ಅಭೇದ್ಯ ವಾಯು ರಕ್ಷಣಾ ವ್ಯವಸ್ಥೆ ಅತ್ಯಗತ್ಯ
1 day 14 hours ago - Ashwin Rao K P
ಪಾಕ್ ಉಗ್ರರ ನೇರ ಕೈವಾಡವಿದ್ದ ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಾರತ ನಡೆಸಿದ 'ಆಪರೇಷನ್ ಸಿಂದೂರ' ಜಗತ್ತನ್ನೇ ನಿಬ್ಬೆರಗಾಗಿಸಿತ್ತು, ಅಲ್ಲಿಯ ತನಕ ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾದಂಥ ರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆ ಮಾತ್ರವೇ ಹೆಚ್ಚು ಚರ್ಚೆಯಲ್ಲಿದ್ದವು. ಆದರೆ, ಭಾರತ ಸದ್ದಿಲ್ಲದೆ ಅಳವಡಿಸಿಕೊಂಡಿದ್ದ ಪ್ರಬಲ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎಸ್-400 (ಸುದರ್ಶನ) ಬಗ್ಗೆ ಹೆಚ್ಚಿನ ದೇಶಗಳಿಗಿರಲಿ, ಸ್ವತಃ ಭಾರತದಲ್ಲಿ ಬಹುತೇಕರಿಗೆ ಅರಿವಿರಲಿಲ್ಲ. ಆದರೆ, ಪಾಕಿಸ್ತಾನ ಸೇನೆಯು ಬಳಸಿದ ಟರ್ಕಿಯ ಡೋನ್ ಗಳು, ಚೀನಾದ ಕ್ಷಿಪಣಿ, ಯುದ್ಧವಿಮಾನಗಳನ್ನೆಲ್ಲ ಎಸ್-400 ಕ್ಷಣಮಾತ್ರದಲ್ಲಿ ಹೊಡೆದುರುಳಿಸಿ, ಅಭೇದ್ಯ ರಕ್ಷಣೆಯನ್ನು ಒದಗಿಸಿತ್ತು. ಈಗ ರಕ್ಷಣಾ ಇಲಾಖೆಯು ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವುದು ದೇಶದ ಸುರಕ್ಷತೆ ದೃಷ್ಟಿಯಿಂದ ಅತ್ಯಗತ್ಯದ ಕ್ರಮ.
ಎಸ್-400 ರಷ್ಯಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆ, ಆದರೆ, ಈಗ ಅಳವಡಿಕೆಯಾಗಲು ರಕ್ಷಣಾ ಇಲಾಖೆ ಅನುಮೋದನೆ ನೀಡಿರುವ ತಂತ್ರಜ್ಞಾನ ಸ್ವದೇಶಿ ಎನ್ನುವುದು ಅಗ್ಗಳಿಕೆಯ ಸಂಗತಿ. ನಮ್ಮದೇ ಡಿಆರ್ಡಿಒ ಅಭಿವೃದ್ಧಿಪಡಿಸಲಿರುವ 'ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಂ' (ಕ್ಯೂಆರ್.ಎಸ್ಎಎಂ) ದೇಶದ ಗಡಿಭಾಗಗಳಿಗೆ ಇನ್ನಷ್ಟು ಭದ್ರತೆ ಒದಗಿಸಲಿದೆ. ೩೦ ಕಿ.ಮೀ. ವ್ಯಾಪ್ತಿಯಲ್ಲಿ ಗುರಿಗಳನ್ನು ಶೋಧಿಸುವ ಮತ್ತು ಅತ್ಯಂತ ನಿಖರವಾಗಿ ಹೊಡೆದುರುಳಿಸಬಲ್ಲ ಸಾಮರ್ಥ್ಯವಿರುವ ಕ್ಯೂಆರ್ಎಸ್ಎಎಂ ಅನ್ನು ೩೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗುತ್ತಿದೆ.
ಈ ಹಿಂದೆ, ೨೦೧೮ಲ್ಲಿ ರಷ್ಯಾ ಜತೆಗೆ ಎಸ್-400 ಖರೀದಿ ಒಪ್ಪಂದಕ್ಕೆ ಮುಂದಾದಾಗ ಆಗಿನ ರಕ್ಷಣಾ ಸಚಿವ ಮನೋಹರ ಪರಿಕರ್ ಅವರ ನಿಲುವನ್ನ… ಮುಂದೆ ಓದಿ...