ಒಂದು ಒಳ್ಳೆಯ ನುಡಿ (13) - ಅಸೂಯೆ

ಅಸೂಯೆ ಎಂಬ ಬೀಜ ಬಿತ್ತಲ್ಪಟ್ಟು ಕ್ಷಣ ಮಾತ್ತದಲ್ಲಿ ಬೆಳೆದು ಹೆಮ್ಮರವಾಗಿ, ನಾಲ್ದೆಸೆಗೂ ಪಸರಿಸುತ್ತದೆ. ಕೆಟ್ಟದಕ್ಕೆ ಹೆಚ್ಚು ಹೊತ್ತು ಬೇಡ. ಅದೇ ಜಾಗದಲ್ಲಿ ಒಳ್ಳೆಯದನ್ನು ಮಾಡಲು, ಹೇಳಿಸಿಕೊಳ್ಳಲು ತಿಂಗಳಾದರೂ ಸಾಕಾಗದು. ಅಸೂಯೆ ಒಂದು ರೀತಿಯ ಕಾಸರಕದ ಕಾಯಿಯಂತೆ.

Image

ಗೀತಾಮೃತ - 6

ಅಧ್ಯಾಯ ೨

    ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನ:/

ರಸವರ್ಜಂ ರಸೋಪ್ಯಸ್ಯ ಪರಂ ದೃಷ್ಟ್ಯಾ ನಿವರ್ತತೇ//೫೯//

Image

ಬ್ರಹ್ಮಚಾರಿಣಿ ದೇವಿ

ಬ್ರಹ್ಮ ಚಾರಿಣಿ ದೇವಿ ಚರಣಕೆ

ಶಿರವ ಬಾಗುತ ನಮಿಸುವೆ|

ಜಪದ ಮಾಲೆಯ ಕರದಿ ಪಿಡಿಯುತ

ಸೌಮ್ಯ ಭಾವವ ತೋರುವೆ||ಪ||

 

ಎಲೆಯ ಸೇವಿಸಿ ಬದುಕಿ ತಪವನು

ಬಾಟಲಿಯಲ್ಲಿ ಪೋಲಾರ್ ಕರಡಿಗೆ ಸಂದೇಶ

ಪೋಲಾರ್ ಕರಡಿ ಹಿಮವಂತ ತನ್ನ ಮುಂಗೈಯನ್ನು ಹಿಮದ ಬಯಲಿನ ಒಂದು ತೂತಿನಲ್ಲಿ ತೂರಿಸಿ ಅಲ್ಲೇನಿದೆ ಎಂದು ಪರೀಕ್ಷಿಸಿತು. ಅಲ್ಲಿ ನೀರಿನಲ್ಲಿ ಏನೋ ಚಲಿಸಿದಂತೆ ಅದಕ್ಕೆ ಕಂಡಿತ್ತು.

ಆಗಲೇ ಒಂದು ಪೆಂಗ್ವಿನ್ ಆ ತೂತಿನಿಂದ ತಲೆ ಹೊರಗೆ ಹಾಕಿತು. ತನ್ನ ರೆಕ್ಕೆಗಳಲ್ಲಿ ಅದು ಒಂದು ಗಾಜಿನ ಬಾಟಲಿಯನ್ನು ಹಿಡಿದು ಕೊಂಡಿತ್ತು. “ಹಿಮಗಡ್ದೆಗಳ ಆ ಬದಿಯಲ್ಲಿ ನಾನು ಇದನ್ನು ಕಂಡೆ. ಇದು ಅಲ್ಲಿ ನೀರಿನ ಅಲೆಗಳಲ್ಲಿ ತೇಲುತ್ತಿತ್ತು” ಎಂದಿತು ಪೆಂಗ್ವಿನ್.

ಇಬ್ಬರು ಗೆಳೆಯರು ಹಿಮದಲ್ಲಿ ಕುಳಿತು ಆ ಬಾಟಲಿಯನ್ನು ಪರೀಕ್ಷಿಸಿದರು. “ಅದರೊಳಗೆ ಏನೋ ಇದೆ” ಎಂದಿತು ಪೆಂಗ್ವಿನ್. ಬಾಟಲಿಯ ಕಾರ್ಕ್ ತೆಗೆದು, ಪೆಂಗ್ವಿನ್ ತನ್ನ ಕೊಕ್ಕಿನಿಂದ ಅದರೊಳಗಿದ್ದುದನ್ನು ಹೊರ ತೆಗೆಯಿತು. ಅದೊಂದು ಚೀಟಿ. "ಅದರಲ್ಲೇನು ಬರೆದಿದೆ?” ಎಂದು ಕೇಳಿತು ಹಿಮವಂತ.

