ವೀಳ್ಯದೆಲೆ ದುಂಡಾಣು ಚುಕ್ಕೆ ರೋಗ ಮತ್ತು ನಿಯಂತ್ರಣ
1 day 16 hours ago - Ashwin Rao K Pವೀಳ್ಯದೆಲೆಯು ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿ ಇದರ ವಿಸ್ತೀರ್ಣ ೮೨೮೮ ಹೆಕ್ಟರ್ ಹಾಗೂ ಇಳುವರಿ ೧,೫೩,೬೦೦ ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ. ಈ ಬೆಳೆಯ ಬೆಳೆವಣಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ. ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತು ಚಿಬ್ಬುರೋಗ ಪ್ರಮುಖ ರೋಗಗಳಾಗಿದ್ದು ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿದೆ.
ಕರ್ನಾಟಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ವೀಳ್ಯದೆಲೆ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಹಾವೇರಿ, ದಾವಣಗೇರೆ, ಮೈಸೂರು ಮತ್ತು ಬಾಗಲಕೋಟೆ ಗಳಲ್ಲಿ ಈ ರೋಗವು ಅತೀ ಹೆಚ್ಚು ಹಾನಿಯನ್ನು ಉಂಟು ಮಾಡುವುದು ಕಂಡುಬಂದಿದೆ.
ರೋಗದ ಲಕ್ಷಣಗಳು: ಈ ರೋಗವು ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ನೀರಿನಿಂದ ಆವೃತ ಚುಕ್ಕೆಗಳನ್ನು ಹೊಂದಿದ್ದು ಕ್ರಮೇಣವಾಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಚುಕ್ಕೆಗಳ ಸುತ್ತ ಹಳದಿ ಬಣ್ಣವು ಆವೃತಗೊಂಡಿರುತ್ತದೆ. ರೋಗವು ಪಸರಿಸುತ್ತ ಎಲೆಯ ಹೆಚ್ಚಿನ ಭಾಗವನ್ನು ಆವರಿಸಿ ರೋಗ ಪೀಡಿತ ಭಾಗದಲ್ಲಿ ಸುಟ್ಟಂತೆ ಕಾಣುತ್ತದೆ. ರೋಗ ಪೀಡಿತ ಎಲೆಗಳು ತನ್ನ ಹೊಳಪನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತದೆ. ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಂತೆ ರೋಗದ ಸೊಂಕು ಕಾಂಡದ ಮೇಲೆ ಕಾಣಿಸಿಕೊಳ್ಳುತ್ತದೆ.
ಎಣ್ಣೆಯುಕ್ತ / ನೀರಿನಿಂದ ಆವೃತವಾದಂತಹ ಕಪ್ಪು ಮಚ್ಚೆಗಳು ಕೆಳ ಭಾಗದ ಕಾಂಡ ಮತ್ತು ಗಿಣ್ಣು / ಕಣ್ಣುಗಳ ಮದ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಮಚ್ಚೆಗಳು ಗಾತ್ರ ಹೆಚ್ಚಾದಂತೆ ಎರಡು ದಿಕ್ಕಿನಲ್ಲೂ ಪಸರಿಸಿ ಗಿಡದ ಕಾಂಡದ ತುಂಬೆಲ್ಲಾ ಹರಡುತ್ತದೆ. ರೋಗ ಪೀಡಿತ ಕಾಂಡಗಳು ನಿಶಕ್ತಗೊಂಡು ಗಿಣ್ಣು/ಕಣ್ಣುಗ… ಮುಂದೆ ಓದಿ...