ಪುಸ್ತಕ ಪರಿಚಯ
ಲೇಖಕರು: Ashwin Rao K P
March 10, 2025

ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ. ಕುಂದಾಪ್ರ ಕನ್ನಡದಲ್ಲಿನ ಪದಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಕನ್ನಡ ನಿಘಂಟನ್ನು ಖ್ಯಾತ ವ್ಯಂಗ್ಯ ಚಿತ್ರಕಾರರಾದ ಪಂಜು ಗಂಗೊಳ್ಳಿಯವರು ಸಂಪಾದಿಸಿದ್ದಾರೆ.
‘ಕುಂದಾಪ್ರ ಕನ್ನಡ ನಿಘಂಟು’ ಈ…
ಲೇಖಕರು: Ashwin Rao K P
March 07, 2025

ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು …
“ಮನುಷ್ಯ ಸೂಕ್ಷ್ಮವಾಗುತ್ತಾ ಆಗುತ್ತಾ ಅಸೂಕ್ಷ್ಮವನ್ನು ಗ್ರಹಿಸಬಲ್ಲವನಾಗುತ್ತಾನೆ. ಬೇಕಿದ್ದರೆ ಸುಮ್ಮನೇ ಯೋಚನೆ ಮಾಡಿ, ಒಬ್ಬ ಸೂಕ್ಷ್ಮ ವ್ಯಕ್ತಿಗೆ ಎಲ್ಲವೂ ಕಾಣಿಸತೊಡಗುತ್ತದೆ. ತೀರಾ ನಾಟಕೀಯತೆಯನ್ನೂ, ಕ್ರೌರ್ಯ ಮರೆಸಿ ತೋರುವ ಕಪಟ ಮಾನವತೆಯನ್ನೂ ಗ್ರಹಿಸಬಲ್ಲ.…
ಲೇಖಕರು: Ashwin Rao K P
March 05, 2025

ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು ಬೇಕಾದರೂ ನೀವು ತೆಗೆದುಕೊಳ್ಳಿ, ಅದಕ್ಕೊಂದು ಸೂಕ್ತವಾದ ಹಿನ್ನಲೆ, ಕಥೆ ಇದ್ದೇ ಇರುತ್ತದೆ. ಈ ರೀತಿಯ ಪುರಾಣ ಕಥೆಗಳನ್ನು ಓದಲು ಬಹಳ ಚೆನ್ನಾಗಿರುತ್ತದೆ. ಈ ಕೃತಿಯ ಬಗ್ಗೆ ಖ್ಯಾತ ಬರಹಗಾರ ಹಾಗೂ ವಿಮರ್ಶಕ ಡಾ. ತಾರಾನಾಥ ವರ್ಕಾಡಿಯವರು ಸೊಗಸಾದ…
ಲೇಖಕರು: Ashwin Rao K P
March 03, 2025

ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ.
ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು, ಪಡೆದ ಯಶಸ್ಸಿನ…
ಲೇಖಕರು: addoor
February 28, 2025

“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು.
ಬಹುಮುಖ ಪ್ರತಿಭೆಯ ದೇವುಡು (1896-1962) ಅವರು ಕನ್ನಡನಾಡಿನಲ್ಲಿ ಮನೆಮಾತಾಗಿರುವುದು ಅವರ “ಮಹಾ…” ಸರಣಿಯ ಈ ಮೂರು ಬೃಹತ್ ಕಾದಂಬರಿಗಳಿಂದಾಗಿ: “ಮಹಾಕ್ಷತ್ರಿಯ”, ಮಹಾಬ್ರಾಹ್ಮಣ” ಮತ್ತು “ಮಹಾದರ್ಶನ”. ಇವು ಭಾರತದ ವೈದಿಕ ಸಂಸ್ಕೃತಿಯ ಮೂಲವನ್ನು…
ಲೇಖಕರು: Ashwin Rao K P
February 26, 2025

ದೆವ್ವ ಮಾಡಿದ ಕೊಲೆ? ಎನ್ನುವ ವಾಮಾಚಾರ ವಿಷಯದ ಪತ್ತೇದಾರಿ ಕಾದಂಬರಿಯನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು…