ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ
ಸೆಪ್ಟೆಂಬರ್ ೨೦೧೧ ನಿಜಕ್ಕು ಎಲ್ಲ ಕನ್ನಡಿಗರಂತೆ ಸಂಪದಿಗರಿಗು ಸಂಭ್ರಮ, ಅದಕ್ಕೆ ಕಾರಣ ಕನ್ನಡಕ್ಕೆ ಸಂದ ಎಂಟನೆ ಜ್ಞಾನಪೀಠ ಪ್ರಶಸ್ತಿ. ಹರಿಪ್ರಸಾದ್ ನಾಡಿಗರು ಸಂಪದದಲ್ಲಿ ಶ್ರೀ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಘೋಷಣೆಯಾದ ಬಗ್ಗೆ ಲೇಖನ "ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ" ಪ್ರಕಟಿಸಿದಾಗ ಸಹಜವಾಗಿಯೆ ಅದು ಎಲ್ಲ ಸಂಪದಿಗರಲ್ಲು ಸಂಚಲನ ಮೂಡಿಸಿತು. ಸೆಪ್ಟೆಂಬರ್ ತಿಂಗಳ ಪಕ್ಷಿನೋಟದಲ್ಲಿ ಶ್ರೀ ಕಂಬಾರರಿಗೆ ಎಲ್ಲ ಸಂಪದಿಗರ ದ್ವನಿಯಾಗಿ ಅಭಿನಂದನೆ ಸಲ್ಲಿಸಲು ನನಗೆ ಸಂತಸವೆನಿಸುತ್ತಿದೆ.
ಕನ್ನಡವಲ್ಲದೆ ಬೇರೆ ಯಾವುದೆ ಬಾಷೆಗೆ ಈ ರೀತಿ ಎಂಟು ಪ್ರಶಸ್ತಿಗಳು ದೊರಕಿದ್ದರೆ , ಅವರು ಅದನ್ನು ಜಗಜಾಹಿರುಗೊಳಿಸಿ, ಹೇಗಾದರು ಬಾಷೆಗೆ ರಾಜ್ಯಕ್ಕೆ ಎಲ್ಲ ರೀತಿಯ ಅನುಕೂಲಗಳು ದೊರಕುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಇಲ್ಲಿ ಬೇರೆಯೆ ಬಿಡಿ.
ಮೊದಲ ದಿನವೆ ಗಣಪತಿಯ ಪೂಜೆಯೊಂದಿಗೆ ಪ್ರಾರಂಬವಾದ ಸೆಪ್ಟೆಂಬರ್ ೨೦೧೧ ಸಂಪದದಲ್ಲಿ ಸಾಕಷ್ಟು ಚಟುವಟಿಕೆಯಾಗಿತ್ತು. ಈ ತಿಂಗಳು ಪ್ರತಿಕ್ರಿಯೆಗಳು ಸಾಕಷ್ಟು ಉತ್ತೇಜನಕರವಾಗಿದ್ದು ಎಲ್ಲ ವಿಭಾಗಗಳಲ್ಲು ವೈವಿಧ್ಯವಾದ ಲೇಖನಗಳು ಸಾಲು ಸಾಲಾಗಿ ಬಂದವು. ಸಂಪದದಲ್ಲಿ 'ನೇರವಾಗಿ ಬರೆಯುವ ಸೌಲಭ್ಯ' ಈ ಮಾಸದಿಂದ ಪ್ರಾರಂಬವಾಯಿತು ಅದಕ್ಕಾಗಿ ಸಂಪದ ಬಳಗಕ್ಕೆ ಅಭಿನಂದನೆ ಸಲ್ಲಲೇ ಬೇಕು. ಮತ್ತು ಶ್ರೀಸತ್ಯಚರಣ್ ರವರ ಸಲಹೆಯಂತೆ ಪಕ್ಷಿನೋಟದಲ್ಲಿ ಈ ಬಾರಿ ಕೆಲವು ಬದಲಾವಣೆ ಮಾಡಿಕೊಂಡಿದೆ, ಬರಹಗಳಿಗೆ 'ಲಿಂಕ್ :) ಕೊಂಡಿ' ಯನ್ನು ಅಂಟಿಸಲಾಗಿದೆ.
ಲೇಖನ ವಿಭಾಗ :
ಮೊದಲ ಬರಹ "ನೆನಪಿನ ಚಿತ್ರಕಲಾ ಶಾಲೆ" ಬರಹದ ಹಿನ್ನಲೆಗೆ ಬಳಸಿರುವ ರಚಿತ ಚಿತ್ರವು ಚೆನ್ನಾಗಿದೆ, ಬಹುಷಃ ಈ ಲೇಖನಮಾಲೆಯ ಪುಸ್ತಕರೂಪವು ಇದೆಯ ತಿಳಿದಿಲ್ಲ. ನಾಗರಾಜರು 'ಕೆಳದಿಯ ಗುಂಡಾಜೋಯಿಸರ' ಬಗ್ಗೆ ಬರೆದಿರುವ ಲೇಖನ ಸಾಕಷ್ಟು ಇತಿಹಾಸದ ವಿವರಗಳ ಅಕರ, ವಸ್ತುಸಂಗ್ರಹಾಲಯದಲ್ಲಿನ ತಾಡಪತ್ರಗಳು, ಆಯುದಗಳ ಸಂಗ್ರಹ ಮುಂತಾದವು ನಮ್ಮಲ್ಲಿ ಸಾಕಷ್ಟು ಕುತೂಹಲ ಕೆರಳಿಸುತ್ತದೆ, ಇದಕ್ಕಾಗಿ ಅವಿರತ ದುಡಿಯುತ್ತಿರವ ಕೆಳದಿಜೋಯಿಸರ ಶ್ರಮ ಸ್ತುತ್ಯಾರ್ಹ.
ದೀಪು " ಕದ್ದು ತಿನ್ನುವದರಲ್ಲಿ ಇರುವ ಸುಖವೆ ಬೇರೆ " ನಿಜ , ಕೇವಲ ಸೌತೆಕಾಯಿಗಾಗಿ ಎಷ್ಟು ಕಷ್ಟ! ಅಲ್ವ ಆದರೆ ಆ ಮಜ!! ಅಲ್ವ ಮತ್ತೆ !
ಗುರುಪ್ರಸಾದರಿಂದ ಅಂತರ್ಜಾಲದಲ್ಲಿ ಮೂರು ಕನ್ನಡ 'ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮದ'ಬಗ್ಗೆ ವಿವರ ಹಾಗು ಅಹ್ವಾನ. ಕೇವಲ ಆಕಸ್ಮಿಕವಲ್ಲ ಆ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರು ಶ್ರೀ ಚಂದ್ರಶೇಖರ ಕಂಬಾರರು.
ನಮ್ಮ ಸಣ್ಣದೊಂದು ಮಾತು ಇತರರ ಮನಸ್ಸನ್ನೆ ಮುರಿಯಬಲ್ಲದು ಹಾಗಾಗಿ ನಾವು ಆಡುವ ಪ್ರತಿಮಾತನ್ನು ತೂಗಿನೋಡಿ ಆಡಿದರೆ ಉತ್ತಮವೆನ್ನುತ್ತಾರೆ ಅರುಣಾ ಬದಿಕೋಡಿ "ಮಾತಿನ ಮಹತ್ವ" ದಲ್ಲಿ.
ಶೋಭರವರು ತಮ್ಮ 'ಆದರ್ಶ ಶಿಕ್ಷಕರಿಗ" ವಂದನೆ ಅರ್ಪಿಸಿದರೆ ರೇಣುಕರವರ ತಮ್ಮ ಮೆಚ್ಚುನ ಗುರುಗಳ ಆಶೀರ್ವಾದದ ಪತ್ರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ 'ಪ್ರೀತಿಯ ವಿಧ್ಯಾರ್ಥಿನಿಗೊಂದು' ಪತ್ರದಲ್ಲಿ.
ಮೈಮೇಲೆ ಹಲ್ಲಿಬಿದ್ದರೆ ಹೆಂಡತಿ ಕಾಲಿಗೆ ನಮಸ್ಕಾರಮಾಡಬೇಕೆ ! ಒಂದು ವಿಡಂಬನೆಯನ್ನು ಓದಿ ಸತೀಶರ "ಹಲ್ಲಿ ಬಿದ್ದ ಫಲದಲ್ಲಿ".
