"ಮರುಳ ಮುನಿಯನ ಕಗ್ಗ”ದಲ್ಲಿ ಬದುಕಿನ ಒಳನೋಟಗಳು
2 days ago - addoorಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು. ಇದರಲ್ಲಿಯೂ ಅವರ ಅಗಾಧ ಅಧ್ಯಯನ ಹಾಗೂ ಜೀವನಾನುಭವ ಭಟ್ಟಿಯಿಳಿಸಿ, ಪ್ರಚಂಡ ಪ್ರತಿಭೆಯ ಬಲದಿಂದ ರಚಿಸಿದ ಮುಕ್ತಕಗಳೇ ತುಂಬಿವೆ. ಇಲ್ಲಿನ 824 ಮುಕ್ತಕಗಳಲ್ಲಿ ನಮ್ಮ ಬದುಕಿನ ಬಗ್ಗೆ ಹೊಸ ಚಿಂತನೆಗಳನ್ನೂ ಒಳನೋಟಗಳನ್ನೂ ನೀಡುವ ಕೆಲವು ಮುಕ್ತಕಗಳನ್ನು ಪರಶೀಲಿಸೋಣ.
ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ / ಪೂರ್ವಕರ್ಮದ ಫಲಿತಶೇಷದಿಂದ ಕಹಿ //
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ / ಆವೇಶವೇತಕೋ - ಮರುಳ ಮುನಿಯ //
ದಿನದಿನದ ನಮ್ಮ ಊಟ ಬೇವುಬೆಲ್ಲಗಳ ಉಂಡೆ ಇದ್ದಂತೆ, ಅದರಲ್ಲಿ ಕಹಿಯೂ ಇದೆ, ಸಿಹಿಯೂ ಇದೆ. ಪೂರ್ವ ಜನ್ಮಗಳಲ್ಲಿ ನಾವು ಮಾಡಿದ ಕರ್ಮದ ಫಲದಿಂದ ನಮಗೆ ಕಹಿ ಸಿಗುತ್ತದೆ. ಹಾಗೆಯೇ ದೇವರ ಕೃಪೆಯಿಂದ ಸಿಹಿ ಸಿಗುತ್ತದೆ. ಇವು ಒಂದಕ್ಕೊಂದು ವಿರುದ್ಧವಾಗಿವೆ ಅನಿಸುತ್ತದೆ. ಆದರೆ ಇವು ಪಕ್ಕಾ ತಾರ್ಕಿಕವಾಗಿವೆ. ಹಾಗಿರುವಾಗ ದಿನದಿನದ ನಮ್ಮ ಬದುಕಿನ ಕಹಿಸಿಹಿಗಳ ಬಗ್ಗೆ ಆವೇಶವೇತಕ್ಕೆ? ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು. "ದೇವರು ನನಗೇ ಯಾಕೆ ಈ ಕಷ್ಟ ಕೊಟ್ಟ?” ಎಂದು ಹಲುಬುವವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ ಅದು ದೇವರು ಕೊಟ್ಟದ್ದಲ್ಲ ಬದಲಾಗಿ ತಾನು ಮಾಡಿದ್ದ ಕರ್ಮಗಳ ಫಲ ಎಂಬುದನ್ನು. ಆದ್ದರಿಂದ ತನಗೆ ಸಂತೋಷ ಬೇಕೆಂದರೆ ಹೆಚ್ಚೆಚ್ಚು ಒಳ್ಳೆಯ ಕಾಯಕ ಮಾಡಬೇಕು. ಈ ಅರಿವಿನ ದೀಪ ನಮ್ಮೊಳಗೆ ಬೆಳಗಿದಾಗ, ತಿಳಿವು ಮೂಡುತ್ತದೆ, ಅಲ್ಲವೇ?
ಜೀವನವೆ ಪರಮಗುರು, ಮಿಕ್ಕ ಗುರುಗಳಿನೇನು / ಭಾವಸಂಸ್ಕಾರ ಜೀವಾನುಭವಗಳ… ಮುಂದೆ ಓದಿ...