ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ ಪಾಲು ಬೇಕೇ ಬೇಕು – ತಮ್ಮ ಉಳಿವಿಗಾಗಿ ಹಾಗೂ ಪ್ರಗತಿಗಾಗಿ.
ಅದೆಲ್ಲ ಸರಿ. ಈ ಕಾವೇರಿ ನದಿಗೆ ನೀರು ಬರುವುದು ಎಲ್ಲಿಂದ? ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯಿಂದ. ಅಲ್ಲಿನ ತಲಕಾವೇರಿ ಎಂಬ ಪುಟ್ಟ ಊರಿನಲ್ಲಿ ಕಾವೇರಿ ನದಿಯ ಹುಟ್ಟು. ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಕೃಷಿಗೆ ಹೆಸರಾದ ಕೊಡಗು ಜಿಲ್ಲೆ, ಕಾವೇರಿ ನದಿಯಲ್ಲಿ ಹರಿಯುವ ನೀರಿನ ಅರ್ಧ ಭಾಗವನ್ನು ತುಂಬಿ ಕೊಡುತ್ತದೆ ಎಂಬುದು ವಾಸ್ತವ.

Image

ಸಖಿ-2050

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ.   ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA  ಅಂತೆಲ್ಲ ದಿಗ್ಗಜರುಗಳು  ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ   ಹೆಸರು) ಅಂತ ನಾಮಕರಣ ಮಾಡಿದ್ದೇನೆ .

ಜಡ್ಜರೇ ಜುಲ್ಮಾನೆಯ ದಂಡ ಕಟ್ಟಿದರು

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಕೋಳಿಮರಿಗಳು ಮತ್ತು ಕುತಂತ್ರಿ ನರಿ

ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು.

ಅಲ್ಲೇ ಹತ್ತಿರದ ಮರದ ಕೆಳಗಿದ್ದ ಗುಹೆಯಲ್ಲೊಂದು ಮೋಸಗಾರ ನರಿ ವಾಸ ಮಾಡುತ್ತಿತ್ತು. ಈ ಕೋಳಿಮರಿಗಳನ್ನು ಕಂಡಾಗಲೆಲ್ಲ ನರಿಗೆ ಇದೊಂದೇ ಯೋಚನೆ: ‘ಓ, ಇವು ನನ್ನ ಊಟಕ್ಕೆ ಸಿಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಎಳೆ ತಾಯಿಕೋಳಿಯ ಮಾಂಸ ಒಳ್ಳೆಯ ಭೋಜನವಂತೆ.”

Image

ಗೋಕುಲದ ಒಲವು

ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು
ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ
ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ
ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹಂಬಲದಿ||

ಮೈಮರೆಯಿತು ಮಥುರೆ ಕತ್ತಲ ಇರುಳಿನಲಿ ಬಂದಿಳಿಯಿತು ದೇವ ಕುಂಜರ
ಸದ್ದಿಲ್ಲದೇ ಮಾಯೆ ಹೊರಡಿಸಿತು ಗೋಕುಲಕೆ ವಸುದೇವನ ನಂದನನ
ಭೋರ್ಗರೆಯುವ ಯಮುನೆಯ ಹೊರಳಿನಲಿ ಹೊರಟಿತು ಗೋಕುಲಕೆ
ಮಮತಾಮಯಿ ಯಶೋಧೆಯ ತಾಯ ಮಡಿಲು ತುಂಬಿತು ವಸುದೇವನ ಕಂದನು||

ಸವಿಯಾದ ನೆನಪುಗಳ ಸರಮಾಲೆ

ನಿನ್ನ ಎಲ್ಲಾ ಓಲವೂ ಮಳೆಯಾಗಿ ಸುರಿದು,
ನನ್ನ ಎದೆಯ ಮರಳು ಗಾಡಿನಲ್ಲಿ ಒಂದೇ
ಒಂದು ಮಲ್ಲಿಗೆಯ ಹೂವನ್ನು ಅರಳಿಸಲಿ.
ನನ್ನ ಹೃದಯವನ್ನು ಅಡವಿಟ್ಟುಕೊಂಡು
ಸ್ವಲ್ಪ. ಪ್ರೀತಿಯನ್ನು ಕಡ ಕೊಡುವೆಯಾ..