ಬೆಳ್ಳಾಲ ಗೋಪಿನಾಥರು ತಪ್ಪಿಸಿಕೊಂಡಿದ್ದಾರೆ ಅರಮನೆಯ 'ಪುಸ್ತಕ ಮೇಳದಲ್ಲಿ', ಬನ್ನಿ ಅಲ್ಲಿ ಹೋಗಿ ನಾವು ಅವರನ್ನು ಹುಡುಕೋಣ. ಅವರು ಸಿಗದಿದ್ದರೆ ಪುಸ್ತಕವಂತು ಸಿಕ್ಕೀತು. ಮರಣ ಹೊಂದಿ ನಮ್ಮ ದೇಹವನ್ನು ಕಾಯ್ದಿಟ್ಟು ಮತ್ತೆ ೨೦೦ ಅಥವ ೩೦೦ ವರ್ಷಗಳ ನಂತರ ಜೀವ ಬರುವಂತಾದರೆ! ನಿಜವೆ ?? ಅನ್ನಬೇಡಿ! ಓದಿ "ಕ್ರಯೋನಿಕ್ಸ್ ಕಾಯುತ್ತಿವೆ ಹೆಣಗಳು" . 'ಸುಮ' ರಿಂದ.
ಸಂದ್ಯರಾಗ ಪುಸ್ತಕದ ಒಂದು ಕಿರುನೋಟ ಭಾರ್ಗವರಿಂದ ಅನಕೃ ರವರ ಕೃತಿಯ ಬಗ್ಗೆ "ಸಂದ್ಯರಾಗ ಮೌನರಾಗ.."
ಶ್ಯಾಮಲಾಜನಾರ್ದನನ್ ರವರ "ದಾಸ.....ಪರಂಪರೆ ' ದಾಸಶ್ರೇಷ್ಟರ ಪರಿಚಯ ನೀಡುವ ಲೇಖನ, ಶ್ರೀಪಾದರಾಜರು ಎಂದರೆ ದತ್ತಾತ್ರೇಯರು ಅಂಶಜರು ಎನ್ನುವ ಶ್ರೀಪಾದರೊ ಅಥವ ಇವರೆ ಬೇರೆಯೊ ತಿಳಿಯಲಿಲ್ಲ.
ನಾಗರಾಜರ 'ದೊಂಡಿಯವಾಘನ ನೆನೆಯೋಣ' ಶಿಕಾರಿಪುರದ ಹುಚ್ಚುರಾಯಸ್ವಾಮಿ ದೇವಾಲಯದಲ್ಲಿರುವ ಕತ್ತಿಯ ಇತಿಹಾಸದ ಬಗ್ಗೆ ಲೇಖನ. ನವೀನ 'ಗಣೇಶ ಲೆಫ್ಟ್ ಹ್ಯಾಂಡೊ ರೈಟ " ಗೊತ್ತಿಲ್ಲ ,ಆದರೆ 'four' ಹ್ಯಾಂಡು (ನಾಲಕ್ಕು ಕೈ) ಅಂತ ಮಾತ್ರ ಗೊತ್ತು. ಮತ್ತೆ ನಿನಗೆ ಇನ್ನೇನು ಗೊತ್ತು ಅನ್ನುವಿರ ? 'ಮಂಗನ ಬಾಷೆ' ಮಾತ್ರ ಗೊತ್ತಿಲ್ಲ ಆದರೆ ಸುಮಂಗಲರವರಿಗೆ ಗೊತ್ತು ನೋಡಿ ಈ ಮಂಗನ ಬಾಷೆ .
ಅಣ್ಣ ಹಜಾರೆ ಯವರನ್ನು ಎಲ್ಲರು ಏಕಾಗಿ 'ಅಣ್ಣ" ಅನ್ನಬೇಕು ಹೀಗೊಂದು ಸಮರ್ಥನೆ ಆಶೋಕ ಸುರಾನರಿಂದ. ಸತ್ಯದ ಹಾದಿ ಎಂದಿಗೂ ಕಠಿಣ ಎನ್ನುವ ಸುದಾಕರ ಚತುರ್ವೇದಿಯವರ ವಿಚಾರದಾರೆಗಳ ದರ್ಶನ, ಕವಿ ನಾಗರಾಜರಿಂದ 'ವಿಚಾರ ಲಹರಿ' ಎರಡು ಬಾಗಗಳಲ್ಲಿ.
ಶ್ರೀನಾಥ್ ಬಲ್ಲೆಯವರಿಂದ ಕವನ 'ನೆನಪುಗಳು ನಕ್ಯಾವೆ.." ಹಾಸ್ಯ ಲೇಖನದಿ೦ದ ಕವನಕ್ಕೆ ಜಿಗಿತ. ಮತ್ತೆ ಸೋಮಶೇಖರಯ್ಯನವರಿಂದ 'ಅನನ್ಯ ಅಲ್ಲಮ' ದ ಮುಂದುವರೆದ ಬಾಗ ಪತಾಂಜಲದ ಬಗ್ಗೆ ಹೊಸವ್ಯಾಖ್ಯಾನ. ಹಾಗೆಯೆ ಸೂರ್ಯೋದಯವನ್ನು ದೇವರ ದಯೆ ಎನ್ನುವ ಕವಿಯೆ 'ಹಾಳು ರವಿ ಉದಯಿಸಿದ' ಎನ್ನುವ ವಿವರಣೆಯ ಸತ್ಯನಾರಯಣರ ಕವಿ ಕುವೆಂಪುರವರ ಕುರಿತ ಲೇಖನವನ್ನೊಮ್ಮೆ ಓದಿ. ಕರ್ನಾಟಕವೆ ಸ್ಮರಿಸಬೇಕಾದ ಸರ್ ಎಂ ವಿ ರವರಿಗೆ ಒಂದು ನೆನಪಿನ ಕಾಣಿಕೆ ಶ್ರೀದರ್ ರವರಿಂದ 'ಸರ್ ಎಂ ವಿ ಒಂದು ಸ್ಮರಣೆ' .
ಸುಪ್ರೀತರ ಈ ಬಾರಿ ಸಾಕಷ್ಟು ಹುರುಪಿನಿಂದ ಸಂಪದದಲ್ಲಿ ಕಾಣಿಸಿಕೊಂಡಿದ್ದಾರೆ 'ಬೆಲೆಯೇರಿಕೆ' ಬಗ್ಗೆ ಒಂದು ಲೇಖನ ಬರೆದು, 'ಲೈಫು ಇಷ್ಟೇನೆ ' ಎಂಬ ಚಿತ್ರ ವಿಮರ್ಷೆಯನ್ನು ಮಾಡಿದ್ದಾರೆ, ವೈಜ್ಞಾನಿಕ ಲೇಖನಗಳು ಅದುನಿಕ 'ಮೊಬೈಲ" ನ ಬಹುಮುಖಿ ಉಪಯೋಗದ ಬಗ್ಗೆ, ಪಶ್ಚಿಮ ಘಟ್ಟದಲ್ಲಿನ ಹೊಸ ಅವಿಷ್ಕಾರ 'ಹೊಸ ಪ್ರಭೇದದ ಕಪ್ಪೆ" ಗಳ ಬಗ್ಗೆ, ಅದುನಿಕ ತಂತ್ರಜ್ಞಾನದ ನಡುವೆ ಮನುಷ್ಯನ ಬದುಕಿನ ಬಗ್ಗೆ ಹೇಳುತ್ತ 'ನಾವು ಯಂತ್ರ ಜೇಬಲ್ಲಿ, ಮೆದುಳು ತಲೆಯಲ್ಲಿ ಇಟ್ಟುಕೊಂಡಿರುವಷ್ಟು ಕಾಲ ಮನುಷ್ಯರಾಗಿರಬಹುದು!" ಅನ್ನುತ್ತಾರೆ ಅವರ 'ತಂತು ನಿಸ್ತಂತು ಜಂತುಗಳು' ಲೇಖನದಲ್ಲಿ. ಆದರು ನನಗೆ ಅನುಮಾನ ಸುಪ್ರೀತರೆ , ಯಂತ್ರ, ಬುದ್ದಿಶಕ್ತಿ ಎರಡು ಜೊತೆಗೂಡಿ ಇರುವ ಈ ಯುಗದಲ್ಲಿ ನಿಜಕ್ಕು ನಾವು 'ಮನುಷ್ಯರಾಗಿದ್ದೀವ ?" . ಹಾಗೆಯೆ ಅವರ 'ಬೆಳಕಿನ ವೇಗವೂ ಮಿತಿಯಲ್ಲ" ಸಹ ಬೌತವಿಜ್ಞಾನ ಕುರಿತ ಲೇಖನ ಬೆಳಕಿನ ವೇಗವನ್ನು ಮೀರಿಸುವ ನ್ಯೂಟ್ರಿನೊಗಳ ಚಲನೆಯನ್ನು ಕುರಿತು. ಆದರೆ ಅದನ್ನು ವಿಶ್ವ ಇನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ.
