ವಿಸ್ಮರಣೆ
11 hours 23 minutes ago - ಬರಹಗಾರರ ಬಳಗಇತ್ತೀಚೆಗೆ ನಿಧನರಾದ ಅಡ್ಯನಡ್ಕ ವಿ.ಮ. ಭಟ್ಟರನ್ನು ಐದಾರು ತಿಂಗಳುಗಳ ಹಿಂದೆ ಭೇಟಿಯಾಗುವ ಒಂದು ಸುಸಂದರ್ಭ ನನಗೊದಗಿತು. ಅವರ ಮನೆ ಪಳ್ಳತಡ್ಕ ಹತ್ತಿರದ ವಾಟೆ. ಉತ್ತಮ ಕವಿ, ಸದಭಿರುಚಿಯ ಲೇಖಕ ಜೊತೆಗೆ ಅಡ್ಯನಡ್ಕ ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಅಧ್ಯಾಪಕ. ಈಗ ಜನತಾ ಸಂಸ್ಥೆಯಲ್ಲಿ ನಾನು ಆಡಳಿತಾಧಿಕಾರಿ. ಕಳೆದ ನಾಲ್ಕು ವರ್ಷಗಳಿಂದ ನಾನು ಅಧ್ಯಕ್ಷನಾಗಿರುವ ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಬೆಳವಣಿಗೆಯ ಶ್ರಮಿಕರಲ್ಲಿ ಇವರದೂ ಅಮೂಲ್ಯ ಪಾತ್ರವಿದೆ. ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿರುವ ಮಾಸಿಕ ಪತ್ರಿಕೆ ಯುಗಪುರುಷದ ಅಂಕಣಕಾರ ವಿ.ಮ. ಭಟ್. ನಾನೂ ಕೆಲವು ವರ್ಷ ಯುಗಪುರುಷಕ್ಕೆ ನಿರಂತರ ಬರೆಯುತ್ತಿದ್ದೆ. ಈ ಎಲ್ಲ ಸಂಬಂಧಗಳಿಂದಾಗಿ ಭಟ್ಟರಿಗೂ ನನಗೂ ನಂಟು. ಭಟ್ಟರು “ವಿಸ್ಮರಣೆಗೊಳಗಾಗಿರುವರು” ಎಂಬ ಕಾರಣಕ್ಕೆ ನಾನು ಶ್ರೀಯುತರನ್ನು ಭೇಟಿ ಮಾಡಿದ್ದೆ.
ವಿ.ಮ. ಭಟ್ಟರ ಪೂರ್ತಿ ಹೆಸರು ವಾಟೆ ಮಹಾಲಿಂಗ ಭಟ್. ಭೇಟಿಯಾದಾಗ ಅವರಿಗೆ ನನ್ನ ಪರಿಚಯ ಸಿಗಲಿಲ್ಲ. ಪರಿಚಯ ನೀಡಲು ಅಡ್ಯನಡ್ಕ..., ಮಕ್ಕಳ ಕಲಾ ಲೋಕ..., ಯುಗಪುರುಷ..., ಮಾಸ್ಟ್ರು...., ಆಡಳಿತಾಧಿಕಾರಿ...., ಹೀಗೆ ಹಲವು ವಿಷಯಗಳನ್ನು ಹೆಣೆದರೂ ಅವರಿಗೆ ನೆನಪಿಗೆ ಬಾರದು. ನೆನಪಿಸಲೆಂದು ಕೊಡುತ್ತಿದ್ದ ಪ್ರತಿಯೊಂದು ಸುಳುಹು ಕೂಡಾ ಅವರ ನೆನಪಿನ ಬುತ್ತಿಯನ್ನು ತೆರೆಯಲು ಸಹಾಯಕವಾಗುತ್ತಿರಲಿಲ್ಲ. ಯಾವುದೇ ಕಾಯಿಲೆಯಿರದ ಪಾದರಸದಂತೆ ಅತ್ಯಂತ ಚುರುಕಾಗಿ ವ್ಯವಹರಿಸುತ್ತಿದ್ದ ಶಕ್ತಿ ಅವರು. ಅವರನ್ನು ಮರೆಗುಳಿತನ ಆವರಿಸಿದೆ ಎಂಬುದನ್ನು ಗ್ರಹಿಸಲೂ ಅಸಾಧ್ಯ. ಅಕ್ಷರ ಕಲಿಸಿದ ಸಂತ ಅಕ್ಷರಗಳನ್ನೇ ಮರೆತಿದ್ದರು. ಅವರನ್ನು ನೋಡಿದಾಗ ನನಗನಿಸಿದ್ದು ಹೀಗೆ, “ಯಾವ ರೋಗ ಬಂದರೂ ರೋಗಿಗಷ್ಟೇ ಹೆಚ್… ಮುಂದೆ ಓದಿ...