ನನ್ನ ಎದೆಯ ಗೂಡಿನಲ್ಲಿ ನಡೆದಾಡುತ್ತಿವೆ ನಿನ್ನ
ನೆನಪುಗಳು ಸ್ವಲ್ಪ ಮೆಲ್ಲನೆ ನಡೆ ನೆನಪುಗಳ
ಒಟ್ಟಿಗೆ ನಾನು ಇದ್ದೇನೆ.

✍️
(ಜಿ.ವಿ.ಕೆ) ಶೇಖರ ಎಸ್.ಎಸ್.ಎಲ್.ಸಿ

ಹನಿ ನೀರಾವರಿ – ರೈತನ ಐಡಿಯಾ

ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನು ಹನಿ ನೀರಾವರಿಯಿಂದ ನಾಲ್ಕು ಪಟ್ಟು ಹೆಚ್ಚು ಜಮೀನಿಗೆ ಎರೆಯಬಹುದು. ಆದರೆ, ಅದಕ್ಕೆ ಹೆಕ್ಟೇರಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾದೀತು.

Image

ಒಲವೇ.♥️

ನಿನಗಾಗಿ ತಂಗಾಳಿಯ ಹಿಡಿದು ತರುವೆ ಎಂದು ಹೇಳುವ ಪ್ರೇಮಿ ನಾನಲ್ಲ.

ತಂಪೂ ಬಿಸಿಯೋ ನೀಡುವೆ ನಿನಗೆ ನನ್ನ ಉಸಿರೆಲ್ಲ.

ನಿನಗಾಗಿ ಆಕಾಶದಿಂದ ಮಳೆ ತರಿಸುವ ಶಕ್ತಿ ನನಗಿಲ್ಲ..

ಆದರೆ ನಿನ್ನ ಕಣ್ಣಿನಿಂದ ಒಂದು ಹನಿ ಕೂಡ ಜಾರಲು ನಾ ಬಿಡುವುದಿಲ್ಲ.

ನಿನಗಾಗಿ ಚಂದಿರನ ಹಿಡಿದು ತರುವೆ ಎಂದು ಸುಳ್ಳು ಭರವಸೆ ನಾ ನೀಡುವುದಿಲ್ಲ..

ಮಗುವಿನಂತಿರುವ ನಿನ್ನ ನವಿರಾದ ಹೃದಯಕ್ಕೆ ನಾ ಎಂದಿಗೂ ಮೋಸ ಮಾಡುವದಿಲ್ಲ..

 

    ಇಂತಿ

 

 

(ಜಿ.ವಿ.ಕೆ)   ಶೇಖರ . ಎಸ್.ಎಸ್ .ಎಲ್.ಸಿ

 

Image

ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್

ದಿನ ನಿತ್ಯದ ಸ್ಕ್ರೀನ್ ಟೈಮ್

ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡುತ್ತಿದ್ದಿರಿ ಎಂಬುದರ ಲೆಕ್ಕ. ಮನೆಯಲ್ಲಿ ಮಡದಿ “ನನ್ನ ಮುಖ ನೋಡುವುದಕ್ಕಿಂತ ಹೆಚ್ಚು ನೀವು ಆ ಸ್ಮಾರ್ಟ್ ಫೋನನ್ನು ನೋಡುತ್ತಿರುತ್ತೀರ” ಎಂಬ ಆಪಾದನೆ ಮಾಡಿದರೆ, ಮಡದಿಯ ಮುಖವನ್ನು ನೋಡಿದ ಲೆಕ್ಕ ಗೊತ್ತಿಲ್ಲ, ಆದರೆ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ಎವೆಯಿಕ್ಕದೆ ನೋಡುತ್ತಿದ್ದಿರಿ ಎಂಬುದರ ಖರೆ ಲೆಕ್ಕ ನಿಮಗೆ ಈಗ ಸಿಗುತ್ತದೆ. 

Image