ಶಶಿದರರವರಿಂದ ಅಧ್ಯಾತ್ಮ ಸಾದಕ 'ಶ್ರೀಮುಕಂದುರು ಸ್ವಾಮಿಗಳ" ಪರಿಚಯ, ಅವರ ಪುಸ್ತಕ 'ಯೆಗ್ದಾಗೆಲ್ಲ ಐತೆ' ಬಗ್ಗೆ ಪ್ರಸ್ತಾಪ ಮಾಡಿದ್ದಾರೆ,( ಈ ಪುಸ್ತಕವನ್ನು ಕಳೆದ ನವೆಂಬರ್ ನಲ್ಲಿ ಅಬ್ದುಲ್ ರವರು ಸಂಪದಿಗರಿಗೆ ಪರಿಚಯಸಿದ್ದರು) . ಹಾಗೆಯೆ ಇವರ 'ಅಮ್ಮಮ್ಮನ ಜೊತೆ ಚಾರಣ' ಪ್ರಭಂದ ಮಲೆನಾಡಿನ ಚಿತ್ರಣದ ಜೊತೆ ಸಂಬಂದಗಳ ಮದುರ ಹೆಣೆಗೆಯನ್ನು ನಮ್ಮ ಮನಸಿನ ಮುಂದೆ ಕಟ್ಟಿಡುತ್ತದೆ. ಮಲೆನಾಡಿನ ಚಿತ್ರಗಳನ್ನು ಅಕ್ಷರಗಳಿಗೆ ಇಳಿಸುವುದರಲ್ಲಿ ಹಾಲಾಡಿಯವರು ಸಿದ್ದಹಸ್ತರು.
ಶ್ರೀದರ ಬಂಡ್ರಿಯವರಿಗೇನೊ ಸಂಶಯ 'ಕರ್ನಾಟಕದ ದೇವರುಗಳು' ಅಕ್ಕಪಕ್ಕದ ದೇವರುಗಳಿಗಿಂತ ಬಡವರೆ ಎಂದು. ಅಲ್ಲವನ್ನುತ್ತಾರೆ ರಾಜೇಶ್ ನಾಯ್ಕ ನೋಡಿ ಕರ್ನಾಟಕದ ದೇವಾಲಯದ ಕಲಾ ಸಂಪತ್ತನ್ನು ತಮ್ಮ ವರ್ಣಚಿತ್ರಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ "ಲಕ್ಷ್ಮಿನರಸಿಂಹ ದೇವಾಲಯ ಭದ್ರಾವತಿ" ಯಲ್ಲಿ
ನರಸಿಂಹಮೂರ್ತಿ ಆನೆಗುಂದಿಯವರು "ಗವಾಯಿಗಳ ಮಹಿಮೆ' ಪುಟ್ಟಲೇಖನದಲ್ಲಿ ಗದುಗಿನ ವಿರೇಶ್ವರ ಆಶ್ರಮದ ಕುರುಡುಮಕ್ಕಳ ಸಾಧನೆಯ ಬಗ್ಗೆ ಭಾವುಕರಾಗಿ ವರ್ಣಿಸಿದ್ದಾರೆ, ಓದಿನೋಡಿ. ಗೋಪಿನಾಥರಾಯರ ಗುರುಗಳಾದ ಹೆಚ್ ಎಸ್ ವಿ ಯವರ ಅಭ್ಯಾಸದ ಬಗ್ಗೆ ಮತ್ತೆ 'ವಾಕ್ಪಥ'ದ ಏಳನೆಯ ಹೆಜ್ಜೆಯ ಬಗ್ಗೆ ಉತ್ಸಾಹದಿಂದ ಜಬ್ಬರ್ದಸ್ತ್ ವರದಿಯನ್ನೆ ಕೊಟ್ಟಿದ್ದಾರೆ.
ನವರಾತ್ರಿಯ ಬಗ್ಗೆ ಲಕ್ಷ್ಮೀಕಾಂತರವರಿಂದ ವಿವರವಾದ ಅವರ 'ನವರಾತ್ರಿ' ಲೇಖನದಲ್ಲಿ, ಅಷ್ಟೊಂದು ವಿದದ ನವರಾತ್ರಿಗಳಿವೆ ಎಂಬುದು ಈಗಲೆ ತಿಳಿಯಿತು. ನವರಾತ್ರಿಯ ಬಗ್ಗೆ ಹಲವು ಲೇಖನಗಳು ಬಂದವು ಹಾಗೆ ಶ್ಯಾಮಲ ಜನಾರ್ಧನನ್ ರವರು 'ನವರಾತ್ರಿಯ ದೇವಿಯನ್ನು' ಸ್ತುತಿ ಮಾಡುತ್ತಿದ್ದಾರೆ ವಿವಿದ ರೂಪದಲ್ಲಿ
ಶ್ರೀದರ್ ರವರು 'ಬೀchi' ಯವರನ್ನು ನೆನೆಸಿಕೊಂಡು ಸಾಕಷ್ಟು ಹಾಸ್ಯಚಟಾಕಿಗಳನ್ನು ಸಂಪದಿಗರ ಜೊತೆ ಹಂಚಿಕೊಂಡಿದ್ದಾರೆ. ನೋಡಿ ಅವರ ಜೋಕಿನಲ್ಲಿ ಹಿಂದುಮುಂದಾಗಿ ಶಾಲೆಗೆ ಬರುವ ತಿಂಮನನ್ನು . ನಗುತ್ತಲೆ ಶ್ರೀದರರು ಏಕೊ ಗಂಬೀರರಾದರು, ಅವರು ಕೇಳುತ್ತಿದ್ದಾರೆ 'ದೇವರ ಬಣ್ಣ ನೀಲಿ'ಯೆ , ದೇವರನ್ನು ಕಂಡವರನ್ನಂತು ನಾ ಕಾಣೆ , ನೀವೆ ಹೇಳಬೇಕು ದೇವರು ನೀಲಿಯೆ??
ಇಷ್ಟೆಲ್ಲ ಆದರು ನಾವು ಬರಿ ಮನುಷ್ಯರು ಎಂದು ನೆನಪಿಸಿದವರು ಶ್ರೀನಾಥರು 'ಇವರು ಮನುಜರು ಕಣ್ಲ ಸಿದ್ದಾ"ಎಂಬ ಕವನದಲ್ಲಿ. ಜೊತೆಗೆ ನಾಗರಾಜರು ಹೇಳುತ್ತಾರೆ, ನಾವು ಮನುಷ್ಯರು ನಿಜ ಆದರೆ ನಮ್ಮೊಳಗಿನ "ಒಲವಿನ ಒರತೆ ಬತ್ತದಿರಲಿ" ಹೌದು ಎನ್ನುವ ಶ್ರೀದರ ಮತ್ತೆ ಮನುಷ್ಯತ್ವ ಮುಖ್ಯ ಎನ್ನುತ್ತ "ಸೂರಪ್ಪನ ಮಾನವೀಯತೆ" ಎಂಬ ಲೇಖನ ಬರೆದು ತಿಂಗಳ ಲೆಕ್ಕ ಮುಗಿಸಿದ್ದಾರೆ.
ಬ್ಲಾಗ್ ಬರಹಗಳು:
ಮೊದಲ ಬ್ಲಾಗ್ ಆಸುರವರಿಂದ "ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!" ಹಿಂದಿ ಚಿತ್ರಗೀತೆಯ ಭಾವನುವಾದ,ಶರಾಬಿ ಚಿತ್ರದಲ್ಲಿ ಕಿಶೋರ್ ಹಾಡಿರುವ ಗೀತೆ, ಅದರಲ್ಲಿ ಒಂದು ಸಾಲು 'ಮುಳುಗುವವಗೆ ಹುಲ್ಲು ಕಡ್ಡೀ ಆಸರೆಯೇ ಬಲು ದೊಡ್ಡದು!' ನಿಜವೆ.
ಚಿಕ್ಕವಯಸ್ಸಿನಲ್ಲಿ ಕೇಳಿದ 'ಪಾರ್ವತಿ ಮಾಯಯೆ.." ಶಿಶುಗೀತೆಯನ್ನು ನೆನಪಿಸಿಕೊಂಡು ಗಣೇಶ ಹಬ್ಬದದಿನ ಬರೆದಿದ್ದಾರೆ "ಗಣೇಶ ಸೃಷ್ಟಿ" ಯಲ್ಲಿ ಕ್ಯಾಲಿಪೋರ್ನಿಯದಿಂದ ಡಾ!ಮೀನಸುಬ್ಬರಾವ ರವರು. 'ಯಾರ ವ್ಯಕ್ತಿತ್ವವನ್ನು ಅವರ ಲೋಪದಿಂದ ನಿರ್ಣಯಿಸಬಾರದು' ನಿಜಕ್ಕು ಎಂತಹ ಸುಂದರ ವಾಕ್ಯ ವಿವೇಕನಂದರದು, ಇಂದಿನ ಪರಸ್ಪರ ಕೆಸರೆಸೆಯುವ ಆಟದಲ್ಲಿ ಇದನ್ನು ನಮಗಾಗಿ ಸಂಗ್ರಹಿಸಿದ್ದಾರೆ ನಾವಡರು ತಮ್ಮ 'ಯೋಚಿಸಲೊಂದಿಷ್ಟು'ವಿನಲ್ಲಿ.
