ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 2)

ಬೆಳೆಗಳಿಗೆ ಭಯಂಕರ ವಿಷ ಸುರಿಯುವ, ನಮ್ಮಕಣ್ಣು ತೆರೆಸಬೇಕಾದ ಪ್ರಕರಣಗಳು
ರೈತರು ಭತ್ತದ ಹೊಲಗಳಿಗೆ ಎಷ್ಟು ವಿಷ ರಾಸಾಯನಿಕ ಸುರಿಯುತ್ತಾರೆ ಎಂಬುದನ್ನು ೧೭ ಮಾರ್ಚ್ ೨೦೧೮ರ “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ದಾಖಲಿಸಿರುವ ಒಂದು ವರದಿ: “ಎಣ್ಣಿ” ಉಣ್ಣುವ ಸಂಕಟದ ಕಥನ”. ಮಿತಿಮೀರಿದ ಪ್ರಮಾಣದಲ್ಲಿ ಕೀಟನಾಶಕಗಳ ಉಳಿಕೆ ಇರುವ ಕಾರಣಕ್ಕಾಗಿ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಯುರೋಪ್ ಒಕ್ಕೂಟ, ಇರಾನ್ ಮತ್ತು ಅಮೇರಿಕಾದ ಮಾರುಕಟ್ಟೆಗಳು ತಿರಸ್ಕರಿಸಿವೆ. ಹಸಿಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಕಾಳುಮೆಣಸು ಕೂಡ ಹಾಗೆಯೇ ತಿರಸ್ಕೃತವಾಗಿವೆ.

Image

‘ರೂಬಿ' ಆನೆಯ ಚಿತ್ರಕಲೆ!

ಪ್ರಾಣಿ, ಪಕ್ಷಿಗಳು ತುಂಬಾನೇ ಚುರುಕಾಗಿರುತ್ತವೆ. ಬಹಳಷ್ಟು ಪ್ರಾಣಿಗಳು ತಮ್ಮ ಭಾವನೆಯನ್ನು ಒಂದಲ್ಲಾ ಒಂದು ವಿಧಾನದಿಂದ ವ್ಯಕ್ತ ಪಡಿಸುತ್ತವೆ. ಪ್ರಾಮಾಣಿಕತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಇದು ತನಗೆ ಪರಿಚಯವಿರುವವರನ್ನು ಕಂಡಾಗ ಬಾಲ ಅಲ್ಲಾಡಿಸುವುದರ ಮೂಲಕ ತನ್ನ ಸಂತಸ, ಪರಿಚಯ ವ್ಯಕ್ತ ಪಡಿಸುತ್ತದೆ. ಕೋತಿಗಳು ತಮ್ಮ ಮರಿಗಳು ಸತ್ತು ಹೋದಾಗ ಅದನ್ನು ಹಿಡಿದುಕೊಂಡು ರೋಧಿಸುತ್ತವೆ.

Image

ತಂದೆಗೆ ಮಕ್ಕಳ ಉಡುಗೊರೆ

ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ. ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ. ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು. ಇಬ್ಬರೂ ಸುಖೀ ಸಂಸಾರಸ್ಥರೇ. ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು.

Image

ಗಸಗಸೆ ಪಾಯಸ

Image

ಗಸಗಸೆ ಮತ್ತು ಸಣ್ಣ ರವೆಗಳನ್ನು ಹುರಿದು ಕೊಳ್ಳಬೇಕು. ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಹಾಕಿ , ಎಲ್ಲವನ್ನೂ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ತೆಂಗಿನಕಾಯಿ ತುರಿ (ಸುಳಿ)ಯನ್ನು ರುಬ್ಬಿ ಹಾಲು ತೆಗೆದು ಇಟ್ಟುಕೊಳ್ಳಬೇಕು.

