ಕಾಮನಬಿಲ್ಲು - ಒಂದು ಶಿಶು ಗೀತೆ
*ಬಾನಿನಲಿ ನೋಡು ಬಣ್ಣಗಳ*
- Read more about ಕಾಮನಬಿಲ್ಲು - ಒಂದು ಶಿಶು ಗೀತೆ
- Log in or register to post comments
*ಬಾನಿನಲಿ ನೋಡು ಬಣ್ಣಗಳ*
ಪುಷ್ಯ ಬಹುಳ ಅಮವಾಸ್ಯೆಯ ದಿನವನ್ನು ಸಂಗೀತದ ಪಿತಾಮಹ ಶ್ರೀ ಪುರಂದರ ದಾಸರ ಆರಾಧನೆಯ ರೂಪದಲ್ಲಿ ಆಚರಿಸಲಾಗುತ್ತದೆ.
‘ಸುವರ್ಣ ಸಂಪುಟ' ಪುಸ್ತಕದಿಂದ ನಾವು ಈ ಬಾರಿ ಆಯ್ದುಕೊಂಡದ್ದು ಕವಿ ಸ.ಪ.ಗಾಂವಕರ ಅವರ ಕವನ ‘ಕವಿ'. ಈ ಕವನ ಬರೆದ ಕವಿಯ ಬಗ್ಗೆ ಬಹುತೇಕ ಮಂದಿಗೆ ತಿಳಿದಿರಲಾರದು. ಕವಿಯ ಬಗ್ಗೆ ಸಣ್ಣ ವಿವರವನ್ನು ಕವನದ ಕೊನೆಯಲ್ಲಿ ಕೊಡಲಾಗಿದೆ. ಈ ಸುವರ್ಣ ಸಂಪುಟದ ಮೂಲಕ ಖ್ಯಾತ ಕವಿಗಳಲ್ಲದೇ ಪ್ರತಿಭಾವಂತರಾಗಿದ್ದೂ ಎಲೆ ಮರೆಯ ಕಾಯಿ ಆಗಿ ಉಳಿದು ಹಾಗೆಯೇ ಮರೆಯಾಗಿ ಹೋದ ಕವಿಗಳೂ ಪರಿಚಯವಾಗಲಿದ್ದಾರೆ ಎಂಬುದು ಖುಷಿಯ ಸಂಗತಿ.
ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ. ಅಲೆ ಅಲೆಯಾಗಿ, ವಿವಿಧ ಶಬ್ಧ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ...
ಭೃಂಗದಂತೆ ನಲಿದು ಬಂದೆ
ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಅದು ಅತೀತವಾದುದು. ನಾಶರಹಿತವಾದುದು ಮತ್ತು ಶಾಶ್ವತವಾದುದು. ಹೇಗೆ ಮನುಷ್ಯನು ಹಳೆಯ ಬಟ್ಟೆಯನ್ನು ಬೇಡವೆಂದು ನಿರಾಕರಿಸಿ, ಹೊಸವಸ್ತ್ರಗಳನ್ನು ಧರಿಸುವನೋ ಹಾಗೆ ಈ ಆತ್ಮ ಎಂಬುದು. ಆತ್ಮ ಎನ್ನುವುದು ನಿತ್ಯ, ಸತ್ಯ, ಅಚಲ, ಅಖಂಡ, ಶಾಶ್ವತ, ಅವಿನಾಶಿಯಾದುದು. ಬುದ್ಧಿ ಮನಸುಗಳಿಗೆ ನಿಲುಕದ್ದು.
-ಜಪಾನಿನ ನಾರಾ ಎಂಬಲ್ಲಿರುವ ತೊಡೈಜಿ ಬೌದ್ಧ ಗುರುಕುಲದ ವಿಶಾಲ ಸಭಾಂಗಣವನ್ನು ಎಂಟನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ಮಿಸಲಾಯಿತು. ಐವತ್ತಮೂರು ಅಡಿ ಎತ್ತರದ ಬುದ್ಧನ ಭವ್ಯ ಕಂಚಿನ ಮೂರ್ತಿ ಅಲ್ಲಿದೆ. ಹತ್ತು ಲಕ್ಷ ಪೌಂಡುಗಳಿಗಿಂತ ಅಧಿಕ ತೂಕದ ಈ ಮೂರ್ತಿಗೆ ಕಾಲು-ಟನ್ ತೂಕದ ಚಿನ್ನದಿಂದ ಲೇಪ ನೀಡಲಾಗಿದೆ.
-“ವೆಲ್ಕಮ್ ಸ್ಟ್ರೇಂಜರ್” ಎಂಬ ಹೆಸರಿನ ಚಿನ್ನದ ತುಂಡು ಈ ವರೆಗೆ ಸಿಕ್ಕಿದ ಅತ್ಯಧಿಕ ತೂಕದ ಚಿನ್ನದ ತುಂಡು. ಅದರ ತೂಕ ೨೦೦ ಪೌಂಡುಗಳಿಗಿಂತ ಜಾಸ್ತಿ. ಆಸ್ಟ್ರೇಲಿಯಾದ ಬಲ್ಲಾರಾಟ್ ಎಂಬಲ್ಲಿ ೧೮೬೯ರಲ್ಲಿ ಇದನ್ನು ಪತ್ತೆ ಮಾಡಿದವರು ಜಾನ್ ಡೀಸನ್ ಮತ್ತು ರಿಚರ್ಡ್ ಓಟ್ಸ್.
-ಈಗ ಸಿಕ್ಕಿರುವ ಪ್ರತಿಯೊಂದು ಔನ್ಸ್ ಚಿನ್ನಕ್ಕಾಗಿ ಗಣಿಗಾರರು ೨.೫ ಮೈಲು ಆಳದ ವರೆಗೂ ಭೂಮಿಯನ್ನು ಅಗೆದಿದ್ದಾರೆ!
ಪಾರಿಜಾತದ ಹೂವು ತುಂಬಾನೇ ವಿಭಿನ್ನ. ಈ ಪಾರಿಜಾತ ಸಸ್ಯಕ್ಕೆ ಸ್ವರ್ಗದಿಂದ ಭೂಮಿಗೆ ಬಂದ ಸಸ್ಯ ಎಂಬ ಹೆಸರಿದೆ. ಇದರ ಪೌರಾಣಿಕ ಹಿನ್ನಲೆಯ ಬಗ್ಗೆ ಹಾಗೂ ದೇಶದಲ್ಲಿರುವ ಏಕೈಕ ಪುರಾತನ ಪಾರಿಜಾತ ವೃಕ್ಷದ ಬಗ್ಗೆ ತಿಳಿದುಕೊಳ್ಳುವ. ಈ ವೃಕ್ಷವನ್ನು ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮಾಳಿಗಾಗಿ ಸ್ವರ್ಗದಿಂದ ತಂದಿದ್ದನು ಎಂಬ ಪ್ರತೀತಿ ಇದೆ.
ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು.
ಸದ್ಗುರು ಜಗ್ಗಿ ವಾಸುದೇವ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ. ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ ಮೌಲ್ವಿಗಳು, ಚರ್ಚುಗಳ ಫಾದರ್, ಸಿಸ್ಟರುಗಳು, ಬೌದ್ದ ಸನ್ಯಾಸಿಗಳು, ಜೈನ ಮುನಿಗಳು, ಸಿಖ್ ಗುರುಗಳು ಮತ್ತು ಇನ್ನೂ ಈ ರೀತಿಯ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು.