ತೆಂಗಿನ ಮರಗಳ ಶಿರ ಸ್ವಚ್ಛತೆ ಮತ್ತು ಇಳುವರಿ
22 hours 45 minutes ago - Ashwin Rao K Pಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ.
ತೆಂಗಿನ ಮರದ ಶಿರ ಬಾಗವನ್ನು ಸ್ವಚ್ಚ ಮಾಡುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಿರ್ವಹಣೆಗಳಲ್ಲಿ ಒಂದು. ನಮ್ಮ ಹಿರಿಯರು ವರ್ಷಕ್ಕೊಮ್ಮೆ ಶಿರಭಾಗವನ್ನು ಪೂರ್ಣ ಸ್ವಚ್ಚ ಮಾಡುತ್ತಿದ್ದರು. ತೆಂಗಿನ ಕಾಯಿ ತೆಗೆಯುವಾಗೆಲ್ಲಾ ಒಣ ವಸ್ತುಗಳನ್ನು ತೆಗೆದು ಹಾಕುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಾವು ಬರೇ ಕಾಯಿ ಮಾತ್ರ ತೆಗೆಯುತ್ತೇವೆ. ಶಿರ ಭಾಗದ ಸ್ವಚ್ಚತೆ ಕಡೆಗೆ ಹೆಚ್ಚು ಗಮನಹರಿಸುವುದಿಲ್ಲ. ಗರಿಗಳು ಒಣಗಿ ಕಾಂಡಕ್ಕೆ ಜೋತು ಬಿದ್ದಿರುತ್ತವೆ. ಕಾಯಿ ಆಗಿ ತೆಗೆದ ನಂತರ ಉಳಿಯುವ ಒಣ ಹೂ ಗೊಂಚಲು ಅಲ್ಲೇ ಇರುತ್ತದೆ. ಆಗಾಗ ಅದು ಉದುರಿ ಬೀಳುತ್ತದೆಯೇ ಹೊರತು ನಾವು ತೆಗೆಯುವ ಗೋಜಿಗೆ ಹೋಗುವುದಿಲ್ಲ. ತೆಗೆದರೂ ಅದನ್ನು ಬುಡದಲ್ಲಿ ಕೊಳೆಯಲು ಹಾಕುತ್ತೇವೆ. ಇದು ನಿಜವಾದ ನಿರ್ವಹಣೆ ಅಲ್ಲ. ತೆಂಗಿನ ಮರದ ತ್ಯಾಜ್ಯಗಳನ್ನು ತೆಂಗಿನ ಮರದ ಬುಡಕ್ಕೆ ಕಚ್ಚಾ ರೀತಿಯಲ್ಲಿ ಹಾಕಬಾರದು ಹಾಕಬೇಕಾದರೆ ಅದನ್ನು ಸ್ವಲ್ಪ ಕಾಂಪೋಸ್ಟು ಮಾಡಿ ಹಾಕಬೇಕು. ಶಿರಭಾಗದ ಒಣಗಲು ಸಿದ್ದವಾದ ಗರಿಯನ್ನು ಸ್ವಲ್ಪ ಹಸಿ ಇದ್ದಾಗಲೇ ಮುರಿದು ತೆಗೆಯಬೇಕು. ಕಾಯಿ ಆದ ಹೂ ಗೊಂಚಲು, ಗರಿಯ ಬುಡದ ರಕ್ಷಾ ಬಲೆ ಇವನ್ನೆಲ್ಲಾ ತೆಗೆದು ಶಿರಭಾಗವನ್ನು ಯಾವಾಗಲೂ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು.
ಸ್ವಚ್ಚ ಮಾಡುವುದರಿಂದ ಅನುಕೂಲಗಳು: ಯಾವುದೇ ಬೆಳೆ ಇರಲಿ ಬರೇ ಫಸಲು ಮಾತ್ರ ತೆಗೆಯುವುದಲ… ಮುಂದೆ ಓದಿ...