Image

ನನ್ನಂತರಂಗದ ಪಿಸುಮಾತ ಆಲಿಪೆಯಾ

ತಿಳಿಮುಗಿಲ ತೊಟ್ಟಿಲಲಿ ಮಲಗಿಹ 

ಹೊಳೆವ ಚಂದಿರನ ಬೆಳಕಿನಲಿ

ಚಳಿಯ ಪಿಸುಮಾತ ಶೃಂಗಾರ ಹೆಚ್ಚಿದೆ

ಕಳೆಯಲಿ ಮಿಂಚಿವೆ ಬೆರಗಿನಲಿ...

 

ಪ್ರೀತಿಯ ಕರೆಯನು ಆಲಿಸಿ ತಂದೆನು

ಪ್ರತಿದಿನ ಮೊಸರು ಸೇವನೆಯ ಲಾಭಗಳೇನು?

ನೀವು ದಿನವೂ ಮೊಸರು ಸೇವಿಸುತ್ತೀರಿ. ಅದರಲ್ಲೂ ಮಧ್ಯಾಹ್ನ ಸೇವಿಸಿ. ಮೊಸರು ಸೇವಿಸಿದರೆ ದೇಹಕ್ಕೆ ತಂಪಾಗುತ್ತದೆ ಎನ್ನುತ್ತಾರೆ. ಆದರೆ ಮೊಸರು ಹೀಟ್, ಮಜ್ಜಿಗೆ ತಂಪು. ದೇಹ ಹೀಟ್ ಅಥವಾ ಕೂಲ್ ಮಾಡುವ ಗುಣ ಅಷ್ಟೇ ಅಲ್ಲಾ ಮೊಸರಿನಿಂದ ತುಂಬಾನೇ ಉಪಯೋಗವಿದೆ. ರಾತ್ರಿ ವೇಳೆ ಮೊಸರು ಸೇವನೆ ಅಷ್ಟಾಗಿ ಆರೋಗ್ಯಕ್ಕೆ ಉತ್ತಮವಲ್ಲ. 

ದಿನವೂ ಮೊಸರು ಸೇವಿಸುವುದರಿಂದ ಹೃದಯ, ಹೊಟ್ಟೆ, ಹಾಗೂ ಚರ್ಮಕ್ಕೆ ಆಗುವ ಲಾಭಗಳು:

Image

ಬಾಳಿಗೊಂದು ಚಿಂತನೆ (7) - ಆರೋಗ್ಯ

ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ನಮ್ಮ ಶರೀರ ಆರೋಗ್ಯವಾಗಿದ್ದಷ್ಟೂ ನಾವು ಚೇತೋಹಾರಿಗಳಾಗಿರಲು ಸಾಧ್ಯ. ಕವಿ ಕಾಳಿದಾಸ ಒಂದೆಡೆ *ಶರೀರ ಮಾಧ್ಯಂ ಖಲುಧರ್ಮ ಸಾಧನಂ* ಎಂದು ಬರೆದದ್ದು ಸತ್ಯ. ನಾವು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿಯೂ ಆರೋಗ್ಯವಂತರಾಗಿರಬೇಕು. ದೇಹದ ಸಮತೋಲನ ತಪ್ಪಿದಾಗ, ನಿತ್ಯ ನಡೆಯುವ ಕ್ರಿಯೆಗಳಿಗೆ ಅಡಚಣೆಯಾದಾಗ *ಆರೋಗ್ಯ ಕೆಟ್ಟಿದೆ* ತೀರ್ಮಾನಕ್ಕೆ ಬರುತ್ತೇವೆ. ನಮ್ಮಲ್ಲಿ ಒಂದು ಅಂಧ ವಿಶ್ವಾಸವಿದೆ. ಹಣವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದೆಂದು. ಆದರೆ ಆಯುಷ್ಯ ಮುಗಿದರೆ, ಏನೂ ಮಾಡಲಾಗದು. ಹಣ, ಶ್ರೀಮಂತಿಕೆ, ದರ್ಪ, ಅಹಂ ನಮ್ಮನ್ನು ಖಂಡಿತಾ ಉಳಿಸಲಾರದು.