ನಮ್ಮ ದೇಹವೆಂದರೆ ಕಾಮಕ್ರೋದಮೋಹಗಳೆಲ್ಲ ಹೊತ್ತಿಉರಿಯುತ್ತಿರುವ ಒಲೆ ಎನ್ನುತ್ತಾರೆ ರಾಮಮೋಹನರು ತಮ್ಮ 'ದೇಹವೆಂಬ ಒಲೆಯಲ್ಲಿ', ಕುಜರರೊಡನೆ ಆಡುತ್ತ, ವಂಚನೆಮಾಡುತ್ತ ಇರುವವ ಅಸುರನೆಂದು ಹೇಳುತ್ತಾರೆ ಕವಿನಾಗರಾಜರು ತಮ್ಮ 'ಮೂಡ' ಕವನದಲ್ಲಿ ಅವರ ಮೂಡ ಕವನ ಸಾಲುಗಳು ಉತ್ತಮ ಸಂದೇಶಹೊತ್ತು ಸಾಗುತ್ತಿವೆ ನಿರಂತರ, ಸಂಪದದ ಅಂಗಳದಲ್ಲೀಗ ವೇದಾಂತದ ವೈರಾಗ್ಯದ ಭಾವ ಲಹರಿಯದು ಒಂದು ಹಿಡಿತ, ಕವಿನಾಗರಾಜರ ಮೂಡದ ಜೊತೆಜೊತೆಗೆ ಹೊಸ ಸದಸ್ಯ ಸತೀಶರಿಂದ ಶ್ರೀನರಸಿಂಹನನ್ನು ನೆನೆಯುತ್ತ ರಚಿಸುವ ಪದ್ಯಗಳು ನಮ್ಮನ್ನು ಚಿಂತನೆಗೆ ತಳ್ಳುತ್ತವೆ.
ಒಂಟಿಯಾಗಿ ಹೊರಟ ಗೆಳತಿಯನ್ನು ಕಂಡವಳಿಗೆ ಆತಂಕ ಅವರಿಬ್ಬರ ಮಾತು ಗಮನಿಸಿ "ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?" ಉತ್ತರ.. "ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!" ಮನ್ಮಥನ ಶರಗಳೆ ತನಗೆ ಒತ್ತಾಸೆ ಅನ್ನುತ್ತಾಳೆ, ಹಂಸಾನಂದಿಯವರ 'ಒತ್ತಾಸೆ' ಅವರ ಎಂದಿನ ಶೈಲಿಯ ಭಾವನುವಾದ.
"ಗುರುವೇ ನಮಃ" ಶಿಕ್ಷಕರದಿನದಂದು ತಮ್ಮ ಗುರುಗಳನ್ನು ನೆನೆಯುತ್ತ ಅವರಿಗೆ ತಾವು ರಚಿಸಿದ ವರ್ಣಚಿತ್ರವೊಂದನ್ನು ಸಮರ್ಪಿಸಿದ್ದಾರೆ ಶೀಲಾನಾಯಕರು.
ಮತ್ತೆ ನಾವಡರ ಕಾಲದಕನ್ನಡಿಯ ಬೆಚ್ಚಿಬೀಳಿಸುವ ಸುದ್ದಿ "ಕಮ್ಯೂನಿಸಂ ಎಂದರೆ ನರಮೇದವೆ", ಪಶ್ಚಿಮ ಬಂಗಾಳದ ರಕ್ತಪಿಪಾಸು ಕಾಮ್ರೇಡ್ ಗಳ ಸುದ್ದಿ, ಆದರೆ ಭಾರತದ ಪತ್ರಿಕೆಗಳಿಗೇಕೊ ಅದು ಸುದ್ದಿಯೆ ಅಲ್ಲ. ಯಾವ ಬೇಸರವೊ ನಾವಡರು ಇದ್ದಕಿದ್ದಂತೆ 'ಕಾಲದ ಕನ್ನಡಿ' ಒಡೆಯಿತೆ ಅಂತ ಹೇಳಿ ಎಲ್ಲ ಕಾಲದ ಕನ್ನಡಿ ಓದುಗರಲ್ಲಿ ಆತಂಕ ಮೂಡಿಸಿದರು.
ನರಸಬೈರಯ್ಯನವರಿಂದ "ಕರ್ನಾಟಕ ಗೆಜಿಟಿಯರ್ " ಬಗ್ಗೆ ಲೇಖನ ನಿಜ ಇದು ಅಂತರ್ಜಾಲಪುಟದಲ್ಲಿ ಸಿಗುವಂತಾದಲ್ಲಿ ಎಲ್ಲರಿಗು ಉಪಯೋಗವಾಗಬಹುದಾದ, ಅಂಕೆಸಂಖ್ಯೆ ಹಾಗು ದಾಖಲೆಗಳು. ಪ್ರಸನ್ನರ "ಮನುಷ್ಯ= ಸಸ್ಯ" ಲೇಖನದಲ್ಲಿ ಉತ್ತಮ ಚಿತ್ರಗಳು ಹಾಗು ಪ್ರಶ್ನೆ ಸಸ್ಯಗಳು ಹೇಗೊ ಬದುಕುತ್ತಾವಾಗಲಿ ಮನುಷ್ಯನಿಗೆ ಇದು ಏಕೆ ಅಸಾದ್ಯ? , ಬಹುಷಃ ಅದೇ ಲೇಖನದ ಪ್ರತಿಕ್ರಿಯೆಯಲ್ಲಿ ಆಚಾರ್ಯರು ಸರಿಯಾದ ಉತ್ತರ ನೀಡಿದ್ದಾರೆ ಮನುಷ್ಯನು ಸಹ ಹಾಗೆ ಬದುಕಬಲ್ಲ.
ಸಂಪದಿಗರೆ ನೀವು ಎಂದು ಮುಂಬಯಿ ನಗರ ನೋಡಿಲ್ಲವೆ ಹಾಗಿದ್ದಲ್ಲಿ ಹೊಳೆನರಸಿಪುರದ ಮಂಜುನಾಥರ ಲೇಖನ "ಮು೦ಬೈ ಎ೦ಬ ನಿತ್ಯಸು೦ದರಿ" ಲೇಖನವನ್ನು ಓದಿಬಿಡಿ ಸಾಕು ಇಲ್ಲಿಂದಲ್ಲೆ ನೇರ ದರ್ಶನ. ಮತ್ತೆ ಮಾದ್ಯಮದವರ ವೃತ್ತಿ ನಿರ್ಲಕ್ಷವನ್ನು ಕಂಡು ಕೆಂಡಾಮಂಡಲ ನಮ್ಮ ಜಯಂತ್ ಅವರ ಲೇಖನ "ಸಾವಿನ ಜೊತೆ ಮಾಧ್ಯಮದವರ ಆಟ.." . ನಿಮ್ಮ 'ಆರೋಗ್ಯ'ದಲ್ಲಿ ಏನಾದರು ಸ್ವಲ್ಪ ಏರುಪೇರೆ ಶ್ರೀಲಕ್ಶ್ಮಿಯವರಿಂದ ಸ್ವಲ್ಪ 'ಟಿಪ್ಸ್' ಏಕೆ ತೆಗೆದುಕೊಳ್ಳಬಾರದು. "ನಿಲ್ಲದು ಅಮಾಯಕರ ಸಾವು ನೋವು "ಮತ್ತೆ ಮತ್ತೆ ಅದೇ ದುರಂತ ಪಾಪಿ ಭಯೋತ್ಪಾದಕರ ದುರಳತನ ಆದರೇನು ಏಕೊ ಅದನ್ನು ಹುಟ್ಟಡಿಗುಸುವ ಗಂಡಸುತನವಿಲ್ಲ ಭಾರತ ಸರ್ಕಾರಕ್ಕೆ ಜಯಂತ್ ನಿಮ್ಮಂತೆಯೆ ಬೇಸರ ನಮಗು.
