ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಬಹಳ ಜನಪ್ರಿಯವಾಗಿತ್ತು. ೧೯೯೦ರಲ್ಲಿ ಅಜಿತಕುಮಾರರ ಅಕಾಲಿಕ ನಿಧನದ ಬಳಿಕ ೨೦೧೯ರಲ್ಲಿ ಹಾಗೂ ೨೦೨೨ರಲ್ಲಿ ಈ ಕೃತಿಯು ಮರು ಮುದ್ರಣವಾಯಿತು. ಇಂಥಹ ಒಂದು ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಒಪ್ಪಿಸಿದ ಅಜಿತಕುಮಾರರ ಸಾಧನೆ ಸದಾ ಕಾಲ ಸ್ಮರಣೀಯವಾಗಿದೆ.
ಜನ ಸಾಮಾನ್ಯರಿಂದ ಗಗನಗಾಮಿಗಳವರೆಗೆ ಇಂದು ಎಲ್ಲ ಜನವರ್ಗಗಳನ್ನೂ ಯೋಗ ಆಕರ್ಷಿಸಿದೆ. ಹಿಂದೆ ಭಾರತದಲ್ಲಷ್ಟೇ ಪ್ರಚಲಿತವಾಗಿದ್ದ ಯೋಗ ಇಂದು ಜಗತ್ತಿನ…