ಒಂದು ಒಳ್ಳೆಯ ನುಡಿ (11) -ತಾಳ್ಮೆಯೆಂಬ ತಪಸ್ಸು

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?

ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ//

 ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? 

ತಾಳುಮೆಯ ಪರಿಪಾಕ--ಮಂಕುತಿಮ್ಮ//

Image

ಅಭಿಜ್ಞಾ ಗೌಡ ಇವರ ಕವನಗಳು

ಭಾವನೆಗಳ ಪಲ್ಲಕ್ಕಿ

ಭಾವನೆಗಳ ಪಲ್ಲಕ್ಕಿಯಲಿ

ನವ್ಯ ಕವನಗಳ ಮೆರವಣಿಗೆ

ಸಾಗುತಿಹೆ ಬಿಳಿ ಹಾಳೆಯಲಿ

ಭವ್ಯ ವಿಚಾರಗಳ ಬರವಣಿಗೆ...

 

ಭಕ್ತಿ ಗೀತೆ : ಶ್ರೀ ಗುರು ರಾಘವೇಂದ್ರ

ರಾಯ ಬಾರೋ ನಮ್ಮ ಮನೆಗೆ

ಶಿರಬಾಗಿ ಕರಮುಗಿವ ಭಕುತರಿಗೆ

ಒಲಿದು ಬಾರಯ್ಯ ಶ್ರೀ ಗುರು ರಾಘವೇಂದ್ರ//

 

ಭೃತ್ಯಗೆ ಬಂದ ಅಪಮೃತ್ಯುವ ತಡೆದ

ಎಲ್ಲರ ಸಲಹುವ ಪುರುಷೋತ್ತಮನೇ

ಬನ್ನಿ ಮಕ್ಕಳೇ... ಪಾಠ ಬದಿಗಿಟ್ಟು ಸ್ವಲ್ಪ ಆಟವಾಡೋಣ!

ಹಿಂದೊಮ್ಮೆ ನಾನು ‘ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್’ ಎಂಬ ಲೇಖನ ಬರೆದಿದ್ದೆ. ಓದಿದ ಹಲವಾರು ಮಂದಿ ಈ ಲೇಖನವನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು. ಆ ಲೇಖನದಲ್ಲಿ ಬಿಟ್ಟು ಹೋದ ಕೆಲವಷ್ಟು ಅಂಶಗಳನ್ನು ನಾನಿಲ್ಲಿ ಸೇರಿಸಬಯಸಿದ್ದೇನೆ. ೨೦೨೦ ರ ವರ್ಷ ಕೊರೋನಾ ಮಹಾಮಾರಿಯ ಕಾರಣದಿಂದ ಮಕ್ಕಳು ಎಲ್ಲರೂ ಮನೆಯಲ್ಲೇ ಉಳಿದು ಬಿಟ್ಟರು. ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕಡೇ ಪಕ್ಷ ಅವರೆಲ್ಲಾ ಶಾಲೆಯಲ್ಲಿ ಆಟವಾಡುವ ಸಮಯದಲ್ಲಾದರೂ ಮೈದಾನಕ್ಕೆ ಇಳಿಯುತ್ತಿದ್ದರು. ಆದರೆ ಕೆಲವು ಶಾಲೆಗಳಲ್ಲಂತೂ ಆಟದ ಮೈದಾನವೇ ಇಲ್ಲ. ಇದ್ದ ಎಲ್ಲಾ ಜಾಗದಲ್ಲಿ ಶಾಲಾ ಕಟ್ಟಡವೇ ಕಟ್ಟಿಸಿದ್ದಾರೆ.

Image

ಜೋಳದ ಟಿಕ್ಕಿ (ಕಾರ್ನ್ ಟಿಕ್ಕಿ)

Image

ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ಕೊತ್ತಂಬರಿಸೊಪ್ಪು, ಕಾರ್ನ್, ಚೀಸ್, ಗರಂ ಮಸಾಲೆ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಸರಿಯಾಗಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅವುಗಳ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಆ ಉಂಡೆಗಳನ್ನು ಚಪ್ಪಟೆ ಆಕಾರಕ್ಕೆ ಬರುವಂತೆ ಕೈಯಿಂದ ಒತ್ತಿ, ಬ್ರೆಡ್ ಹುಡಿಯಲ್ಲಿ ಹೊರಳಿಸಿ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ. ಒಂದು ಬದಿ ಬೆಂದ ಬಳಿಕ ಇನ್ನೊಂದು ಬದಿಯನ್ನು ಕಾಯಿಸಿರಿ.