ಸವಿತೃರವರ "ಗಣಪ್ಪನ ಗಳಾಟೆ " ಕನ್ನಡದ ವ್ಯಾಕರಣದ ಬಗ್ಗೆ ಉತ್ತಮ ಚರ್ಚೆಯವಸ್ತು, ಈ ರೀತಿಯ ಚರ್ಚೆಗಳು ಸಂಪದದಲ್ಲಿ ಅಗಾಗ್ಯೆ ನಡೆದರೆ ನಮ್ಮ ನೆನಪಿನ ಮೇಲೆ ಕುಳಿತಿರುವ ದೂಳನ್ನು ಕೊಡವಿಕೊಂಡು ನಾವು ವ್ಯಾಕರಣ ಸನ್ನದರಾಗಬಹುದು.
"ಇನ್ನೇನು ಅವಳು ಬರುವ..." ನಾವಡರ ಕವನ ತಮ್ಮ ಹೆಂಡತಿಯನ್ನು ಕಾಯುತ್ತಿರುವ ಪತಿಯೊಬ್ಬನ ಮನಸಿನ ಚಿತ್ರಣ. ಹಾಗೆಯೆ 'ನೆನಪುಂಟೇನೆ..." ಅದೆ ಸಂಸಾರದ ರಸನಿಮಿಷದ ಚಿತ್ರ.
'ಆಸುಮನ'ದಿಂದ ಮೂಡುವ ಆತ್ರಾಡಿಸುರೇಶರ ಕವನಗಳೆಂದರೆ ಅದರದು ಬೇರೆಯೆ ಆದ ಚಾಪು, ಹಾಗಾಗಿಯೆ ಅವರ ಕವನಗಳು "ಸದ್ದಿಲ್ಲದೆ" ನಮ್ಮ ಮನಗಳಲ್ಲಿ ನೆಲೆಯೂರಿಬಿಡುತ್ತವೆ. ಆಸುರವರು ಹೀಗಾದರೆ ಪಾಪ ಕುಂಭ್ಳೆಯವರನ್ನು ನೋಡಿ "ಪ್ಯಾರ್ ಕಿ ಎಬಿಸಿಡಿ.. " ಕಲಿಯಬೇಕಿದೆ ಕರುಣೆ ತೋರಿಸಿ ಅಂತಾರೆ ಶಿಶುವಿಹಾರದ ಕಂದನಂತೆ ಆದರೆ ಅದರಲ್ಲಿ ಮಾಸ್ಟರ ಪದವಿ ಹೊಡೆದುಬಿಟ್ಟಿದ್ದಾರೆ ಎಚ್ಚರ ಏಕೆಂದರೆ ಮತ್ತೆ ಅವರೆ ರಚಿಸಿದ್ದಾರೆ 'ಆವರಿಸಿದೆ ನಿನ್ಯಾಕೆ ನನ ಎಲ್ಲ ಅಲೋಚನೆಯಲಿ' ಎಂದು.
ಜಯಂತರಿಗೆ ಅನುಮಾನ 'ಸೀರೆ ಉಡುವುದು ತಪ್ಪೆ" ಅಂತಾರೆ ಇವರಿಗ್ಯಾಕೆ ಈ " ಆಸೆ" ಪ್ಯಾಂಟು ಹಾಕುವ ಹೆಣ್ಣುಮಕ್ಕಳ ನಡುವೆ ಅಂತ ಚಿಂತಿಸಿದರೆ, ಅವರು ಸೀರೆ ಉಡುವ ಬಗ್ಗೆಯಲ್ಲ ಲೇಖನ, ಅದು ಬೇರೆಯೆ. ಪ್ರಸನ್ನರು ಅವರ ಸಖಿಯ ಚಿಂತೆಯಲ್ಲಿ "ಬಾ ಸಖಿ.." ಅನ್ನುತ್ತಿದ್ದರೆ ಅವರ ಕವನದಲ್ಲಿ.
ರವಿಯವರೆ ನೀವೆನೊ "ಭಯಂಕರ ಜೋಕ್ " ಮಾಡಿದಿರಿ ಅದನ್ನು ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟವೆ ಹುಲಿ ನಮ್ಮನ್ನು ತಿನ್ನುತ್ತದೆ ಎಂದು ಕಾಪಾಡಲು ಕಿರುಬನನ್ನು ಕರೆಯಲು ಸಾದ್ಯವೆ. ನಡುವೆ ಬರಿ ಕಾಫಿಕುಡಿಯುವ ಚೇತನ್ಗೆಂತದೊ ಕಿಕ್ಕು ಅವರ 'ಸ್ವಲ್ಪ ಕಿಕ್" ನಲ್ಲಿ.
ಮೀಸೆ ಎಂದರೆ ಗಂಡಸಿಗಷ್ಟೆ ಅಲ್ಲರಿ, ಮೀಸೆಯ ಒಡೆಯನ ಹೆಂಡತಿಗು ಅದರ ಮೇಲೆ ಎಂತದೊ ವಾಂಛೆ! ಇಲ್ಲಿ ನೋಡಿ "ನನ್ನವನ ಮೀಸೆ" ಯಲ್ಲಿ, ಕವನಗಳ ತಮ್ಮ ಮೊದಲ ಹೆಜ್ಜೆಗಳಲ್ಲಿಯೆ ತಮ್ಮ ಚಾಪು ಮೂಡಿಸುತ್ತಿದ್ದಾರೆ ಗಂಡುನೆಲ ಧಾರವಾಡದ ಹೆಣ್ಣುಮಗಳು ಸುಮಂಗಲ.
ಮಾಗೋಡು ಜಲಪಾತದ ಸುಂದರ ಚಿತ್ರಗಳ ಅನಾವರಣ ಮಂಜುನಾಥರಿಂದ 'ಜಲಲ ಜಲಲ ಜಲದಾರೆ" ಲೇಖನದಲ್ಲಿ. ನಮ್ಮ ಮಾತುಗಳು ಹೇಗಿರಬೇಕು ಎಲ್ಲರ ಚಿಂತೆ, ಆದರೆ ಅದಕ್ಕೊಂದು ಉತ್ತರ ಆಸುರವರ ಕವನ "ಮಾತುಗಳು ಹೇಗಿರಬೇಕು ಅನ್ನುವಿರ"
ಮಾಟ ಮಂತ್ರ ಇವೆಲ್ಲ ಸುಳ್ಳು ಮೂಡನಂಬಿಕೆ ಎಂದೆಲ್ಲ ಹೇಳುವಿರ ?. ಅಥವ ಅದರ ಬಗ್ಗೆ ನಮಗೇನು ಅನುಭವವಿಲ್ಲ ಅನ್ನುವಿರ . ಇಲ್ಲಿದೆ ನೋಡಿ ಭಯದ ರುದ್ರ ನರ್ತನ, ಹೆಚ್ಚು ಕಡಿಮೆ ಘಟನ ಸ್ಥಳದಿಂದಲೆ ನೇರ ನಿರೂಪಣೆ , ಮಂಜುನಾಥರ ಸ್ವಂತ ಅನುಭವ "ಮಾಟ ಮಂತ್ರ ಮಾಯೆ.." ಗಟ್ಟಿಎದೆಯಿಂದ ಓದಿ. ಮಂಜುರವರವ ಮಾಟ ಮಂತ್ರದ ಲೇಖನದ ಪ್ರಭಾವವೊ ಎಂಬಂತೆ ದೆವ್ವ ಮಾಟ ಮಂತ್ರಗಳ ಬಗ್ಗೆ ಸಾಕಷ್ಟು ಲೇಖನಗಳು ಈ ತಿಂಗಳು ಮೂಡಿ ಬಂದವು
ಗಣೇಶರ ಕಲ್ಪನೆಯ ಹಲವು ಸಂಪದಿಗರ ಕೈಸೇರಿಸಿದ ವಿಶಿಷ್ಟ ಲೇಖನಮಾಲೆ "ಚಲೊ ಮಲ್ಲೇಶ್ವರ" ಸಹ ಸಂಪದದಲ್ಲಿ ಹೊಸ ಹೆಜ್ಜೆ , ಹೊಸ ಪ್ರಯತ್ನ.
"ಶಿಖಿರಸೂರ್ಯ" ಕಂಬಾರರಿಗೆ ಅಭಿನಂದನೆ ಅರ್ಪಿಸುವ ಶಶಿಕುಮಾರರ ಲೇಖನ, ನಿಜ ಕನ್ನಡಿಗರಿಗೆ ಒಮ್ಮೆ ಬರುವ ಗೌರವಕ್ಕೆ ನಾವು ಆನಂದಿಸಬೇಕು, ನಾವೆ ಅದನ್ನು ಪ್ರಶ್ನಿಸುತ್ತ ಅದರ ಮೌಲ್ಯ ಕಳೆಯಬಾರದು, ಮತ್ತೆ ಪ್ರತಿಬಾರಿ ಪ್ರಶಸ್ತಿ ಬಂದಾಗಲು, ಪ್ರಶಸ್ತಿ ಸ್ವೀಕರಿಸುವರನ್ನು ಪ್ರಶಸ್ತಿ ಬಾರದವರ ಜೊತೆ ಅನಗತ್ಯ ತುಲನೆ ಮಾಡುವ ನಮ್ಮ ವಾದಗಳನ್ನು ನಿಲ್ಲಿಸಿ ವಿಶಾಲ ದೃಷ್ಟಿ ಬೆಳಸಿಕೊಂಡಲ್ಲಿ, ಕನ್ನಡದ ಕಿರೀಟಕ್ಕೆ ಮತ್ತಷ್ಟು ಹೊಳಪು ಬಂದೀತು.
ಅಳಿವಿನ ನಂತರ ಉಳಿಯುವುದೇನು ಎನ್ನುವಾಗ ನಮ್ಮ ಸಾಧನೆಗೆಲ್ಲ ಏನು ಬೆಲೆ ಎನ್ನುವ ಜಿಜ್ಞಾಸೆ ರಾಮಮೋಹನರ 'ಶೂನ್ಯ-ಸಾಧನೆ'ಯಲ್ಲಿ.
ಎಲ್ಲ ಸಂಪದಿಗರಿಗು ಒಮ್ಮೆ ಸಂಪದದ ಬಗ್ಗೆ ಒಂದು ಕವನ ಬರೆದರೆ ತೃಪ್ತಿ ಹಾಗಾಗಿ ಸುಮಂಗಲ ಬರೆದಿದ್ದಾರೆ "ಸಂಪದ" ನಂತರ 'ನಲ್ಲನ ತಲ್ಲಣ' ರಚಿಸಿದರು ತಿಂಗಳು ಪೂರ್ತಿ ಚಟುವಟಿಕೆಯಾಗಿದ್ದು ಹಲವು ಕವನ ಬರಹ ದಾಖಲಿಸಿದರು.
'ನೀನಿಟ್ಟ ರಂಗೋಲಿ'ಯಲ್ಲಿ ಮುಂಜುನಾಥ್ ರವರೆ ಕಲ್ಪನೆ ಹಾಗು ಚಿತ್ರ ಎರಡು ಅಮೋಘ. ಅಪ್ಪ ಅಮ್ಮನಿಗೆ ಮುಪ್ಪಿರಬಹುದು ಆದರೆ 'ಅಪ್ಪ ಅಮ್ಮ'ನ ಪ್ರೀತಿಗೆ ಎಂದಿಗು ಮುಪ್ಪಿಲ್ಲ ನೀವನ್ನುವುದು ನಿಜ ಪ್ರಸನ್ನ.
ಹರೀಶರ 'ದೇವಜಲ' ಒಂದು ಸಾರಿ ಓದಿದರೆ ಆಗಲ್ಲ ಎನಿಸಿ ಮತ್ತೆ ಮತ್ತೆ ಓದುತ್ತಿದ್ದೆ, ಅರ್ಥವಾಗಲಿ ಅಂತಲ್ಲ ಅರ್ಥ ಮನದಾಳದಲ್ಲಿಳಿಯಲಿ ಎಂದು, ದೇವಗಂಗೆಯಂತೆ. ಪ್ರಸನ್ನರ 'ನೀನು ನಾನು' ಒಬ್ಬರಿಗೊಬ್ಬರು ಹೇಳದೆ ಅರ್ಥಮಾಡಿಕೊಳ್ಳುವ ಸಂಬಂದವೆ ಪ್ರಿಯ ಪ್ರಿಯತಮೆಯರ ನಡುವಿನ ಲಹರಿ.
ಪುಸ್ತಕ ಎಂದರೆ ಅಪರೂಪದ ವಸ್ತುವಾಗುತ್ತಿರುವ ಸಮಯ 'ಪುಸ್ತಕ ಪರಿಷೆ' ಬಗ್ಗೆ ಹರೀಶರಿ೦ದ ಲೇಖನ, ಹಳೆಯ ಪುಸ್ತಕಗಳಿಗಾಗಿ ಸಂಪದಿಗರು ತಡಕಾಡಲು ಒಂದು ಅವಕಾಶ. ಕ್ಲಿಷ್ಟವಾದ ಕನ್ನಡ ಪದಗಳ ಅರ್ಥಬೇಕೆ ಕನ್ನಡ ನಿಘಂಟಿನ ಬಗ್ಗೆ ಅರಿಯಿರಿ, ಶಶಿದರರವರೆ ಸಂಪಾದಕ ಮಂಡಲಿಯಲ್ಲಿದ್ದು ಬರುತ್ತಿರುವ ನಿಘಂಟು 'ಲಾಂಗ್ ಮನ್ -ಸಿಐಐಎಲ್.." . ದಾರವಾಡದ ಹುಡುಗಿ ರಚಿಸಿರುವ ಕವನ 'ಹುಬ್ಬಳಿಳಿ ಹುಡುಗಿ' ತಿಂಗಳ ಕಡೆಯ ಬ್ಲಾಗ್ ಬರಹ ಓದಿ ಅವರಿಗೊಂದು ಶುಭಾಷಯ ತಲುಪಿಸಿಬಿಡಿ ಅಷ್ಟೆ !! ಏಕೆಂದರೆ ಮದುವೆ ಊಟಕ್ಕೆ ಕರೀತಿನಿ ಅಂತ ಅಶ್ವಾಸನೆ ಕೊಡ್ತಿದ್ದಾರೆ.
ಕವನಗಳು
ಗಣಪತಿಯನ್ನು ಪ್ರಾರ್ಥನೆ ಮಾಡುತ್ತಲೆ ಕವನ ವಿಭಾಗ ಪ್ರಾರಂಬ ಅರುಣರವರ 'ಪ್ರಾರ್ಥನೆ'ಯೊಡನೆ. ಮತ್ತೆ ಸುಮನ 'ಸಂಬದ'ಗಳ ಬಗ್ಗೆ ಬರೆಯುತ್ತ ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಪತಿ-ಪತ್ನಿ ಈ ಎಲ್ಲವು ದೇವ ತೊಡಸಿಹ ಸಂಕೋಲೆಗಳೆನ್ನುತ್ತಾರೆ, ಸುಮನರೆ ಇವೆಲ್ಲ ಸಂಕೋಲೆಗಳಲ್ಲ, ಹಿತವಾದ ಬಂದನಗಳು ಇವೆಲ್ಲ ತೊರೆದರೆ ಜೀವನಕ್ಕೆ ಅರ್ಥವೆ ಇಲ್ಲ ಅಲ್ಲವೆ.
ಸದಾನಂದರೆ 'ಸಹಸ್ರಮಾನದ ಕೊನೆಯಲ್ಲಿ' ಭಾರತ ಹೀಗಿತ್ತು ಅಂತ ಬರೆದಿದ್ದೀರಿ , ಧನ್ಯವಾದ , ಆದರೆ ಈಗ ನೀವು ಹೇಳಿರುವದಕ್ಕಿಂತ ಹೇಗೆ ಬಿನ್ನವಾಗಿದೆ? ಎಲ್ಲವು ಹಾಗೆಯೆ ಇದೆ.
ಪ್ರತಿಯೊಂದರಲ್ಲು ಇರುವುದ ಬಿಟ್ಟು ಇಲ್ಲದನ್ನೆ ಹುಡುಕುತ್ತಾ 'ಅಂತರಂಗದ ಅನ್ವೇಷಣೆಯಲ್ಲಿ' ಸಾಗುವ ಕವನ ಏಕೆ ಕಡೆ ಮುಟ್ಟಲಿಲ್ಲ ಅನ್ನಿಸುತ್ತೆ ಮಾನಸ ರವರೆ, ಕಡೆಯಲ್ಲಿ ಅಪೂರ್ಣವೆಂದು ಭಾಸವಾಗುತ್ತೆ.
ಒಮ್ಮೆಮ್ಮೆ ಭರದಿಂದ ಅಪ್ಪಳಿಸುವ, ಮತ್ತೊಮ್ಮೆ ಜಡವೆಂದು ಭಾಸವಾಗುವ ಚೇತನರವರ 'ನೆನಪುಗಳ' ಸುನಾಮಿ, ಮನುಷ್ಯನ ಮನಸಿನ ಚಿತ್ರಣ. ಏರಿದವ ಇಳೆಯಲೆ ಬೇಕು ಜೀವನ ನೀತಿ ಆದರೆ ಅದು 'ಚಿನ್ನ'ಕ್ಕಲ್ಲ, ಸಪ್ತಗಿರಿಯವರ ಚಿನ್ನದ ವಿಶ್ಲೇಷಣೆ.
