ಕರುಳ ಬಳ್ಳಿ ಒಲವೇ ದೂರ ಹೋಗಿ ಕುಳಿತಿದೆ   ಎಲ್ಲರೊಲವು ನಿನ್ನ ಕಡೆಗೆ ಕನಸ ನನಸು ಮುರುಟಿದೆ ಎಲ್ಲೇ ಇರಲಿ ಇಲ್ಲದಿರಲಿ ನಮ್ಮೊಳಗಿನಾತ್ಮ ಮುದುಡಿದೆ   -ಹಾ ಮ ಸತೀಶ…
ವಿಧ: ಕವನ
January 12, 2025
ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ   ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು   ಜೀವನ ಸಾಗಲಿ ಹೀಗೆಯೆ ಬಾಳಲಿ ಪಾವನ ಚಿಂತನ ರೀತಿಯಲಿ ದೇವನ ಪೂಜಿಸಿ ಭಕುತಿಲಿ ಬೇಡಿರೆ ಕಾವನು ನಿನ್ನನು ಬೆಳಗುತಲಿ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
January 11, 2025
ತೆಂಗಿಗೆ ಡಿಮ್ಯಾಂಡ್  ಎಳನೀರಿನ ಬಳಕೆ ಹೆಚ್ಚಳ; ರಾಜ್ಯದಲ್ಲಿ ಹಣ ಕೊಡ್ತೀವಂದ್ರು ಸಿಗ್ತಿಲ್ಲ ತೆಂಗು...   ತೆಂಗು ಇಲ್ಲದ ಅಡುಗೆ- ಕಳೆದು ಕೊಳ್ಳುವುದೇ ತನ್ನ ರಂಗು! *** ಪ್ರೀತಿಯ ಸೌಧ..  ಕಟ್ಟಬೇಕಿತ್ತು ನಾವು- ಸಂಬಂಧ ಸ್ನೇಹಗಳ ಸುಂದರ ಪ್ರೀತಿಯ ಇಟ್ಟಿಗೆಗಳ ಸೌಧ...   ಅದು- ಮುರಿದು  ಕುಸಿಯುವುದೇ ವ್ಯಾವಹಾರದ ಕಲ್ಲುಗಳ ಭಾರದಿಂದ! *** ಎಲ್ಲಿ ಹಣದಾನಂದ?  ಅಂದು- ದುಡಿದ ಹಣ ಜೇಬಲಿಟ್ಟು ಝಣ ಝಣ ಸದ್ದನು ಮಾಡಿ-ನೋಡಿ ಆನಂದಿಸುತ್ತಿದ್ದುದೇ ನಮ್ಮ ಸೌಭಾಗ್ಯ...   ಇಂದು- ಎಲ್ಲವೂ ಆನ್ ಲೈನ್…
ವಿಧ: ಕವನ
January 10, 2025
ಗಝಲ್ ೧ ಚತುರೆಯ ನಡೆಯವಳ ಜೊತೆಗಾನು ಸಾಗುತಿರೆ ಒಲವು ಗತ್ತಿನಾ ನಡೆ ನುಡಿಗಳಲಿ ಅವಳಿಂದು ನೋಡುತಿರೆ ಒಲವು   ಮನ ಮುದುಡಿ ಕೂತಿದೆ ಎಂದರೆ ಮನಸ್ಸಿಲ್ಲವೆಂದೇ ಅರ್ಥವೆ ಕನಸ್ಸುಗಳ ಆಚೆಯು ಪ್ರೀತಿಯಿದೆಯೆಂದು ಬಯಸುತಿರೆ ಒಲವು   ಹೊತ್ತು ಮೂಡಿದರೂ ಮತ್ತಿನಲಿ ಇರಬೇಕೆನ್ನುವ ಬಯಕೆ ಯಾಕೆ ಕತ್ತು ನೋಯುತಿದ್ದರೂ ಮತ್ತಷ್ಟು ಪ್ರೇಮವ ಉಣಿಸುತಿರೆ ಒಲವು   ಹೆಣ್ಣು ಮಾಯೆಯ  ಮೋಹವೂ ಹೌದೆಂಬ ತಿಳಿವಳಿಕೆ ಇದೆಯೆಂದು ತುತ್ತು ಅನ್ನಕ್ಕೇ ಕೊರತೆಯಿದ್ದರೂ ಒನಪಿನಲಿ ಉಸುರುತಿರೆ ಒಲವು   ಬಿಟ್ಟುಬಿಡು ಎಂದರೂ…
