ನಮ್ಮ ಹೆಮ್ಮೆಯ ಭಾರತ (ಭಾಗ 37 - 38)

೩೭.ಅಮುಲ್: ಹಾಲು ಉತ್ಪಾದಕರ ಬೃಹತ್ ಒಕ್ಕೂಟ
ಅಮುಲ್ ಎಂದರೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್. ಗುಜರಾತಿನ ಆನಂದ್ ಎಂಬ ಊರಿನಲ್ಲಿ ಶುರುವಾದ ಹಾಲು ಉತ್ಪಾದಕರ ಪುಟ್ಟ ಸಂಘಟನೆ ಜಗತ್ತಿನ ಮುಂಚೂಣಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೈಗಾರಿಕೆಯಾಗಿ ಬೆಳೆದ ಕಥೆ. ಈ ಸಹಕಾರಿ ಸಂಘಟನೆಯ ಯಶಸ್ಸಿಗೆ ಕಾರಣರು ಡಾ. ವರ್ಗೀಸ್ ಕುರಿಯನ್. ಅವರು ಇದನ್ನು ಮೂವತ್ತು ವರುಷಗಳ ಕಾಲ ಮುನ್ನಡೆಸಿದರು. ಅವರ ಪುಸ್ತಕ "ಐ ಹ್ಯಾಡ್ ಎ ಡ್ರೀಮ್” ಈ ವಿಸ್ಮಯದ ಯಶೋಗಾಥೆಯ ಕಥನ.

“ಅಮುಲ್" ಹಲವು ಜಾಗತಿಕ ದಾಖಲೆಗಳ ಸರದಾರ. ಇದು ಜಗತ್ತಿನ ಅತಿ ದೊಡ್ಡ ಪ್ಯಾಕೆಟ್ ಹಾಲಿನ ಬ್ರಾಂಡ್ ಮತ್ತು ಅತಿ ದೊಡ್ಡ ಸಸ್ಯಾಹಾರಿ ಚೀಸ್ ಬ್ರಾಂಡ್. ಜೊತೆಗೆ, ಭಾರತದ ಅತ್ಯಂತ ದೊಡ್ಡ ಆಹಾರ ವಸ್ತುಗಳ ಬ್ರಾಂಡ್ ಅಮುಲ್.

Image

ಹದ್ದಿನ ಕವನ

ಪುಸ್ತಕದ ಲೇಖಕ/ಕವಿಯ ಹೆಸರು
ಸಂ: ಹಳೆಕೋಟೆ ಸುಂದರ ಬಂಗೇರಾ
ಪ್ರಕಾಶಕರು
ಈಗಲ್ ಪ್ರಕಾಶನ, ಕೆ.ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ-577132, ಚಿಕ್ಕಮಗಳೂರು
ಪುಸ್ತಕದ ಬೆಲೆ
ರೂ.70.00, ಮುದ್ರಣ : 2019

*ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"*

ಕನ್ನಡನಾಡಿನ ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

ನಮ್ಮ ದೇಶದಲ್ಲಿ ಸಾಮಾನ್ಯ ಜನರಿಗೆ ವಿಜ್ಞಾನಿಗಳ ಪರಿಚಯವಿರುವುದೇ ಇಲ್ಲ. ವಿಜ್ಞಾನಿಗಳೂ ಅಷ್ಟೇ ತಮ್ಮದೇ ಆದ ‘ದಂತ ಗೋಪುರ'ದಲ್ಲಿ ಬದುಕುತ್ತಾರೆ. ತಾವಾಯಿತು, ತಮ್ಮ ಸಂಶೋಧನೆಗಳಾಯಿತು ಎಂದು ಅವರದ್ದೇ ಲೋಕದಲ್ಲಿ ಖುಷಿಯಾಗಿರುತ್ತಾರೆ. ಅಪರೂಪಕ್ಕೊಮ್ಮೆ ವಿಜ್ಞಾನಿಗಳ ಹೆಸರು ಪತ್ರಿಕೆಯಲ್ಲಿ ಅಥವಾ ದೂರದರ್ಶನದಲ್ಲಿ ಬರುತ್ತದೆ.