'ಮಾತೆಯ ಮಮತೆಯ ಮರೆಯಲೆಂಗ' ಧಾರವಾಡದ ಸುಮಂಗಲ ರವರ ತೊಳಲಾಟ, ಅದರೇನು ಮಾಡುವುದು ಅವಳ ಮಮತೆ ನಮಗೆಷ್ಟು ಲಭ್ಯತೆಯೊ ಅಷ್ಟೆ ಅಲ್ಲವ? ನಿಮ್ಮ ಭಾವನೆಯ ಜೊತೆ ನಾವೆಲ್ಲ ಇದ್ದೇವೆ ಸುಮಂಗಲರವರೆ, ತುಂಬಾ ಸುಂದರವಾದ ಚಿತ್ರವನ್ನು ಆಯ್ದು ಕೊಂಡಿದ್ದೀರಿ.ಹಾಗೆ ನಿಮ್ಮ 'ಬಾಲ್ಯದ ದಿನಗಳು' ಅದ್ಭುತವಾದ ಚಿತ್ರ,
ನಂದೀಶ ಬಂಕೇನಹಳ್ಳಿಯವರೆ ನಿಮ್ಮ' ಕವನದ ಬೇಟೆ' ಸಕ್ಕತ್ , ಮತ್ತೆ ಏನಾದರು ದೊಡ್ಡ ಮೀನು ಬಿತ್ತಾ?.
ಜೇಬಿನಲ್ಲಿ ಹಣವಿಟ್ಟು ಸಿಟಿಬಸ್ ಹತ್ತಿದರೆ ಏನಾಗುತ್ತೆ 'ಬೆ.ನಾ.ಸ' ಓದಿ ಬಹಳ ಜನರಿಗೆ ಆಗಿರಬಹುದಾದ ಅನುಭವ. ಚಂದ್ರಶೇಖರರ 'ನಿನ್ನ ಋಣಂ ' ತುಂಬಾ ಸುಂದರ ಭಾವ,ತನ್ನನ್ನು ಬೆಳೆಸಿ ಪೋಷಿಸಿದ ತಂದೆಗೆ ಇಳಿವಯಸ್ಸಿನಲ್ಲಿ ಮಗ ಕೊಡುವ ಆಶ್ವಾಸನೆ ಇಂದಿನ ಕಾಲಕ್ಕೆ ಪ್ರಸ್ತುತ 'ನಿನ್ನ ಪೋಷಣೆಯೆನಗೆ ಭಾರವಲ್ಲ ಭಾಗ್ಯಂ....ನೀನಿಂದು ನನಗೆ ಪಿತೃಶಿಶು" ಎನ್ನುವ ಭಾವವಂತು ಮನ ಮುಟ್ಟುತ್ತದೆ. ಆದರು ಒಂದು ಸಂಶಯ "ಋಣ" ವನ್ನು "ಋಣಂ" ಎಂದರೆ ಹಳೆಗನ್ನಡವೆ? 'ಡ' ಸೇರಿದರೆ ತಮಿಳು ಎಂಬಂತೆ!! ಸುಮ್ಮನ್ನೆ ತಮಾಷಿಗೆ ಅಂದೆ ಚಂದ್ರಶೇಖರರೆ.
ಚೇತನ್ 'ನಿರೀಕ್ಷೆಯ ಕಂಗಳಲ್ಲಿ' ಸುಂದರ ಕವನವನ್ನು ಸಪ್ಪೆ ಮಾಡಿರುವುದು ನಿಮ್ಮದೆ ಮನಸೆಳೆಯುವ ಚಿತ್ರ. ಈಗಲೊ ಆಗಲೊ ನೀರ ಬಿಂದು ಕೆಳಗೆ ಬಿತ್ತೆ ಅನ್ನಿಸುವ ಚಿತ್ರ.
ಪಾಟೀಲರೆ ನಾವು 'ಸಿಡಿಯಲಾರದ' ಸ್ಪೋಟಕಗಳು ನಿಜ ಆದರೆ ರಮೇಶ್ ರವರು ಹೇಳುವುದನ್ನೆ ನಾನು ಹೇಳುತ್ತೇನೆ, ಯಾರಾದರು ಕಡ್ಡಿಗೀರಿದರೆ? ದೀಪಾವಳಿ!!.
ಅಂತು ಭಾಮಿನಿಪ್ರಿಯ ರಘುರವರು ಮತ್ತೆ ಸಂಪದ ಅಂಗಳದಲ್ಲಿಳಿದರು,'ಕಾಯಕದ ಪರಿ'ಯಲ್ಲಿ ಫಲದಪೇಕ್ಷೆಯ ದೂರವಿರಿಸುತ ತಲಹು ಇಹುದೆನಗೆ೦ಬ ಛಲದಲಿಕಲಿಲವಿರದಿಹ ಅಲಘ ತಪವನು ಗೈವೆನನವರತ ಎನ್ನುವ ಶ್ರಮಜೀವಿಯ ವ್ಯಾಖ್ಯಾನ ಅದ್ಭುತ ಹಾಗೆ ಆರಿಸಿರುವ ವರ್ಣಚಿತ್ರವು ಸಹ.
ಜಯಂತರೆ ನೀವು ಕೈಆಡಿಸದ ವಿಭಾಗವೆ ಇಲ್ಲವೆ? ಭಕ್ತಿಗೀತೆಯನ್ನು ಸಹ ಸುಂದರವಾಗಿ ಬರೆದಿದ್ದೀರಿ 'ಕಂಡೆ ನಾಗೋವಿಂದ' ಪದ್ಯದಲ್ಲಿ, ಹಾಗೆ ನೀವು ಕಂಡ ಗೋವಿಂದ ದರ್ಶನ ಎಲ್ಲರಿಗು ಮಾಡಿಸಿದ್ದೀರಿ.
ನಿನ್ನೆ ಮೊನ್ನೆ ಸಂಪದದ ಅಂಗಳದಲ್ಲಿ ಓಡಾಡುತ್ತಿದ್ದ ಕವನವೆಂಬ ಬಾಲೆ ಈಗ ಬೆಳೆದು ಪ್ರಶ್ನೆಯಾಗಿದ್ದಾಳೆ 'ಕಾವ್ಯದ ಪ್ರಶ್ನೆ' ಬಾಗ್ವತರ ರಚನೆಯಲ್ಲಿ. ಮಾನು ನಿಮ್ಮ ಕಳಕಳಿ ಹಾಗು ಸತ್ ಸಂಕಲ್ಪವೆ ಸಾಕು ಭಾರತಮಾತೆ ಧನ್ಯಳಾಗುತ್ತಾಳೆ ನಿಮ್ಮ 'ದೇಶಕ್ಕೆ ಸತ್ಪ್ರಜೆಯಾಗುವೆ' ಕವನ ಓದಿದ್ದಲ್ಲಿ. ಗೋಪಾಲಕೃಷ್ಣರೆ 'ಜಗನ್ಮಾತೆಗೆ ನಮನ' ಗೀತೆಯು ಈ ದಸರಾ ನವರಾತ್ರಿ ಸಮಯದಲ್ಲಿ ಪ್ರಸ್ತುತ , ಅವಳಿಗೆ ಮುಟ್ಟಿದೆ ಬಿಡಿ ನಿಮ್ಮ ನಮನ.
ಶ್ರೀನಿವಾಸರೆ 'ನಮ್ಮಾ ಬೆಳಗಾಂ' ಕವನ ಹೆಚ್ಚು ಶೌರ್ಯಭರಿತವಾಗಿದೆ, ನಾಡಿನ ರಕ್ಷಣೆಗೆ ಸ್ಪೂರ್ತಿ ಕೊಡೊ ಕವನದಲ್ಲಿ , 'ತೆಗಿತೀವಿ ಮಾನ ಪ್ರಾಣ' ಅನ್ನೊ ಸಾಲು ಮಾತ್ರ ಶೋಬಿಸೋದಿಲ್ಲ ಅನ್ನಿಸುತ್ತೆ ಅಲ್ಲವೆ, ಕನ್ನಡಿಗರು ಎಂದಿಗೂ ನಡತೆಯಲ್ಲಿ ಶ್ರೀಮಂತರು.
ನಾರಯಣರ 'ಎನನ್ನಾದರು ಪ್ರತಿಕ್ರಿಯಿಸು' ಉತ್ತಮ ಅಂತರ್ಜಾಲ ಚಿತ್ರ, ಬಹುಷಃ ಕವನ ಚಿತ್ರಕ್ಕಾಗಿಯೆ ಬರೆದಂತೆ ಅನ್ನಿಸುತ್ತೆ. ಮುಂಗಾರುಮಳೆ ಪ್ರೇರಿತರಾಗಿ ಜಯಂತರು ಲಾಲಬಾಗಿನಲ್ಲಿ ಕಂಡ 'ಹೈಹೀಲ್ಡ್ ಚೆಲುವೆ'ಯ ಅನುಭವ ನೋಡಿ,ಪಾಪ ನೆಲಕ್ಕೆ ಬಿದ್ದು ಮೆತ್ತಿದ ಕೆಸರಿನ್ನು ಆರಿಲ್ಲ ಆಗಲೆ "ಭಗತ್ ಸಿಂಗ್ ಅಮರ್ ರಹೆ" ಎನ್ನುತ್ತಿದ್ದಾರೆ.
