ನಮ್ಮ ದೊಡ್ಡಕ್ಕ ಮತ್ತು ಭಾವ ಮೊದಲ ದೀಪಾವಳಿಗೆ ಬಂದಿದ್ದರು. ಭಾವನವರಿಗೆ ನಾಯಿ ಕಂಡರೆ ತುಂಬಾ ಭಯ. ನಮ್ಮನೆಯಲ್ಲೊಂದು ಅತೀ ತುಂಟ ನಾಯಿ ಇತ್ತು. ಭಾವ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿನಿಂದ ಬಂದರೆ, ನಮ್ಮ ನಾಯಿಗೆ ಹೆದರಿ ಶಿವಮೊಗ್ಗಾವರೆಗೂ…
ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಅರುಂಧತಿ ರಾಯ್ ಹೇಳಿದ್ದು ಸರಿಯಾಗಿದೆ. ಪರದೇಶದ ಓರ್ವ (ಪ್ರಥಮ)ಪ್ರಜೆ ಭಾರತಕ್ಕೆ ಬಂದನೆಂದರೆ, ಆಗ ಭಾರತದಲ್ಲಿ ಆತ ಬಂದಿಳಿದು ಹರಿದಾಡುವ ಜಾಗಗಳಲ್ಲಿ ಪ್ರಜೆಗಳಿಗೆ ಬೀಡಾಡಿ ನಾಯಿಗಳಿಗಿರುವ…
ಈ ಲೇಖನ ಕಳೆದ ವರುಷ ಬರೆದಿದ್ದು...ಆದ್ರೆ ಈ ದೀಪಾವಳಿಗೆ ಸಪ್ತ ಸಮುದ್ರದ ಆಚೆ ಇರೋ ಅಮೆರಿಕ ಅನ್ನೋ ಮಾಯಾಲೋಕದಲ್ಲಿ ಇರೊದರಿ೦ದ ಈ ಲೇಖನ ನನ್ನ ಸದ್ಯದ ಪರಿಸ್ತಿತಿಯನ್ನು ಪ್ರತಿಬಿ೦ಬಿಸುತ್ತಿದೆ. ಅದಕ್ಕೆ ಇದನ್ನು ಸ೦ಪದದಲ್ಲಿ ಪ್ರಕಟಿಸಿದ್ದೇನೆ…
ನೆಲದ ನಡೆಯ ವಿಧಾನ
ಈ ಇದೇ ಮಣ್ಣು ನೆಲವನ್ನಗೆಯತೊಡಗಿದರೆ;ಸ್ವರ್ಣ ಖಚಿತ ಸಿಂಹಾಸನದ ಜೊತೆಜೊತೆಗೇಬತ್ತೀಸ ಪುತ್ಥಳಿಗಳು ತಡೆ ತಡೆದು ಹೇಳಿದ ಕತೆ-ಕೇಳ ಕೇಳುತ್ತಲೇ ಗುರಿಯಿಂದ ದೂರವಾದವರ ವ್ಯಥೆ.ಈ ಇದೇ ಮಣ್ಣು ನೆಲವನ್ನು ಚಣಕಾಲ ದಿಟ್ಟಿಸಿದರೆ;ನೆಲದ…
(೨೯೧) ಬೃಹತ್ ವಾದವೊಂದು ಕನಿಷ್ಠ ಅವಕಾಶದಲ್ಲಿ ನೆಲೆ ನಿಂತಿರುವುದನ್ನು ’ಹೇಳಿಕೆ’ ಎನ್ನುತ್ತೇವೆ.
(೨೯೨) ನಾನು ಸುಳ್ಳನೆಂದು ನೀವು ನಿರೂಪಿಸಬಲ್ಲಿರ? ಹಾಗಿದ್ದಲ್ಲಿ ನಾವಿಬ್ಬರೂ ಎರಡು ವೈರುಧ್ಯಮಯ ಜಗತ್ತಿನಲ್ಲಿ ಬದುಕುತ್ತಿದ್ದೇವೆಂದು ’ನಾನು’…
ಮಂಗಳೂರಿನಲ್ಲಿ ಇತ್ತೀಚೆಗೆ ಕನ್ನಡ ಪುಸ್ತಕಗಳ ಭಾರೀ ಪ್ರದರ್ಶನ ಏರ್ಪಟ್ಟಿತ್ತು. ಕನ್ಫ್ಯೂಸ್ ಮಾಡ್ಕೋಬೇಡಿ, ಭಾರೀ ಎಂದರೆ ಭಾರೀ ತಯಾರಿ ಮತ್ತು ಉತ್ಸಾಹ ಎಂದು. ಭಾರೀ ಯಶಸ್ಸಲ್ಲ. ಓದಿನ ಕಡೆ ಜನರ ಧೋರಣೆ ಏನು ಎಂದು ಖಾಲಿಯಾಗಿ ಭಣಗುಟ್ಟುತ್ತಿದ್ದ…
ಮಣ್ಣಿನ ತೆಪ್ಪವೋ;
ತೆಪ್ಪದೊಳು ತುಪ್ಪದ ಸಮುದ್ರವೋ!
