ಪುಸ್ತಕ ಪರಿಚಯ
ಲೇಖಕರು: Ashwin Rao K P
April 04, 2025

ಹೆಸರಿಗೆ ತಕ್ಕಂತೆ ಕವಿಯಾಗಿರುವ ‘ಕವಿರಾಜ್’ ಅವರ ಸಿನೆಮಾ ಸಾಹಿತ್ಯದ ೨೫ ವರ್ಷಗಳ ಪಯಣದ ಆಗು ಹೋಗುಗಳನ್ನು ಅವರೇ ತಮ್ಮದೇ ಆದ ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿ, ಬೆನ್ನುಡಿಯ ಹಂಗೇ ಬೇಡ ಎನ್ನುತ್ತಿದ್ದ ಕವಿರಾಜ್ ಕೊನೆಗೆ ತಮ್ಮ ವೃತ್ತಿ ಜೀವನದ ಮೊದಲ ಸಂದರ್ಶನ ಮಾಡಿದ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಂದ ಮುನ್ನುಡಿ ಬರೆಯಿಸಿಕೊಂಡಿದ್ದಾರೆ. ಕವಿರಾಜ್ ಅವರಿಗೆ ಅಭಿನಂದನೆ ತಿಳಿಸುತ್ತಾ ಗಣೇಶ್ ಕಾಸರಗೋಡು ತಮ್ಮ ಮುನ್ನುಡಿಯಲ್ಲಿ ಅನೇಕ ವಿಷಯಗಳನ್ನು…
ಲೇಖಕರು: Ashwin Rao K P
April 02, 2025

ಒಂಬತ್ತು ದಶಕಗಳ ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ. ಬಹುಶಃ ಬೇರೆ ಯಾವುದೇ ಭಾಷೆಯಲ್ಲೂ ಬಿಡುಗಡೆಯಾಗದಷ್ಟು ಅತೀ ಹೆಚ್ಚು ಪೌರಾಣಿಕ ಚಿತ್ರಗಳು, ಐತಿಹಾಸಿಕ ಸಿನಿಮಾಗಳು, ಸಾಹಿತ್ಯಾಧಾರಿತ, ಕಲಾತ್ಮಕ, ಮಕ್ಕಳ, ಉಪಭಾಷೆಯ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಹಲವರ ಕಥೆ, ಕಾದಂಬರಿಗಳು ಚಿತ್ರಗಳಾಗಿವೆ. ಕಾವ್ಯಗಳು ಹಾಡುಗಳಾಗಿವೆ. ಎಂಟು ಜ್ಞಾನಪೀಠ…
ಲೇಖಕರು: Ashwin Rao K P
March 31, 2025

“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ,…
ಲೇಖಕರು: Ashwin Rao K P
March 28, 2025

ಉದಯೋನ್ಮುಖ ಕತೆಗಾರ ಅರ್ಜುನ್ ದೇವಾಲದಕೆರೆ ಅವರ ‘ಮಿಕ್ಸ್ & ಮ್ಯಾಚ್’ ಎನ್ನುವ ಸಣ್ಣ ಕತೆಗಳ ಸಂಕಲನವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆ ಹೊರತಂದಿದೆ. ಪ್ರಕಾಶಕರಾದ ವೀರ ಲೋಕ ಬುಕ್ಸ್ ನ ಮಾಲಕ ವೀರಕಪುತ್ರ ಶ್ರೀನಿವಾಸ್ ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ…
“ಸಣ್ಣ ಕತೆಗಳು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಬಹಳ ಹಿಂದಿನಿಂದಲೂ ಅಮೂಲ್ಯವಾದ ಸ್ಥಾನವನ್ನು ಹೊಂದಿವೆ. ಈಸೋಪನ ಕಥೆಗಳು, ಚಂದಮಾಮದ ಕತೆಗಳು, ರಾಮಾಯಣ, ಮಹಾಭಾರತದೊಳಗಿನ ಕತೆಗಳು ಇಂದಿಗೂ…
ಲೇಖಕರು: Ashwin Rao K P
March 26, 2025

ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ. ಒಂದು ಗುಂಪಿನವರ ಅಧ್ಯಯನ ಮತ್ತು ಆಸಕ್ತಿ ಇರುವುದೆಲ್ಲ 'ಮನೋವಿಜ್ಞಾನವೆಂದರೆ ಏನು?” ಎನ್ನುವುದರ ಮೇಲೆ. ಇನ್ನೊಂದು ಗುಂಪಿನವರ ಆಸಕ್ತಿ ಇರುವುದು "…
ಲೇಖಕರು: ಬರಹಗಾರರ ಬಳಗ
March 25, 2025

ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು. ಸಣ್ಣಕತೆಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ! ಹದಿನೈದು ಸಣ್ಣಕತೆಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಕತೆಗಳು ಐದಾರು ಪುಟಗಳಲ್ಲಿ ಮುಗಿದುಬಿಡುತ್ತವೆ. ಹೀಗಾಗಿ ಓದುಗನಿಗೆ ಒಂದೇ ಗುಕ್ಕಿನಲ್ಲಿ ನಾಲ್ಕಾರು ಕತೆಗಳನ್ನು ಒಮ್ಮೆಲೆ ಓದಲು ಸಾಧ್ಯವಾಗುತ್ತದೆ. ಹೆಚ್ಚಿನ ಕಥಾವಸ್ತುಗಳು ದೈನಂದಿನ ಜೀವನಕ್ಕೆ ಸಂಬಂಧಿಸಿದವೇ ಆದ್ದರಿಂದ,…