ನಂದೀಶರೆ ಮನಸ್ಸು ಮತ್ತು ಪ್ರಕೃತಿಯನ್ನು ಸಮನ್ವಯಗೊಳಿಸುತ್ತ ಸಾಗುವ ಪ್ರಯತ್ನ ನಮ್ಮ ಮನ ಮುಟ್ಟುತ್ತದೆ "ಮನಸು ಮತ್ತು ನದಿ" ಕವನದಲ್ಲಿ. ಪ್ರೀತಿ ಬರಿದಾದಗ ಮತ್ತೊಂದು ಪ್ರೀತಿಗಾಗಿ ಹುಡುಕಾಟ ನರಸಿಂಹ ಮೂರ್ತಿಯವರಿಂದ "ಪ್ರೀತಿ ಬರಿದಾದಗ'ಕವನದಲ್ಲಿ. ನಿಜ ರಘುರವರೆ ಪ್ರಕೃತಿಯೆ ತ್ಯಾಗದ ನೀತಿಯ ಭೋದನೆ ಮಾಡುತ್ತಿದ್ದರು ನಾವು ಅರ್ಥಮಾಡಿಕೊಳ್ಳೂತ್ತಿಲ್ಲ ನಿಜ ತ್ಯಾಗಿಗಳು ನೀರಮೇಲಣ ನೀರ ಬಿಂದುವಿನಂತೆ ಏನನ್ನು ಅಂಟಿಸಿಕೊಳ್ಳದೆ ಇರುವರು ಎನ್ನುವ ನಿಮ್ಮ ಕವನ"ತ್ಯಾಗದಡೆಗೆ ದೃಷ್ಟಿಹರಿದು" ಅದ್ಭುತ.
ಅನೂಪ್ 'ಉತ್ತಿಷ್ಠ ಭಾರತಿ' ಉತ್ತಮ ದೇಶಭಕ್ತಿಗೀತೆ, ಉತ್ತಮ ಪ್ರಯತ್ನ. ನಿಜ ನಾಗೇಂದ್ರಕುಮಾರರೆ ದೇವರನ್ನು ಎಚ್ಚರಿಸಲು ಶಂಕು ಗಂಟೆಗಳ ಅವಶ್ಯಕತೆ ಇದೆಯೆ "ಪ್ರಣತಿ" ಯ ಪ್ರಶ್ನೆ ಸರಿ ಇದೆ. ಹಾಗೆ ತೇಜಸ್ಗೆ ಸಚಿವೆ ಶೋಭರೆ ಹೇಳಬೇಕು 'ಕರಡಿಗೆ ಜಾಮುನ್ ತಿನ್ನಿಸಲು" ಕರೆಂಟು ಯಾವಾಗ ಬರುತ್ತೆ ಎಂದು.
ತಿಂಗಳ ಕಡೆಯ ಕವನ ಪಾಟೀಲರ "ವಿಷವೃಕ್ಷ" ಆದರೆ ನಮ್ಮೆಲ್ಲ ಚಾನಲ್ ಗಳ ಕತೆಯು ಏಕೊ ಧರ್ಮಬಾಹಿರ ಸಂಬಂದಗಳನ್ನೆ ವೈಭವೀಕರಿಸುವದಲ್ಲ!
ಚಿತ್ರವಿಭಾಗ :
ಜಮದಗ್ನಿಯವರ 'ಅರಸಿಕೆರೆ ಶ್ರೀಪ್ರಸನ್ನ ಗಣಪತಿ" ಆಕರ್ಷಕ ಚಿತ್ರದೊಂದಿಗೆ ಪ್ರಾರಂಬ. ನಂತರ ವಿಧ್ಯಾದರ ಚಿಪ್ಪಳಿಯವರು ಕಂಪ್ಯೂಟರ್ ಉಪಯೋಗಿಸಿ ರಚಿಸಿದ ಹಲವು ಚಿತ್ರಗಳು. ಗಣೇಶರ 'ನಾಚುರಲ್ ಕಸೆಟ್ಟಾ' ಹಾಗು ನೇತ್ರದಾನದ ಚಿತ್ರಗಳು. ರಮೇಶರ ಕಣಜೇರಿಯ ಗೂಡಿನ 'ಮುಟ್ಟದಿರಿ ಜೋಕೆ' ಅದ್ಬುತ ಚಿತ್ರ. ನಂದೀಶರ 'ಬೆರಗು' ಚಿತ್ರದ ವರ್ಣವಿನ್ಯಾಸ, ದೃಷ್ಯ ಸಂಯೋಜನೆ ನಿಜಕ್ಕು ನಮ್ಮಲ್ಲಿ ಬೆರಗು ಹುಟ್ಟಿಸುತ್ತದೆ.
ಮನಸೆಳೆಯುವ ಕಪ್ಪುಬಿಳುಪು ಚಿತ್ರ 'ಬಾವಿ ನೀರು.." ಬಾವಿಯಲ್ಲಿ ನೀರು ಸೇದೋಣ ಎನ್ನುವಾಗಲೆ ಪ್ಲಾಷ್ಟಿಕ್ ಬಿಂದಿಗೆಗಳನ್ನು ಹಿಡಿದು ಹೊರಟೆಬಿಟ್ಟಿದೆ ನೋಡಿ ಸೋಮಶೇಖರಯ್ಯನವರ ಮನೆಯಲ್ಲೊಂದು ಮಗು "ನೀರಿಗೆ ಹೋಗೋಣ' ಎನ್ನುತ್ತ. ಹಾಗೆ 'ಸುಂದರ ಸಂಜೆ' ವರ್ಣಚಿತ್ರದ ಬಣ್ಣಗಳು ಚೆನ್ನಾಗಿವೆ ಹಾಕಿದವರಾರು ತಿಳಿಯುತ್ತಿಲ್ಲ.
ನಂದೀಶರೆ ಎಲ್ಲಿ ಹುಡುಕುತ್ತೀರಿ ಇಂತ ದೃಷ್ಯಗಳನ್ನು 'ಕಲ್ಲು ಕರಗುವ ಸಮಯ' ಚಿತ್ರ ಹಾಗು ಕಲ್ಪನೆ ಎರಡು ಸೂಪರ್ !!! ದೇವರು ಆರ್ ಬಟ್ಟರ ಹೂ ಚಿತ್ರ ಚೆನ್ನಾಗಿದೆ ಅದರೆ ಅದು ಯಾವುದು 'ಅಪರೂಪದ್ದು' ಅನ್ನುವುದು ನನಗು ತಿಳಿದಿಲ್ಲ, ಸದ್ಯಕ್ಕೆ ಕ್ಯಾಕ್ಟಸ್ ಹೂ ಅನ್ನೋಣವೆ. ಮತ್ತೆ ಕಡೆಯಲ್ಲಿ ಗಣೇಶರು ತಂಬುಳಿಗೆ ಸೂಪರ್ ಎನ್ನುತ್ತ 'ವಿಟಮೀನ್' ಸೊಪ್ಪಿನ ಚಿತ್ರ ಹಾಕಿದ್ದಾರೆ ಆದರೆ ಅದರೆ ಹೆಸರೇನು ಸಾರ್ ?
--------------------------------------------------------------------------------------------------
ಮಳೆಯ ನಂತರದ ಹನಿ : ಪ್ರತಿಬಾರಿ ಪಕ್ಷಿನೋಟ ಬರೆದಾಗಲು ಒಂದು ಆಕ್ಷೇಪಣೆಯಿತ್ತು, ಬರಿ ಜನಪ್ರಿಯವಾದ ಲೇಖನವನ್ನಷ್ಟೆ ಇದರಲ್ಲಿ ತೋರಿಸಲಾಗುತ್ತೆ, ಆದರೆ ಸಂಪದಿಗರಿಗೆ ತೊಂದರೆಕೊಡುವ ಕೆಟ್ಟ ಲೇಖನ ಕತೆಗಳನ್ನು ಏಕೆ ಬಿಡುತ್ತೀರಿ ಎಂದು, ಅಂತಹುದೆ ಒಂದು ಕತೆ ಪಾರ್ಥಸಾರಥಿಯವರ ತಿಂಗಳಿಗೊಂದು ದೆವ್ವದ ಕಥೆ : "ಬುರುಡೆಯ ನಾಟಿ"
Comments
In reply to ಉ: ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ by gopaljsr
ಉ: ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