ತೆಪ್ಪದ ಕಮಲದಲ್ಲಿ ಹತ್ತಿಯ ಬತ್ತಿಯೋ;
ಬತ್ತಿಯ ತ್ಯಾಗದಿಂದ ಬೆಳಕಿನ ಸೆಲೆಯೋ!
ಹೊಮ್ಮಿದೆ ದೀಪವೆಂಬ ಹಣತೆಯಿಂದ ಹಬ್ಬದ ಅಲೆ;
ಮನದಲ್ಲಿ ತಿಳಿಸುತ್ತ ಈ ಬೇರೆ ಬೇರೆ
ನೆಲೆಯ ವಸ್ತುಗಳ…
ನಾನು ಹಾಡುತ್ತೇನೆನಾನು ಕಳೆದುಕೊಂಡಿದ್ದೇನೆಂದು;ನಾನು ಗೆದ್ದಿದ್ದು ಏನೆಂದು;ನಾನು ನಡೆದ ದಾರಿಯನಾನು ಕಂಡ ಯುದ್ಧ ಭೂಮಿಯ ರೀತಿಯನ್ನು;ನನ್ನ ದೊರೆಯೋ! ಸೋಲುಂಡವನು;ನನ್ನ ಗೆಳೆಯರೋ! ಸೋತ ಸೈನಿಕರು;ಕಾಲು ಮಾತ್ರ ನಿಲ್ಲದೆ ತೆವಳುತ್ತಿದೆಸರಿಯಿದ್ದವರು…
ಯಾವಾಗ ನಿನಗೆ ವಯಸ್ಸಾಗುವುದೋ!;
ತಲೆಗೂದಲು ನೆರೆಯುವುದೋ!;
ನಿದ್ದೆ ಎಡನಿಡದೇ ಕಾಡುವುದೋ!;
ಎಲ್ಲಕ್ಕೂ ನಿನಗೆ ಒಪ್ಪಿಗೆ ಇದ್ದಲ್ಲಿ ಈ ಪುಸ್ತಕ ತೆಗೆದು ಕೋ;
ನಿನ್ನ ಕಂಗಳಲ್ಲಿ ಒಮ್ಮೆ ಹಿಂದಿನದೆಲ್ಲವನ್ನೂ ನೆನಪಿಸಿ ಕೋ;
ಈ ಪುಸ್ತಕದ ಒಳಹೊಕ್ಕು…
ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು. ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು! ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು? ದುಬೈನ…
ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್, ಸಂಯುಕ್ತ ಕರ್ನಾಟಕ ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ ಜಿಗಿಯುವ ವಿಲಕ್ಷಣ ತೋರುತ್ತಿರುವ…
ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ
ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ…
(೨೮೬) ಬೇಸರಿಕೆಃ ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು.
(೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ ವಯಸ್ಕರೂ ತಮ್ಮ ಯೌವ್ವನಾವಸ್ಥೆಯ ’ಮಾಗಿದ’…
ಭಾಗ ೩
"ಪೇಪರ್ ಓದಿದ್ದು ಸಾಕು. ಸ್ನಾನ ಮಾಡಿ, ಅದೇನೋ ಘನ ಕಾರ್ಯಕ್ಕೆ ಹೋಗಬೇಕು ಅಂತಿದ್ದರಲ್ಲ. ಏಳಿ" ಪದ್ದಮ್ಮನವರು ಯಜಮಾನರಿಗೆ ಕಾಫಿ ಕೊಡುತ್ತ ಗದರಿದರು.
ಯಜಮಾನರು ವಾಕಿಂಗ್ ಮುಗಿಸಿ, ಹಾಲು ತಂದ ಮೇಲೆ ಜೊತೆಯಲ್ಲಿ ಪದ್ದಮ್ಮನವರು ಕಾಫಿ…