Image

ಪಪ್ಪಾಯಿ ಹಣ್ಣಿನ ಹಲ್ವ

Image

ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಸಿಪ್ಪೆ ಮತ್ತು ಬೀಜವನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ತುಂಡರಿಸಿ. ಅದರ ಜೊತೆ ಹಾಲು ಬೆರೆಸಿ ಒಲೆಯ ಮೇಲಿಟ್ಟು ತುಸು ಮೆದುವಾಗುವವರೆಗೆ ಬೇಯಿಸಿ. ಅದನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿರಿ. ನಂತರ ಟೊಮೆಟೊ ಹಣ್ಣನ್ನು ಮಿಕ್ಸಿಗೆ ಹಾಕಿ ರಸವನ್ನು ತೆಗೆದು ಇಟ್ಟುಕೊಂಡಿರಿ. ನಂತರ ಬಾಣಲೆಗೆ ರುಬ್ಬಿದ ಮಿಶ್ರಣ ಮತ್ತು ಟೊಮೆಟೋ ರಸವನ್ನು ಜೊತೆಯಾಗಿ ಹಾಕಿ ಕಲಡಿಸಿ.

ಬೇಕಿರುವ ಸಾಮಗ್ರಿ

ಹಣ್ಣಾದ ಹದಗಾತ್ರದ ಪಪ್ಪಾಯಿ ಹಣ್ಣು ೧, ಟೊಮೆಟೊ ೩-೪, ಹಾಲು ೨ ಕಪ್, ಸಕ್ಕರೆ ೨ ಕಪ್, ತುಪ್ಪ ೧/೨ ಕಪ್, ಏಲಕ್ಕಿ ಹುಡಿ ಸ್ವಲ್ಪ

 

ಬಾಳಿಗೊಂದು ಚಿಂತನೆ - 18

ಒಮ್ಮೊಮ್ಮೆ ನಮಗೆ ಅನಿಸುವುದು ನಾನೇ ಎಲ್ಲಾ ಗೊತ್ತಿದ್ದವ, ನನ್ನಿಂದಾಗಿಯೇ ಎಲ್ಲವೂ ಎಂಬುದಾಗಿ. ಈ ಹುಚ್ಚು ಮನಸ್ಸಿನ ಗೊಂದಲದಿಂದಾಗಿ ಅನಾಹುತಗಳು ಹುಟ್ಟಿಕೊಳ್ಳುತ್ತವೆ. ನನಗೆ ಯಾರೂ ಬೇಡ, ನಾನೇ ಎಲ್ಲಾ ಎಂಬುದನ್ನು ಬಿಟ್ಟು ಬಿಡೋಣ. ಇಂಥ ಅಭಿಮಾನ ಒಳ್ಳೆಯದಲ್ಲ. ನಾನು ಎಲ್ಲರಿಗೂ ಬೇಕೆಂಬ ಭ್ರಮೆಯೂ ಬೇಡ. ಆ ಭಗವಂತನ ಇಚ್ಛೆ ಏನಿದೆಯೋ ಅದರಂತೆ ಎಲ್ಲವೂ ನಡೆಯುವುದು.

Image

ಪ್ರತಾಪ್ ಆಚಾರ್ಯ ಕೈಯಲ್ಲಿ ಎಲೆಯೂ ಕಲೆಯಾಗಿ ಅರಳುವುದು

ಸಾಧಾರಣ ಹಲಸಿನ ಎಲೆಯು ಇವರ ಕೈಯಲ್ಲಿ ಸಿಕ್ಕಿದರೆ ಅದರಲ್ಲಿ ಗಣಪತಿ, ಶಿವ, ಸ್ವಾಮಿ ಕೊರಗಜ್ಜ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅಷ್ಟೇ ಯಾಕೆ? ನಮ್ಮ ಹೆಮ್ಮೆಯ ಅಬ್ದುಲ್ ಕಲಾಂ, ಕ್ರಿಕೆಟಿಗ ಧೋನಿ, ಸಂಗೀತ ಸಾಮ್ರಾಟ್ ಎಸ್. ಪಿ. ಬಾಲಸುಬ್ರಮಣ್ಯಂ ಎಲ್ಲರೂ ಅರಳುತ್ತಾರೆ. ನಮ್ಮ ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನ ಬದುಕೂ ಈ ಒಂದು ಎಲೆಯಲ್ಲಿ ಚಿತ್ರವಾಗಿ ಪರಿವರ್ತನೆಯಾಗುತ್ತದೆ.

Image