ರಣಹೇಡಿಗಳ ಪೈಶಾಚಿಕ ದಾಳಿ
1 day 15 hours ago - Ashwin Rao K P
ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ ಹಲವರನ್ನು ಕೊಂದಿದ್ದಾರೆ ಹಾಗೂ ಇನ್ನು ಹಲವರನ್ನು ಗಾಯಗೊಳಿಸಿದ್ದಾರೆ. ಸಶಸ್ತ್ರ ಸೈನಿಕರನ್ನು ಎದುರಿಸುವ ಧೈರ್ಯವಿಲ್ಲದ ಈ ಹೇಡಿ ಭಯೋತ್ಪಾದಕರು ನಿಶಸ್ತ್ರ ಪ್ರವಾಸಿಗರ ಮೇಲೆ ತಮ್ಮ 'ಪ್ರತಾಪ' ತೋರಿಸಿದ್ದಾರೆ. ಅದೂ ಸಾಲದೆಂಬಂತೆ ಭಯೋತ್ಪಾದಕ ಸಂಘಟನೆಯೊಂದು ತಾವೇ ಈ ಕಾರ್ಯ ಮಾಡಿದ್ದು ಎಂಬುದಾಗಿಯೂ ನಿರ್ಲಜ್ಜವಾಗಿ ಹೇಳಿಕೊಂಡಿದೆ. ದಾಳಿಗೆ ಗುರಿಯಾದವರೆಲ್ಲರೂ ಹಿಂದುಗಳು, ಹಿಂದುಗಳೆಂದು ಗುರುತಿಸಿ ಬಳಿಕವೇ ಅವರನ್ನು ಹತ್ಯೆಗೈಯಲಾಗಿದೆ. ಭಯೋತ್ಪಾದಕರು ಇಸ್ಲಾಮಿನ ಆಫೀಮು ಸೇವಿಸಿದವರು ಎಂಬುದು ಇದರಿಂದ ಸ್ಪಷ್ಟ.
ಈ ದಾಳಿಯ ಹಿಂದೆ ನೆರೆಯ ಪಾಕಿಸ್ಥಾನದ ಕೈವಾಡ ಇದೆ ಎಂಬುದರಲ್ಲಿ ಅನುಮಾನವಿಲ್ಲ. ''ಇದರಲ್ಲಿ ನಮ್ಮ ಕೈವಾಡವಿಲ್ಲ'' ಎಂಬುದಾಗಿ ಪಾಕಿಸ್ಥಾನದ ವಿದೇಶಾಂಗ ಸಚಿವರು ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆಂದರೆ ಇದು ಪಾಕಿಸ್ಥಾನದ್ದೇ ಕೃತ್ಯ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಕಾಶ್ಮೀರವು ಪ್ರವಾಸಿಗರ ಮೆಚ್ಚಿನ ತಾಣವಾಗಿ ಬದಲಾಗುತ್ತಿರುವುದು, ಅಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಪಾಕಿಸ್ಥಾನಕ್ಕೆ ತೀರಾ ಹತಾಶೆ ತಂದ ಬೆಳವಣಿಗೆ, ಕಾಶ್ಮೀರವು ತನ್ನ ಕೈತಪ್ಪಿ ಹೋಯಿತೆಂಬುದು ಅವರ ಅರಿವಿಗೆ ಬರತೊಡಗಿದೆ. ಇತ್ತೀಚೆಗೆ ಪಾಕಿಸ್ಥಾನದ ಸೇನಾ ಮುಖ್ಯಸ್ಥ ಮುನೀರ್ ಕಾಶ್ಮೀರದ ಕುರಿತಂತೆ, ಹಿಂದುಗಳ ಕುರಿತಂತೆ ನುಡಿದ ಮಾತುಗಳು ಕೂಡಾ ಆತನ ಹತಾಶೆಯನ್ನು ಬಿಂಬಿಸುತ್ತಿತ್ತು. ಆಗಲೇ ಕಾಶ್ಮೀರದಲ್ಲಿ ಏನಾದರೂ ಉತ್ಪಾತವೆಬ್ಬಿಸಲು ಪಾಕ್ ಸೇನೆಯು ಸಂಚು ಹೂಡಲಿದೆ ಎಂಬುದರ ಸಂಕೇತ ದೊರಕಿತ್ತು. ಕಾಶ್ಮೀರಕ್ಕೆ ಪ್ರವಾಸಿಗರು ಬರದಂತೆ ಭಯಭೀತಗೊಳಿಸುವ ಮತ್ತು ಇದರ ಜತೆಗೇ ಪಾಕಿಸ್ಥಾನದ ಆಂತರಿಕ ಶೋಭೆಯಿಂದ ಜನರ ಗಮನವ… ಮುಂದೆ ಓದಿ...