ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?
ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ ಪಾಲು ಬೇಕೇ ಬೇಕು – ತಮ್ಮ ಉಳಿವಿಗಾಗಿ ಹಾಗೂ ಪ್ರಗತಿಗಾಗಿ.
ಅದೆಲ್ಲ ಸರಿ. ಈ ಕಾವೇರಿ ನದಿಗೆ ನೀರು ಬರುವುದು ಎಲ್ಲಿಂದ? ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯಿಂದ. ಅಲ್ಲಿನ ತಲಕಾವೇರಿ ಎಂಬ ಪುಟ್ಟ ಊರಿನಲ್ಲಿ ಕಾವೇರಿ ನದಿಯ ಹುಟ್ಟು. ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಕೃಷಿಗೆ ಹೆಸರಾದ ಕೊಡಗು ಜಿಲ್ಲೆ, ಕಾವೇರಿ ನದಿಯಲ್ಲಿ ಹರಿಯುವ ನೀರಿನ ಅರ್ಧ ಭಾಗವನ್ನು ತುಂಬಿ ಕೊಡುತ್ತದೆ ಎಂಬುದು ವಾಸ್ತವ.
- Read more about ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?
- Log in or register to post comments