ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 2)
ಬೆಳೆಗಳಿಗೆ ಭಯಂಕರ ವಿಷ ಸುರಿಯುವ, ನಮ್ಮಕಣ್ಣು ತೆರೆಸಬೇಕಾದ ಪ್ರಕರಣಗಳು
ರೈತರು ಭತ್ತದ ಹೊಲಗಳಿಗೆ ಎಷ್ಟು ವಿಷ ರಾಸಾಯನಿಕ ಸುರಿಯುತ್ತಾರೆ ಎಂಬುದನ್ನು ೧೭ ಮಾರ್ಚ್ ೨೦೧೮ರ “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ದಾಖಲಿಸಿರುವ ಒಂದು ವರದಿ: “ಎಣ್ಣಿ” ಉಣ್ಣುವ ಸಂಕಟದ ಕಥನ”. ಮಿತಿಮೀರಿದ ಪ್ರಮಾಣದಲ್ಲಿ ಕೀಟನಾಶಕಗಳ ಉಳಿಕೆ ಇರುವ ಕಾರಣಕ್ಕಾಗಿ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಯುರೋಪ್ ಒಕ್ಕೂಟ, ಇರಾನ್ ಮತ್ತು ಅಮೇರಿಕಾದ ಮಾರುಕಟ್ಟೆಗಳು ತಿರಸ್ಕರಿಸಿವೆ. ಹಸಿಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಕಾಳುಮೆಣಸು ಕೂಡ ಹಾಗೆಯೇ ತಿರಸ್ಕೃತವಾಗಿವೆ.
- Read more about ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 2)
- Log in or register to post comments