ಚುನಾವಣೆಯ ಕಥೆಗಳು
1 day 10 hours ago - Ashwin Rao K Pಭಾರತದಲ್ಲಿ ಲೋಕಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆಗಳು ನಡೆಯುತ್ತಾ ಇವೆ. ಕರ್ನಾಟಕ ರಾಜ್ಯದಲ್ಲೂ ಎಪ್ರಿಲ್ ೨೬ ಮತ್ತು ಮೇ ೭ ಎಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮೊದಲ ಹಂತದ ಮತದಾನ. ಎಲ್ಲಾ ಅರ್ಹ ಮತದಾರರು ಯಾವುದೇ ನೆಪ ಹೇಳದೇ ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಮತವನ್ನು ಚಲಾಯಿಸಿ. ನಿಮ್ಮ ಒಂದು ಮತ ದೇಶದ ಪ್ರಗತಿಯಲ್ಲಿ ಗಮನಾರ್ಹ ಬದಲಾವಣೆ ತರಬಹುದು. ಕನಿಷ್ಟ ೮೦-೮೫ ಶೇಕಡ ಮತದಾನವಾಗುವಂತೆ ನೋಡಿಕೊಳ್ಳಬೇಕಾಗಿದೆ. ಏಕೆಂದರೆ ಬಹಳಷ್ಟು ಮಂದಿ ಮತ ಚಲಾಯಿಸಲು ಬರುವುದೇ ಇಲ್ಲ. ದಯವಿಟ್ಟು ಮತಗಟ್ಟೆಗೆ ಬನ್ನಿ, ನಿಮ್ಮ ಮತ ಚಲಾಯಿಸಿ.
ಚುನಾವಣೆಯ ಬಗ್ಗೆ ಸುಖಾಸುಮ್ಮನೇ ಉಪದೇಶ ನೀಡುವುದಕ್ಕಿಂತ ಬೇರೆ ಏನು ಬರೆಯಬಹುದು ಎಂದು ಯೋಚನೆ ಮಾಡುತ್ತಿರುವಾಗ ನನಗೆ ಪತ್ರಿಕೆಯೊಂದರಲ್ಲಿ ಶ್ರೀ ಅರ್ಜುನ್ ಶೆಣೈ ಎನ್ನುವವರು ಬರೆದ ಪುಟ್ಟ ಪುಟ್ಟ ಚುನಾವಣೆಯ ಕಥೆಗಳು ಸಿಕ್ಕವು. ಅವುಗಳನ್ನು ಸಂಗ್ರಹಿಸಿ ನಿಮ್ಮ ಓದಿಗಾಗಿ ಪ್ರಕಟ ಮಾಡಿರುವೆ. ಓದಿ…
***
ಜಾತಿಯವರ ಮನೆಗೆ ಮತ ಕೇಳಲು ಹೊರಟ ಆ ಆಕಾಂಕ್ಷಿ ತಮ್ಮವರೆಲ್ಲ ಈ ಬಾರಿ ತನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ವಿನಂತಿಸಿಕೊಂಡ. ಮನೆಯವರೂ ತಮ್ಮವನೇ ಶಾಸಕನಾಗುವನಲ್ಲ ಎಂದು ಸಂತಸಗೊಂಡರು. ಮನೆಯ ಹೊರಗಡೆ ಬೆಕ್ಕು ಮತ್ತು ನಾಯಿ ರಾಗ-ದ್ವೇಷವಿಲ್ಲದೇ ಒಂದೇ ತಟ್ಟೆಯಲ್ಲಿ ಹಸಿವು ನೀಗಿಸಿಕೊಳ್ಳುತ್ತಿದ್ದವು. !
***
ಗ್ರಾಮವಾಸ್ತವ್ಯದಲ್ಲಿ ಆ ಹಳ್ಳಿಗನ ಮನೆಯ ರೊಟ್ಟಿಯುಂಡಿದ್ದ ಆ ಆಕಾಂಕ್ಷಿ ಶಾಸಕರಾಗಿ ಗೆದ್ದು ಬಂದರು. ಅದೇ ಹಳ್ಳಿಗ ಶಾಸಕ ಕಚೇರಿಯೊಳಕ್ಕೆ ಬೆವರುತ್ತ ಮನವಿ ಪತ್ರ ಹಿಡಿದು ಒಳಗೆ ಬಂದ. ಅವನಿಗೊಂದು ತೊಟ್ಟು ನೀರು ಕೊಡುವವರು ಯಾರೂ ಇರಲಿಲ್ಲ.
***
ಈ ಬಾರಿ ಹಿಂದಿನ ಬಾರಿಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಹಾಲಿ ಶಾಸಕರು… ಮುಂದೆ ಓದಿ...