ಒಂದೂವರೆ ಗಂಟೆಯಲ್ಲಿ ಪಾಕಿಸ್ತಾನದ ಜಂಘಾಬಲ ಉಡುಗಿಸಿದ ಭಾರತ
1 day 5 hours ago - ಬರಹಗಾರರ ಬಳಗ
ಯುದ್ದಕ್ಕಿಂತ ಮೊದಲು ಪಾಕಿಸ್ತಾನದ ಮಿಲಿಟರಿ 'ಮುಖಂಡರು ಸಾಕಷ್ಟು ಬೊಗಳೆ ಬಿಟ್ಟಿದ್ದರು. ಅಗತ್ಯ ಬಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ನುಡಿದಿದ್ದರು. ಆದರೆ ಸಮರ ಆರಂಭವಾದ ಎರಡನೇ ದಿನಗಳಲ್ಲಿ ಪಾಕಿಸ್ತಾನವು ಕುನ್ನಿಯಂತೆ ಕುಂಯಿಗುಡುತ್ತಾ ಬಾಲ ಮಡಚಿಕೊಂಡು ಶರಣಾಯಿತು.
ಆರಂಭದಲ್ಲಿ ಹಮಾಸ್ನಿಂದ ಪ್ರೇರಣೆ ಪಡೆದು ನೂರಾರು ಡೋನ್ಗಳನ್ನು ಮತ್ತು ಸಣ್ಣ ಕ್ಷಿಪಣಿಗಳನ್ನು ಹಾರಿಬಿಟ್ಟ ಪಾಕಿಸ್ತಾನವು ಭಾರತವನ್ನು ಬೆದರಿಸಲು ಯತ್ನಿಸಿತು. ಆದರೆ ಅದರಲ್ಲೇನೂ ಯಶ ಕಾಣಲಿಲ್ಲ. ಅವನ್ನೆಲ್ಲ ಹೊಡೆದುರುಳಿಸಲು ಭಾರತದ ವಾಯುರಕ್ಷಣಾ ಕವಚ 'ಸುದರ್ಶನ ಚಕ್ರ'ವು ಸಫಲವಾಯಿತು. ಆದರೆ ಸಮರಕ್ಕೆ ದೊಡ್ಡ ತಿರುವು ದೊರಕಿದ್ದು ಪಾಕಿಸ್ತಾನವು ಭಾರತದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿದ ಬಳಿಕ. ದಿಲ್ಲಿಯನ್ನು ಗುರಿಯಾಗಿಸಿ ಇದನ್ನು ಪ್ರಯೋಗಿಸಲಾಯಿತಾದರೂ ಅದನ್ನು ಕೂಡಾ ಭಾರತವು ಅರ್ಧದಾರಿಯಲ್ಲಿ ಹೊಡೆದುರುಳಿಸಲು ಸಫಲವಾಯಿತು. ಆ ಕೂಡಲೇ ಪ್ರಧಾನಿ ಮೋದಿಯವರು ಪಾಕಿಸ್ತಾನವನ್ನು ಪೂರ್ಣಶಕ್ತಿಯಿಂದ ಬಗ್ಗುಬಡಿಯಲು ಸೂಚನೆ ನೀಡಿದರು. ಅಲ್ಲಿಂದ ಬಳಿಕ ಭಾರತದ ಮೂರೂ ಪಡೆಗಳು ಪಾಕಿಸ್ತಾನದ ಮೇಲೆ ಯಾವ ಪರಿ ಎರಗಿದವೆಂದರೆ ಕೆಲವೇ ಗಂಟೆಗಳಲ್ಲಿ ಇಡೀ ಪಾಕಿಸ್ತಾನವೇ ನಡುಗುವಂತಾಯಿತು. ಭಾರತವು ಸೂಪರ್ ಸಾನಿಕ್ ವೇಗದ ಬ್ರಹ್ಮಸ್ ಕ್ಷಿಪಣಿಗಳನ್ನು ಪ್ರಯೋಗಿಸಿದ ಬಳಿಕವಂತೂ ಪಾಕಿಸ್ತಾನದ ಜಂಘಾಬಲವೇ ಉಡುಗಿತು. ಮುಖ್ಯವಾಗಿ ಪಾಕಿಸ್ತಾನದ ವಾಯುಪಡೆಯನ್ನು ನಿಸ್ಸತ್ವಗೊಳಿಸುವ ಉದ್ದೇಶದಿಂದ ಅದರ ವಾಯುನೆಲೆಗಳನ್ನ ದಾಳಿಗೆ ಗುರಿಯಾಗಿಸಲಾಯಿತು. ಇದರಿಂದಾಗಿ ಪಾಕಿಸ್ತಾನದ ಹಲವಾರು ವಾಯು ನೆಲೆಗಳು ಧ್ವಂಸಗೊಂಡವು. ಪಾಕಿಸ್ತಾನದ ಯುದ್ಧವಿಮಾನಗಳು ಮೇಲೇಳದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಒಂದೂವರೆ ಗಂಟೆಯ ಅವಧಿಯಲ… ಮುಂದೆ ಓದಿ...