ಬೇಕಿರುವ ಸಾಮಗ್ರಿ

ಗಸಗಸೆ ೪ ಚಮಚ, ಸಣ್ಣ ರವೆ ೨ ಚಮಚ, ಸ್ವಲ್ಪ ಗೋಡಂಬಿ, ಬಾದಾಮಿ, ಒಣ ದ್ರಾಕ್ಷೆ, ಸ್ವಲ್ಪ ಏಲಕ್ಕಿ ಹುಡಿ, ತೆಂಗಿನ ಕಾಯಿ ತುರಿ ೧ ಕಪ್, ರುಚಿಗೆ ಬೇಕಾದಷ್ಟು ಬೆಲ್ಲ ಅಥವಾ ಸಕ್ಕರೆ, ರುಚಿಗೆ ಉಪ್ಪು

 

ಜ್ಞಾನ ಭಿಕ್ಷಾ ಪಾದಯಾತ್ರೆಯ ಕುರಿತು…

ಪ್ರಿಯ ಓದುಗರೇ, ಬೆಂಗಳೂರಿನ ಶ್ರೀಯುತ ವಿವೇಕಾನಂದ ಹೆಚ್. ಕೆ. ಅವರ ಪ್ರಖರವಾದ ಮಾಹಿತಿಪೂರ್ಣ ಲೇಖನಗಳನ್ನು ನೀವು ಈಗಾಗಲೇ ಸಂಪದದ ಪುಟಗಳಲ್ಲಿ ಓದಿರುತ್ತೀರಿ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿಯನ್ನು ‘ಜ್ಞಾನ ಭಿಕ್ಷಾ’ ಪಾದಯಾತ್ರೆಯ ಅಭಿಯಾನದ ಮೂಲಕ ಇವರು ಪ್ರಾರಂಭಿಸಿ ಈಗಾಗಲೇ  88 ದಿನಗಳೇ ಕಳೆದಿವೆ.

Image

ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 1)

ಬದುಕಬೇಕು, ಚೆನ್ನಾಗಿ ಬದುಕಬೇಕು ಎಂಬುದು ನಮ್ಮೆಲ್ಲರ ಬಯಕೆ. ಅದಕ್ಕಾಗಿ ದಿನಕ್ಕೆ ಮೂರು ಸಲವಾದರೂ ತಿನ್ನುತ್ತೇವೆ – ಹಣ್ಣು, ತರಕಾರಿ, ಧಾನ್ಯಗಳನ್ನು. ಒಂದು ಕ್ಷಣ ಯೋಚಿಸಿ: ನಾವು ತಿನ್ನುವ ಆಹಾರವೇ ವಿಷವಾದರೆ?

Image

ಗಣತಂತ್ರ ದಿನ - ಭಾರತದ ಹೆಮ್ಮೆ

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೂರು ವರ್ಷಗಳ ಬಳಿಕ ದೇಶಕ್ಕೆ ಸಂವಿಧಾನ ಬಂತು. ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ಉಳ್ಳ ದೇಶ. ಇಲ್ಲಿ ಪ್ರಜೆಗಳೇ ಪ್ರಭುಗಳು. ಭಾರತದ ಸಂವಿಧಾನವು ನಾಗರಿಕರಾದ ನಮಗೆ ಹಲವಾರು ಅನುಕೂಲತೆ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಇದಕ್ಕೆ ಕಾರಣರಾದವರು ಸಂವಿಧಾನ ನಿರ್ಮಾತೃರು. ಸಂವಿಧಾನ ಶಿಲ್ಪಿ ಎಂದು ನಾವು ಕರೆಯುವ ಡಾ.ಬಿ.ಆರ್.

Image

ಪುಸ್ತಕನಿಧಿ- 13.ಬರ್ಕ್ ವೈಟ್ ಕಂಡ ಭಾರತ- ಸ್ವಾತಂತ್ರ್ಯದೆಡೆಗೆ ಅರೆಪಯಣ

ಚಿತ್ರ

 

ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಆ ಸಮಯದಲ್ಲಿ ಭಾರತದಲ್ಲಿ ಕಂಡುದನ್ನು ಫೋಟೋ ತೆಗೆದಳು ಅಷ್ಟೇ ಅಲ್ಲ ಹಾಫ್ ವೇ ಟು ಫ್ರೀಡಂ (ಸ್ವಾತಂತ್ರ್ಯದೆಡೆಗೆ ಅರೆಪಯಣ) ಎಂಬ ಪುಸ್ತಕವನ್ನು ಬರೆದಳು. ಇದನ್ನು ಒಂದು ಸೃಜನಶೀಲ ದಾಖಲೆ ಎಂದು ಪರಿಗಣಿಸಲಾಗುತ್ತದೆ.