ಬೇಕಿರುವ ಸಾಮಗ್ರಿ

ಆಲೂಗಡ್ಡೆ ೪-೫ (ಮೀಡಿಯಂ ಗಾತ್ರ), ಕಾಯಿಮೆಣಸು ೨, ಅಮೇರಿಕನ್ ಕಾರ್ನ್ (ಬಿಡಿಸಿದ್ದು) ೧ ಕಪ್, ಚೀಸ್ ೧ ಟೇಬಲ್ ಸ್ಪೂನ್, ಬ್ರೆಡ್ ಕ್ರಮ್ಸ್ (ಹುಡಿ) ಸ್ವಲ್ಪ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಹುಡಿ ೧ ಚಮಚ, ಮೆಣಸಿನ ಹುಡಿ ೧ ಚಮಚ, ರುಚಿಗೆ ಉಪ್ಪು.

ಗೀತಾಮೃತ - 5

ಅಧ್ಯಾಯ ೨

     ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣ:/

ಜನ್ಮಬಂಧವಿನಿರ್ಮುಕ್ತಾ: ಪದಂ ಗಚ್ಛಂತ್ಯನಾಮಯಮ್//೫೧//

   ಏಕೆಂದರೆ, ಸಮಬುದ್ಧಿಯಿಂದ ಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಾಗಮಾಡಿ ಜನ್ಮರೂಪೀ ಬಂಧನದಿಂದ ಮುಕ್ತರಾಗಿ ನಿರ್ವಿಕಾರ ಪರಮಪದವನ್ನು ಹೊಂದುತ್ತಾರೆ.

Image

ಝೆನ್ ಪ್ರಸಂಗ: ಮಠದಿಂದ ಮಠಕ್ಕೆ ಅಲೆತ

ಜ್ನಾನದಾಹಿಯೊಬ್ಬ ಝೆನ್ ಮಠವೊಂದಕ್ಕೆ ಬಂದು ಗುರುವಿಗೆ ನಮಸ್ಕರಿಸಿದ.
ಗುರುವಿನ ಪ್ರಶ್ನೆ: ಎಲ್ಲಿಂದ ಬಂದೆ?
ಜ್ನಾನದಾಹಿಯ ಉತ್ತರ: ದೂರದ ಹಳ್ಳಿಯಿಂದ.
ಗುರುವಿನ ಪ್ರಶ್ನೆ: ಬೇಸಗೆಯಲ್ಲಿ ಯಾವ ಮಠದಲ್ಲಿದ್ದೆ?
ಜ್ನಾಹದಾಹಿಯ ಉತ್ತರ: ಪಕ್ಕದ ರಾಜ್ಯದ ಸರೋವರದ ಹತ್ತಿರದ ಮಠದಲ್ಲಿ.
ಗುರುವಿನ ಪ್ರಶ್ನೆ: ಅಲ್ಲಿಂದ ಯಾವಾಗ ಹೊರಟದ್ದು?
ಜ್ನಾನದಾಹಿಯ ಉತ್ತರ: ಅಲ್ಲಿಂದ ಹುಣ್ಣಿಮೆಯಂದು ಇಲ್ಲಿಗೆ ಹೊರಟೆ.
ಈಗ ಗುರುವಿನ ಪ್ರತಿಕ್ರಿಯೆ: ಒಂದು ಕೋಲು ತಗೊಂಡು ಮೂರು ಏಟು ಬಾರಿಸಬೇಕು ನಿನಗೆ. ಆದರೆ ಇವತ್ತು ನಿನಗೆ ಕ್ಷಮೆ ನೀಡಿದ್ದೇನೆ. ಗೊತ್ತಾಯಿತಾ?

Image

ವೃದ್ದೆಯ ಕಲಾಕುಂಚ

ಅರಳಿದೆ ಪಟದಲಿ ಕುಂಚದ ಕಲೆಯದು

ತಳೆದಿದೆ ನೂತನ ಭಾವವದು|

ಕರೆದಿದೆ ಸಹೃದಯ ಮನವನು ತಣಿಸುತ

ವೃದ್ದೆಯ ಬಿಡಿಸಿದ ಚಿತ್ರವದು||

 

ಹಾಳೆಯ ಮೇಲೆಯೆ ರಂಗಿನ ಕುಂಚವು