ಇದೇನಾ ನ್ಯಾಯ...?
1 day 2 hours ago - ಬರಹಗಾರರ ಬಳಗಕೊಟ್ಟೂರಪ್ಪ ಉತ್ತಮ ಕೃಷಿಕ. ಸಣ್ಣ ಹಿಡುವಳಿಯಲ್ಲಿ ತರಕಾರಿ, ಭತ್ತ, ಮೆಣಸು, ಜೋಳಗಳನ್ನು ಬೆಳೆಯುತ್ತಿದ್ದ. ವಾಸಿಸಲು ಒಂದು ಪುಟ್ಟ ಮನೆ. ಅವನ ಮಡದಿಯು ಗೃಹಿಣಿಯಾಗಿದ್ದುಕೊಂಡು ಹೊಲದ ಕೆಲಸದಲ್ಲೂ ಪತಿಗೆ ನೆರವಾಗುತ್ತಿದ್ದಳು. ಒಬ್ಬ ಮಗನನ್ನು ಪಡೆದ ಈ ಸಂಸಾರ ನೆಮ್ಮದಿಯಿಂದ ಜೀವನ ಸಾಗಿಸುತ್ತದೆ.
ಮಗ ಬೆಳೆಯುತ್ತಿದ್ದಂತೆ ಸ್ವಂತ ಊರಿನಲ್ಲಿ ಪಿ.ಯೂ ತರಗತಿ ತನಕ ಕೊಟ್ಟೂರಪ್ಪ ಓದಿಸಿದ. ಮಗನಿಗೆ ಮುಂದೆ ನಗರಗಳಲ್ಲಿ ಓದುವ ಅನಿವಾರ್ಯತೆ ಉಂಟಾಯಿತು. ಕಾಲೇಜು ಶುಲ್ಕ, ಹಾಸ್ಟೆಲ್ ಬಿಲ್ ಮುಂತಾದ ವೆಚ್ಚಗಳಿಗೆ ಪ್ರತೀ ವರ್ಷ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟೂರಪ್ಪ ಖರ್ಚು ಮಾಡಬೇಕಾಯಿತು. ಸಣ್ಣ ಹಿಡುವಳಿದಾರರಿಗೆ ಬ್ಯಾಂಕ್ ದೊಡ್ಡ ಗಾತ್ರದ ಸಾಲ ನೀಡದು. ಸಣ್ಣ ಪುಟ್ಟ ಕೈಸಾಲ ಮಾಡಿ ಎರಡು ವರ್ಷ ಮಗನ ಶಿಕ್ಷಣ ಮತ್ತು ಕುಟುಂಬದ ವೆಚ್ಚಗಳನ್ನು ಸರಿದೂಗಿಸಿದ. ಕೈ ಸಾಲಕ್ಕೂ ತತ್ವಾರ ಬಂದಾಗ ಕೊಟ್ಟೂರಪ್ಪ ತನ್ನ ಮನೆ ಮತ್ತು ಭೂಮಿಯನ್ನೇ ಮಾರಿದ. ಮಾರಾಟದಿಂದ ಬಂದ ಹಣದಿಂದ ಕೈಸಾಲ ಮಾಡಿದುದನ್ನು ತೀರಿಸಿದ. ಉಳಿದ ಹಣವನ್ನು ಮಗನ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟು ಬಾಡಿಗೆ ಮನೆಯೊಂದರಲ್ಲಿ ವಾಸ ಆರಂಭಿಸಿದನು. ತನ್ನ ಮತ್ತು ಹೆಂಡತಿಯ ಹೊಟ್ಟೆ ಹೊರೆಯಲು ಕೂಲಿ ಮಾಡಲು ದೊಡ್ಡ ಹಿಡುವಳಿದಾರರ ಮನೆಗೆ ಹೋಗುತ್ತಿದ್ದನು. ಮಗನ ವಿದ್ಯಾಭ್ಯಾಸ ಮುಗಿದು ಆತನಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಪ್ರಬಂಧಕ ಹುದ್ದೆ ದೊರಕಿತು. ಕೊಟ್ಟೂರಪ್ಪ ದಂಪತಿಗಳು, ಜಾಗ ಮಾರಿಯಾದರೂ ತಾವು ಮಗನಿಗೆ ಕಲಿಸಿದುದರಲ್ಲಿ ಸಾರ್ಥಕತೆ ಕಂಡು ತೃಪ್ತರಾದರು. ಒಳ್ಳೆಯ ಸಂಬಳ ಮತ್ತು ಭತ್ಯೆಗಳು ಮಗನಿಗೆ ಸಿಗಲಾರಂಭಿಸಿದುದರಿಂದ ಅವನಿಗೆ ಹೆಣ್ಣು ಕೊಡಲು ಹಲವರು ಮುಂದೆ ಬಂದರು. ಮದುವೆಯೂ ಆಯಿತು. ಮದುವೆಯಾದ ನಂತರ ಉದ್ಯೋಗದಲ್ಲಿ ಭಡ್ತಿ ಪಡೆದ ಆತ ವಿದೇಶಕ್ಕೆ ಹ… ಮುಂದೆ ಓದಿ...