ಗಡಿ
2 days 15 hours ago - sriprasad82ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ಥ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು... ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ...
ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು ಕೃಷಿಯಲ್ಲಿ ಚೆನ್ನಾಗಿದ್ದ ಅಣ್ಣೇಗೌಡರಿಗೆ ಎಕರೆಗಟ್ಟಲೆ ಕಾಫಿ ತೋಟ ಹಂಚಿದ್ದರೆ, ವ್ಯಾವಹಾರಿಕ ದೂರ ದೃಷ್ಟಿ ಇದ್ದ ತಮ್ಮ ಮರಿ ಗೌಡರಿಗೆ ಸಣ್ಣ ತೋಟದ ಜೊತೆ ಅಡಿಕೆ ಮಂಡಿ, ಗೊಬ್ಬರದ ಅಂಗಡಿ ಎಲ್ಲಾ ಹಂಚಿಕೆ ಮಾಡಿದ್ರು. ಇನ್ನುಳಿದಿದ್ದು ಗುಡ್ಡದ ತುದಿಯಲ್ಲಿದ್ದ ಸುಮಾರು 5 ಎಕ್ರೆ ಆಗೋವಷ್ಟು ಇಳಿಜಾರಿನ ಜಾಗ. ಪಕ್ಕದಲ್ಲೇ ವರ್ಷದಲ್ಲಿ 6-8 ತಿಂಗಳು ಹರಿಯೋ ಸಣ್ಣ ತೊರೆ. ಕಣ್ಣು ಹಾಯಿಸಿದಷ್ಟು ದೂರ ಹಸಿರೇ ಹಸಿರು. ಒಮ್ಮೆ ನೋಡಿದರೆ ಮನಸ್ಸಿನ ಭಾರಗಳೆಲ್ಲ ಓಡಿ ಹೋಗೋ ರೀತಿ ವಾತಾವರಣ. ಕುಲದೇವರ ಗುಡಿ ಇರೋ ಜಾಗ ಅನ್ನೋದಕ್ಕೆ ದೊಡ್ಡ ಗೌಡರು ಇನ್ನೂ ಆಸ್ತಿ ಹಂಚಿಕೆ ಮಾಡಿರಲಿಲ್ಲ. ಕುಲದೇವರು ಅಂದಿದ್ದಕ್ಕೆ ಇಬ್ಬರೂ ಗೌಡರ ತಲೆ ದೇವಿಯ ಎದುರು ಅರಿವಿಲ್ಲದೆ ಬಾಗುತ್ತಿತ್ತು. ಗೌಡತಿಯ ಸಮಾಧಿನೂ ಅಲ್ಲೇ ಕೊಂಚ ದೂರದಲ್ಲಿತ್ತು. ಈ ಜಾಗವನ್ನು ಕ್ರಮೇಣ ಹಂಚಿಕೆ ಮಾಡಿದ್ರಾಯ್ತು ಅಂತ ಅಂದ್ಕೊಂಡಿದ್ದ ಗೌಡರು ಒಂದು ದಿನ ನಿದ್ದೆಯಲ್ಲೇ ಶಿವನ ಪಾದ ಸೇರಿದ್ರು.
ನೀರಿನ ಹರಿವು ಇದ್ದ ಕೊಡಗಿನ ಇಳಿಜಾರಿನ ಪ್ರದೇಶ. ಮುಂದೆ ಆ ಜಾಗದಲ್ಲಿ ಕಾಫಿ ತೋಟ ಮಾಡಬೇಕು ಅಂತ ಒಬ್ಬ ಅಂದುಕೊಂಡಿದ್ದರೆ, ಮತ್ತೊಬ್ಬ ರೆಸಾರ್ಟ್ ಕಟ್ಟಿ ಸ್ವಿ… ಮುಂದೆ ಓದಿ...