ನಾನು ವಿಜ್ಞಾನದೊಂದಿಗೆ ಜೀವಶಾಸ್ತ್ರ ಓದುತ್ತೇನೆ !
7 hours 17 minutes ago - ಬರಹಗಾರರ ಬಳಗ
ಹಿಂದಿನ ಸಂಚಿಕೆಯಲ್ಲಿ ದ್ಯುತಿಸಂಶ್ಲೇಷಣೆಯ ಬಗ್ಗೆ ಮಾತನಾಡುತ್ತಿದ್ದೆವು. ನನ್ನ ಉದ್ಧೇಶ ಸಸ್ಯಗಳು ಏಕೆ ಹಸಿರಾಗಿವೆ ಎಂಬುದನ್ನು ಚರ್ಚಿಸುವುದಾಗಿತ್ತೇ ಹೊರತು ದ್ಯುತಿಸಂಶ್ಲೇಷಣೆಯ ಬಗ್ಗೆ ವಿವರಿಸುವುದಾಗಿರಲಿಲ್ಲ. ಏಕೆಂದರೆ ಜೀವ ರಾಸಾಯನಿಕ ಕ್ರಿಯೆಗಳು ತುಂಬಾ ಸಂಕೀರ್ಣ ವಿಷಯಗಳು. ಆದರೆ ಇಲ್ಲಿ ಕೆಲವರು ಈ ಬಗ್ಗೆ ಅನುಮಾನವನ್ನೆತ್ತಿ ಸಂದೇಶ ಕಳುಹಿಸಿದ್ದರು. ಅವರಿಗೆಲ್ಲಾ ಉತ್ತರ ಕಳುಹಿಸಿದ್ದೆ. ಆದರೆ ಶ್ರೀಮತಿ ವಿಜಯಾ ಟೀಚರ್ ನೇರವಾಗಿ ಕರೆ ಮಾಡಿ ತುಂಬಾ ವಿಷಯಗಳ ಬಗ್ಗೆ ಚರ್ಚಿಸಿದರು. ಆದ್ದರಿಂದ ನಾನು ಗೊಂದಲದಲ್ಲಿದ್ದೇನೆ. ನನ್ನ ವಿಷಯದಲ್ಲಿಯೇ ಮುಂದುವರಿಯಬೇಕೆ ಅಥವಾ ಈ ವಿಷಯದ ಬಗ್ಗೆ ಚರ್ಚಿಸಬೇಕೇ ಎಂದು. ಈ ಡೋಲಾಯಮಾನ ಸ್ಥಿತಿಯಲ್ಲಿ ಒಂದು ದಿನ ಕಳೆದು ಹೋಗಿದೆ. ಕೊನೆಗೂ ವಿಷಯಾಂತರದೊಂದಿಗೆ ನಿಮ್ಮೊಂದಿಗಿದ್ದೇನೆ.
ಭೌತ ಅಥವಾ ರಸಾಯನಶಾಸ್ತ್ರಗಳು ನೇರ ಮತ್ತು ಸರಳವಾದವು. ಅಲ್ಲಿ ನಿಯಮಗಳಿವೆ, ಸಿದ್ಧಾಂತಗಳಿವೆ, ಸೂತ್ರಗಳಿವೆ. ಅದಕ್ಕೆ ಸರಿಯಾಗಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ಅಂದರೆ ಆ ನಿಯಮಗಳು ಮೊದಲೇ ಇದ್ದುವೇ ಎಂದು ಕೇಳಿದರೆ ಇಲ್ಲ. ವಿದ್ಯಮಾನಗಳನ್ನು ಗಮನಿಸುತ್ತಾ ಕುಳಿತವರಿಗೆ ಓಹ್ ಇದರಲ್ಲಿ ಒಂದು ನಿಯಮಿತತೆ ಇದೆ ಅಂತ ಅನ್ನಿಸಿ ಅವುಗಳನ್ನು ನಿರೂಪಿಸಿದರು. ಅವುಗಳನ್ನೇ ನಿಯಮಗಳೋ, ಸಿದ್ದಾಂತಗಳೋ ಸೂತ್ರಗಳೋ ಎಂದು ಕರೆದರು. ಗೋಧೂಳಿ ಸಮಯ ಎಂದು ಕೇಳಿದ್ದೀರಲ್ಲವೇ. ಸಂಜೆಯ ಹೊತ್ತು ಗೋವುಗಳು ಮನೆಗೆ ಧಾವಿಸಿ ಬರುವಾಗ ಅವುಗಳ ಖುರಪುಟದಿಂದ ಏಳುವ ಧೂಳು ಓಡುವ ದನಗಳನ್ನು ಹಿಂಬಾಲಿಸಿ ಬಂದು ಒಂದು ಧೂಳಿನ ಮೋಡ ಉಂಟಾಗುತ್ತದೆ. ಇದನ್ನು ನೋಡಿದ ಬರ್ನೌಲಿ ತನ್ನ ಸಿದ್ದಾಂತವನ್ನು ಮಂಡಿಸಿದ. ಟೈಟಾನಿಕ್ ದುರಂತಕ್ಕೂ ಬರ್ನೌಲಿ ಸಿದ್ದಾಂತ ವಿವರಣೆ ನೀಡುತ್ತದೆ ಎಂಬ ತಂಡವೂ ಒಂದಿದೆ. ಭೌತಶ… ಮುಂದೆ ಓದಿ...