Image

ಮಹಿಳಾ ಸ್ವಾಭಿಮಾನದ ಪ್ರತೀಕ - ಸೀತವ್ವ ಜೊಡ್ಡತಿ

೨೦೧೮ರ ತನಕ ಸೀತವ್ವ ಜೊಡ್ಡತಿ ಎಂಬ ಮಹಿಳೆಯ ಹೆಸರು ಬಹುತೇಕ ಅಪರಿಚಿತವಾಗಿತ್ತು. ಆದರೆ ಆ ವರ್ಷ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕರ್ನಾಟಕದ ಈ ಮಹಿಳೆಯ ಹೆಸರು ಸಮಾಜ ಸೇವೆಯ ಅಡಿಯಲ್ಲಿ ಇತ್ತು. ಬಹುತೇಕ ಮಂದಿಗೆ ಈ ಆಯ್ಕೆ ಹುಬ್ಬೇರಿಸಿರಬಹುದು. ಯಾರಪ್ಪಾ ಈ ಮಹಿಳೆ? ಏನು ಸಾಧನೆ ಮಾಡಿದ್ದಾರಂತೆ? ಎಂಬೆಲ್ಲಾ ಪ್ರಶ್ನೆಗಳು ಮನದಲ್ಲಿ ಕಾಡುತ್ತಿರಬಹುದು. 

Image

ರುಚಿಕರ, ಆರೋಗ್ಯದಾಯಕ ತಂಬುಳಿಗಳು

Image

೧. ಜೀರಿಗೆ ಮೆಣಸಿನ ಕಾಳಿನ ತಂಬ್ಳಿ:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಬೇಕಿದ್ದರೆ ಚೂರು ಬೆಲ್ಲ ಹಾಕಿ. ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ. ಜ್ವರ ಬಂದಾಗ ಒಳ್ಳೆಯದು.

೨. ಸಾಸಿವೆ ತಂಬ್ಳಿ:- ಕಾಯಿತುರಿ ಜೊತೆ ಸಾಸಿವೆ, ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. ಅಜೀರ್ಣ ಆದಾಗ ಒಳ್ಳೆಯದು.

ಬೇಕಿರುವ ಸಾಮಗ್ರಿ

ತಂಬುಳಿ ತಂಬುಳಿ ತಂಬ್ಳಿ ಇದ್ ಬಿಟ್ರೆ ಊಟ ಅಮೃತಕ್ಕೆ ಸಮಾನ. ಯಾರನ್ನಾದರೂ ಊಟಕ್ಕೆ ಕರುದಾದ್ರೆ ಒಂದ್ ಅನ್ನ- ತಂಬ್ಳಿ ಮಾಡ್ತೆ ಅಥವಾ ಅನ್ನ - ತಂಬ್ಳಿ ಉಂಡಕಂಡು ಹೋಗಲಕ್ಕು ಹೇಳಿ ಕರೆತೋ..ಕಡಿಮೆ ಸಾಮಗ್ರಿಲಿ ರುಚಿ ರುಚಿ ತಂಬ್ಳಿ ಮಾಡುಲಾಗ್ತು. ಅನ್ನಕ್ಕೆ ಮೊದಲು ಹಾಯ್ಕಂಡು ಉಣ್ಣೋ ತಂಬುಳಿ, ಕಡೆಗಣ್ ತಂಬ್ಳಿ ಹೇಳಿ ಎರಡು ಬಗೆ..ಮೊದಲು ಉಂಬುದಕ್ಕೆ ಹಸಿಮೆಣಸು ಅಥವಾ ಒಣಮೆಣಸಿನಕಾಯಿ ಒಗ್ಗರಣೆ ಕೊಡ್ತವಿಲ್ಲೆ. ಹಸಿದ ಹೊಟ್ಟೆಗೆ ತಂಪು ಆಗಲಿ ಹೇಳಿ ಹಿರಿಯರು ಮಾಡಿದ ಪದ್ಧತಿ.