January 2021

  • January 16, 2021
    ಬರಹ: Ashwin Rao K P
    ೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ…
  • January 16, 2021
    ಬರಹ: ಬರಹಗಾರರ ಬಳಗ
    ಹೂಮನಸ ಹೃದಯದಲಿ ನನ್ನ ಸೆಳೆಯುತ ನಡೆದೆ ಚೆಲುವಿನಲಿ ತನುವೊಳಗೆ ನಿನ್ನ ತುಂಬಿ ಮನದಾಸೆ ಏನಿದೆಯೊ ಹೇಳಲಾರದೆ ಹೋದೆ ಬದುಕಿನಲಿ ಸವಿ ಜೇನ ಒಲವ ತುಂಬಿ   ಸುಮ ಮಧುರ ಭಾವದೊಳು ಇಳೆಯರಳಿ ನಲಿಯುತಿರೆ ನನ್ನಾಕೆ ಸೇಲೆಯಲಿ ಬಳಿಯೆ ನಿಂದು ಮೌನ ಮುರಿಯುತ…
  • January 16, 2021
    ಬರಹ: addoor
    ಮೈಯಲ್ಲಿ ಮಚ್ಚೆಗಳಿದ್ದ ಮೊಲದ ಮರಿಯೊಂದರ ಹೆಸರು ಗುಂಡ. ಅದು ಇತರ ಪ್ರಾಣಿಗಳಿಗೆ ಬಹಳ ಉಪಟಳ ಕೊಡುತ್ತಿತ್ತು. ಯಾವತ್ತೂ ಅದು ಸಭ್ಯತೆಯಿಂದ ವರ್ತಿಸುತ್ತಿರಲಿಲ್ಲ. ಇತರ ಪ್ರಾಣಿಗಳು ಎದುರಾದಾಗೆಲ್ಲ ಅವನ್ನು ಅಡ್ಡಹೆಸರಿನಿಂದ ಕರೆದು ಗೇಲಿ…
  • January 16, 2021
    ಬರಹ: Ashwin Rao K P
    ಭಾರತೀಯ ಸಶಸ್ತ್ರ ಸೇನೆ ಎಂದೊಡನೆಯೇ ನಮ್ಮ ಮನಸ್ಸಿನಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಚಿತ್ರ ಹಾದು ಹೋಗುತ್ತದೆ. ಮೂರೂ ಸೇನೆಗಳಿಗೆ ಪ್ರತ್ಯೇಕ ದಿನಗಳಿವೆ. ಜನವರಿ ೧೫ ಅನ್ನು ಸೇನಾ ದಿನ (Army Day) ವಾಗಿ ಆಚರಿಸುತ್ತೇವೆ. ಜನವರಿ…
  • January 16, 2021
    ಬರಹ: Shreerama Diwana
    ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ..ಭಾರತದ ಜನಸಂಖ್ಯೆಯ ಶೇಕಡ ೮೦% ಕ್ಕೂ ಹೆಚ್ಚು ಜನ…
  • January 15, 2021
    ಬರಹ: ಬರಹಗಾರರ ಬಳಗ
    ಕಡಲು ಖಣಜವು ಸರ್ವ ಜೀವಿಗೆ ನೆಲೆಯು ನೀಡಿದ ತಾಣವು ಒಡಲ ಹೊಳಗಡೆ ಮುತ್ತು ರತ್ನವು ವಿವಿಧ ಜಲಚರ ಪ್ರಾಣಿಯು ||   ಚಿಕ್ಕ ಜೀವಿಯು ದೊಡ್ಡ ಜೀವಿಯ ತಿಂದು ಬದುಕುವ ಲೋಕವು ಚೊಕ್ಕ ಚಿನ್ನವು ಬೆಳ್ಳಿಬಟ್ಟಲು ಸಿಗುವ ವಿಸ್ಮಯ ಲೋಕವು||   ಪವನ ಬೀಸಲು…
  • January 15, 2021
    ಬರಹ: Kavitha Mahesh
    ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದ ತಾತ್ವಿಕ ಚಿಂತನೆಗಾಗಿ ಒಂದು ಕಥೆ. ಒಬ್ಬ ಜ್ಞಾನಿ ರಾಜನಿದ್ದ. ಪ್ರತಿದಿನ ಅವನ ಕ್ಷೌರ ಮಾಡಲು ಕ್ಷೌರಿಕನಿದ್ದ. ಆತನ ಕಾಯಕಕ್ಕೆ ಸಂಭಾವನೆ ಎರಡು ಚಿನ್ನದ ನಾಣ್ಯ. ಅಷ್ಟರಿಂದ ಆನಂದದ ಜೀವನ…
