ಸಂಪತ್ತಿನ ಸಮಾನ ಹಂಚಿಕೆ...
1 day 15 hours ago - Shreerama Diwanaಈ ಪರಿಕಲ್ಪನೆಯ ವಾಸ್ತವಿಕ ಅರ್ಥವೇನು ? ಇದು ಸಾಧ್ಯವೇ ? ಇದರ ಅಗತ್ಯತೆ ಏನು ? ಇದು ಅನಿವಾರ್ಯವೇ ? ಇದನ್ನು ಒಪ್ಪಿಕೊಳ್ಳಬೇಕೆ ? ಅಥವಾ ತಿರಸ್ಕರಿಸಬೇಕೆ ? ಅಥವಾ ಇದಕ್ಕೆ ಪರ್ಯಾಯ ಮಾರ್ಗಗಳಿವೆಯೇ ? ಈ ಬಗೆಯ ಚರ್ಚೆಗಳು ರಾಜಕೀಯ ಪಕ್ಷಗಳಲ್ಲಿ, ವಿಚಾರವಾದಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ನಡೆಯುತ್ತಿದೆ. ಬಹಳ ಹಿಂದಿನಿಂದಲೂ ಈ ಬೇಡಿಕೆ ಇದೆ. ಈಗ ಮತ್ತೆ ಚರ್ಚೆಯಾಗುತ್ತಿದೆ. ಮೊದಲಿಗೆ ಇದನ್ನು ಅರ್ಥಮಾಡಿಕೊಳ್ಳಲು ಭಾರತದ ಒಟ್ಟು ಇತಿಹಾಸ ಮತ್ತು ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕಾಗುತ್ತದೆ.
ಅನಾಗರಿಕ ಮನುಷ್ಯ ನಾಗರಿಕ ಪ್ರಪಂಚಕ್ಕೆ ಕಾಲಿಟ್ಟ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿದೆ. ಸುಮಾರು 3000 ವರ್ಷಗಳಷ್ಟು ಆಡಳಿತಾತ್ಮಕ ಅನುಭವವನ್ನು ಮಾನವ ಸಮಾಜ ಹೊಂದಿದೆ. ಪ್ರಾರಂಭದಲ್ಲಿ ಒಂದಷ್ಟು ಜನ ಕಾಡಿನಲ್ಲಿ ವಾಸಿಸುತ್ತಾ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಾ ಇದ್ದರು. ತದನಂತರದಲ್ಲಿ ಆ ರಕ್ಷಣೆಗಾಗಿ ತಮ್ಮಲ್ಲೇ ಒಬ್ಬನನ್ನು ನಾಯಕನನ್ನಾಗಿ ಆರಿಸುವ ಪ್ರವೃತ್ತಿ ಬೆಳೆದು ಬಂದಿತು. ಆ ನಾಯಕ ಕೂಡ ಬಹುತೇಕ ಬಲಿಷ್ಠ ವ್ಯಕ್ತಿಯೇ ಆಗಿರುತ್ತಿದ್ದ.
ಮುಂದಿನ ದಿನಗಳಲ್ಲಿ ಆ ನಾಯಕನಿಗೆ ವಿಶೇಷ ಸೌಲಭ್ಯಗಳು ದೊರೆಯಲಾರಂಭಿಸಿತು. ಹಾಗೇ ಮುಂದುವರಿದು ಕೃಷಿ ಅಭಿವೃದ್ಧಿಯ ನಂತರ ಈ ರೀತಿಯ ಗುಂಪುಗಳು ಹಳ್ಳಿಗಳಾಗಿ, ಊರುಗಳಾಗಿ ಅಭಿವೃದ್ಧಿ ಹೊಂದಿದವು. ಆ ಊರುಗಳು ಮತ್ತೆ ಆಕ್ರಮಣಕಾರಿಯಾಗಿ ಬೇರೆ ಬೇರೆ ಕಾರಣಗಳಿಂದ ಹೊಡೆದಾಟಗಳು, ಬಡಿದಾಟಗಳು ಆಹಾರಕ್ಕಾಗಿ ಯುದ್ಧಗಳು ನಡೆದವು. ಕೊನೆಗೆ ರಾಜ ಪ್ರಭುತ್ವ ಅಸ್ತಿತ್ವಕ್ಕೆ ಬಂದಿತು.
ರಾಜ ಪ್ರಭುತ್ವದಲ್ಲಿ ರಾಜನೇ ಪ್ರತ್ಯಕ್ಷ ದೇವರು ಎಂಬಂತೆ ಆತನ ಆಡಳಿತದಲ್ಲಿ ಎಲ್ಲವೂ ಅವನ ನಿರ್ದೇಶನದಂತೆಯೇ ನಡೆಯುತ್ತಿದ್ದವು. ಅಲ್ಲಿಂದ ಅ… ಮುಂದೆ ಓದಿ...