ಜನತೆ - ಸರ್ಕಾರ - ಖಾಸಗೀಕರಣ...

ಖಾಸಗೀಕರಣ ಮತ್ತು ಸರ್ಕಾರಿ ಆಡಳಿತ ನಿಯಂತ್ರಣ. ಯಾವುದು ಉತ್ತಮ ಮತ್ತು ಯಾರಿಗೆ ಯಾವುದು ಉತ್ತಮ ಎಂಬುದು ಒಂದು ದೊಡ್ಡ ಪ್ರಶ್ನೆ. ಅದಕ್ಕೆ ಮೊದಲು ಒಂದು ಸರಳ ವಿವರಣೆ.....

Image

ಹುಚ್ಚಾಟದ ಹುಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
೬೦.೦೦, ಮುದ್ರಣ : ನವೆಂಬರ್ ೨೦೧೧

ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು.

ಜ್ಞಾನಪೀಠ ಪ್ರಶಸ್ತಿ ಕೊಡೋರು ಯಾರು?

'ಏನೇ ಅನ್ನಿ, ಡಾ.ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅವರಂಥ ಕಾದಂಬರಿಕಾರ ಮತ್ತೊಬ್ಬರಿಲ್ಲ. ಈಗಂತೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಈ ಸಲವಾದರೂ ಆ ಪ್ರಶಸ್ತಿಯನ್ನು ಡಾ.ಭೈರಪ್ಪನವರಿಗೆ ಕೊಡಬಾರದಾ ?' ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. 

Image

ಗಿಡದಲ್ಲಿ ಬೆಳೆದ ಸಿಹಿಕುಂಬಳ

ನಮ್ಮ ಮನೆಯ ತರಕಾರಿ ಬಳ್ಳಿ ಹತ್ತಿರದ ಮನೆಯಲ್ಲಿ ಕಾಯಿ ಬಿಟ್ಟಿದೆ, ಈ ತರಕಾರಿ ಬಳ್ಳಿಯಲ್ಲಿ ಬೆಳೆಯದೇ ಗಿಡದಲ್ಲಾದರೂ ಬೆಳೆಯಬಾರದಿತ್ತಾ, ಸುಮ್ಮನೇ ನೆರೆಹೊರೆಯವರಿಗೆ ಕಿರಿಕಿರಿ. ಹೀಗೆಲ್ಲಾ ನಗರದಲ್ಲಿ ಸಣ್ಣ ಪುಟ್ಟ ತರಕಾರಿ ಕೃಷಿ ಮಾಡುವವರು ಯೋಚನೆ ಮಾಡುತ್ತಾರೆ. ಸೋರೆಕಾಯಿ, ಕುಂಬಳಕಾಯಿ, ಸಿಹಿ ಕುಂಬಳ (ಚೀನಿ ಕಾಯಿ), ಪಡುವಲಕಾಯಿ ಹೀಗೆ ಬಳ್ಳಿಯಲ್ಲಿ ಕಾಯಿ ಬಿಡುವ ತರಕಾರಿಗಳದ್ದು ಇದೇ ಕಥೆ.

Image

ಪುರಿ ಜಗನ್ನಾಥ ಸ್ವಾಮಿಯ ನೈವೇದ್ಯ

ಅಮ್ಮ ಹೇಳುತಿದ್ದಳು ‘ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ.  ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ. ಅಲ್ಲಿ ನೈವೇದ್ಯದ ಕ್ರಿಯೆಯನ್ನು *ಮಹಾಭೋಗ* ಎನ್ನುತ್ತಾರೆ. ಅದೇಕೆ ಮಹಾಭೋಗ ಎನ್ನುತ್ತಾರೆ ಅಂದರೆ  ಆದು ಸರ್ವ ಶಕ್ತ ವಿಷ್ಣುವಿನ ಪ್ರಸಾದ.

Image

ಪನ್ನೀರು - ಹನಿಗವಿತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಪರಮೇಶ್ವರಪ್ಪ ಕುದರಿ
ಪ್ರಕಾಶಕರು
ಹರಿ ಪ್ರಕಾಶನ, ಮಾಸ್ತಮ್ಮ ಬಡಾವಣೆ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ-೫೭೭೫೦೧
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೨೦

‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ.

ನಮ್ಮ ಹೆಮ್ಮೆಯ ಭಾರತ (ಭಾಗ 53 - 54)

೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆ
ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಭಾರತೀಯ ಇಂಜಿನಿಯರರು ದೊಡ್ಡ ಸಂಖ್ಯೆಯಲ್ಲಿ ಸಿಲಿಕಾನ್ ವ್ಯಾಲಿಯ ವಿವಿಧ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲು ಶುರುಮಾಡಿದರು. ಭಾರತದ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತು, ಸಿಲಿಕಾನ್ ವ್ಯಾಲಿಯ ಕಂಪೆನಿಗಳಲ್ಲಿ ಶ್ರದ್ಧೆಯಿಂದ ದುಡಿದ ಇವರು ಆ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಿಗೆ ಭಡ್ತಿ ಪಡೆದರು.

Image