ಪುಸ್ತಕ ಪರಿಚಯ

ಲೇಖಕರು: Ashwin Rao K P
June 06, 2025
“ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿಂದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ ಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು ಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು ಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ…
ಲೇಖಕರು: Ashwin Rao K P
June 04, 2025
`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು. ಆದರೆ ಈ ಕಿರು ಬರಹಗಳು ಬದುಕ ಪಾಠ ಅವಿತಿಟ್ಟ ಪುಟಾಣಿ ಗುಳಿಗೆಗಳಂತಿವೆ. ಇಲ್ಲಿ ಸೋತ ಮನಕ್ಕೆ ಸಂತೈಕೆ ಇದೆ,…
ಲೇಖಕರು: Ashwin Rao K P
June 02, 2025
“ಕಲ್ಲು ನೆಲದ ಹಾಡುಪಾಡು” ಕೃತಿಯ ಬಗ್ಗೆ ಮಾಹಿತಿ ಪೂರ್ಣ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಸಂಧ್ಯಾರಾಣಿ. ಅವರು ತಮ್ಮ ಅನಿಸಿಕೆಯಲ್ಲಿ “ಕಲ್ಲು ನೆಲದ ಹಾಡುಪಾಡು’ ಎಂಬ ಜೆ ಎಂ ಕಟ್ ಸೆ (JM Coetzee) ಬರೆದ “In the heart of the Country” ಪುಸ್ತಕವನ್ನು ಎಚ್ ಎಸ್ ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ನುಡಿ ಪ್ರಕಾಶನ ಅದನ್ನು ಪ್ರಕಟಿಸಿದೆ. ಇಡೀ ಪುಸ್ತಕ ಓದಿದ ಮೇಲೆ, ಅದಕ್ಕೆ ಎಚ್‌ಎಸ್‌ಆರ್ ಕೊಟ್ಟ ಕನ್ನಡದ ಹೆಸರು ಪುಸ್ತಕಕ್ಕೆ ಮತ್ತೊಂದು ಆಯಾಮ ಕೊಟ್ಟಿದೆ…
ಲೇಖಕರು: Ashwin Rao K P
May 30, 2025
‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ ಕೆ ಎಂ ವಿಜಯಲಕ್ಷ್ಮಿ. ಈ ಪುಸ್ತಕದಲ್ಲಿ ಅವರು ಪರ್ವತವಾಣಿಯವರ ಇಷ್ಟಾರ್ಥ ಸೇರಿದಂತೆ ಮುಕುತಿ ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಎನ್ನುವ ನಾಲ್ಕು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಪಾದಕಿಯಾದ ಕೆ ಎಂ ವಿಜಯಲಕ್ಷ್ಮಿ ಅವರು ತಮ್ಮ ಮಾತಿನಲ್ಲಿ… “ಸಂಗೀತ, ನಟನೆ, ನಿರ್ದೇಶನ ಕಲೆ ಮತ್ತು ನಾಟಕ ರಚನೆ - ಈ ಎಲ್ಲವೂ ಮೇಲೈಸಿದ 'ಪರ್ವತವಾಣಿ' ಎಂಬ ಕಾವ್ಯನಾಮದ ಪಿ. ನರಸಿಂಗರಾವ್ ಅವರು ಕನ್ನಡ…
ಲೇಖಕರು: Ashwin Rao K P
May 28, 2025
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ. ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು…
ಲೇಖಕರು: Ashwin Rao K P
May 26, 2025
ಕನ್ನಡ ಸಿನಿಪ್ರಿಯರ ಪಾಲಿಗೆ ‘ಅಣ್ಣಾವ್ರು’ ಎನಿಸಿಕೊಂಡ ವರನಟ ಡಾ. ರಾಜಕುಮಾರ್ ಅವರ ಚಿತ್ರ ಜೀವನದ ಬಗ್ಗೆ ನೂರಾರು ಪುಸ್ತಕಗಳು ಈಗಾಗಲೇ ಬಂದಿವೆ. ಆದರೂ ಡಾ. ರಾಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇದೆ. ‘ಡಾ. ರಾಜ್ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳು’ ಎನ್ನುವ ವಿಷಯದ ಮೇಲೆ ಅದ್ಭುತವಾದ ಕೃತಿಯೊಂದನ್ನು ರಚಿಸಿ ಕನ್ನಡ ಸಾಹಿತ್ಯಾಸಕ್ತರ ಮಡಿಲಿಗೆ ಹಾಕಿದ್ದಾರೆ ಶಿಕ್ಷಕ, ವಿಜ್ಞಾನ ವಿಷಯಗಳ ಬರಹಗಾರ ಡಾ. ಕೆ. ನಟರಾಜ್. ಈ ಬೃಹತ್ ಗಾತ್ರದ (೬೫೨ ಪುಟಗಳು) ಕೃತಿಯಲ್ಲಿ ಡಾ. ರಾಜ್…