ಸುಟ್ಟು ಭಸ್ಮವಾದ ಆ ಕಾರಿನ ಫೋಟೊ ನೆನಪಿದೆಯೇ?
1 day 8 hours ago - ಬರಹಗಾರರ ಬಳಗ
ಡಿಸೆಂಬರ್ 30, 2022, ಅದು ರಿಷಭ್ ಪಂತ ಮರುಜನ್ಮ ಪಡೆದ ದಿನ. ಆ ದಿನ ಮುಂಜಾವಿನ ನಸುಕಿನಲ್ಲಿ ಪ್ರತಿ ಗಂಟೆಗೆ ನೂರು ಕಿಮೀಗೂ ವೇಗವಾಗಿ ಓಡುತ್ತಿದ್ದ ರಿಷಭ್ ಪಂತನ ಎಸ್ಯುವಿ ಕಾರು ಹೈವೆಯ ಡಿವೈಡರ್ಗೆ ಜಜ್ಜಿ ನುಚ್ಚು ನೂರಾಗಿತ್ತು. ಅಪಘಾತದ ಫೋಟೊವನ್ನು ನೀವು ನೋಡಿದರೆ ಅದರೊಳಗೆ ಇದ್ದವರು ಜೀವಂತವಾಗಿ ಹೊರಬರಲು ಸಾಧ್ಯವೇ ಇಲ್ಲವೆಂದೆಸುತ್ತದೆ. ಅದರೊಳಗಿದ್ದವನು ಬೇರೆ ಯಾರೂ ಅಲ್ಲ, ಕಳೆದ ವಾರವಷ್ಟೇ ಆರ್ ಸಿ ಬಿ ವಿರುದ್ಧ ಶತಕವನ್ನು ಸಿಡಿಸಿದ ರಿಷಭ್ ಪಂತ್, ಲಕ್ನೌ ತಂಡದ ಕಪ್ತಾನ. ಯಾವುದೋ ದೈವ ಶಕ್ತಿಯೇ ಆತನನ್ನು ಆ ಕ್ಷಣ ಹೊರಗಡೆಗೆ ಕರೆತಂದು ಸುಟ್ಟು ಭಸ್ಮವಾದ ಕಾರಿನಿಂದ ಕಾಪಾಡಿತ್ತು. ದೇವರೆಲ್ಲಿ? ಎಂದು ಪ್ರಶ್ನೆ ಕೇಳುವವರಿಗೆ ಮತ್ತೆ ಮತ್ತೆ ಇಂತಹ ಘಟನೆಗಳು ದೇವರನ್ನು ನೆನಪಿಸುತ್ತವೆ!
ಆ ಅವಘಡದ ಸುದ್ದಿ ಕೇಳಿ, ಅದರ ವಿಡಿಯೋವನ್ನು ನೋಡಿದಾಗ ಪಂತ ಮತ್ತೊಮ್ಮೆ ವಿಕೆಟ್ ಹಿಂದೆ ನಿಲ್ಲಬಹುದು ಎನ್ನುವ ಒಂದು ಎಳ್ಳಷ್ಟೂ ನಿರೀಕ್ಷೆ ಇರಲಿಲ್ಲ. ವಿಮಾನದಲ್ಲಿ ಎತ್ತಿಕೊಂಡು ತಂದು ಮುಂಬಯಿಯ ಆಸ್ಪತ್ರೆಗೆ ಸೇರಿಸಿದ್ದರು. ಅದೆಷ್ಟು ಹೊಲಿಗೆ ಬಿದ್ದಿದ್ದವೋ? ವೈದ್ಯರ ಲೆಕ್ಕಕ್ಕೂ ಬಾರದಿರಬಹುದು. ಸಂಪೂರ್ಣವಾಗಿ ಛಿದ್ರವಾದ ಕಾಲುಗಳನ್ನು ಸರಿಯಾಗಿ ಕೂರಿಸಲು ಮೂರು ಲಿಗಾಮೆಂಟ್ ಸರ್ಜರಿ ಮಾಡಿದ್ದರಂತೆ! ಮತ್ತೆ ಆತ ನಿಂತು ನಡೆದರೆ ಸಾಕು ಎನ್ನುವ ಪರಿಸ್ಥಿತಿ. ಒಂದು ತಿಂಗಳು ಅಲುಗಾಡದೆ, ಆತ ಹಾಸಿಗೆಯ ಮೇಲೆ ಇದ್ದಿದ್ದನಂತೆ.
ತುಸು ಕಾಲದ ನಂತರ ತಾನೇ ತನ್ನ ಕೆಲಸ ಮಾಡಿಕೊಳ್ಳಲಾರಂಭಿಸಿದ, ಕೋಲಿನ ಸಹಾಯದಿಂದ ಕಾಲೂರ ತೊಡಗಿದ, ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಮತ್ತೆ ಸಾಮಾನ್ಯರಂತೆ ಬದಲಾದ. ಯಾರೂ, ಆತ ಮತ್ತೆ ಎಂದೂ ಕ್ರಿಕೆಟ್ ಗೆ ಮರಳಬಹುದು ಎನಿಸಿರಲಿಲ್ಲ. ಮನೆಯವರಂತೂ, ಆ ಭಯಾನಕ ಅಪಘಾತದ ನಂತರ ಆ… ಮುಂದೆ ಓದಿ...