ಪುಸ್ತಕ ಪರಿಚಯ
ಲೇಖಕರು: Ashwin Rao K P
April 28, 2025

‘ವಾರೆನ್ ಹೇಸ್ಟಿಂಗ್ಸ್ ನ ಹೋರಿ’ ಎನ್ನುವುದು ಉದಯ ಪ್ರಕಾಶ ಅವರು ಹಿಂದಿಯಲ್ಲಿ ಬರೆದ ಜನಪ್ರಿಯ ಕಿರು ಕಾದಂಬರಿ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪ್ರಕಾಶ ಗರುಡ. ಇವರು ತಮ್ಮ ಅನುವಾದಕರ ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಸಾರ ನಿಮ್ಮ ಓದಿಗಾಗಿ…
“ವಾರೆನ್ ಹೇಸ್ಟಿಂಗ್ಸ್ (೧೭೩೨-೧೮೧೮) ಈತ ಬ್ರಿಟಿಷ್ ವಸಾಹತು ಆಡಳಿತದ ಕಾಲಾವಧಿಯಲ್ಲಿ ಬಂಗಾಲ ಪ್ರೆಸಿಡೆನ್ಸಿಯ ಮೊದಲ ಗವರ್ನರ್ ಜನರಲ್ (೧೭೭೨- ೧೭೮೫) ಆಗಿ ಆಡಳಿತ ನಡೆಸಿದ್ದ. ಭಾರತದ ಜನಜೀವನ, ಸಾಹಿತ್ಯ, ಸಂಸ್ಕೃತಿ…
ಲೇಖಕರು: Ashwin Rao K P
April 25, 2025

ಮಕ್ಕಳಿಗಾಗಿ ಮತ್ತೊಮ್ಮೆ ಶ್ರೀ ಕೃಷ್ಣನ ಕಥೆಯನ್ನು ಹೇಳಲು ಬರುತ್ತಿದ್ದಾರೆ ಹೆಸರಾಂತ ಸಾಹಿತಿ ಸಂಪಟೂರು ವಿಶ್ವನಾಥ್. ಇವರು ಮಕ್ಕಳಿಗಾಗಿ ಶ್ರೀ ಕೃಷ್ಣನ ಕಥೆಯನ್ನು ಬಹಳ ಸೊಗಸಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ “ ಒಬ್ಬನೇ ವ್ಯಕ್ತಿ, ಬೇರೆ ಬೇರೆಯವರಿಗೆ, ಬೇರೆ ಬೇರೆ ಸಂದರ್ಭಗಳಲ್ಲಿ 'ಬೇರೆ ಬೇರೆ'ಯಾಗಿ ಕಾಣಿಸಿಕೊಳ್ಳುವಂತೆ, ಕೃಷ್ಣನು ಬೇರೆ ಬೇರೆ ಆದರ್ಶಗಳನ್ನು ಮೆರೆಯುವ ಮಗ, ಅಣ್ಣ, ತಮ್ಮ, ಶಿಷ್ಯ, ಸಹಪಾಠಿ, ಪ್ರಿಯಕರ, ಬುದ್ದಿ ಪ್ರಚೋದಕ, ವೇಣು ವಿಶಾರದ, ತಂಟೆಕೋರ…
ಲೇಖಕರು: Ashwin Rao K P
April 23, 2025

ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ ‘ಮೇಲಿನವರ’ ಮತ್ತು ‘ದೂರದ’ ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ,…
ಲೇಖಕರು: Ashwin Rao K P
April 21, 2025

`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ. ‘ಕುರುದ್ವೀಪ’ದಲ್ಲಿ ಕೇವಲ ಜನರ ಬದುಕು ಮಾತ್ರ ‘ದ್ವೀಪ’ವಾಗುವುದಿಲ್ಲ; ಪ್ರಕೃತಿ ಕೂಡ ಅಂತಹ ಒಂದು ಆತಂಕಕಾರೀ ದ್ವೀಪವೊಂದನ್ನು ಸೃಷ್ಟಿಸಿ ಮಾನವನ ಇಚ್ಛಾಶಕ್ತಿಯ ಪರಮೋಚ್ಛ ಬಳಕೆಯ ಬಗ್ಗೆ ಕರೆಕೊಟ್ಟು ಅದರಿಂದ ಹೊರಬರುವ ಮಾರ್ಗವನ್ನು ಅವರೇ ಸೃಷ್ಟಿಸಿಕೊಳ್ಳುವಂತೆ…
ಲೇಖಕರು: Ashwin Rao K P
April 18, 2025

ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ. ಕುಲಮೂಲದ ಚರಿತ್ರೆ ಭಾಗದಲ್ಲಿ ಬಹಳ ಪುರಾತನವಾದ ಹಸ್ತಪ್ರತಿಯನ್ನು ಉಲ್ಲೇಖಿಸಿ ಅದರಲ್ಲಿ ವಿವರಿಸಿರುವ ತ್ರಿಮೂರ್ತಿಗಳ ಪೌರಾಣಿಕ…
ಲೇಖಕರು: Ashwin Rao K P
April 16, 2025

ಚೆನ್ನಪ್ಪ ಅಂಗಡಿಯವರ ಕವನ ಸಂಕಲನ ‘ಇನ್ನು ಕೊಟ್ಟೆನಾದೊಡೆ’ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ೨೦೨೪ರ ಸಾಲಿನ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ. ಈ ಕವನ ಸಂಕಲನಕ್ಕೆ ಆರ್. ತಾರಿಣಿ ಶುಭದಾಯಿನಿ ಇವರು ಮುನ್ನುಡಿಯನ್ನು ಬರೆದಿದ್ದು, ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗಗಳು…
“ಚನ್ನಪ್ಪ ಅಂಗಡಿ ಅವರು ಕವಿ. ಕವಿಯಾದವನಿಗೆ ಒಳ್ಳೆಯ ಸದ್ದು, ರುಚಿ, ಸ್ಪರ್ಶ, ನೋಟ, ಗಂಧಗಳಿಗೆ ಸ್ಪಂದಿಸುವ ಗುಣವೇ ಪ್ರಧಾನವಾಗಿರುತ್ತದೆ ಎನ್ನುವುದು ಕಾವ್ಯ ಬಲ್ಲವರಿಗೆ ಗೊತ್ತು. ಆದರೆ…