ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ - ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ.
ನಿಜಕ್ಕೂ ಈ ನೆಲದ ಒಟ್ಟು ಇತಿಹಾಸದಲ್ಲಿ ತಮ್ಮ ಸಾಮಾಜಿಕ ವ್ಯಕ್ತಿತ್ವದ, ಅತ್ಯಂತ ಪ್ರಭಾವಶಾಲಿಯಾದ ಒಬ್ಬ ವ್ಯಕ್ತಿ ಆ ಸ್ಥಾನಕ್ಕೆ ಅರ್ಹರು ಎನ್ನುವುದಾದರೆ ಅದು ನಿಸ್ಸಂದೇಹವಾಗಿ ಬಸವಣ್ಣನವರು ಎಂಬುದು ನಿರ್ವಿವಾದ. ಜೊತೆಗೆ ಸಾಂಕೇತಿಕವಾಗಿ ಮಾತ್ರ ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಪ್ರತಿನಿಧಿಸುವುದಿಲ್ಲ. ವಾಸ್ತವದಲ್ಲಿ ಈ ಮಣ್ಣಿನ ಎಲ್ಲಾ ಮೌಲ್ಯಯುತ ಗುಣಲಕ್ಷಣಗಳ ನೈಜ ವ್ಯಕ್ತಿ ಬಸವಣ್ಣ.
ಈಗ ಆವರನ್ನು ಅಧಿಕೃತವಾಗಿ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರಬಹುದು. ಆದರೆ ಆ ಘೋಷಣೆಯ ನಿಜವಾದ ಆಶಯವಾದ ಮಾನವಿಯ ಮೌಲ್ಯಗಳ, ಸಮ ಸಮಾಜದ ನಿರ್ಮಾಣದ ಉದ್ದೇಶ ಮಾತ್ರ ಇನ್ನೂ ಈಡೇರಿಲ್ಲ. ಇಂದು ಶರಣ ಸಂಸ್ಕೃತಿಯ, ಬಸವ ತತ್ವದ ಅನುಷ್ಠಾನ ಕೇವಲ ಪುಸ್ತಕ, ಭಾಷಣ, ಉಪನ್ಯಾಸ, ಮಾತುಗಳಿಗೆ ಸೀಮಿತವಾಗಿದೆ. ಬಸವ ತತ್ವ ವಿನಾಶದ ಅಂಚಿನಲ್ಲಿದೆ, ಅಷ್ಟೇ ಅಲ್ಲ ಬಹುತೇಕ ವಿರುದ್ಧ ದಿಕ್ಕಿನಲ್ಲಿಯೇ ನಡೆಯುತ್ತಿದೆ. ಜಾತಿರಹಿತ, ವರ್ಗರಹಿತ, ಧರ್ಮರಹಿತ, ವರ್ಣರಹಿತ, ಲಿಂಗ ರಹಿತ, ಶ್ರಮ ಸಂಸ್ಕೃತಿಯ ಪ್ರತಿಬಿಂಬವಾದ ಬಸವ ತತ್ವ ಕೇವಲ ಮಾನವ ಜೀವಿಯ ಹಿತಾಸಕ್ತಿಯನ್ನು ಮಾತ್ರ ಬಯಸದೆ ಸಕಲ ಜೀವಾತ್ಮಗಳಿಗೂ ಲೇಸನೇ ಬಯಸುತ್ತದೆ.
ಶರಣರ ಭರವೆಮಗೆ ಪ್ರಾಣ ಜೀವಾಳವಯ್ಯ ಎನ್ನುವ ಅತ್ಯದ್ಭುತ ಮನುಷ್ಯ ಸಂಬಂಧದ ಅತಿಥಿ ಸತ್ಕಾರವನ್ನು ನಮಗೆ ತಿಳಿಸುತ್ತದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ ಎಂಬ ಅತ್ಯದ್ಭುತ ಜ್ಞಾನ ವಿನಯವನ್ನು ನಮಗೆ ಕಲಿಸುತ್ತದೆ. ನೊಂದವರ ನೋವಾ ನೋಯದವರೆತ್ತ ಬಲ…
ಮುಂದೆ ಓದಿ...