ವಿಧ: ಕವನ
January 09, 2025
ಪ್ರತಿಯೊಂದು ವಿಷಯದಲ್ಲೂ  ಇದೆ ,ಆಗಿದೆ  ಇದಿಷ್ಟೇ  ಇಲ್ಲಿಯವರೆಗೂ  ಧ್ವನಿ ಇಲ್ಲದವರ ಬಗ್ಗೆ ನಡೆದುಕೊಂಡು  ಬಂದಂತಹ  ಸೂತ್ರಗಳು ...  ನಮ್ಮ ಕಾನೂನುಗಳು ಸಾಕ್ಷಿಗಳಿಲ್ಲದೇ  ತಿಜೋರಿಗಳಲ್ಲೇ  ಭದ್ರವಾಗಿ ಕುಳಿತಿವೆ! *** ಯಾರು ಸುಭಗರು ?  ನಿಜವಾಗಿ ಮಾಧ್ಯಮ ದ ವ ರು...? ಕಾರಣ ತಮ್ಮ ಸ್ವಾರ್ಥ ಕ್ಕೆ ಮತ್ತೊಮ್ಮೆ ಮಹಾ ಮಾರಿಯ ನಾಡಿಗೆ ಎಳೆದು ತರುವವರು !! *** ಮಕ್ಕಳ ಕಷ್ಟವ ಅರಿಯ ಬೇಕಾದರೆ ಹೆತ್ತ ತಾಯಿಯ ಕಣ್ಣಲಿಯ ಹನಿ ಬಿಂದನು ನೋಡು ! *** ರಾಜಕೀಯ ವೇ ಹೀಗೆ ಚದುರಂಗ! ಸಾಮಾನ್ಯ ಜನರದರ ಪಗಡೆ…
ವಿಧ: ಕವನ
January 08, 2025
ಗಝಲ್ ೧ ನಮ್ಮವರ ಸಾಧನೆಯ ನಾವು ಹೊಗಳುವುದಿಲ್ಲ ಹೀಗೆ ಸುಮ್ಮ ಸುಮ್ಮನೆಯೇ ಯಾವತ್ತೂ ತೆಗಳುವುದಿಲ್ಲ ಹೀಗೆ   ಮನುಷ್ಯ ತತ್ವ ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆಯೇ ಗೊತ್ತು ಗುರಿಗಳಿಲ್ಲದ ಉದ್ದೇಶವು ಮುಳುಗುವುದಿಲ್ಲ ಹೀಗೆ   ಎಚ್ಚರಿಸಿದ ನಂತರವೂ ಬದುಕಲ್ಲಿ ಮುರುಟಿದರೆ ಏನನ್ನಲಿ ಬಂಧನದಿಂದ ತಪ್ಪಿಸಿಕೊಂಡರೂ ಸೆಳೆಯುವುದಿಲ್ಲ ಹೀಗೆ   ಮನೆಯ ಜನರ ಹುಚ್ಚರೆಂದ ಮನುಜ ಕೊಚ್ಚೆಯಲ್ಲಿಹನು ಹೇಳಲಾರದ ನೋವಿದ್ದರೂ ಹಲ್ಲು ಮಸೆಯುವುದಿಲ್ಲ ಹೀಗೆ   ಹುಟ್ಟಿದವನಿಗೆ ಮಸಣದ ದಾರಿ ಹತ್ತಿರದಲ್ಲೇ ಇರುತ್ತದೆ ಈಶಾ…
ವಿಧ: ಕವನ
January 07, 2025
