ಪುಸ್ತಕ ಪರಿಚಯ
ಲೇಖಕರು: Ashwin Rao K P
August 04, 2025

“ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ. ಇವೆರಡನ್ನೂ ಪಾಕಮಾಡುತ್ತ ಥಟ್ಟನೆ ಓದುಗರನ್ನು ಹೊಸ ದರ್ಶನಕ್ಕೆ ಒಡ್ಡುವ ಅವರ ನಾಟಕೀಯ ಸಮಯದ ಜಾಣ್ಮೆ ನನಗೆ ಅತಿ ಪ್ರಿಯವಾದದ್ದು. ಅವರ ಸಾಮಾಜಿಕ ಪ್ರಜ್ಜೆ…
ಲೇಖಕರು: addoor
August 03, 2025

ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗಿದೆ. ಇದಕ್ಕೆ ಅಪವಾದವೆಂಬಂತೆ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲರಾಗಿ, ಹಲವಾರು ಸವಾಲುಗಳಿದ್ದರೂ ಅವನ್ನೆಲ್ಲ ಎದುರಿಸಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ತಮ್ಮ ಅಮೂಲ್ಯ ಅನುಭವಗಳನ್ನು ಈ ಪುಸ್ತಕದಲ್ಲಿ…
ಲೇಖಕರು: Ashwin Rao K P
August 01, 2025

ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ…
ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ ಪುಸ್ತಕಗಳನ್ನು ಅಂಗೈ ಮೇಲಿರಿಸಿಕೊಂಡಾಗ ಮನದಾಳದಲ್ಲಿ ಹುಟ್ಟಿದ ರೋಮಾಂಚನ ಮುಂದೆ ಬಿಡದೆ ಓದಿನತ್ತ ಸೆಳೆಯುತ್ತಲೆ ಸಾಗಿತು. ಕೆಲವು ವರ್ಷಗಳ ಕಾಲ ಪಠ್ಯಪುಸ್ತಕಗಳ ಒಳಗೆ ಬಂಧಿಯಾದ ನಾನು ಮತ್ತೆ ಕಣ್ಣರಳಿಸಿ ಅರಸಿದ್ದೆ ಕಥೆ, ಕಾದಂಬರಿ ಪುಸ್ತಕಗಳನ್ನು.…
ಲೇಖಕರು: Ashwin Rao K P
July 30, 2025

ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್ ಭಟ್. ಇವರು ಬರೆದ ಕೆಲವು ಸಾಲುಗಳು…
“ಹಾರರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು…
ಲೇಖಕರು: Ashwin Rao K P
July 28, 2025

“ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ, ಇಲ್ಲವಾದರೆ ಇಲ್ಲ. ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ್ತಾಯಿ ಅಜ್ಜಿ ಆದ್ಲಾ' ಮಕ್ಕಳ ಕತೆಗಳ ಸಂಕಲನ ಪ್ರಕಟಣೆಯ ಮೂಲಕ ತಾವು ಬೇರೆಯವರಿಗಿಂತ ಭಿನ್ನ ಎಂದು ಸಾಬೀತು ಪಡಿಸಿದ್ದರು. ಈಗ ಪ್ರಕಟವಾಗುತ್ತಿರುವ 'ಕುಂಡದ ಬೇರು ಕಥೆಗಳು' ಸಂಕಲನ ಪಲ್ಲವಿ ಅವರ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆಯಂತಿದೆ. ಈ ಸಂಕಲನದ…
ಲೇಖಕರು: Ashwin Rao K P
July 25, 2025

ಗಝಲ್ ಪ್ರಿಯರಿಗಾಗಿ ‘ಕಂಸ’ ಹೊರ ತಂದಿರುವ ‘ನನ್ನವಳು ನಕ್ಕಾಗ’ ಸಂಕಲನಕ್ಕೆ ಮುನ್ನುಡಿಯನು ಬರೆದಿದ್ದಾರೆ ಆನಂದ ಭೋವಿ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳು ಇಲ್ಲಿವೆ…
“ಅರೇಬಿಕ್ ಕಾವ್ಯದಲ್ಲಿ ಹುಟ್ಟಿಕೊಂಡ ಗಝಲ್ ಇಂದು ಕನ್ನಡದಲ್ಲಿ ಅಭಿವ್ಯಕ್ತಿಯಾಗಿ ಬೆಳೆಯುತ್ತಿದೆ. ಶೇರ್ ಎಂದು ಕರೆಯುವ ದ್ವಿಪದಿಗಳು ಪ್ರಾಸಬದ್ಧ ಕಾವ್ಯನಾತ್ಮಕ ಸೃಜನಶೀಲ ನುಡಿಗಳ ಮಿಶ್ರಣದಿಂದ ಕೇಳುಗರ ಓದುಗರ ಹೃದಯ ತಟ್ಟುವ ಜನಪ್ರಿಯವಾಗುವ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರಸ್ತುತ…