ಆಟೋಟ, ಮನರಂಜನೆ, ಸಾರಿಗೆ ಮತ್ತು ದೇಶದ ರಕ್ಷಣಾ ವ್ಯವಸ್ಥೆ
೭೧.ಜಗತ್ತಿನ ಅತ್ಯಂತ ಎತ್ತರದ ಜಾಗದ ಕ್ರಿಕೆಟ್ ಕ್ರೀಡಾಂಗಣ ಭಾರತದಲ್ಲಿದೆ.
ಅದು ಹಿಮಾಚಲ ಪ್ರದೇಶದ ಚಾಯಿಲ್ನಲ್ಲಿದೆ. ಇದನ್ನು ೧೮೯೩ರಲ್ಲಿ ಕಟ್ಟಿಸಿದವರು ಕ್ರಿಕೆಟ್-ಪ್ರಿಯರಾದ ಪಾಟಿಯಾಲಾದ ಮಹಾರಾಜ ಭುಪಿಂದರ್ ಸಿಂಗ್. ಇದಕ್ಕಾಗಿ ಅವರು ಸಮುದ್ರಮಟ್ಟದಿಂದ ೨೪೪೪ ಮೀ. ಎತ್ತರದ ಗುಡ್ಡವನ್ನು ಸಮತಟ್ಟುಗೊಳಿಸ ಬೇಕಾಯಿತು.ದಟ್ಟ ಕಾಡಿನಿಂದ ಸುತ್ತುವರಿದಿರುವ ಈ ಕ್ರಿಕೆಟ್ ಕ್ರೀಡಾಂಗಣವನ್ನು ಚಾಯಿಲ್ ಮಿಲಿಟರಿ ಶಾಲೆ ಆಟದ ಮೈದಾನವಾಗಿ ಬಳಸುತ್ತಿದೆ.
ಇದು ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಅಥಣಿ ಭಾಗದ ಹಳ್ಳಿಯ ಜನರ ಕತೆ ಇದು. ಅಲ್ಲಿಯ ಮಾತಿನ ರೀತಿ ಹಾಗೂ ಜೈನ ಧರ್ಮದ ಕುರಿತಾದ ತಿಳಿವಳಿಕೆ ನಮಗೆ ಆಗುತ್ತದೆ.
ಅಲ್ಲಿ ನನಗೆ ಇಷ್ಟವಾದ ಒಂದು ಪುಟ - ಯಥಾವತ್ತಾಗಿ ಇಲ್ಲಿದೆ. (ಇದು ಒಂದು ಪ್ರವಚನದ ಭಾಗ)
ಕಳೆದ ಎಪ್ರಿಲ್ ೧೦ರಂದು ವಿಶ್ವ ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಯಿತು. ವೈದ್ಯಕೀಯ ರಂಗದಲ್ಲಿರುವ ವಿವಿಧ ಚಿಕಿತ್ಸಾ ಪದ್ಧತಿಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯೂ ಒಂದು. ಜರ್ಮನಿ ದೇಶದ ವೈದ್ಯರಾದ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸ್ಯಾಮ್ಯುಯಲ್ ಹಾನಿಮನ್ ಎಂಬಾತನೇ ಹೋಮಿಯೋಪಥಿ ವೈದ್ಯ ಪದ್ಧತಿಯ ಜನಕ. ಇವರ ಜನ್ಮ ದಿನವಾದ ಎಪ್ರಿಲ್ ೧೦ (೧೭೫೫) ನ್ನು ವಿಶ್ವ ಹೋಮಿಯೋಪಥಿ ದಿನವಾಗಿ ಆಚರಿಸಲಾಗುತ್ತದೆ.
ಮುಂದೆ ಓದಿ...ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ ಸಂಧರ್ಭದಲ್ಲಿ ರಚಿತವಾಗುವ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ.
ಮುಂದೆ ಓದಿ...ನಾವು ಬೇರೆಯವರನ್ನು ಓಲೈಸುವುದು, ಮೆಚ್ಚಿಸುವುದು ಮಾಡಬಾರದು. ಅವರನ್ನು ಮೆಚ್ಚಿಸಿದರೆ ನಮಗೇನೂ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕೆಲವು ಸಲ ಕೇಳುತ್ತೇವೆ, ಅವನು ಅವರನ್ನು ಮೆಚ್ಚಿಸಲು ಹೇಳಿದ್ದು ಎಂಬುದಾಗಿ. ಇದರಿಂದ ಪ್ರಯೋಜನವಿಲ್ಲ. ಇದೆಲ್ಲ ಕ್ಟಣಿಕವಾದ್ದು.ಆಡಿದ ಮಾತಿನಿಂದ ಏನಾದರೂ ಪ್ರಯೋಜನವಾಗಬೇಕು. ಸುಮ್ಮನೆ ಹೊತ್ತು ಕಳೆಯಲು ಮಾತನಾಡುವ ಅಗತ್ಯವಿಲ್ಲ. ದಿನದ ಒಂದೊಂದು ಸೆಕೆಂಡ್ ಗೂ ಬೆಲೆಯಿದೆ.
ಮುಂದೆ ಓದಿ...ಕಳೆದ ವಾರ ಪ್ರಕಟಿಸಿದ ವಿ.ಸೀತಾರಾಮಯ್ಯನವರ ಕವನಗಳಲ್ಲಿ ಒಂದು ಕವನ ‘ಶಬರಿ' ಬಗ್ಗೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ. ‘ನಾವು ಬಹಳ ಹಿಂದೆ ಓದಿದ ಕವನವಿದು. ಮತ್ತೆ ಓದಬೇಕೆಂದು ಆಶೆ ಇದ್ದರೂ ಸಿಕ್ಕಿರಲಿಲ್ಲ. ನೀವು ಆ ಕವನವನ್ನು ಪ್ರಕಟಿಸಿರುವುದು ಬಹಳ ಸಂತೋಷವಾಗಿದೆ’ ಎಂದು ಓರ್ವ ನಿವೃತ್ತ ಮುಖ್ಯೋಪಾದ್ಯಾಯಿನಿಯವರು ಕರೆ ಮಾಡಿ ತಿಳಿಸಿದ್ದಾರೆ.
ಮುಂದೆ ಓದಿ...