ಕಮಾಲ್  ಅಬಕಾರಿ ಇತಿಹಾಸದಲ್ಲಿ ಒಂದೇ ದಿನ ನಾನೂರಾ ಎಂಟು ಕೋಟಿ ಮೌಲ್ಯದ ಮದ್ಯದ ಸೇಲ್...   ಇದು- ಅಬಕಾರಿ ಇಲಾಖೆ ಮಾರಾಟಗಾರರಿಗೆ ಕೊಟ್ಟ ಕ್ರೆಡಿಟ್ ಸೌಲಭ್ಯದ ವಿಶೇಷ ಕಮಾಲ್! *** ಕಳವಳ...  ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿಗಳ  ಸಂಖ್ಯೆ ಇಳಿಮುಖ; ಏಕ ಶಿಕ್ಷಕ ಶಾಲೆಗಳ ಸಂಖ್ಯೆಯಲ್ಲಿ ಹೆಚ್ಚಳ...   ಖಾಸಗೀ ಶಾಲೆಗಳ ಒಡೆಯರ ಮುಖದಲ್ಲಿ- ಮಂದಹಾಸ; ಸಂಭ್ರಮದ ಖುಷಿ ನಿಚ್ಚಳ! *** ವಿದಾಯ  ಅಂದು- 2024 ವರ್ಷವ ಅದೆನಿತು ಸಂಭ್ರಮದಲಿ ಸ್ವಾಗತಿಸಿದ್ದೆವು...   ನಿನಗೊಂದು ಕೃತಜ್ಞತೆಯ ನಮಸ್ಕಾರ-…
ವಿಧ: ಕವನ
January 06, 2025
ಮುಖವಾಡಗಳು ಕಳಚುವವು ಕೆಲವೊಮ್ಮೆ ಇಲ್ಲಿ    ಎಚ್ಚರವಾಗಿರು ಗೆಳೆಯ ಈ ಬಯಲಾಟದ ಬದುಕಲ್ಲಿ...!   ಬೂದಿ ಮುಚ್ಚಿದ ಕೆಂಡ ಮಾತುಮಾತುಗಳಲ್ಲಿ  ಕೆನೆ ಬೆಣ್ಣೆಯನು ತೋರಿ ಸುಣ್ಣ ಎರಚುವರಿಲ್ಲಿ   ಬಾಯಿ ಬಿಡಬೇಡ ಬಿಟ್ಟರೇ ಕೆಟ್ಟೆ...!  ಮೌನವಾದರೂ ಸಾಕು ಕಟ್ಟುವರು ಕಟ್ಟೆ   ಮಾತು ಮಾತಿನ ನಡುವೆ ತೂತು ಹುಡುಕುವರು  ಗಾಸಿಗೊಳಿಸಿದೆ  ಎಂದು ಕುಣಿದು ಕುಪ್ಪಳಿಸುವರು...!   ಗೀತೆ ಬಲ್ಲವರೆಂದು  ನಂಬಿ ಕೆಡಬೇಡ.. ಬಲೆಯ ಉದ್ದಕ್ಕೆ ನೇಯ್ದು ನಕ್ಕು ಕರೆಯುವ ಜೇಡ    ನಿನಗೆ ನೀನೇ ಎಂಬ ಸತ್ಯವನು ಕಾಣು …
ವಿಧ: ಕವನ
January 05, 2025
ಅಲೆಯ ರೂಪದಿ ನಿನ್ನ ಸೆಳೆಯುತ ಮಡಿಲಿನಾಸರೆ ಪಡೆದೆನು ಚಂದ್ರನಂತೆಯೆ ತಂಪನೀಯುತ ಒಲವಿನಾಸರೆ ಪಡೆದೆನು   ಸವಿಯ ಚುಂಬನ ಸೋರಿ ಹೋಗದೆ ಇರಲು ಏನನು ಮಾಡಲಿ ಕನಸು ಕಳೆಯುತ ಚೆಲುವಿನಾಟದಿ ನನಸಿನಾಸರೆ ಪಡೆದೆನು   ಬಾನು ಹೊಳೆಯಲು ಕಣ್ಣಿನೊಳಗಡೆ ಚೆಲುವ ಸಂಭ್ರಮ ಕಂಡಿತೆ  ಮನಸಿನೊಳಗಡೆ ಖುಷಿಯು ಕಾಣಲು ಉಸಿರಿನಾಸರೆ ಪಡೆದೆನು   ಚಿಂತೆ ಮಾಡುತ ಕುಳಿತುಕೊಂಡರೆ ಮೋಹ ಹುಟ್ಟಲು ಸಾಧ್ಯವೆ  ತನುವಿನಾಳದಿ ಸೇಲೆಯು ಉಕ್ಕಲು ಬೆಸುಗೆಯಾಸರೆ ಪಡೆದೆನು    ಹೃದಯದಿ ಸ್ನೇಹವುಕ್ಕಲು ಸಪ್ನ ಮಂದಿರ ಮುರಿಯದು ಈಶಾ ಜೀವ…