ಪುಸ್ತಕ ಪರಿಚಯ
ಲೇಖಕರು: Ashwin Rao K P
April 14, 2025

“ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ.
ಯಾವುದೇ ಚಮತ್ಕಾರಕ್ಕೆ ಪಂಥಾಹ್ವಾನ ನೀಡುವುದು ಸುಲಭದ ಮಾತಲ್ಲ. ಈ ಕಾಲದಲ್ಲಿ…
ಲೇಖಕರು: Ashwin Rao K P
April 11, 2025

‘ಸಾಧನೆಯ ಸುಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ. ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಊರ ಗೌಡರ ಮನೆಯ ಜೀತದಾಳಾಗಿ ದುಡಿಯುವ ಸಂತೋಷ ತನ್ನ ಸುತ್ತಲಿನ ವಿರೋಧಗಳನ್ನು ಎದುರಿಸುತ್ತಲೇ ಜೀವನವನ್ನು ರೂಪಿಸಿಕೊಳ್ಳುವ ಪರಿ ಇಲ್ಲಿ ವಿಶಿಷ್ಟವಾಗಿ ಮೂಡಿದೆ. ದ್ವೇಷ, ಅಸೂಯೆ, ಅಸಹಿಷ್ಣತೆ- ಇವೆಲ್ಲದರ ಮಧ್ಯೆ ಗಂಡು ಹೆಣ್ಣಿನ…
ಲೇಖಕರು: Ashwin Rao K P
April 09, 2025

‘ಪರೂಕಾಳಿ’ ಎನ್ನುವ ವಿಲಕ್ಷಣ ಕಾದಂಬರಿಯ ಲೇಖಕರ ಹೆಸರೂ ಅಷ್ಟೇ ವಿಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆದ ಯುವ ಲೇಖಕ ಬಂಡು ಕೋಳಿ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಶಾಂತಿನಾಥ ದಿಬ್ಬದ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವೊಂದು ಸಾಲುಗಳು ನಿಮ್ಮ ಓದಿಗಾಗಿ…
“ಬಂಡು ಕೋಳಿ ಅವರ 'ಪರೂಕಾಳಿ' ಕಾದಂಬರಿ ಬಗ್ಗೆ ನಾಲ್ಕು ಮಾತು ಬರೆಯುವ ಅವಕಾಶ ನನಗೆ ಸಿಕ್ಕಿದ್ದು ಒಂದು ಆಕಸ್ಮಿಕ ಪ್ರಸಂಗವೇ ಸರಿ. ಸುಮಾರು ಎರಡು ತಿಂಗಳುಗಳ ಹಿಂದೆ ಹಿರಿಯರಾದ ಶ್ರೀ ಅರವಿಂದರಾವ್ ದೇಶಪಾಂಡೆ…
ಲೇಖಕರು: Ashwin Rao K P
April 08, 2025

ಆಲೂರು ದೊಡ್ಡನಿಂಗಪ್ಪನವರು ಬರೆದ ‘ಚಂದ್ರನ ಚೂರು’ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ…”ಆಲೂರು ದೊಡ್ಡನಿಂಗಪ್ಪನವರ 'ಚಂದ್ರನ ಚೂರು' ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ. ಈ ದೇಶವನ್ನು ಶಾಪದಂತೆ ಕಾಡುತ್ತಿರುವ ಜಾತೀಯತೆಯ ಸ್ವರೂಪವನ್ನು ಚಿತ್ರಿಸುತ್ತಲೇ, ಅದಕ್ಕೆ ಪ್ರತಿಯಾಗಿ ಮಾನವೀಯ…
ಲೇಖಕರು: addoor
April 07, 2025

ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು.
ಅವರು ಬರೆದಿರುವ ಕೆಲವೇ ಪ್ರವಾಸ ಕಥನಗಳಲ್ಲೊಂದು “ಪಾತಾಳಕ್ಕೆ ಪಯಣ”. ಇದರ ಬಗ್ಗೆ ಮುನ್ನುಡಿಯಲ್ಲಿ ಡಾ. ಕಾರಂತರು ಹೀಗೆನ್ನುತ್ತಾರೆ: “ನನ್ನೀ ಬರಹದಲ್ಲಿ ನಾನು…
ಲೇಖಕರು: Ashwin Rao K P
April 04, 2025

ಹೆಸರಿಗೆ ತಕ್ಕಂತೆ ಕವಿಯಾಗಿರುವ ‘ಕವಿರಾಜ್’ ಅವರ ಸಿನೆಮಾ ಸಾಹಿತ್ಯದ ೨೫ ವರ್ಷಗಳ ಪಯಣದ ಆಗು ಹೋಗುಗಳನ್ನು ಅವರೇ ತಮ್ಮದೇ ಆದ ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿ, ಬೆನ್ನುಡಿಯ ಹಂಗೇ ಬೇಡ ಎನ್ನುತ್ತಿದ್ದ ಕವಿರಾಜ್ ಕೊನೆಗೆ ತಮ್ಮ ವೃತ್ತಿ ಜೀವನದ ಮೊದಲ ಸಂದರ್ಶನ ಮಾಡಿದ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಂದ ಮುನ್ನುಡಿ ಬರೆಯಿಸಿಕೊಂಡಿದ್ದಾರೆ. ಕವಿರಾಜ್ ಅವರಿಗೆ ಅಭಿನಂದನೆ ತಿಳಿಸುತ್ತಾ ಗಣೇಶ್ ಕಾಸರಗೋಡು ತಮ್ಮ ಮುನ್ನುಡಿಯಲ್ಲಿ ಅನೇಕ ವಿಷಯಗಳನ್ನು…