  • January 15, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ   ೭*        *//ಅಥ ಸಪ್ತಮೋಧ್ಯಾಯ://*   *ಜ್ಞಾನ ವಿಜ್ಞಾನ ಯೋಗವು*        *ಶ್ರೀ ಭಗವಾನುವಾಚ*   *ಮಯ್ಯಾಸಕ್ತಮನಾ: ಪಾರ್ಥ ಯೋಗಂ ಯುಂಜನ್ಮದಾಶ್ರಯ:/* *ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೈಣು//೧//*       ಶ್ರೀ…
  • January 14, 2021
    ಬರಹ: addoor
    ೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ…
  • January 14, 2021
    ಬರಹ: Ashwin Rao K P
    ಜನವರಿ ತಿಂಗಳಲ್ಲಿ ಬರುವ ಹಬ್ಬವೇ ಸಂಕ್ರಾಂತಿ. ಮಕರ ಸಂಕ್ರಾಂತಿಯ ಶುಭದಿನದಂದು ಎಲ್ಲಾ ಓದುಗರಿಗೆ ಹಾರ್ದಿಕ ಶುಭಾಶಯಗಳು. ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ವರ್ಷ ನಾವು ಬಹಳಷ್ಟು ಹಬ್ಬಗಳನ್ನು ಕೇವಲ ಆಚರಣೆಗಷ್ಟೇ ಸೀಮಿತ ಮಾಡಿಕೊಂಡಿದ್ದೆವು.…
  • January 14, 2021
    ಬರಹ: ಬರಹಗಾರರ ಬಳಗ
    ನೂಪುರ ನಾದವ ಕೇಳಲು ಕರ್ಣದಿ ಗೋಪುರದಲ್ಲಿಯ ಶುಭ್ರದಿ ಬೆಳಕದು ಕೋಪದ ಸೂಚಕ ಹುಬ್ಬನು ಹಾರಿಸಿ ಕಂಡಳು ತೋಷದಲಿ| ಲೋಪವ ಕಾಣದೆ ಮನದಲಿ ಹೊಗಳಲು ರೂಪವ ಹೊಗಳಲು ಷಟ್ಪದಿ ಸಾಲದು ಪೋಪದೆ ಸೆಳೆದಳು ಮೋಹದ ಚಣದಲಿ ನಲ್ಲನ ತಬ್ಬುತಲಿ||   ಲಸಿತದ ಕಾಲಿನ ಢಾಳದ…
  • January 14, 2021
    ಬರಹ: Kavitha Mahesh
    ಹಿಂದೂಗಳ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ. ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ…
  • January 14, 2021
    ಬರಹ: Ashwin Rao K P
    ಆಂಗ್ಲ ಬರಹಗಾರ ಪಾಲ್ ಕೊಯೆಲ್ಹೋ ಬರೆದ ದಿ ಆಲ್ ಕೆಮಿಸ್ಟ್ ಎಂಬ ಇಂಗ್ಲೀಷ್ ಪುಸ್ತಕದ ಮಾಹಿತಿಯನ್ನು ‘ಸಂಪದ’ದಲ್ಲಿ ಬಹಳ ಹಿಂದೆ ನೀವು ಗಮನಿಸಿರಬಹುದು. ಈ ಪುಸ್ತಕ ಅದರದ್ದೇ ಕನ್ನಡ ಅನುವಾದ. ಕನ್ನಡ ಮಾತ್ರ ಬಲ್ಲವರಿಗೆ ಅರ್ಥವಾಗುವಂತೆ ಸರಳವಾಗಿ…
  • January 14, 2021
    ಬರಹ: Shreerama Diwana
    ಆಗಲಿ ಮನಸುಗಳ ಕ್ರಾಂತಿ, ಭಾರತೀಯತೆ - ಮಾನವೀಯತೆಯ ಕ್ರಾಂತಿ, ತೊಲಗಲಿ ಮೌಢ್ಯಗಳ ಭ್ರಾಂತಿ, ತುಡಿಯಲಿ ಸಹಜೀವಿಗಳೆಡಗೆ ಶಾಂತಿ, ಮುಗಿಲೆತ್ತರಕ್ಕೇರಲಿ ಚಿಂತನೆಯ ಕ್ರಾಂತಿ, ಪಾತಾಳಕ್ಕಿಳಿಯಲಿ ಕಲ್ಮಶದ ಭ್ರಾಂತಿ. ಹಬ್ಬದ ಸಂಭ್ರಮಗಳು ನಮ್ಮ ಮೈ…
  • January 13, 2021
    ಬರಹ: Ashwin Rao K P
    ಅರೇಬಿಯನ್ ನೈಟ್ಸ್ ಅಥವಾ ಅರೇಬಿಯಾದ ಇರುಳು ಎಂಬ ಕಥೆಗಳು ಬಹಳ ಪ್ರಸಿದ್ಧವಾಗಿವೆ. ಪ್ರಪಂಚದ ಬಹುತೇಕ ಭಾಷೆಗಳಿಗೆ ಈ ಕಥೆಗಳು ಅನುವಾದಗೊಂಡು ಅಬಾಲವೃದ್ಧರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನಿದು ಅರೇಬಿಯನ್ ನೈಟ್ಸ್ ಕಥೆಗಳು? ಬಹಳ ಹಿಂದೆ…
  • January 13, 2021
    ಬರಹ: Shreerama Diwana
    ದಾಳಿ ಇಡುತ್ತಿದ್ದಾರೆ ಸೋಷಿಯಲ್ ಮೀಡಿಯಾ ಏಜೆಂಟ್ ಗಳು.... ದಿಕ್ಕು ತಪ್ಪಿಸುತ್ತಿದ್ದಾರೆ ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳು... ನಮ್ಮ ಮನಸ್ಸುಗಳನ್ನು ನಿಯಂತ್ರಿಸುತ್ತಿದ್ದಾರೆ ಮಾಧ್ಯಮ ಬ್ರೋಕರ್ ಗಳು.... ಇಡೀ ಸಮಾಜದ ಸ್ವಾಸ್ಥ್ಯ ಹಾಳು…
  • January 13, 2021
    ಬರಹ: ಬರಹಗಾರರ ಬಳಗ
    ಅಂತರಂಗ ಕದವು ತೆರೆದಿದೆ ಬಾ ಈಗ ರಂಗುರಂಗು ತಳಿರು ಕಟ್ಟಿದೆ ನೋಡೀಗ ಒಳಗಣ್ಣು ತೆರೆದು ನೀ ನೋಡು ನನ್ನೆದೆಗೆ ಒಲವು ನೀ ನೀಡು||   ಅಂದಚೆಂದ ಸವಿಯು ಬಾರೋ ನೀ ನೀಗ ಮೆಲ್ಲಮೆಲ್ಲ ಹೃದಯ ಹಾಡನು ಹಾಡೀಗ ಸಂಪ್ರೀತಿ ಚೆಂದ ಮಾವಯ್ಯ ನಂಪ್ರೀತಿ ಜಗಕೆ…
  • January 13, 2021
    ಬರಹ: Kavitha Mahesh
    ಹಿರಿಯರ ಅನುಭವದ ಮಾತುಗಳು ಕಿರಿಯರಿಗೆ ಯಾವಾಗಲೂ ಅಪಥ್ಯವಾಗಿರುತ್ತವೆ. ಆದರೆ ಹಿರಿಯರು ಹೇಳುವ ಸಂಗತಿಗಳು ಅವರ ಅನುಭವದ ಮಾತುಗಳಾಗಿರುತ್ತದೆ. ಕೆಲವು ವಿಷಯಗಳು ಈಗಿನ ಕಾಲಕ್ಕೆ ಮೂಢನಂಬಿಕೆಯಂತೆ ಕಂಡು ಬಂದರೂ ಅದರಲ್ಲಿ ಹಲವಾರು ಸತ್ಯಗಳು…
  • January 12, 2021
    ಬರಹ: Ashwin Rao K P
    ಮೂಲತಃ ಚೆನ್ನೈ ನವರಾಗಿದ್ದ ಸಂಗೀತ ನಿರ್ದೇಶಕ ಆರ್. ರತ್ನಂ ಅವರು ಜನವರಿ ೯, ೨೦೨೧ರಂದು ನಿಧನಹೊಂದಿದರು. ಸುಮಾರು ೯೭ ವರ್ಷ ವಯಸ್ಸಿನ ಇವರಿಗೆ ಕನ್ನಡ ಭಾಷೆ ಮತ್ತು ಸಿನೆಮಾ ರಂಗವೆಂದರೆ ಅಪಾರ ಪ್ರೀತಿ. ಸಾಯುವ ಸಮಯದಲ್ಲೂ ತಮ್ಮ ಅಂತ್ಯಕ್ರಿಯೆಯನ್ನು…
  • January 12, 2021
    ಬರಹ: Ashwin Rao K P
    ಪತ್ರಕರ್ತ ಲೇಖಕ ಶ್ರೀರಾಮ ದಿವಾಣರ ಮೊದಲ ಪ್ರಕಟಿತ ಲೇಖನಗಳ ಸಂಗ್ರಹ ಪುಸ್ತಕ ಇದು. ‘ಬರೆದದ್ದನ್ನೆಲ್ಲ ಪ್ರಕಟಿಸಬಾರದು, ಮುದ್ರಿಸಬಾರದು. ಆದರೆ ಆಯ್ದ ಲೇಖನಗಳನ್ನಾದರೂ ಪ್ರಕಟಿಸಬಹುದಲ್ವಾ?’ ಎಂಬ ಮಾತುಗಳನ್ನು ಹೇಳಿದವರು ನೇರ ನಡೆ-ನುಡಿಯ ನಿರ್ಭೀತ…